Monday 31 October 2011

ಆನೆಗ ಫುಟ್ಬಾಲ್ ಆಡ್ದೊ...



ಕುಶಾಲನಗರ ಹತ್ರ ಇರ್ವ ದುಬಾರೇಲಿ ಒಂದು ಪೊರ್ಲುನ ಕಾರ್ಯಕ್ರಮ ಇತ್. ದಸರಾ ಗೌಜಿ ಮುಗ್ಸಿ ಬಂದ ಆನೆಗ ರಜೆಯ ಮೂಡ್ನಲ್ಲಿದ್ದೊ. ಇವ್ಕೆಲ್ಲಾ ಮನರಂಜನೆ ಕೊಡೋಕಲ್ಲಾ... ಅದ್ಕೆ ಆ ಆನೆಗಳಿಗಾಗಿನೇ ಒಂದು ಫುಟ್ಬಾಲ್ ಮ್ಯಾಚ್ ನಡ್ತ್. ಹೊತಾರೆನೇ ಆನೆಗಳಿಗೆ ಕಾವೇರಿ ಹೊಳೇಲಿ ಸ್ನಾನ ಮಾಡ್ಸಿ, ಹೊಟ್ಟೆತುಂಬಾ ತಿಂಡಿ ಕೊಟ್ಟ್, ಗ್ರೌಂಡ್ಗೆ ತಂದ್ ನಿಲ್ಸಿದ್ದೊ.... ಎಂಸಿ ನಾಣಯ್ಯ ಸೇರ್ದಂಗೆ ದೊಡ್ಡ ದೊಡ್ಡ ನೆಂಟರೆಲ್ಲಾ ಬಂದ ಮೇಲೆ ಆನೆಗಳ ಆಟ ಶುರು ಆತ್. ವಿಶೇಷ ಅಂದ್ರೆ, ಆನೆಗನೇ ನೆಂಟರಿಗೆಲ್ಲಾ ಹೂಮಾಲೆ ಹಾಕಿ ಸ್ವಾಗತ ಮಾಡ್ದೊ.. ಇನ್ ಫುಟ್ಬಾಲ್ ಆಟ ಅಂತೂ ತುಂಬಾ ಲಾಯ್ಕ ಇತ್ತ್. 47 ವರ್ಷದ ವಿಕ್ರಂ ಆನೆನೇ ಟೀಂ ಕ್ಯಾಪ್ಟನ್. ಇದ್ರ ಜೊತೆ ಇನ್ನೂ 11 ಗಂಡಾನೆಗೆ, 5 ಹೆಣ್ಣಾನೆಗ, 3 ಮರಿಯಾನೆಗ ಈ ಆಟದಲ್ಲಿ ಇದ್ದೊ. ಈ ಆನೆಗ ಒಂದರ ಬಾಲ ಒಂದು ಹಿಡ್ಕಂಡ್ ಮಾಡ್ದ ಪಥಸಂಚಲ ತುಂಬಾ ಪೊರ್ಲು ಇತ್ತ್... ಬೇರೆ ಬೇರೆ ಕಡೇಂದ ಬಂದಿದ್ದ ಟೂರಿಸ್ಟ್ನವು ಈ ಆಟನ ನೋಡಿ ಫುಲ್ ಎಂಜಾಯ್ ಮಾಡ್ದೋ...

- ಟಿ ಜಿ ಪ್ರೇಮ್ ಕುಮಾರ್, ಕುಶಾಲನಗರ

ನೀವೂ ಬರೆಯನಿ...

Sunday 30 October 2011

ಹೋರಿ ಶಂಕರ


 ಈಗಂತೂ ಹಸು ಸಾಕುದು ಒಂದೊಳ್ಳೆ ಸಂಪಾದನೆ ದಾರಿ ಆಗ್ತುಟ್ಟು. ದಿನಕ್ಕೊಂದು 10 ಲೀಟರ್ ಹಾಲು ಸಿಕ್ಕಿಬಿಟ್ಟರೆ ಒಳ್ಳೇ ಜೀವನ ಮಾಡಕ್. ಕೆಎಂಎಫ್ ಕೂಡ ಲಾಯ್ಕಲಿ ಪ್ರೋತ್ಸಾಹ ಕೊಡ್ತುಟ್ಟು. ಹಳ್ಳಿ ಹಸುಗಳಿಗೆ ಫಾರೀನ್ ಹಸುಗಳ್ನ ಬ್ರೀಡ್ ಮಾಡ್ಸುದು ಸನಾ ಇದ್ರಲಿ ಒಂದ್... ಇದ್ನ ವೈಜ್ಞಾನಿಕ ರೀತೀಲಿ ಮಾಡಿವೆ. ಅದ್ಕೆತೇಳೀಯೇ ಟ್ರೈನಿಂಗ್ ತಕ್ಕೊಂಡಿರೋವ್ ಇದ್ದವೆ. ಅದೊಂಥರ ನೋಡಿಕೆ ಲಾಯ್ಕ ಇದ್ದದೆ. ಕಬ್ಬಿಣದ ಗೂಡೊಳಗೆ ಹಸುನ ಕೂಡಿ ಹಾಕಿ ಅದು ಬೊಬ್ಬೆ ಹೊಡೀತ್ತಿದ್ದ್ರೂ, ಆ `ಎಕ್ಸ್ಪರ್ಟ್' ಅವ್ನ ಕೆಲ್ಸ ಮುಗ್ಸಿದೆ. ಇಷ್ಟಾದ್ರೂ ತುಂಬಾ ಸಲ ಈ `ಕೃತಕ ಗರ್ಭಧಾರಣೆ' ಫೇಲ್ ಆಗಿಬಿಟ್ಟದೆ ! ಆಗ ನೆನಪಿಗೆ ಬಾದು `ಹೋರಿ ಶಂಕರ' ! ಇಂವ ಇವ್ನ ಹೋರಿ ಹಿಡ್ಕಂಡ್ ಅದೇ ಕಬ್ಬಿಣದ ಗೂಡು ಹತ್ರ ಕಾಯ್ತಿದ್ದದೆ. `ಕೃತಕ ಗರ್ಭಧಾರಣೆ' ಫೇಲ್ ಆದ್ರೆ `ಹೋರಿ ಶಂಕರ'ನ ಹತ್ರ ಹಸುನ ತಕ್ಕೊಂಡು ಹೋದವೆ.... ಅವ್ನ ಹೋರಿ ಹತ್ರ ಹಸುನ ತಕ್ಕೊಂಡು ಹೋದ್ರೆ, ಅದು ಯಾವತ್ತೂ ಫೇಲ್ ಆತ್ಲೆ ! ಅಂಥ `ಹೋರಿ ಶಂಕರ'ಂಗೆ ಮದುವೆ ಆಗಿ 30 ವರ್ಷ ಆಗಿಟ್ಟು.  ಎಂಥೆಂತ ಹಸುಗಳಿಗೆಲ್ಲಾ ಅಂವ ಅವನ ಹೋರಿ ಇಟ್ಕಂಡ್ ಕರು ಕರುಣಿಸಿಯುಟ್ಟು... ಪಾಪ `ಹೋರಿ ಶಂಕರ' ಅವಂಗಿನ್ನೂ ಮಕ್ಕ ಇಲ್ಲೆ....

- `ಸುಮ'
ನೀವೂ ಅರೆಭಾಷೇಲಿ ಬರೆಯನಿ..
arebhase@gmail.com

Saturday 29 October 2011

ಏ ಗೂಡೆ... ನೀನೆಷ್ಟ್ ಪೊರ್ಲು !


ಏ ಗೂಡೆ... ನೀನೆಷ್ಟ್ ಪೊರ್ಲು !

ಮೆಲ್ಲೆ ನಡಿನೇ ಗೂಡೇ...
ನಿನ್ನ ಎಳೆ ಕಾಲಿಗೆ ನೋವಾದು...
ಆ ರಸ್ತೇಲಿ ಮಲ್ಲಿಗೆ ಚೆಲ್ಲಿಯೊಳೊ
ಮೇಲೆ ರೇಷಿಮೆ ಹಾಸಿಯೊಳೊ...
ನೀ ಮೆಲ್ಲನೇ ನಡಿನೇ....
ನೀ ಹಂಗೆ ನೋಡಿಕಾದು ಗೂಡೆ...
ನಿನ್ನ ಸಂಪಿಗೆ ಕಣ್ಣು ಬಾಡಿಹೋದು...!
ಆಕಾಶಲಿ ಹುಣ್ಣಿಮೆ ಚಂದ್ರ ನಗಾಡ್ತುಟ್ಟು..
ಭೂಮೀಲಿ ಬೆಳದಿಂಗಳು ಚೆಲ್ಲಾಡ್ಯುಟ್ಟು...
ಕಣ್ಣು ಮುಚ್ಚಿಕನೇ ಗೂಡೆ...
ಏ ಗೂಡೆ ನೀ ಹಂಗೆ ನಗಾಡ್ಬ್ಯಾಡ...
ನಿನ್ನ ಹಲ್ಲಿನ ಹೊಳಪಿಗೆ ಸೂರ್ಯನೇ ಹೆದರಿಟ್ಟು !
ದಾಳಿಂಬೆನೂ ನಾಚಿ ಎಲೆಮರೆಗೆ ಹೋಗಿಟ್ಟು...
ಗೂಡೆ.... ನೀ ನಗಾಡಿಕಾದ್ ...
ಏ ಗೂಡೆ... ನೀನೆಷ್ಟ್ ಪೊರ್ಲು !
ಹಿಂಗೆನೇ ಇರೋಕು ನೀನ್...
ಬೇಕಾರೆ ನನ್ನ ಯವ್ವನನೂ ತಕ... !
- `ಸುಮ'

Thursday 27 October 2011

ಯಾರ್ ಗೌಡುಗ ?


ಭೂಮಿಗೆ ಒಡೆಯನೇ ಗೌಡ... ಕನ್ನಡಲಿ ಒಂದ್ ಗಾದೆ ಮಾತು ಉಟ್ಟು... `ಊರಿಗೊಬ್ಬ ಗೌಡ, ದೇಶಕೊಬ್ಬ ದೊರೆ' ನಾವು ಹಿಂದೂಗ. ತಿರುಪತಿ ವೆಂಕಟಮಣ ನಮ್ಮ ಮನೆದೇವ್ರು. ಅದ್ಕೆ ಐನ್ ಮನೇಲ್ಲಿ ಹರಿಸೇವೆ ಮಾಡೋ ಆಚರಣೆ ಉಟ್ಟು. ಇನ್ನು ನಾವು ಶೃಂಗೇರಿ ಮಠಕ್ಕೆ ನಡ್ಕಂಡವೆ. ನಮ್ಮಲ್ಲಿ ಯಾವುದೇ ಒಳ್ಳೇ ಕೆಲ್ಸ ಶುರು ಮಾಡಿಕೆ ಮೊದ್ಲು, ಶೃಂಗೇರಿ ಮಠದ ಗುರುಗಳಿಗೆ ಗುರುಕಾಣಿಕೆ ಕೊಡುವ ಕ್ರಮ ಉಟ್ಟು. ಈಗಲೂ ಮದುವೆ ನಡೆಯಕಾಕನ `ತೆರ' ಅಂತ ತೆಗೆದಿಟ್ಟವೆ.
"ಗೌಡ" ಜನಾಂಗದವು 10 ಕುಟುಂಬ 18 ಗೋತ್ರಕ್ಕೆ ಸೇರಿದವು. ಮದುವೇಲಿ "ಹತ್ತು ಕುಟುಂಬ ಹದಿನೆಂಟು ಗೋತ್ರ ಜಾತಿ ಸಭೆ ಸಮಸ್ತರ ಸಂಗಡ ಕೇಳಿ" ಅಂತ  ಹೇಳಿಯೇ ಎಲ್ಲಾ ಕೆಲ್ಸಗಳನ್ನ ಶುರು ಮಾಡುವೆ...
ನಮ್ಮ ಇತಿಹಾಸ ನೋಡಿರೆ, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಕಾಲಕ್ಕೆ ಥಳಕು ಹಾಕಿಕೊಂಡುಟ್ಟು. ತಾಳಿಕೋಟೆ ಯುದ್ಧಲಿ ವಿಜಯನಗರ ಸಾಮ್ರಾಜ್ಯ ಪತನ ಆದೆ. ಆಗ ಮುಸ್ಲೀಮರ ಕೆಳಗೆ ಇರೀಕೆ ಇಷ್ಟಪಡದೆ ಗೌಡುಗ ಅಲ್ಲಿಂದ ಇಕ್ಕೆರಿ ಸಂಸ್ಥಾನಕ್ಕೆ ಬಂದವೆ. ಇಕ್ಕೇರಿ ಅರಸ ಗೌಡುಗಳಿಗೆ ದಕ್ಷಿಣಕನ್ನಡ ಜಿಲ್ಲೇಲಿ ನೆಲೆಕೊಟ್ಟದೆ. ಇನ್ನು ನಮ್ಮವು ಕೊಡಗಿಗೆ ಬಂದುದರ ಹಿಂದೆನೂ ಒಂದೊಳ್ಳೆ ಇತಿಹಾಸ ಉಟ್ಟು...
ಅದ್ 18ನೇ ಶತಮಾನ ಮುಗೀತಿದ್ದ ಟೈಂ... ಟಿಪ್ಪುಸುಲ್ತಾನ್ ಕೊಡಗಿನ ಮೇಲೆ ದಾಳಿ ಮಾಡ್ದೆ. ಭಾಗಮಂಡಲದ ದೇವುಟು ಪರಂಬು ಅನ್ನೋ ಜಾಗಲಿ ಅಂವ ಸುಮಾರು 80 ಸಾವಿರ ಜನ ಕೊಡಗಿನವ್ರನ್ನ ಸೇರ್ಸಿದೆ. ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಕರ್ಕೊಂಡು ಹೋಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡ್ಸಿದೆ. ಈಗ್ಲೂ ಕೊಡಗಿನ ಕೆಲ ಮುಸ್ಲಿಂ ಕುಟುಂಬಗ ಮನೆ ಹೆಸ್ರು ಇಟ್ಕೊಂಡಿರ್ದು ಆ ಇತಿಹಾಸಕ್ಕೆ ಸಾಕ್ಷಿ. ಇನ್ನ್ ಅಷ್ಟ್ ಜನ ಮೈಸೂರು ಕಡೆ ಹೋದ್ಮೇಲೆ, ಕೊಡಗಿನ ಕೃಷಿ ಭೂಮಿ ಪಾಳು ಬಿದ್ದದೆ. ಆಗ ಸುಳ್ಯದ ಕೆಲ ಜಾಗಗ ಕೊಡಗಿನ ವೀರರಾಜೇಂದ್ರನ ವಶಲಿ ಇತ್ತ್. ಅಲ್ಲಿದ್ದ ಗೌಡುಗಳ್ನ ವೀರರಾಜೇಂದ್ರ ಕೊಡಗಿಗೆ ಕರ್ಕೊಂಡು ಬಂದದೆ. ಜಮ್ಮಾ, ಉಂಬುಳಿ , ಜಹಾಗೀರ್ ಭೂಮಿ ಕೊಟ್ಟ್, ಕೃಷಿ ಕೆಲಸಕ್ಕೆ ಬಿಟ್ಟದೆ. ಹಂಗೆ ಕೊಡಗಿನಲ್ಲೂ ಗೌಡುಗ ಸೇರಿಕೊಂಡವೆ...
ಅರೆಭಾಷೆ ಗೌಡುಗ ಈಗ ದಕ್ಷಿಣಕನ್ನಡ ಮತ್ತೆ ಕೊಡಗುಲಿ ತುಂಬಾ ಸಂಖ್ಯೇಲಿ ಒಳೊ... ಬದುಕು ಹುಡುಕ್ತಾ ದೇಶ ವಿದೇಶಗಳಲ್ಲೂ ನೆಲೆಸಿಯೊಳೊ... ಈಗ ಆತಂಕ ಇರ್ದು ಭಾಷೆ ಬಗ್ಗೆ.. ನಮ್ಮ ಅರೆಭಾಷೆ ಮಾತಾಡವ್ರ ಸಂಖ್ಯೆ ಕಡಿಮೆ ಆಗ್ತುಟ್ಟು.... ಭಾಷೆನ ಉಳಿಸೋ ಜವಾಬ್ದಾರಿ ಈಗ ನಮ್ಮ ಮೇಲೆ ಉಟ್ಟು... ಇಲ್ಲಿ ನೀವೂ ಬರೆಯನಿ... ಅರೆಭಾಷೇಲೇ ಇರ್ಲಿ...
- ತಳೂರು ಡಿಂಪಿತಾ,
 ರಂಗಸಮುದ್ರ
(ಇಲ್ಲಿರ್ದು ಲೇಖಕರ ಸಂಗ್ರಹ ಮಾಹಿತಿ - ಸಂ.)

Tuesday 25 October 2011

ಏಕೆ ಅರೆಭಾಷೆ ಬ್ಲಾಗ್ ?


ಅರೆಭಾಷೆ ಕೇಳಿಕ್ಕೆ ಮತ್ತೆ ಮಾತಾಡಿಕೆ ತುಂಬಾ ಒಳ್ಳೇ ಭಾಷೆ.. ಆದ್ರೆ ಇಂದ್ ನಮ್ಮ ಈ ಭಾಷೆ ತುಂಬಾ ಅಪರೂಪ ಆಗ್ತುಟ್ಟು. ಹಂಗಾಗಿ ಇದ್ನ ಉಳ್ಸೊ ಮತ್ತೆ ಬೆಳ್ಸೋ ದೊಡ್ಡ ಹೊಣೆಗಾರಿಕೆ ಈಗ ನಾವು ಹೊತ್ತುಕೊಳೋಕು. ಸಿಟಿ ಹೋಗ್ಲಿ, ಹಳ್ಳಿ ಕಡೆನೂ ಈಗ ಮನೇಲಿ ಮಕ್ಳಿಗೆ ಅರೆಭಾಷೆ ಹೇಳಿಕೊಡ್ತಿಲ್ಲೆ. ಮೊದ್ಲೆಲ್ಲಾ ಸ್ಕೂಲ್ಗಳಲ್ಲಿ ಮಕ್ಕ ಮಕ್ಕ ಸೇರ್ಕಾಕನ ಅರೆಭಾಷೇಲಿ ಮಾತಾಡ್ತಿದ್ದೊ... ಆದ್ರೆ ಇಂದ್ ಕಾನ್ವೆಂಟ್ ಸಂಸ್ಕೃತಿ ಎಲ್ಲದಿಕ್ಕೂ ಮಣ್ಣು ಹಾಕಿಬಿಟ್ಟುಟ್ಟು...
ಇನ್ನ್ ನಮ್ಗೆ ಅರೆಭಾಷೇಲಿ ಏನಾದ್ರೂ ಬರೆಯೋಕು, ಎಂಥದ್ದಾದ್ರೂ ಹೇಳೋಕು ಅಂತ ನೋಡಿರೆ ಒಂದು ಮಾಧ್ಯಮ ಇಲ್ಲೆ... ಹಂಗೆತೇಳಿ ಸೀಮಿತ ಓದುಗ ಇರೋ ನಮ್ಮ ಭಾಷೇಲಿ ಮುದ್ರಣ ಮಾಧ್ಯಮ ಮಾಡ್ದು ಆಥರ್ಿಕವಾಗಿ ಕಷ್ಟದ ಸಂಗತಿ. ಏಕಂದ್ರೆ ನಮ್ಮವು ಈ ಪ್ರಯೋಗ ಮಾಡಿಕೆ ಹೋಗಿ ಕೈಸುಟ್ಟುಕೊಂಡೊಳೊ... ಆದ್ರೆ ಆಕಾಶವಾಣೀಲಿ ಅರೆಭಾಷೆ ಪ್ರಯೋಗ ಯಶಸ್ವಿ ಆಗಿಟ್ಟುತಾ ಹೇಳಕ್. ಮಡಿಕೇರಿ ಆಕಾಶವಾಣೀಲಿ ಸುದ್ದಿಜೊಂಪೆ ಅಂತ ಅರೆಭಾಷೆ ವಾತರ್ೆ ಪ್ರಸಾರ ಆದೆ... ಇದು ತುಂಬಾ ಜನ್ರಿಗೆ ಮುಟ್ತುಟ್ಟು. ಇನ್ನು ಆಗಾಗ ಬೇರೆ ಬೇರೆ ಕಾರ್ಯಕ್ರಮಗನೂ ಬರ್ತಿದ್ದದೆ. ಗೌಡುಗ ಖುಷೀಂದನೇ ಇದ್ನ ಕೇಳಿವೆ...
ಬ್ಲಾಗ್ಲಿ ಕೂಡ ಇಂಥ ಪ್ರಯೋಗ ಆಗೋಕು. ಏಕಂದ್ರೆ ಇಂದ್ ಕಂಪ್ಯೂಟರ್ ಗೊತ್ತಿಲ್ದೆ ಇರೋವು ಕಡಿಮೆ... ಅದ್ರಲ್ಲೂ ಹೆಚ್ಚಿನ ಯುವಜನ ಕಂಪ್ಯೂಟರ್ ಜೊತೆನೇ ಕೆಲ್ಸ ಮಾಡಿವೆ. ಹಂಗಾಗಿ ಬ್ಲಾಗ್ ಬರಹ ತುಂಬಾ ಜನ್ರಿಗೆ ತಲುಪಿದೆ ಅಂತ ನನ್ನ ಅಭಿಪ್ರಾಯ...

ನೀವೂ ಬರೆಯನಿ... ಎಂತದ್ದು ಬೇಕಾರೆ ಆಗಿರ್ಲಿ... ಬರ್ದು ಇಮೇಲ್ ಮಾಡಿ... ಭಾಷೆ ಉಳಿಸೋಕೆ ಇದು ನಮ್ಮ ಅಳಿಲು ಸೇವೆ...    

Saturday 22 October 2011


ಅರೆಭಾಷೆಗಾಗಿಯೇ ಒಂದು ಬ್ಲಾಗ್ ಶುರು ಆಗ್ತುಟ್ಟು. ಅರೆಭಾಷೇಲಿ ಬರೆಯೋ ಆಸೆ ನಿಮ್ಗೆ ಉಟ್ಟುತಾ ಆದ್ರೆ, ನೀವು ಬರ್ದದ್ದನ್ನ  arebhase@gmail.com ಈ ಇ ಮೇಲ್ಗೆ ಕಳ್ಸಿಕೊಡಿ. ವಾರಕ್ಕೆ ಒಂದ್ಸಲ ಬ್ಲಾಗ್ ಅಪಡೇಟ್ ಆಗ್ತಿದ್ದದ್ದೆ. ಕಥೆ, ಪದ್ಯ, ನಿಮ್ಮೂರಿನ ವಿಶೇಷ, ನಿಮ್ಮ ಮನೆ ಹೆಸ್ರಿನ ವಿಶೇಷ.. ಗೌಡ ಸಂಸ್ಕೃತಿ ಬಗ್ಗೆ... ನಿಮ್ಮ ಮನೇಲಿ ಇರೋ ಹಿರಿಕರ ಅನುಭವ...ಹಿಂಗೆ ಅದ್ ಎಂಥ ಬೇಕಾರೇ ಆಗಿರ್ಲಿ, ಆದ್ರೆ, ಅರೆ ಭಾಷೇಲೇ ಇರೋಕು. ಮತ್ತೆ ಅದ್ ನುಡಿ ಯೂನಿಕೋಡ್ ಅಥ್ವಾ ಬರಹದಲ್ಲಿ ಟೈಪ್ ಮಾಡಿ ಕಳ್ಸಿ. ಇನ್ನು, ಗೌಡ್ರಿಗೆ ಸಂಬಂಧಿಸಿದಂಗೆ ನಿಮ್ಮ ಹತ್ರ ಒಳ್ಳೇ ಫೋಟೋಗ, ವೀಡಿಯೊ... ಆಡಿಯೋ ಇದ್ರೆ ಅದ್ನ ಕೂಡ ಮೇಲ್ ಮಾಡಿ... ಜೊತೇಲಿ ನಿಮ್ದೊಂದ್ ಚಿಕ್ಕ ಪರಿಚಯನೂ ಇರ್ಲಿ. ಈ ಮೇಲ್ನ ನಿಮ್ಗೆ ಗೊತ್ತಿರೋ ಅರೆಭಾಷಿಕರಿಗೆಲ್ಲಾ ಕಳ್ಸಿ... ನಮ್ಮ ಭಾಷೆ ಉಳ್ಸಿಕೆ ಇದೊಂದು ಸಣ್ಣ ಪ್ರಯತ್ನ..