Monday 10 September 2012

ಗಿಣಿಯು ಪಂಜರದೊಳಗಿಲ್ಲ...


ಗಿಣಿ...ಅವ್ಳ ಹೆಸ್ರೇ ಹಂಗೆ. ಅಪ್ಪ, ಅಮ್ಮನ ಒಬ್ಳೇ ಮುದ್ದಿನ ಕೂಸು. ಗಿಣಿ ಥರನೇ ಸಾಕಿದ್ದೋ...ಥೇಟ್ ಪಂಜರದ ಗಿಣಿಯಂಗೆ ! ಅಂತಿಂಥ ಪಂಜರ ಅಲ್ಲ, ಚಿನ್ನದ ಪಂಜರ ! ಗಿಣಿಗೂ ಕನಸುಗಳಿದ್ದೋ...ಆದ್ರೆ ಆ ಕನಸುಗಳೆಲ್ಲಾ ಚಿನ್ನದ ಪಂಜರದೊಳಗೆ ಕರಗಿಹೋಗಿತ್ತ್. ಮನೆ ಬಿಟ್ಟು ಹೊರಗೆ ಹೋಗುವಂಗೆನೇ ಇಲ್ಲೆ....ಎಲ್ಲಾ ಕುದ್ದಲ್ಲಿಗೇ ಬರ್ತಿತ್ತ್. ಬೆಳಗ್ಗೆ 6 ಗಂಟೆಗೆ ಆಯಾ ಬಂದ್ ಎದ್ದೇಳಿಸಿ, ಬ್ರಷ್ ಮಾಡ್ಸಿ, ಹಾರ್ಲಿಕ್ಸ್ ಕುಡಿಸಿರೆ, 7 ಗಂಟೆಗೆ ಯೋಗ ಟೀಚರ್, 8 ಗಂಟೆಗೆ ಕರಾಟೆ ಮಾಸ್ಟರ್ ಬಂದ್ ಅವ್ಳಿಗೆ ಯೋಗ ಮತ್ತೆ ಕರಾಟೆ ಹೇಳಿಕೊಡ್ತಿದ್ದೊ. 10 ಗಂಟೆಂದ ಸಂಜೆ ನಾಲ್ಕು ಗಂಟೆ ವರೆಗೆ ಪಾಠ. ಅದಕ್ಕೂ ಟೀಚರ್ಗ ಮನೆಗೆ ಬರ್ತಿದ್ದೊ. ಎಲ್ಲಾ ಒಂಥರ ಮೆಕ್ಯಾನಿಕಲ್ ಆಗಿ ನಡೀತ್ತಿತ್ತ್. ಇಂಥ ಗಿಣಿ, ಎಸ್ಎಸ್ಎಲ್ಸಿ ಪರೀಕ್ಷೆ ಬರಿಯಕ್ಕೆ ಹೋಗಿತ್ತ್. ಅದೇ ಅವ್ಳು ಮೊದಲ ಸಲ ಮನೇಂದ ಹೊರಕ್ಕೆ ಹೋದ್...
ಎಸಿ ಕಾರ್. ಮುಂದೆ ಡ್ರೈವರ್ ಮತ್ತೆ ಟೀಚರ್. ಹಿಂದೆ ಸಿಟ್ಲಿ ಆಚೆ ಈಚೆ ಅಪ್ಪ-ಅಮ್ಮ. ಮಧ್ಯಲಿ ಗಿಣಿ. ಕಾರು ಮುಂದಕ್ಕೆ ಹೋಗ್ತಿದ್ದಂಗೆ ಹಿಂದಕ್ಕೆ ಓಡ್ತಿದ್ದ ಗಿಡ, ಮರಗಳ್ನ ಗಿಣಿ ತುಂಬಾ ಆಶ್ಚರ್ಯಂದ ನೋಡ್ತಿತ್ತ್. ಇವ್ಳು ಪರೀಕ್ಷೆ ಬರೆಯಕ್ಕಾಗಿದ್ದ ಶಾಲೆ ಹತ್ರ ಬಾತ್. ಗೇಟ್ ಹತ್ರ ಒಬ್ಬ ಸುರಸುಂದರಾಂಗ ಹೈದ..! ಫೋಟೋ ತೆಗ್ದ ಹಂಗೆ ಗಿಣಿ ಮನಸ್ಲಿ ಅವನ ಚಿತ್ರ ಸೇವ್ ಆಗಿಬಿಟ್ಟತ್...ಪರೀಕ್ಷೆ ಬರೆಯಕಾಕನ ಪಕ್ಕದ ಸಿಟ್ಲಿ ಕೂಡ ಅವ್ನೇ..! ಆ ಹೈದನ ಕಣ್ಣ್ಲಿ ಭವಿಷ್ಯದ ದಾರಿ ಸ್ಪಷ್ಟವಾಗಿ ಕಾಣ್ತಿತ್ತ್. ಓದಿದ್ದನ್ನೆಲ್ಲಾ ತುಂಬಾ ಲಾಯ್ಕಲಿ ಪೇಪರ್ ಮೇಲೆ ಭಟ್ಟಿ ಇಳಿಸ್ತಿತ್ತ್. ಆದ್ರೆ ಗಿಣಿಗೆ ಮಾತ್ರ ಎಂಥ ಬರೆಯೋಕುತನೇ ಗೊತ್ತಾತ್ಲೆ...ಆ ಸುರಸುಂದರಾಗನ ನೋಡಿಕಂಡೇ ಕಾಲ ಕಳ್ದ್ಬಿಟ್ಟತ್. ಆರು ಪರೀಕ್ಷೆಯ ಆರೂ ದಿನನೂ ಇದೇ ಕಥೆ....ಮನೆಗೆ ಬಂದರೂ ಯಾವುದಕ್ಕೂ ಮನಸ್ಸಿಲ್ಲೆ...ಕಣ್ಣುಬಿಟ್ಟರೆ, ಕಣ್ಣು ಮುಚ್ಚಿರೆ ಎಲ್ಲೆಲ್ಲೂ ಅದೇ ಹೈದನ ಚಿತ್ರ. ಗಿಣಿಗೆ ಜ್ವರ ಬಾತ್.
ದೊಡ್ಡ ದೊಡ್ಡ ಡಾಕ್ಟರ್ಗಳೆಲ್ಲಾ ಬಂದ್ ನೋಡ್ದೊ...ಗಿಣಿಗೆ ಬಂದ ಜ್ವರ ಯಾವುದುತಾ ಯಾರಿಗೂ ಗೊತ್ತಾತ್ಲೆ. ಅವ್ಳನ್ನ ಅಮೆರಿಕಾಕ್ಕೆ ಕರ್ಕಂಡ್ ಹೋಕೆ ಪ್ಲ್ಯಾನ್ ಮಾಡ್ದೊ. ಅಷ್ಟೊತ್ತಿಗೆ ಗಿಣಿಗೆ ಬಂದ ಜ್ವರದ ಹಿಂದಿನ ಕಾರಣ ಅವ್ಳ ಟೀಚರ್ಗೆ ಗೊತ್ತಾತ್. ಪರೀಕ್ಷೆ ದಿನ ಪಕ್ಕಲಿ ಕುದ್ದಿದ್ದ ಹೈದನ ಫೋಟೋನ ತಂದ್ ಗಿಣಿ ಮುಂದೆ ಹಿಡಿಯಕಾಕನ, ಅವ್ಳ ಕಣ್ಣ್ಲಿ ವಿಶೇಷ ಬೆಳಕು ! ಟೀಚರ್ ತಡ ಮಾಡ್ತ್ಲೆ...ಹೋಗಿ ಆ ಹೈದನ ಕರ್ಕಂಡ್ ಬಾತ್...ಅವ್ನನ್ನ ನೋಡ್ತಿದ್ದಂಗೆ ಗಿಣಿ ಹೊರಗೆ ಓಡಿ ಹೋತ್...ಅವನ ಕೈ ಹಿಡ್ಕಂಡ್ ಗೇಟ್ ದಾಟಿತ್....
- ಸುನಿಲ್ ಪೊನ್ನೇಟಿ

Friday 7 September 2012

ಉಂಗುರ ಪ್ರೇಮ...!



`ಜನ ಈಗ ನಮ್ಮ ಹೆಸರೇಳಿಕೂ ಹೆದರ್ತೊಳೊ...'

`ಅಲ್ಲಮತ್ತೆ...ಹಿಂಗೆ ರೇಟ್ ಆಕಾಶ ಕಡೆ ಓಡ್ತಿದ್ದರೆ ಇನ್ನೇನಾದೆ..'

`ಹೌದು....ಪ್ರೀತಿಲಿ `ಚಿನ್ನಾ' ತಾ ಕಿವಿಹತ್ರ ಬಂದ್ ಹೇಳಿಕಣಿಕೂ ಹಿಂದೆ ಮುಂದೆ ನೋಡಿವೆ'

`ಇನ್ನೆಂಥ...? 20 ವರ್ಷಗಳ ಹಿಂದೆ ಹಿಂಗೆ ಇತ್ತಾ?'

`ಎಲ್ಲಿತ್ತ್? ಪುತ್ತೂರಿಗೆ 10ಸಾವಿರ ರೂಪಾಯಿ ತಕ್ಕಂಡ್ ಹೋಗಿದ್ದರೆ, ಬಾಕಾಕನ ಒಳ್ಳೇ ಎರಡಳೆ ಚೈನ್ ತಕ್ಕಂಡ್ ಬರಕ್ಕಾಗಿತ್ತ್.'

`ಈಗ ಹೋದ ಹೋದಲ್ಲಿ ನಮ್ಮ ಅಂಗಡಿಗ... ಈ ಅಂಗಡಿಗ ಜಾಸ್ತಿ ಆದಷ್ಟೂ ನಮ್ಮ ರೇಟ್ ಜಾಸ್ತಿ ! ನಿನ್ನೆ 10 ಗ್ರಾಂಗೆ 32 ಸಾವಿರ ರೂಪಾಯಿ..!'

`ಹುಂ...ದೀಪಾವಳಿ ಬಾಕಾಕನ 50 ಸಾವಿರ ರೂಪಾಯಿ ಆದೆ ಗಡ..!'

`ಹಿಂಗಾದರೆ ದೇವರೇ ಗತಿ..! ನಿನ್ನ ಮುಖಲಿ ಕೂರಿಸಿಯೊಳಲಾ ಆ ನೀಲಿ ಕಲ್ಲು...ನಿಂಗೆ ತುಂಬಾ ಲಾಯ್ಕ ಕಂಡದೆ...ಸುರಸುಂದರಾಂಗ..!'

`ಸಾಕ್...ಸಾಕ್...ತುಂಬಾ ಹೊಗುಳುಬೇಡ. ನೀ ಏನು ಕಮ್ಮಿ ಪೊರ್ಲು ಒಳಾ...? ಆಕಾರ ಸಣ್ಣ ಆದ್ರೂ... ಬಂದವು ಒಂದ್ಸಲ ನಿನ್ನನ್ನ ಅವ್ರ ಬೆರಳಿಗೆ ಹಾಕ್ಕಂಡ್ ನೋಡಿವೆ...'

`ಹೌದೌದು....ನೀ ನಂಗೆ ಹಂಗೆ ಹೇಳಿರೆ ನಾಚಿಕೆ ಆದೆ...!'

`ಛಿ..ಕಳ್ಳಿ... ನೀ ನಾಚಿಕಂಡ್ರೂ ತುಂಬಾ ಲಾಯ್ಕ ಕಂಡಿಯಾ...ನಿನ್ನ ಮುಖಲಿರ್ವ ನೇರಳೆ ಹರಳಂತೂ ಸೂಪರ್...'

`ಇನ್ನೆಷ್ಟು ದಿನರಾ ಹಿಂಗೆ?'

`ಹೆಂಗೆ...?'

`ಅದೇ ಈಗ ಒಳಾ ಅಲಾ ಜೊತೆ ಜೊತೆಲೇ...ಹಂಗೆ...'

`ಶ್....ಶಬ್ದ ಮಾಡ್ಬೇಡಾ...ಅವ್ಳು ಬರ್ತುಟ್ಟು....'

`ಅವ್ಳು ಅಂದ್ರೆ.... ಯಾರ್ ?'

`ಅದೇ...ಅವ್ಳ ಬಾಯ್ಫ್ರಂಡ್ ಬೆರಳಿಗೆ ಹಾಕಿಕೇತಾ ಆರ್ಡರ್ ಕೊಟ್ಟು ನನ್ನ ರೆಡಿ ಮಾಡಿಸಿತ್ತಲ್ಲಾ, ಅವ್ಳು....'

`ಹಂಗಾರೆ ಈಗ ನೀ ನನ್ನ ಬುಟ್ಟು ಹೋದಿಯಾ ?'

`ಹುಂ....ಡೀಯರ್...ನಾ ಹೋಗದಿದ್ದರೆ, ಈ ಆಚಾರಿ ಬುಟ್ಟದೆನಾ? ಅವ್ಳ ಕೈಂದ 20 ಸಾವಿರ ರೂಪಾಯಿ ತಕ್ಕಂಡತ್ಲೆನಾ...? ಏಯ್....ಅಲ್ಲಿ ನೋಡ್...'

`ಎಂಥ...?'

`ಅದೇ, ಗರ್ಲ್  ಫ್ರಂಡ್ಗೆ ಕೊಡಿಕೆತಾ ಆರ್ಡರ್ ಕೊಟ್ಟು ನಿನ್ನ ರೆಡಿ ಮಾಡಿಸಿತ್ತಲ್ಲಾ...ಅಂವ ಬರ್ತುಟ್ಟು...' 

`ಅಯ್ಯೋ...ಇಷ್ಟು ಬೇಗ ನಾವು ದೂರ-ದೂರ ಆಗ್ತೊಳಲಾ...'

`ನಿರಾಸೆ ಬೇಡ ಡೀಯರ್...ಮತ್ತೆ ನಾವಿಬ್ಬರೂ ಒಟ್ಟು ಸೇರುನೋ...ಅವಿಬ್ಬರೂ ಕೈ ಕೈ ಹಿಡ್ಕಂಡಾಗ...!!' 


- ಸುನಿಲ್ ಪೊನ್ನೇಟಿ 
arebhase@gmail.com

Thursday 6 September 2012

ಧೋಬಿ ಘಾಟ್ !


ಮುಂಬೈ ಧೋಬಿಘಾಟ್ ಗೊತ್ತುಟ್ಟಲ್ಲಾ...? ತುಂಬಾ ಫಿಲಂಗ ಅಲ್ಲಿ ಶೂಟಿಂಗ್ ಆಗುಟ್ಟು. ಅಂಥ ಧೋಬಿ ಘಾಟ್ಗ ಎಲ್ಲಾ ಊರುಗಳಲ್ಲೂ ಇದ್ದದೆ. ಆದ್ರೆ ಅಷ್ಟು ದೊಡ್ಡದು ಇರುದುಲ್ಲೆ ಅಷ್ಟೇ...ನನ್ನ ಊರುಲಿ ಕೂಡ ಒಂದು ಧೋಬಿಘಾಟ್ ಉಟ್ಟು. ಭಕ್ತರ ಪಾಪಗಳ್ನ ತೊಳಿಯುವ ಕನ್ನಿಕಾ ಹೊಳೆ, ಸಂಗಮಕ್ಕೆ ಬರ್ವ ಮೊದ್ಲು ಈ ಧೋಬಿಘಾಟ್ಲಿ ಬಟ್ಟೆಗಳ ಕೊಳೆ ತೆಗ್ದು ಬಂದದೆ. ಆ ಊರಿನ ಪೋಲೀಸ್ ಇನ್ಸ್ಪೆಕ್ಟರ್ಂದ ಹಿಡ್ದ್, ಪಂಚಾಯಿತಿ ಕುಲುವಾಡಿ ವರೆಗಿನ  ಖಾಕಿ ಯೂನಿಫಾರಂ. ಅನಂತ ಭಟ್ಟರ್ಂದ ಹಿಡ್ದ್ ಗೌರ್ಮೆಂಟ್ ಆಸ್ಪತ್ರೆ ಡಾಕ್ಟರ್ ವರೆಗಿನ ಬಿಳಿ ಬಟ್ಟೆ ಕ್ಲೀನ್ ಆದು ಇಲ್ಲಿಯೇ... ಧೋಬಿ ಘಾಟ್ಗಿಂತ ಕೆಳಗೆ ಇರವ್ಕೆ ಇದ್ಯಾವುದೂ ಗೊತ್ತಾಲೆ. ಎಲ್ಲವೂ ಅದೇ ನೀರ್ನ ಕುಡ್ದವೆ. ಅದೇ ನೀರ್ಲಿ ಸ್ನಾನ ಮಾಡಿವೆ. ಅದೇ ನೀರ್ಲಿ ಈಜಾಡಿವೆ.
ಕನ್ನಿಕಾ ಹೊಳೆಯ ಆ ಕಲ್ಲುಗ ಬಟ್ಟೆ ಒಗೆಯುವವ್ಕಾಗಿ ಅಲ್ಲಿ ಹುಟ್ಟಿಕಣ್ತೋ, ಅಥ್ವಾ ಆ ಕಲ್ಲುಗಳ್ನ ನೋಡಿಕಂಡ್ ಬಟ್ಟೆ ಒಗೆಯುವವು ಅಲ್ಲಿ ಮನೆ ಕಟ್ಟಿಕೊಂಡೊಳನಾ ? ಗೊತ್ಲೆ. ಆ ಜಾಗನೂ ಅಷ್ಟೇ, ತುಂಬಾ ಲಾಯ್ಕ ಉಟ್ಟು. ಮೊಣಕಾಲು ವರೆಗೆನೇ ಹರಿಯುವ ಕನ್ನಿಕಾ ಹೊಳೆ...ಕುದ್ದ್ಕಂಡ್, ನಿಂತ್ಕಂಡ್, ಬೇಕಾರೆ ಮಲಗಿಕಂಡೂ ಒಗೆಯಕ್ಕೆ ಅನುಕೂಲ ಆಗುವ ದೊಡ್ಡ, ದೊಡ್ಡ ಕಲ್ಲುಗ. ಒಗ್ದ ಬಟ್ಟೆಗಳ್ನ ಒಣಗಿಕೆ ಹಾಕಿಕೆ ದೊಡ್ಡ ಬಾಣೆ... ಇನ್ನೆಂಥ ಬೇಕು ? ಬಟ್ಟೆ ಒಗ್ದು ಒಗ್ದು ಸುಸ್ತಾತಾ? ಅಲ್ಲೇ ಸ್ವಲ್ಪ ಮೇಲೆ ಒಂದು ಹೊಂಡ ಉಟ್ಟು. ಯಾವ ಸ್ವಿಮ್ಮಿಂಗ್ಪೂಲ್ಗೂ ಅದ್ ಕಡಿಮೆ ಇಲ್ಲೆ. ಜೀಪ್ಗಳ ಹಳೇ ಟ್ಯೂಬ್ನ ಸೊಂಟಕ್ಕೆ ಕಟ್ಟಿಕಂಡ್ ನೀರಿಗಿಳಿದ್ರೆ, ಸ್ವರ್ಗ ಸುಖ !
ಹೇಳಿಕೇಳಿ ನನ್ನೂರು ಮಳೆಯ ತವರೂರು ! ಒಂದು ವರ್ಷ ಹಂಗೆನೇ ಆತ್. ಜೋರು ಮಳೆ...ಒಂದು ವಾರ ಕಣ್ಣುಮುಚ್ಚಿಕಂಡ್ ಹೊಡ್ತ್. ಸಂಗಮದ ಹೊಳೆ ನೀರು ದೇವಸ್ಥಾನ ಮೆಟ್ಟಿಲು ದಾಟಿ, ಸಂತೋಷ್ ಹೊಟೇಲಿಗಾಗಿ, ಕಾವೇರಿ ದರ್ಶಿನಿಗೆ ನುಗ್ಗಿ, ವಿಜಯಲಕ್ಷ್ಮೀ ಷೆಡ್ ವರೆಗೆ ಬಂದ್ಬಿಡ್ತ್. ನಮ್ಮ ಧೋಬಿಘಾಟ್ ಪೂರ್ತಿ ಮುಳುಗಿ ಹೋಗಿ, ಬಟ್ಟೆ ಒಗೆಯುವವರ ಮನೆಯೊಳಗೆ ಮೊಣಕಾಲು ಗಂಟ ನೀರು ಬಂದಿತ್ತ್. ಮತ್ತೆ ಒಂದು ವಾರ ಇದೇ ಸ್ಥಿತಿ. ಇದಾದ್ಮೇಲೆ ಸ್ವಲ್ಪ ಸ್ವಲ್ಪನೇ ಮಳೆ ಕಡಿಮೆ ಆತ್. ಹೊಳೆ ನೀರೂ ಇಳ್ತ್. ಬಟ್ಟೆ ಒಗಿಯಕ್ಕೆ ಕನ್ನಿಕಾ ಹೊಳೆಗೆ ಹೋದ್ರೆ ಅಲ್ಲಿ ಎಂಥ ಉಟ್ಟು? ಮಣ್ಣು...ಹೌದು ಮಣ್ಣಲ್ಲ, ಬರೀ ಕೆಸ್ರು. ದೊಡ್ಡ ದೊಡ್ಡ ಕಲ್ಲುಗ ಕೆಸರೊಳಗೆ ಹೂತು ಹೋಗಿದ್ದೊ. ಬಟ್ಟೆ ಒಣಗಿಕೆ ಹಾಕುವ ಬಾಣೆ ತುಂಬಾ ನೀರು ನಿತ್ಕಂಡ್ ಕೆರೆ ಥರ ಆಗಿತ್ತ್. ಸ್ವಿಮ್ಮಿಂಗ್ಪೂಲ್ ಥರ ಇದ್ದ ಹೊಂಡಲಿ ಮರಳು ರಾಶಿ...ನಮ್ಮ ಜೀವನನೂ ಹಿಂಗೆ ತಾನೇ.... ಇಂದ್ ಇದ್ದಂಗೆ ನಾಳೆ ಇರ್ದುಲ್ಲೆ!!!

- ಸುನಿಲ್ ಪೊನ್ನೇಟಿ
arebahse@gmail.com

Wednesday 5 September 2012

ಲಿಲ್ಲಿ ತೋಟ


ಆಗಷ್ಟೇ ಮಳೆ ಬಂದ್ ನಿಂತಿತ್ತ್. ಮಣ್ಣೆಲ್ಲಾ ಹಸಿಹಸಿ... ಕಾಲಿಟ್ಟರೆ ಅಲ್ಲೇ ಹೆಜ್ಜೆ ಗುರುತು ಮೂಡುವಂಗೆ ಸ್ವಲ್ಪ ಕೆಸ್ರು. ಆ ಹೊತ್ತ್ಲಿ ಅದ್ಯಾಕೋ ಲಿಲ್ಲಿಗೆ ತೋಟಕ್ಕೆ ಹೋಗುವ ಮನಸ್ಸಾತ್. ಗದ್ದೆ ಹತ್ರ ಮನೆ. ಮನೇಂದ ತೋಟಕ್ಕೆ ಸುಮಾರ್ 2 ಕಿಲೋಮೀಟರ್ ದೂರ. ಮಳೆ ಬಂದ್ ತೋಟಲಿ ಕಾಫಿ ಕಾಯಿ ಉದುರಿಬಿಟ್ಟುಟ್ಟೋ ಏನೋತೇಳುವ ಹೆದರಿಕೆ, ಅವ್ಳನ್ನ ತೋಟದ ಕಡೆ ಹೋಗುವಂಗೆ ಮಾಡ್ತ್. ಇದ್ಕೆ ಕಾರಣನೂ ಉಟ್ಟು. ಅಲ್ಲಿ ಆ 2 ಎಕರೆ ತೋಟ ಸಿಕ್ಕಿಕಾದರೆ ಲಿಲ್ಲಿ ಮತ್ತೆ ಅವ್ಳ ಗಂಡಂಗೆ ಸಾಕಪ್ಪಾ ತೋಟದ ಸಹವಾಸತಾ ಹೇಳುವಂಗೆ ಆಗಿತ್ತ್. ತೋಟ ಸಿಕ್ಕಿ, ಅಲ್ಲಿ ಹೊಸ ಗಿಡ ಹಾಕಿ...ಈಗ ಮೊದ್ಲ ಫಸಲು....
ಲಿಲ್ಲಿ ಗಂಡ ಪಳಂಗ ಆರ್ಮಿಲಿ ಇತ್. ಲಿಲ್ಲಿ ಕೂಡ ಮದುವೆ ಆದ್ಮೇಲೆ ಅವನ ಜೊತೆನೇ ಹೋಗಿತ್ತ್. ಸಿಕಂದರಾಬಾದ್ಂದ ಹಿಡ್ದ್ ಕಾಶ್ಮೀರ ಮೂಲೆಯ ಲಡಾಕ್ ವರೆಗೆ ವರ್ಷಕ್ಕೆ ಒಂದು ಜಾಗಲಿ ಪಳಂಗ ಮತ್ತೆ ಲಿಲ್ಲಿ ಟ್ರಾನ್ಸ್ಫರ್ ಹೆಸ್ರಲ್ಲಿ ಸುತ್ತಾಡಿದ್ದೊ. ರಿಟೈರ್ಡ್ ಆಗಿ ಬಂದಮೇಲೆನೇ ಶುರುವಾದ್ ತಲೆನೋವು. ಪಳಂಗನ ಅಣ್ಣ `ನಾ ಏನೇ ಆದರೂ ಪಳಂಗಂಗೆ ಪಾಲು ಕೊಡ್ಲೆ'ತಾ ಹಠ ಹಿಡ್ದ್ ಕುದ್ದಿತ್ತ್. ಪಂಚಾಯ್ತಿ ಕರ್ದ ದಿನ ಜಗಳ ಆಡಿ, ಪಂಚಾಯ್ತಿಗೆ ಬಂದವ್ಕೆನೇ ಕೋವಿ ತೋರ್ಸಿ ಓಡಿಸಿತ್ತ್. ಕೊನೆಗೆ ಕೋರ್ಟ್ ಗೆ ಹೋಗಿ ಹತ್ತು ವರ್ಷ ಕೇಸ್ ನಡ್ದ ಮೇಲೆ 2 ಎಕರೆ ಜಾಗ ಪಳಂಗಪ್ಪನ ಪಾಲಿಗೆ ಸಿಕ್ಕಿತ್ತ್. ಹಂಗಾಗಿ ಗಂಡ, ಹೆಣ್ಣ್ ಇಬ್ಬರಿಗೂ ಆ ಜಾಗದ ಮೇಲೆ ತುಂಬಾ ಪ್ರೀತಿ. ಬೆವರಿನ ಜೊತೆ ರಕ್ತ ಸುರ್ಸಿ ಅಲ್ಲಿ ಕಾಫಿ ಗಿಡ ಬೆಳೆಸಿದ್ದೊ. ತೋಟ ತುಂಬಾ ಲಾಯ್ಕ ಬಂದಿತ್ತ್.
ಈ ವರ್ಷ ಮೊದಲ ಫಸಲು ಬಾತ್ತೇಳುವ ಖುಷಿ ಗಂಡ, ಹೆಣ್ಣ್ ಇಬ್ಬರಲ್ಲೂ ಇತ್ತ್. ಆದ್ರೆ ಟೈಂ ಅಲ್ಲದ ಟೈಂಲಿ ಬಂದ ಮಳೆ ಇವರ ತಲೆಕೆಡಿಸಿತ್. ಇಂದಂತೂ ಜೋರು ಮಳೆ. ಸಣ್ಣ ನಿದ್ದೆಮಾಡಿಬಿಟ್ಟನೆತಾ ಪಳಂಗ ಮಧ್ಯಾಹ್ನ ಊಟ ಮಾಡಿ ಹಾಸಿಗೆಲಿ ಬಿದ್ದ್ಕಂಡಿತ್ತ್. ಲಿಲ್ಲಿಗೆ ಮನಸ್ಸು ಕೇಳ್ತಿತ್ಲೆ. ಗಂಡನ ಎಚ್ಚರ ಮಾಡುದು ಬೇಡತಾ ಅವ್ಳೊಬ್ಳೇ ತೋಟದ ಕಡೆ ಹೆಜ್ಜೆ ಹಾಕಿತ್ತ್...ಮಳೆ ಬಂದ್ ನಿಂತಿದ್ದರಿಂದ ಮಳೆ ಹುಳ `ಕಿರ್ರೋಂ...ಕಿರ್ರೋಂ'ತಾ ಮರಡ್ತಿದ್ದೊ.
ಸಾಯಂಕಾಲ 5 ಗಂಟೆ ಆಗಿರೊಕೇನೋ...ಪಳಂಗಂಗೆ ಎಚ್ಚರ ಆತ್. `ಲಿಲ್ಲಿ...ಲಿಲ್ಲಿ'ತಾ ಎರಡು-ಮೂರು ಸಲ ಕರ್ತ್. ಉತ್ತರ ಬಾತ್ಲೆ... ಕಾಫಿ ಕಾಯಿಸ್ತಿರುದೇನೋತಾ ಅಡುಗೆ ಕೋಂಬರೆಗೆ ಹೋಗಿ ನೋಡಿರೆ, ಅಲ್ಲಿ ಇಲ್ಲೆ. ಗುಡ್ಡದ ಒಲೆ ಹತ್ರ ಹೋಗಿ ನೋಡ್ತ್..ಅಲ್ಲೂ ಕಾಂಬಲೆ. ಲಿಲ್ಲಿ ಎಲ್ಲಿ ಹೋಗಿರುದಪ್ಪತಾ ಪಳಂಗಂಗೆ ಹೆದ್ರಿಕೆ ಶುರುವಾತ್. ಮನೆ ಹೊರಗೆ ಬಂದ್, ಪುನಃ `ಲಿಲ್ಲಿ...ಲಿಲ್ಲಿ'ತಾ ಮೂರು-ನಾಲ್ಕು ಸಲ ಕರ್ತ್. ಅವಳ ಪತ್ತೆನೇ ಇಲ್ಲೆ. ಹಂಗೆ ಹೊರಗೆ ಬಂದ್ ನೋಡಿಕಾಕನ ತೋಟಕ್ಕೆ ಹೋಗುವ ದಾರೀಲಿ ಲಿಲ್ಲಿದ್ ಚಪ್ಪಲಿ ಗುರ್ತ್ ಕಾಣ್ತ್. `ಓ...ಲಿಲ್ಲಿ ತೋಟಕ್ಕೆ ಹೋಗಿರುದೇನೋ'ತಾ ಗ್ಯಾನ ಮಾಡ್ಕಂಡ್, ಪಳಂಗ ಕೂಡ ತೋಟದ ಕಡೆಗೆ ಹೊರ್ಟತ್. `ಇಷ್ಟು ಹೊತ್ತು ತೋಟಲಿ ಎಂಥ ಮಾಡಿದೆಯಪ್ಪಾ'ತಾ ಮನಸ್ಲಿ ಬಯ್ಕಂಡೇ ನಡ್ಕಂಡಿರ್ಕಾಕನ ದಾರೀಲಿ ಆನೆದ್ ಹೆಜ್ಜೆ ಕಂಡಂಗೆ ಆತ್...ಪಳಂಗ ಇನ್ನೂ ಸ್ವಲ್ಪ ಬಗ್ಗಿ ನೋಡ್ತ್...`ಡೌಟೇ ಬೇಡ...ಈ ದಾರೀಲಿ ಆನೆ ಹೋಗುಟ್ಟು...'ತಾ ಅವಂಗೆ ಗೊತ್ತಾತ್. ಲಿಲ್ಲಿದ್ ಚಪ್ಪಲಿ ಗುರುತು ಹಿಂದೆ, ಆನೆದ್ ಹೆಜ್ಜೆ ಗುರುತು ! ಆ ಹೆಜ್ಜೆ ಗುರುತು ಹಿಂದೆನೇ ಪಳಂಗ ಹೊರ್ಟತ್....
ತೋಟಕ್ಕೆ ಹೋಗಿ ನೋಡಿರೆ, ಪಳಂಗಂಗೆ ಎದೆ ಒಡ್ದು ಹೋದೋಂದೇ ಬಾಕಿ. ಕಾಫಿಗಿಡಗಳ್ನೆಲ್ಲಾ ಆನೆ ಹಾಳು ಮಾಡಿತ್ತ್. ಆದ್ರೆ ಅಲ್ಲಿ ಎಲ್ಲೂ ಲಿಲ್ಲಿ ಕಾಣ್ತ್ಲೆ. `ಲಿಲ್ಲಿ...ಲಿಲ್ಲಿ' ತಾ ಜೋರಾಗಿ ಕರ್ದತ್... ಹುಚ್ಚನಂಗೆ ಬೊಬ್ಬೆ ಹೊಡ್ಕಂಡ್ ತೋಟ ಪೂತರ್ಿ ಓಡಾಡ್ತ್....ಕೊನೆಗೆ ದೂರಲಿ ಬೆಟ್ಟ ಮೇಲೆಂದ ಇಳ್ಕಂಡ್ ಬರ್ವ ತೋಡು ಹತ್ರ ಲಿಲ್ಲಿದ್ ಸೀರೆ ಕಂಡಂಗಂಗೆ ಆತ್... ಹತ್ತಿರ ಹೋಗಿ ನೋಡಿರೆ....ಹೌದು, ಅಲ್ಲಿ ಲಿಲ್ಲಿ ಹೆಣ ! ಯಾವುದೋ ಹಳೇ ಸಿಟ್ಟು ಇದ್ದಂಗೆ ಆನೆ ಲಿಲ್ಲಿನ ಮೆಟ್ಟಿ ಮೆಟ್ಟಿ ಕೊಂದ್ಹಾಕಿತ್ತ್ !!

- ಸುನಿಲ್ ಪೊನ್ನೇಟಿ
arebhase@gmail.com

ದರುಶನ ಕೊಡು ಚಂದಮಾಮ


ಚಂದಮಾಮತಾ ಹೇಳಿರೆ ನಂಗೊಂಥರ ಖುಷಿ...ಅವನ ನೋಡ್ತಿದ್ದರೆ ಮನಸ್ನ ದುಃಖ ಎಲ್ಲಾ ಮಾಯ ಆಗ್ತಿತ್..ಆದ್ರೆ ಇಂದ್ಯಾಕೋ ಚಂದಮಾಮಂಗೂ ನನ್ನ ಬಗ್ಗೆ ಜಿಗುಪ್ಸೆ ಬಂದುಟ್ಟು ಕಂಡದೆ....ಅಂವ ನಂಗೆ ಮುಖನೇ ತೋರಿಸ್ತಿಲ್ಲೆ. ನಾ ಯಾರ ಹತ್ರ ನನ್ನ ನೋವು ಹೇಳಿಕಣಲಿ? ಈ ಮೊದ್ಲು ಯಾವತ್ತು ಕೂಡ ಹಿಂಗೆ ಆಗಿತ್ತ್ಲೆ...ಸಣ್ಣಂವ ಇರ್ಕಾಕನ ನಾ ಊಟನೇ ಸರಿಯಾಗಿ ಮಾಡ್ತಿತ್ಲೆ. ಆಗ ಅಮ್ಮ ಒಂದ್ ಕೈಲಿ ನನ್ನ ಎತ್ತಿಕಂಡ್, ಮತ್ತೊಂದು ಕೈಲಿ ಹಾಲು ಕಲಿಸಿದ ಅನ್ನ ಹಿಡ್ಕಂಡ್, ನಂಗೆ ಚಂದ್ರನ ತೋರಿಸ್ತಿತ್ತ್...ಅದ್ಯಾಕೋ ಗೊತ್ಲೆ, ಚಂದ್ರನ ನೋಡ್ತಿದ್ದಂಗೆ ತಟ್ಟೆಲಿದ್ದ ಅನ್ನ ಎಲ್ಲಾ ಖಾಲಿ ಆಗಿಬಿಡ್ತಿತ್ತ್. ಬಾಯಿಗೆ ತುತ್ತು ಕೊಟ್ಕಂಡೇ ಚಂದ್ರನ ಒಳ್ಳೊಳ್ಳೇ ಕಥೆಗಳ್ನ ಹೇಳ್ತಿದ್ದೊ ಅಮ್ಮ...ಹಿಂಗೆ ನಂಗೂ, ಚಂದಮಾಮಂಗೂ ಒಂಥರ ನೆಂಟಸ್ಥನ ಬೆಳ್ತ್. ಲೆಕ್ಕ ಇಲ್ಲದಷ್ಟು ಸಲ ನಂಗೆ ಬದುಕಿನ ಭರವಸೆ ಕೊಟ್ಟದ್ ಇದೇ ಚಂದಮಾಮ. ಮನಸ್ಸೊಳಗೆ ಎಂಥದ್ದೇ ನೋವು, ಸಂಕಟ, ದುಃಖ ಇರ್ಲಿ, ಒಂದರ್ಧ ಗಂಟೆ ಸುಮ್ಮನೆ ಚಂದ್ರ ನೋಡ್ತಿದ್ದರೆ ಸಾಕ್ ಎಲ್ಲಾ ಮಾಯ ಆಗಿ ನನ್ನಲ್ಲಿ ಹೊಸ ಮನುಷ್ಯ ಹುಟ್ಟಿಕಂಡ್ಬಿಡ್ತಿತ್ತ್...ಆದ್ರೆ ಈಗ ಎಲ್ಲಾ ಉಲ್ಟಾ...ಅದ್ಕೆ ಸರಿಯಾಗಿ ಕೆಟ್ಟ ಕನಸು ಬೇರೆ...
ನಾ ಒಂದು ಹಕ್ಕಿ. ಅದೇ ಚಂದ್ರ ಮೇಲೆ ಕುದ್ದ್ಕಂಡ್ ನನ್ನ ಕರೀತುಟ್ಟು. ಆ ತಂಪಾದ ಬೆಳಕು ನನ್ನಲ್ಲಿ ಎಂಥದ್ದೋ ಆಸೆ ಹುಟ್ಟಿಸ್ಯುಟ್ಟು. ನನ್ನ ರೆಕ್ಕೆಗಳಲ್ಲಿ ಶಕ್ತಿ ಇಲ್ಲೆ...ಆದ್ರೂ ಚಂದ್ರನ ಸೇರುವ ಆಸೆ. ಇದ್ದ ಬದ್ದ ಎಲ್ಲಾ ಬಲ ಸೇರಿಸಿ ಆಕಾಶ ಕಡೆ ಹಾರಿನೆ...ಹೂಂ, ಆಗ್ತಿಲ್ಲೆ...ರೆಕ್ಕೆಗಳಲ್ಲಿ ತುಂಬಾ ನೋವು. ಕಣ್ಣೆತ್ತಿ ಚಂದ್ರನ ನೋಡಿನೆ. ಅಂವ ಇನ್ನೂ ಅಲ್ಲಿ ನಗ್ತುಟ್ಟು. ಎರಡೂ ಕೈ ಬೀಸಿ ನನ್ನ ಕರೀತುಟ್ಟು...ಆ ನಗು ನಂಗೆ ಅಯಸ್ಕಾಂತ ! ತುಟಿಕಚ್ಚಿ ನೋವೆಲ್ಲಾ ಸಹಿಸಿಕಂಡ್ ಚಂದ್ರನ ಹತ್ತಿರ ಹೋಕಾಕನ ಅಂವ ಅಲ್ಲಿಂದ ನನ್ನ ಜೋರಾಗಿ ತಳ್ಳಿಬಿಟ್ಟದೆ...ಕಣ್ಣು ಬಿಟ್ಟು ನೋಡಿರೆ, ನಾ ರೆಕ್ಕೆ ಮುರ್ಕಂಡ್ ಬಿದ್ದಿದ್ದೆ... ನಿದ್ದೆಂದ ಎಚ್ಚರ ಆತ್....
ಮಧ್ಯರಾತ್ರಿ 1 ಗಂಟೆಗೆ ಮತ್ತೆ ಹೊರಗೆ ಬಂದೆ. ಈಗ್ಲಾದ್ರೂ ಚಂದ್ರ ಕಾಂಬದೇನೋತಾ ಆಸೆ. ಭಾಗಮಂಡಲಲಿ, ಕುಶಾಲನಗರಲಿ, ಮೈಸೂರ್ಲಿ, ಹೈದರಾಬಾದ್ಲಿ, ಡೆಲ್ಲಿಲಿ...ಹಿಂಗೆ ಎಲ್ಲಾ ಕಡೆ ನನ್ನ ಜೊತೆ ಬರ್ತಿದ್ದ ಚಂದ್ರ ಬೆಂಗಳೂರ್ಲಿ ಮಾತ್ರ ನನ್ನ ಅನಾಥ ಮಾಡಿಬಿಟ್ಟುಟ್ಟು...
`ಚಂದಮಾಮ, ನೀನೇ ಹಿಂಗೆ ಮಾಡಿರೆ ನನ್ನ ಮತ್ತೆ ಮನುಷ್ಯನಾಗಿ ಮಾಡುದು ಯಾರ್? ಮೋಡದ ಮರೇಂದ ಹೊರಗೆ ಬಾ...ಕಾದನೆ, ನಿಂಗಾಗಿ ಕಾದನೆ, ಗಂಟೆ....ದಿನ...ವಾರ...ತಿಂಗ...ಅಷ್ಟೇ... ಅದಕ್ಕಿಂತ ಜಾಸ್ತಿ ಆಲೆ...ನೀ ಬಾರದಿದ್ದರೆ ನಾ ಉಳಿಯಲ್ಲೆ...' 

- ಸುನಿಲ್ ಪೊನ್ನೇಟಿ
arebhase@gmail.com

Tuesday 4 September 2012

ಗಿಣಿ ರಾ(ನಾ)ಮ !!


                                                                        
ಪುಟ್ಟ ಅವನಿಷ್ಟಕ್ಕೆ ಅಂವ ನಡ್ಕಂಡ್ ಹೋಗ್ತಿತ್ತ್. ಅಷ್ಟೊತ್ತಿಗೆ ದೂರಲಿ ಒಂದು ಗಿಣಿ ಇವನನ್ನೇ ಕರ್ದಂಗೆ ಆತ್. ಒಮ್ಮೆ ತಿರುಗಿ ನೋಡ್ತ್. ತುಂಬಾ ಲಾಯ್ಕದ ಗಿಣಿ...ಆದ್ರೆ ಹಳೇದೆಲ್ಲಾ ಗ್ಯಾನ ಆಗಿ, ಈ ಗಿಣಿ ಸಹವಾಸನೇ ಬೇಡತಾ ಮುಂದಕ್ಕೆ ಹೋತ್. ಅಷ್ಟೊತ್ತಿಗೆ ಗಿಣಿ ಮತ್ತೊಂದ್ಸಲ ಪುಟ್ಟನ ಕರ್ದಂಗೆ ಕೇಳ್ತ್. ಯಾಕೋ ಇವನ ಮನಸ್ಸು ಸ್ವಲ್ಪ ಬದಲಾದಂಗೆ ಅನ್ನಿಸಿತ್... ಇನ್ನೇನ್ ಆ ಗಿಣಿನ ಹಿಡಿಯೊಕು, ಅಷ್ಟೊತ್ತಿಗೆ ಮತ್ತೆ ಹಳೇ ವಿಷಯ ಕಣ್ಮುಂದೆ ಬಾತ್.
ಏಳು ವರ್ಷದ ಹಿಂದೆ ಇರೋಕು ಕಂಡದೆ. ಅಂದು ಸನಾ ಪುಟ್ಟ ಇದೇ ದಾರೀಲಿ ಹೋಗ್ತಿತ್. ಆಗ ಪೊಂಗಾರೆ ಮರದ ಕೆಳಗೆ ಒಂದು ಗಿಣಿ ಕಾಲು ಮುರ್ಕಂಡ್ ಬಿದ್ದಿತ್ತ್. ಇಂವ ಅದ್ರ ಹತ್ರ ಹೋದಷ್ಟೂ, ಗಿಣಿ ಕುಂಟಿಕಂಡ್ ಕುಂಟಿಕಂಡ್  ದೂರ ದೂರ ಓಡ್ತಿತ್ತ್. ಸುಮಾರ್ ಹೊತ್ತು ಪೂಸಿ ಹೊಡ್ದ್ ಆದ್ಮೇಲೆ ಆ ಗಿಣಿಗೆ ಇವನ ಮೇಲೆ ನಂಬಿಕೆ ಬಾತ್. ಇಂವ ಕೈ ತೋರಿಸ್ತಿದ್ದಂತೆ, ಕೈ ಮೇಲೆ ಹತ್ತಿ ಕುದ್ದ್ಕಣ್ತ್. ಖುಷೀಲೇ ಗಿಣಿನ ಮನೆಗೆ ತಕ್ಕಂಡ್ ಹೋತ್. ಗೋಪಾಲ ಆಚಾರಿ ಹತ್ರ ಹೇಳಿ ಒಳ್ಳೆ ಪಂಜರ ಮಾಡಿಸಿಕಂಡತ್. ಆ ಪಂಜರನ ತನ್ನದೇ ಕೋಂಬರೇಲಿ ಇಟ್ಕಂಡತ್...ದಿನಾ ಹಾಲು, ಹಣ್ಣು ಕೊಟ್ಟ್, ಮುರ್ದ್ ಹೋಗಿದ್ದ ಕಾಲಿಗೆ ಮದ್ದ್ ಹಾಕಿ ಲಾಯ್ಕ ಸಾಂಕಿತ್. ಮೂರು ತಿಂಗಳಲ್ಲೇ ಗಿಣಿ ಹುಷಾರಾತ್. ಮೈ ಕೈ ತುಂಬಿಕಂಡ್ ನಾಲ್ಕ್ ಜನ ನೋಡುವಂಗೆ ಆತ್... ಪಂಜರದ ಬಾಗಿಲ್ನ ಪುಟ್ಟ ಯಾವತ್ತೂ ಮುಚ್ಚುತ್ತಿತ್ಲೆ....ಅಷ್ಟೊಂದು ನಂಬಿಕೆ ಅವನ ಗಿಣಿ ಮೇಲೆ...
ಅದೊಂದು ದಿನ ಹೊರಗೆಲ್ಲೋ ಹೋಗಿದ್ದ ಪುಟ್ಟ ಮನೆ ಸೇರಿಕಾಕನ ಕತ್ತಲೆ ಆಗಿತ್ತ್. ಇವನ ಕೋಂಬರೆಗೆ ಬಂದ್ ಪಂಜರ ನೋಡಿರೆ ಅಲ್ಲಿ ಗಿಣಿ ಇಲ್ಲೆ ! ಕಟ್ಲ್ ಕೆಳಗೆ, ಅಟ್ಟದ ಮೇಲೆ, ಏಲಕ್ಕಿ ಗೂಡ್...ಹಿಂಗೆ ಎಲ್ಲಾ ಕಡೆ ಹುಡುಕಿತ್...ಹೂಂ, ನಾಪತ್ತೆ. ತುಂಬಾ ಬೇಸರ ಆತ್. ರಾತ್ರಿ ಸರಿ ನಿದ್ದೆನೂ ಬಾತ್ಲೆ. ಬೆಳಿಗ್ಗೆ ಎದ್ದ್ ಕಿಡಿಕಿಲೆ ನೋಡಿರೆ, ಮಾವಿನ ಮರಲಿ ಕುದ್ದಿತ್ತ್ ಇವನ ಗಿಣಿ ! ಜೊತೇಲಿ ಮತ್ತೊಂದು ಗಿಣಿ...ಪುಟ್ಟ ಕರ್ದರೆ ಅಲಾ ಎಂಥ ಮಾಡಿರೂ ಅದ್ ಇವನ ಹತ್ರ ಬಾತ್ಲೆ...ಹತ್ರ ಹೋಕಾಕನ ಜೊತೇಲಿದ್ದ ಗಿಣಿ ಜೊತೆ ಹಾರಿ ಹೋತ್ ದೂರ...ತುಂಬಾ ದೂರ. ಮತ್ತೆ ಅದ್ ಇವನ ಕಣ್ಣಿಗೆ ಬಿದ್ದಿತ್ಲೆ. ಅಂದ್ಂದ ಇಂವಂಗೆ ಗಿಣಿಗತೇಳಿರೆ ಅಷ್ಟಕಷ್ಟೇ...
ಹಿಂಗೆ ಹಳೇದನ್ನೆಲ್ಲಾ ಯೋಚನೆ ಮಾಡಿಕಂಡ್ ಹೋಕಾಕನ ಈ ಹೊಸ ಗಿಣಿ ಪುಟ್ಟನ ಹಿಂದೆನೇ ಬಾತ್. `ನನ್ನನ್ನೊಮ್ಮೆ ನಿನ್ನ ಮನೆಗೆ ಕರ್ಕಂಡ್ ಹೋಗು ಮಾರಾಯ' ತಾ ಹೇಳುವಂಗೆ ಜೋರಾಗಿ ಮರ್ಡ್ ತಿತ್ತ್. ಯಾಕೋ ಗೊತ್ಲೆ ಹೊಸ ಗಿಣಿ ಮೇಲೆ ಪುಟ್ಟಂಗೆ ಆಸೆ ಹುಟ್ಟಿತ್. ಹಂಗೆತೇಳಿ ಮನೆಗೆ ತಕ್ಕಂಡ್ ಹೋಕೆ ಮನಸ್ಸು ಒಪ್ಪಿತ್ಲೆ. ಯಾಕೆತೇಳಿರೆ ಹಳೇ ಪಂಜರ ಉಪಯೋಗಿಸದೇ ಪೂರ್ತಿ ಹಾಳಾಗಿತ್ತ್. ಅದಕ್ಕಿಂತ ಹೆಚ್ಚುತೇಳಿರೆ ಮತ್ತೊಂದು ಗಿಣಿ ತಾಕೆ ಇವನ ಮನೇಲಿ ಒಪ್ತಿತ್ಲೆ...ಅವ್ರ ಮನಸ್ಲಿ ಹಳೇ ಗಿಣಿ ಮಾಡ್ದ ಗಾಯ ಹಂಗೆನೇ ಉಳ್ಕಂಡಿತ್ತ್. ಆದ್ರೆ ಹೊಸ ಗಿಣಿ ಪುಟ್ಟನ ಬಿಡುವಂಗೆ ಕಾಣ್ತ್ಲೇ...ಇಂವ ಹೋಗುವ ದಾರೀಲಿ ದಿನಾ ಪ್ರತ್ಯಕ್ಷ ಆಗಿ ಜೋರಾಗಿ ಮರ್ಡ್ತಿತ್ತ್. ಪುಟ್ಟಂಗೆ ಈ ಗಿಣಿ ಮೇಲೆ ಆಸೆ ಜಾಸ್ತಿ ಆತ್. ಮನೇಲಿರ್ವ ಹಳೇ ಪಂಜರನ ಮೊದ್ಲು ಸರಿಮಾಡ್ತ್. ಇದಾದ್ಮೇಲೆ ಮನೆಯವ್ರನ್ನ ಒಪ್ಪಿಸಿತ್. ಇನ್ನೇನ್ ಗಿಣಿನ ತರೋಕೂತ ಆ ಗಿಣಿ ದಿನಾ ಕುದ್ದಿರ್ತಿದ್ದಲ್ಲಿ ಹೋಗಿ ನೋಡಿರೆ, ಇವನ ಎದೆ ಒಡೆಯುದೊಂದೇ ಬಾಕಿ ! ಈ ಗಿಣಿನೂ ಮತ್ತೊಂದು ಹೊಸ ಗಿಣಿ ಜೊತೆ ಕುದ್ದ್ ನಗಾಡ್ತಿತ್ತ್ !!! ಛೇ...ನಂಬಿಕಾದ್ ಗಿಣಿಗಳ್ನ...

- ಸುನಿಲ್ ಪೊನ್ನೇಟಿ

Friday 31 August 2012

ಬಾಪರೆಮೊಟ್ಟೆ ಸಾಹಸ


ಆಗಷ್ಟೇ ಪರೀಕ್ಷೆ ಮುಗ್ದಿತ್ತ್. ಸದ್ಯ ಓದುವ ತಾಪತ್ರಯ ತಪ್ಪಿತ್ತಲ್ಲತಾ ನಮಿಗೆಲ್ಲಾ ಖುಷಿಯೋ ಖುಷಿ. ತಾವೂರು ಬೆಟ್ಟನ ಒಂದ್ಸಲ ಹತ್ತಿ ಇಳ್ದಾಗಿತ್ತ್. ಬಾಪರೆಮೊಟ್ಟೆಗೆ ಹೋಗುವ ಪ್ಲ್ಯಾನ್ ಹಾಕ್ಕೊಂಡಿದ್ದೊ. ಆದ್ರೆ ಅಲ್ಲಿಗೆ ಹೋಕೆ ಮನೇಲಿ ಒಪ್ತಿತ್ಲೆ. ಬಾಪರೆಮೊಟ್ಟೆ ಬಗ್ಗೆ ಇರ್ವ ಕಥೆಗಳೇ ನಮ್ಮ ಅಪ್ಪ, ಅಮ್ಮನ ಹೆದರಿಕೆಗೆ ಕಾರಣ ಆಗಿತ್ತ್. ಆದ್ರೂ ಹೆಂಗಾರ್ ಮಾಡಿ ಅಲ್ಲಿಗೆ ಹೋಕೂತಾ ನಾವೆಲ್ಲಾ ಡಿಸೈಡ್ ಮಾಡಿದ್ದೊ. ಒಂದು ದಿನ, ಗುರುನ ಮನೆ ಹತ್ರ ಕನ್ನಿಕೆ ಹೊಳೇಲಿ ಸ್ನಾನ ಮಾಡಿ ಆದ್ಮೇಲೆ ನಾವು ಮೀಟಿಂಗ್ ಸೇರ್ದೋ...ಸ್ನಾನ ಮಾಡಿಕಾಕನ ಹಾಕ್ಕಂಡಿದ್ದ ಚೆಡ್ಡಿ ಒಣಗೋಕಲಾ... ಇಲ್ಲದಿದ್ದರೆ, ಹೊಳೇಲಿ ಸ್ನಾನ ಮಾಡ್ದ್ ಮನೇಲಿ ಗೊತ್ತಾದೆ. ಹಂಗಾಗಿ ಚೆಡ್ಡಿ ಒಣಗುವವರೆಗೆ ನಾವು ಹೊಳೆಕರೇಲೇ ಬಿಸಿಲು ಕಾಸಿಕಂಡ್ ಕುದ್ದಿರ್ತಿದ್ದೊ. `ಹುಡುಗರು' ಫಿಲಂಲಿ ಲೂಸ್ ಮಾದ ಯೋಗೀಶ್ ತಲೆ ಮೇಲೆ ಹಾಕ್ಕಂಡಿದ್ದದ್ದೆಯಲ್ಲಾ, ಹಂಗೆನೇ ನಾವು ಕೂಡ ತಲೆ ಮೆಲೆ ಚೆಡ್ಡಿ ಹಾಕ್ಕಂಡ್ ಸಾಲಾಗಿ ಕುದ್ದ್ಕಂಡ್ ಮೀಟಿಂಗ್ ಮಾಡ್ತಿದ್ದೊ. ಕೊನೆಗೇ ಬಾಪರೆಮೊಟ್ಟೆನ ಒಮ್ಮೆ ನೋಡಿಯೇ ಬಿಡೋಕೂತ ನಿರ್ಧಾರ ಆತ್. `ತಲಕಾವೇರಿಗೆ ಹೋಗ್ತೊಳೊತಾ' ನಾವೆಲ್ಲಾ ಮನೇಲಿ ಸುಳ್ಳು ಹೇಳಿ ಮಾರನೇ ದಿನನೇ ಹೊರಟುಬಿಟ್ಟೊ.
ಬ್ರಹ್ಮಗಿರಿ ಬೆಟ್ಟ ಹತ್ತಿರೆ ದೂರಲಿ ಫ್ಯಾನ್ಗಳಂಗೆ ವಿಂಡ್ಮಿಲ್ಗ ಕಂಡದೆಯಲ್ಲಾ...ಅದ್ರ ಹಿಂದೆನೇ ಈ ಬಾಪರೆ ಮೊಟ್ಟೆ ಇರ್ದು. ಬಾಪರೆಮೊಟ್ಟೆತೇಳಿರೆ ಬೆಟ್ಟದ ಬುಡಲಿ ಇರ್ವ ದೊಡ್ಡ ಗುಹೆ. ಒಳಗೆ ಪೂರ್ತಿ ಕತ್ತಲು. ಈ ಗುಹೆ ಒಳಗೆ ಒಂದು ದಾರಿ ಉಟ್ಟು. ಈ ದಾರಿ ಕೇರಳದ ಯಾವುದೋ ಒಂದು ಊರುಲಿ ಅರಬ್ಬೀಸಮುದ್ರಕ್ಕೆ ಸೇರಿದೆತಾ ಹೇಳುವೆ. ಆದ್ರೆ ನೋಡ್ದವು ಯಾರೂ ಇಲ್ಲೆ. ಯಾಕಂದ್ರೆ ಈ ಗುಹೆ ಒಳಗೆ 10 ಹೆಜ್ಜೆ ಕೂಡ ಮುಂದಕ್ಕೆ ಹೋಕೆ ಆಲೆ. ಅಷ್ಟು ಕರಿಕತ್ತಲು. ಜೊತೆಗೆ ಒಳಗೆ ಬಾವಲಿಗಳ ಹಾವಳಿ. ಗುಹೆ ಒಳಗೆ ಕಾಲಿಡ್ತಿದ್ದಂಗೆ, ಬಾವಲಿಗ ತಲೆಮೇಲೆನೇ ಪುರ್ರ್ ಪುರ್ರ್..ತಾ ಹಾರಿಕಂಡ್ ಹೋದವೆ. ಇನ್ನೂ ಒಳಗೆ ಹೋದ್ರೆ ಹುಲಿಗ ಕೂಡ ಇದ್ದವೆಗಡ. ಬಾಪರೆಮೊಟ್ಟೆ ಹೊರಗಡೆ ಬಿದ್ದಿರ್ವ ದನದ ಮೂಳೆಗಳೇ ಇದಕ್ಕೆ ಸಾಕ್ಷಿ ! ಮೊದ್ಲೆಲ್ಲಾ ಇಲ್ಲಿ ಚೇರಂಗಾಲ ಮತ್ತೆ ತಣ್ಣಿಮಾನಿಯವು ಬಂದ್ ಬಾವಲಿಗಳ ಹಿಕ್ಕೆ ತಕ್ಕಂಡ್ ಹೋಗ್ತಿದ್ದೊ ಗಡ. ಈ ಹಿಕ್ಕೆ ಮೆಣಸಿಗೆ ಒಳ್ಳೇ ಗೊಬ್ಬರ. ಆದ್ರೆ ಈಗ ಯಾರೂ ಅಂಥ ಸಾಹಸಕ್ಕೆ ಇಳಿಯಲ್ಲೆ.
ಇಂಥ ಬಾಪರೆಮೊಟ್ಟೆ ಗುಹೆ ಒಳಗೆ ಹೋಕೂತಾ ನಾವೆಲ್ಲಾ ರೆಡಿಯಾಗಿ ಬಂದೊ. ಹೆಡ್ಲೈಟ್, ದೊಂದಿ, ಕತ್ತಿ, ದೊಣ್ಣೆ ಎಲ್ಲಾ ನಮ್ಮ ಹತ್ರ ಇತ್ತ್. ತಿಂಬಕೆ ಚಿಪ್ಸ್, ಕುಡಿಯಕ್ಕೆ ಜ್ಯೂಸ್ ಸನಾ ತಂದಿದ್ದೊ....ತಲಕಾವೇರಿವರೆಗೆ ಬಸ್ಲಿ ಹೋಗಿ, ಅಲ್ಲಿಂದ ಬಾಪರೆಮೊಟ್ಟೆಗೆ ನಡ್ಕಂಡೇ ಹೊರಟೊ. ವಿಂಡ್ಮಿಲ್ ಹತ್ರ ತಲುಪಿಕಾಕನ ಸುಸ್ತಾಗಿಬಿಟ್ಟಿತ್ತ್. ಇನ್ನ್ ಗುಹೆನೋಡಿಕಾಕನ ಅಂತೂ ಎಲ್ಲರ ಎದೆಯೊಳಗೆ ಅವಲಕ್ಕಿ ಕುಟ್ಟಿಕೆ ಶುರುವಾತ್...ಹೊಳೆಕರೆಲಿ ಕುದ್ದಕಂಡ್ ತಲೆ ಮೇಲೆ ಚೆಡ್ಡಿ ಹಾಕ್ಕಂಡ್ ತೋರಿಸಿದ ಪೌರುಷ ಈಗ ಯಾರೊಬ್ಬರ ಹತ್ತಿರನೂ ಇತ್ಲೆ. ಅಲ್ಲೆ ಚಕ್ಕಳಮಕ್ಕಳ ಹಾಕ್ಕಂಡ್ ಕುದ್, ತಂದ ಚಿಪ್ಸ್ ತಂದ್ ವಾಪಸ್ ಮನೆ ಕಡೆ ಹೊರಟೊ....ನಮ್ಮ `ಬಾಪರೆಮೊಟ್ಟೆ ಸಾಹಸ' ಹಿಂಗೆ ಮುಗ್ದೋಗಿತ್ತ್...
- ಸುನಿಲ್ ಪೊನ್ನೇಟಿ
arebhase@gmail.com

Tuesday 28 August 2012

ಎಂಥಾ ಗುರಿ !


`ಢಮಾರ್...' `ಢಮಾರ್...' ಜೋಡು ಗುಂಡು ಹೊಡ್ದ ಸದ್ದು. ಇದೆಂತ ಆತಪ್ಪಾ...ನಾಳೆ ಕೈಲ್ಪೊದು ಇರ್ಕಾಕನ ಯಾರಾರು ಟಿಕೆಟ್ ತಕ್ಕಂಡನೋ..ಹೆಂಗೆತಾ, ಊರ್ಲಿರ್ವ ವಯಸ್ಸಾದವೆಲ್ಲಾ ಗ್ಯಾನ ಆದೋ. ಅಷ್ಟೊತ್ತಿಗೆ `ಕಿರೀಯೋಂ...ಕಿರೀಯೋಂ...'ತಾ ಹಂದಿ ಮರ್ಡಾಟ ! ಜೊತೆಗೆ `ಹಿಡಿರಾ..ಹೊಡಿರಾ..ಬಡಿರಾ'ತಾ ಜನಗಳ ಬೊಬ್ಬೆ. ಹೋ..ಇದ್ ಹಂದಿಗೆ ಹೊಡ್ದಿರ್ವ ಗುಂಡು. ಸದ್ಯ, ಯಾರೂ ತೀರಿಕಣ್ತ್ಲೆತಾ ಮನಸ್ಲೇ ಹೇಳಿಕಂಡ್, ಗುಂಡ್ನ ಶಬ್ದ ಕೇಳ್ದ ಕಡೆ ನಡ್ದೆ.
ಜಪ್ಪು ಒಂದ್ ನಾಡ್ಹಂದಿ ಸಾಂಕಿತ್ತ್. ಎರಡು ವರ್ಷ ಸಾಂಕಿದ್ದರೂ ಆ ಹಂದಿ 65 ಕೆಜಿ ದಾಟುವಂಗೆ ಕಾಣ್ತಿತ್ಲೆ. ಆದ್ರೆ ಲಾಯ್ಕ ಬೆಳ್ದಿತ್. ಕೋರೆಹಲ್ಲುಗ ದವಡೆನ ಸೀಳಿ ಮುಂದೆ ಬಂದಿದ್ದೊ. ನೊಡಿಕೆ ಒಂಥರ ಕಾಡು ಹಂದಿನಂಗೆನೇ ಕಾಣ್ತಿತ್ತ್. ಹೋದ ವರ್ಷ ಕೈಲ್ಪೊದ್ಗೆನೇ ಈ ಹಂದಿನ ಹೊಡೆಯುಕೂತ ಜಪ್ಪು ಗ್ಯಾನ ಮಾಡಿಕಂಡಿತ್ತ್. ಆದ್ರೆ ಆಗ ಇದ್ 40 ಕೆಜಿ ಕೂಡ ಆಕಿಲ್ಲೆತಾ ನೋಡ್ದವೆಲ್ಲಾ ಹೇಳಿದ್ದೊ. ಈ ಹಂದಿ ಬರ್ಕತ್ತೇ ಆಲೆತಾ ಗಂಜಿ ಕೊಡುವ ಮರಿಗೆನ ಚೇಂಜ್ ಮಾಡ್ತ್, ಹಂದಿಗೂಡ್ನ ಬಾಗ್ಲ್ ತೆಗ್ದ್ ಬೇರೆ ಕಡೆ ಫಿಟ್ ಮಾಡ್ತ್. ಊಹುಂ... ಹಂದಿ ಮಾತ್ರ ಸೊಕ್ಕುವಂಗೆನೇ  ಕಂಡತ್ಲೆ. ಕೊನೆಗೆ ಮಾವಿನ ಮರ ಬುಡಲಿ ಕಟ್ಟಿ ಹಾಕಿಕೆ ಶುರು ಮಾಡ್ತ್.  `ಮಾಂಸಕ್ಕೆ ಮಾಂಸ ಕೊಟ್ಟವೆ..ಹಂದಿ ಕೊಟ್ಟಿಯ'ತಾ ಡಿಸೆಂಬರ್ಲಿ ಮೇಲೆಮನೆ ಸುಬ್ರಾಯನ ಮಂಞನ ಮದುವೆಗೆ ಈ ಹಂದಿನ ಕೇಳಿದ್ದೊ. `ದುಡ್ಡಿಗಾದರೆ ಕೊಟ್ಟನೆ...ಮಾಂಸಕ್ಕೆ ಕೊಡುಲ್ಲೆ...ಬೇಡ ಬುಡಿ, ನಾ ಕೈಲ್ಪೊದ್ಗೆ ಹೊಡ್ದನೆ..'ತಾ ಅಂದ್ ಜಪ್ಪು ಹೇಳಿತ್ತ್. ಕೈಲ್ಪೊದ್ಗೆ ಆಕಾಕನ ಇನ್ನೊಂದು 10ಕೆಜಿ ತೂಕ ಜಾಸ್ತಿ ಆದುತಾ ಇವನ ಆಸೆ.
ನಾ ಜಪ್ಪುನ ಮನೆ ಹತ್ರ ಹೋಕಾಕನ ಗಣಿ, ಸುರಿ, ಚಾಮಿ, ಗಪ್ಪು..ಹಿಂಗೆ ನಾಲ್ಕೈದು ಜನ ಬಡಿಗೆಗಳ್ನ ಹಿಡ್ಕಂಡ್ ಕಾಡೊಳಗೆ ಓಡ್ತಿದ್ದೊ. ಚೋಮುಣಿ ಡಬಲ್ಬ್ಯಾರಲ್ ಕೋವಿನ ಹಿಡ್ಕಂಡ್ ತಲೆಕೆಳಗೆ ಹಾಕ್ಕಂಡ್ ನಿಂತ್ಕಂಡಿತ್ತ್. ಜಪ್ಪು ಚೋಮುಣಿಗೆ ಬಾಯಿಗೆ ಬಂದಂಗೆ ಬಯ್ತಿತ್ತ್. ನಂಗೆ ತಲೆ-ಬುಡ ಅರ್ಥ ಆತ್ಲೆ... ನಾ `ಎಂಥ ಆತ್ರಾ ಜಪ್ಪು'ತಾ ಕೇಳ್ದೆ. ಹೊಟ್ಟೆ ಒಳಗೆ ಕುದೀತ್ತಿದ್ದ ಸಿಟ್ಟ್ನ ಹೇಳಿಕಂಬಕೆ ಯಾರಾರ್ ಸಿಕ್ಕಲಿತಾ ಕಾದ್ಕಂಡ್ ಕುದ್ದಿದ್ದಂಗೆ, ಜಪ್ಪು ಎಲ್ಲಾ ಹೇಳಿಕೆ ಶುರುಮಾಡ್ತ್...`ಎಂಥ ಮಾಡ್ದುರಾ ಭಾವ.. ಈ ಚೋಮುಣಿ ಎರಡು ತೋಟನ ಸುಮ್ಮನೇ ವೇಸ್ಟ್ ಮಾಡ್ತ್..ಇನ್ನೊಂದು ತೋಟ ಇದ್ದಿದ್ದರೆ, ಇವಂಗೇ ಗುಂಡು ಹೊಡ್ದುಬಿಡ್ತಿದ್ದೆ...ದೊಡ್ಡ ಜನರಂಗೆ ಹಂದಿಗೆ ನಾನೇ ಗುಂಡು ಹೊಡ್ದನೆತಾ ಕೋವಿ ತಕ್ಕಂಡತ್...ಈ ಬೂಸುಡಿಗೆ ಕಟ್ಟಿ ಹಾಕಿದ್ದ ಹಂದಿಗೆ ಗುಂಡು ಹೊಡಿಯಕ್ಕೆ ಆತ್ಲೆ ಭಾವ...ಏನೋ ಭಾರೀ ಬೇಟೆಗಾರತಾ ಇವನ ಕೈಗೆ ಕೋವಿ ಕೊಟ್ರೆ, ಇಂವ ಮೊದ್ಲ ಗುಂಡ್ ಹಣೆಗೆತಾ ಗುರಿಯಿಟ್ಟ್ ಹೊಡ್ದದ್ ಹೊಟ್ಟೆಗೆ...ಚಿಲ್ಲುಗ ಎಲ್ಲೆಲ್ಲೋ ಚಲ್ಲಾಡಿಬಿಟ್ಟೊ...ಹಂದಿ ಹೊಟ್ಟೆಗೆ ಸಣ್ಣ ಗಾಯ ಆತಷ್ಟೆ. ಪುನಃ ಈ ಬಡ್ಡಿಮಂಞ ಹಂದಿದ್ ಪಕ್ಕೆ ಹತ್ರ ಗುರಿಯಿಟ್ಟ್ ಹೊಡ್ತ್...ಅದ್ ಹೋಗಿ ತಾಗಿರೆ ಹಂದಿ ಕಟ್ಟಿ ಹಾಕಿದ್ದ ಬಳ್ಳಿಗೆ....ಬಳ್ಳಿ ತುಂಡಾಕ್ತಿದ್ದಂಗೆ ಹಂದಿ ಮರ್ಡಿಕಂಡ್ ಕಾಡ್ ಹತ್ತಿಬಿಡ್ತ್ರಾ ಭಾವ....70 ಕೆಜಿ ಹಂದಿ...ಅದ್ ಸಿಗದಿರ್ಲಿ, ಸೊಸೈಟಿಂದ ಸಾಲ ತಂದಾದ್ರೂ ಈ ಚೋಮುಣಿ ಎದೆಗೆ ನಾ ಗುಂಡ್ ಹೊಡ್ದನೆ....' ಜಪ್ಪು ಒಂದೇ ಉಸಿರಿಗೆ ಹೇಳಿ, ತಲೆ ಮೇಲೆ ಕೈ ಹೊತ್ತ್ಕಂಡ್, ಹಂದಿ ಸುಡಿಕೆ ತಂದಿದ್ದ ಹುಲ್ಲುಕಂತೆ ಮೇಲೆ ಕುದ್ದ್ಕಣ್ತ್.
ನಾ ಚೋಮುಣಿ ಕಡೆ ನೋಡ್ದೆ...ಅಂವ ಅಡಿಗೆ ಹಾಕಿದ್ದ ತಲೆನ ಇನ್ನೂ ಮೇಲೆ ಎತ್ತಿತ್ಲೆ. ಅವನ ಕೇಳ್ದೆ, `ನಿಂಗೆ ಯಾಕೆ ಬೇಕಿತ್ತ್ರಾ ಚೋಮುಣಿ ? ಯಾರಾರ್ ಒಳ್ಳೇ ಅಭ್ಯಾಸ ಇರವ್ರ ಕೈಗೆ ಕೋವಿ ಕೊಡೀಕೆ ಆಗಿತ್ಲೆನಾ...? ಈಗ ನೋಡ್ ಹಂದಿ ಕಾಡ್ ಸೇರಿಬಿಟ್ಟುಟ್ಟು....' ಅದ್ಕೆ ಅಂವ, `ನಾ ಎಂಥ ಮಾಡ್ದುರಾ...ನಾ ಬೇಡ ಬೇಡತಾ ಹೇಳ್ದಂಗೆ ಈ ಜಪ್ಪು ಬೆಳಿಗ್ಗೆನೇ ಒಂದ್ ಪೆಗ್ಗ್ ಕೊಟ್ಟುಬಿಟ್ಟಿತ್ತ್...ಸರಿಯಾಗೇ ಗುರಿಇಟ್ಟಿದೆ, ಪೆಗ್ ಪ್ರಭಾವ ನೋಡ್, ಕೈ ಹಂಙ ಅಲ್ಲಾಡಿ ಬಿಡ್ತ್....ಗುರಿ ತಪ್ಪಿ ಹೋತ್..' ಈ ಮಾತ್ ಕೇಳಿ ಜಪ್ಪುಗೆ ಸಿಟ್ಟ್ ಬಾತ್. ಕುದ್ದಲ್ಲಿಂದ ಎದ್ದವ್ನೇ...`ಕೋವಿ ಹಿಡಿಯಕ್ಕೆ ತಾಕತ್ತ್ ಇಲ್ಲದ ಮೇಲೆ ನಿಂಗೆ ಯಾಕೆ ಬೇಕಿತ್ತ್ ಗುಂಡು ಹೊಡಿವ ಕೆಲ್ಸ...ನೋಡ್ ಈಗ ಹಂದಿ ಸಿಕ್ಕದಿರ್ಲಿ, ನಿನ್ನ ಬೊಜ್ಜನ ನಾನೇ ಮಾಡ್ನೇ'ತಾ ಕಿರಿಚಿಕಂಡತ್....
ಹಿಂಗೆ ಇಲ್ಲಿ ಜಪ್ಪುನ ಮನೆ ಹತ್ರ ಜಗಳ ಜೋರಾಗುವ ಎಲ್ಲಾ ಲಕ್ಷಣಗ ಕಾಣ್ತಿದ್ದಂಗೆ,  ಕಾಡೊಳಗೆ ಹೋಗಿದ್ದವು
ಸತ್ತ ಹಂದಿನ ಬಡಿಗೇಲಿ ಕಟ್ಟಿಕಂಡ್ ಹೊತ್ತ್ಕಂಡ್ ಬಂದೊ...ಜಪ್ಪುಗೆ ಆಗ ಮೀಸೆ ಕೆಳಗೆ ಸಣ್ಣ ನಗು ಕಾಣಿಸಿಕಂಡತ್. ಚೋಮುಣಿನೂ ಮೆಲ್ಲೆ ತಲೆ ಎತ್ತಿ ಓರೆಕಣ್ಣ್ಲಿ ನೋಡಿ, ಮಾಂಸ ಮಾಡಿಕೆ ಬಾಳೆಎಲೆ ಕೊಯಿಕೆತಾ ಜಾಗ ಖಾಲಿ ಮಾಡ್ತ್. ನಾ ಹುಲ್ಲುಕಂತೆನ ಹರಡಿಕೆ ಶುರುಮಾಡ್ದೆ...ಹಂದಿನ ಸುಡೋಕಲ್ಲಾ...

- ಸುನಿಲ್ ಪೊನ್ನೇಟಿ
arebahse@gmail.com

Monday 27 August 2012

ಛೇ...ಎಂಥ ಕೆಲ್ಸ ಆಗಿಬಿಡ್ತ್ !!!


ಚಾಮಿ ಮೈಸೂರ್ಲಿ ಎಂಜಿನಿಯರಿಂಗ್ ಮಾಡ್ತುಟ್ಟು. ಮನೆ ಕಾರ್ಗುಂದಲಿ ಆದ್ದರಿಂದ ಮೈಸೂರ್ಲಿ ಸೆಟ್ಲ್ ಆಗಿರ್ವ ಅತ್ತೆ ಮನೆಂದ ಕಾಲೇಜಿಗೆ ಹೋದೆ. ಸೆಮಿಸ್ಟರ್ ಪರೀಕ್ಷೆಗತೇಳ್ರೆ ಎಲ್ಲಿಲ್ಲದ ಹೆದ್ರಿಕೆ. ಈಸಲ ಪರೀಕ್ಷೆ ಎರ್ಡ್ ಗಂಟೆಂದ ಐದು ಗಂಟೆವರೆಗೆ ಇತ್ತ್. ನಮ್ಮ ಚಾಮಿ ಹಗಲ್ ರಾತ್ರಿತೇಳದೆ ಓದಿಕಂಡೆ ಇರ್ತಿತ್ತ್ 
  
    ಪರೀಕ್ಷೆ ಹಿಂದಿನ ದಿನ ರಾತ್ರಿಪೂರ ನಿದ್ದೆಗೆಟ್ಟ್ ಓದಿತ್ತ್. ಬೆಳಗ್ಗೆ ಆಕಾಕನ ಚಾಮಿಗೆ ನಿದ್ರೆ ತೂಗ್ತಿತ್ತ್. ಎಷ್ಟು ಕಂಟ್ರೋಲ್ ಮಾಡಿಕೆ ಟ್ರೈ ಮಾಡ್ರೂ ತಡ್ಕಂಬಕೆ ಆಗ್ತಿತ್ಲೆ. ಕಷ್ಟಪಟ್ಟು ಬೆಳಗ್ಗೆ  ಹತ್ತರ ವರೆಗೆ ಓದಿಕಂಡಿತ್ತ್. ಆಮೇಲೆ ತೂಗಿ ತೂಗಿ ಬೀಳಿಕೆ ಶುರು ಮಾಡ್ತ್. ಅದ್ನ ನೋಡ್ದ ಅವನ ಅತ್ತೆ "ಎಂಥ ಚಾಮಿ ಹಿಂಗೆ ನಿದ್ರೆ  ತೂಗುದ್, ಹಿಂಗೆ ಆದರೆ ಪರೀಕ್ಷೆ ಬರಿಯುದ್ ಕಷ್ಟ ಉಟ್ಟು. ಒಂದ್ ಕೆಲ್ಸ ಮಾಡ್, ನೀನ್ ಅರ್ಧ ಗಂಟೆ ಮಲ್ಕ. ನಾನ್ ನಿನ್ನ ಏಳ್ಸಿನೆ"ತಾ ಹೇಳ್ದೊ. ಚಾಮಿಗೆ ಸಹ ಅವನ ಅತ್ತೆ ಹೇಳ್ದ್ ಸರಿತಾ ಅನ್ಸಿತ್ತ್. ಹಂಗೆ ಹಾಸಿಗೆ ಮೇಲೆ ಬಿದ್ದ್ಕಣ್ತ್.

    ಚಾಮಿಗೆ ಸ್ವಲ್ಪ ಹೊತ್ತ್ ಬುಟ್ಟ್ ಎಚ್ಚರ ಆತ್. ಟೈಮ್ ನೋಡ್ರೆ ಗಂಟೆ ನಾಕೂವರೆ ಆವುಟು. ಪರೀಕ್ಷೆ ಇದ್ದದ್ ಎರ್ಡ್ ಗಂಟೆಗೆ. ಒಮ್ಮೆಲೇ ಜೀವ ಬಾಯಿಗೆ ಬಂದ ಹಂಗೆ ಅನ್ಸಿತ್ತ್. ಪರೀಕ್ಷೆ ಮುಗಿಯಕೆ ಬರಿ ಅರ್ಧ ಗಂಟೆ ಮಾತ್ರ ಉಳ್ದಿತ್ತ್. ಇನ್ನು ಹೋಗಿ ಸಹ ಪ್ರಯೋಜನ  ಇಲ್ಲೆ. ಎಲ್ಲಾ ಗ್ಯಾನ ಮಾಡ್ಕಾಕನ ದೇವರೇ ಒಮ್ಮೆ ಭೂಮಿ ಬಾಯಿ ಬುಟ್ಟಿದ್ದರೆ ಎಷ್ಟ್ ಲಾಯ್ಕ ಇತ್ತ್ತಾ ಅನ್ಸಿಕೆ ಶುರು ಆಗಿ ಮರ್ಡುವಂಗೆ ಆತ್. ಚಾಮಿನ ಅಸಹಾಯಕತೆ ಸಿಟ್ಟ್ನ ರೂಪ ಪಡ್ಕಣಿಕೆ ತುಂಬಾ ಹೊತ್ತು ಬೇಕಾತ್ಲೆ. ಒಂದೇ ಉಸ್ರ್ಲಿ ಅವನ ಅತ್ತೆಗೆ ಬೈಗುಳದ ಮಳೆ ಸುರ್ಸಿತ್ತ್. ಅಡಿಗೆ ಮನೆಲಿದ್ದ ಸಾಮಾನೆಲ್ಲಾ ಚೆಲ್ಲಾಡಿ ರಂಪ ರಾಮಾಯಣ ಮಾಡಿಕೆ ಶುರು ಮಾಡ್ತ್. 
   
   ಚಾಮಿನ ಬೊಬ್ಬೆ ತಡ್ಕಣಿಕಾಗದೆ ಅವನ ಅತ್ತೆ ಚೊಂಬುಲಿದ್ದ ನೀರ್ನ ಚಾಮಿನ ತಲೆ ಮೇಲೆ ಸುರ್ತ್. ಕಣ್ಣು ಬುಟ್ಟು ನೋಡ್ರೆ ಹಾಸಿಗೆ ಪೂರ ಚಂಡಿ...!!  ಅತ್ತೆ ಮತ್ತೆ ಮಾವ ಜೋರಾಗಿ ನಗಾಡ್ತಿದ್ದೋ...!!! ಪರೀಕ್ಷೆ ಮುಗ್ದ್ ಎರಡು ದಿನ ಆದ್ರೂ ಚಾಮಿಗೆ ಪರೀಕ್ಷೆಯ ಜ್ವರ ಬಿಟ್ಟಿತ್ಲೆ !!! ಅವಂಗೆ ಕನ್ಸ್ ಬಿದ್ದಿತ್ತ್ !!!

- ಸ್ಪಂದನ ಗೌರಿ
arebhase@gmail.com

Saturday 25 August 2012

ಗಪ್ಪು ಮತ್ತೆ ಫ್ರೆಂಡ್ಸ್


ಗಪ್ಪು ಹೈದ ಮೈಸೂರ್ಲಿ ಎಂಜಿನಿಯರಿಂಗ್ ಮಾಡ್ತಿತ್ತ್. ಮನೆ ಕಾರುಗುಂದಲಿ ಆದ್ದರಿಂದ, ಕಾಲೇಜ್ ಹತ್ರನೇ ಮೂರ್ ಜನ ಹೈದಗಳ ಜೊತೆ ರೂಮ್ ಮಾಡಿಕಂಡ್ ಇತ್ತ್. ಪಾಠಲಿ ಹುಷಾರಿದ್ದ ಗಪ್ಪು ಮತ್ತೆ ಅವನ ಫ್ರೆಂಡ್ಸ್ ಪರೀಕ್ಷೆ ಹತ್ರ ಆಗೋವರೆಗೂ ಆಟಡಿಕಂಡೇ ಇರ್ತಿದ್ದೊ. ಮೈಸೂರ್ಲಿ ಬೀಟ್ ಹಾಕುದಲ್ಲದೆ ಕಾಲೇಜ್ ಹತ್ರ ಇದ್ದ ಥಿಯೇಟರ್ಲಿ ಯಾವ ಪಿಕ್ಚರ್ ಬಂದರೂ ಫಸ್ಟ್ ಶೋನೇ ನೋಡಿಕಂಡ್ ಬರ್ತಿದ್ದೊ. ಹಿಂಗೆ ಒಬ್ಬರ್ನ ಬುಟ್ಟ್ ಇನ್ನೊಬ್ಬ ಇರ್ತಿತ್ಲೆ. ಓದುಕಾಕನೂ ನಾಳೆಂದ ಶುರು ಮಾಡ್ನೊರಾ.. ನಾಳೆ ಗ್ಯಾರೆಂಟಿ ನೈಟ್ ಫುಲ್ ಓದೊಕುತಾ ಪ್ಲಾನ್ ಮಾಡಿಕಂಡೇ ದಿನ ತಳ್ಳಿ, ಕೊನೆಗೆ ಅವು ಓದಿಕೆ ಶುರು ಮಾಡ್ತಿದ್ದದ್ ಪರೀಕ್ಷೆಗೆ ಒಂದಿನ ಹಿಂದೆನೇ.

    ಡಿಸೆಂಬರ್ ತಿಂಗಂಳ್ದ ಎಂಜಿನಿಯರಿಂಗ್ನವ್ಕೆ ಸೆಮಿಸ್ಟರ್ ಪರೀಕ್ಷೆ ಶುರು ಆದೆ. ಎಂಥ ಮಾಡ್ದು, ಪರೀಕ್ಷೆಗೆ ಮೂರು ದಿನ ಇರ್ಕಾಕನನೇ ಹುತ್ತರಿ ಸಹ ಬಂದ್ಬುಟ್ಟಿತ್ತ್. ಗಪ್ಪುಗೆ ಮನೆಂದ ಬಾ ಬಾತಾ ಒಂದೇ ಸಮನೇ ಫೋನ್ ಮೇಲೆ ಫೋನ್ ಬಾಕೆ ಶುರು ಆತ್.  ಸರಿ ಹೆಂಗಿದ್ದರೂ ಲಾಸ್ಟ ದಿನ ತಾನೆ ಓದುದುತಾ ಹೇಳಿ ಮನೆಗೆ ಹೊರ್ಟತ್. ಮನೆಲಿ ಲಾಯ್ಕ್ತ ಹುತ್ತರಿ ಕಳ್ತ್. ಸರಿ, ಮನೆಂದ ಬಾಕಾಕನ ಅಪ್ಪನ ಒಂದ್ ಬಾಟಲ್ನ ಯಾರಿಗೂ ಗೊತ್ತಿಲ್ಲದೆ ಬ್ಯಾಗಿಗೆ ಇಳ್ಸಿಕಣ್ತ್. ಹಂಗೆ ಅಮ್ಮನ ಹತ್ರ ಹೇಳಿ ಹುತ್ತರಿ ಮಾರ್ನೆ ದಿನ ಹೊಡ್ದ  ಹಂದಿ ಮಾಂಸ ಗೈಪುನ ಫ್ರೆಂಡ್ಸ್ಗೆತ ಕಟ್ಟಿಕಣ್ತ್ ಪರೀಕ್ಷೆಗೆ ಒಂದೇ ದಿನ ಉಳ್ದರಂದ, ಹೊರ್ಡ್ಕಾಕನೇ ಫ್ರೆಂಡ್ಸ್ಗೆ ಕಾಲ್ ಮಾಡಿ ನಾನ್ ಹೊರ್ಟೊಳೆ... ಬಂದ ತಕ್ಷಣ ಓದುನೋತಾ ಸಹ ಹೇಳ್ತ್.

    ಹಂಗೆ ಮೈಸೂರ್ ತಲ್ಪುಕಾಕನ ರಾತ್ರಿ ಏಳ್ ಗಂಟೆ ಆಗಿತ್ತ್. ಸ್ವಲ್ಪ ರೆಸ್ಟ್ಗೆತಾ ಹೇಳಿ ಎರ್ಡ್ ಗಂಟೆ ಮಲ್ಗಿ ಎದ್ದತ್ತ್. ಅಷ್ಟು ಹೊತ್ತಿಗೆ ಹೊರಗೆ ಹೋಗಿದ್ದ ಗಪ್ಪುನ ಫ್ರೆಂಡ್ಸ್ ವಾಪಸ್ ಬಂದೊ. ಗಪ್ಪು ಹೇಳ್ತ್, ಈಗಲೇ ತುಂಬಾ ಲೇಟ್ ಆವುಟು. ಓದಿಕೆ ಶುರು ಮಾಡ್ನೊತಾ. ಅವನ ಫ್ರೆಂಡ್ಸ್ ಮೆಲ್ಲನೆ ಹೇಳ್ದೊ, `ಸಾರಿರ ಗಪ್ಪು, ನಾವೆಲ್ಲಾ ನಿನ್ನೆನೆ ಓದಿದೊ. ನಾವು ಮಲ್ಗುವೆ ನೀನ್ ಓದಿ ಮಲ್ಕರಾ'ತಾ ಹೇಳ್ದೊ.

   ಗಪ್ಪುಗೆ ಎಲ್ಲಿತ್ತೋ ಸಿಟ್ಟ್ ಅಲ್ಲೆ ಇದ್ದ ಟೇಬಲ್ಗೆ ಸರಿಯಾಗಿ ಗುದ್ದಿತ್ತ್. ಅವನ ಫ್ರೆಂಡ್ಸ್ ಅಂವ ತಂದ ಮಾಂಸ ಕಳ್ ಎಲ್ಲಾ ಖಾಲಿ ಮಾಡಿ ಲಾಯ್ಕಲಿ ಹೊದ್ದ್ ಮಲ್ಗಿದೊ. ಗಪ್ಪು ಮಾತ್ರ ಬೇರೆ ದಾರಿ ಇಲ್ಲದೆ ರಾತ್ರಿ ಹನ್ನೊಂದು ಗಂಟೆಗೆ ಓದಿಕೆ ಕುದ್ದ್ಕಣ್ತ್. ಬೆಳಿಗ್ಗೆ ಆರ್ ಗಂಟೆವರಗೆ ಓದಿಕಂಡೇ ಇತ್ತ್. ಫ್ರೆಂಡ್ಸ್ನ ಏಳ್ಸೊನೋತಾ ಗಪ್ಪು ಗ್ಯಾನ ಮಾಡ್ತ್. ತಕ್ಷಣ ಅಂವಂಗೆ ನಿನ್ನೆ ರಾತ್ರಿ ಅವು
ಕೈ ಕೊಟ್ಟದ್ ಗ್ಯಾನ ಆಗಿ, ಇವ್ಕೆ ಸರಿಯಾಗಿ ಬುದ್ಧಿ ಕಲ್ಸಿನೆತಾ ಹೇಳಿ, ರೂಮ್ಲಿ ಇದ್ದ ಎಲ್ಲಾ ವಾಚ್ ಮತ್ತೆ ಮೊಬೈಲ್ಗಳ ಟೈಮ್ನ ಒಂದು ಗಂಟೆ ಹಿಂದಕ್ಕೆ ಇಟ್ಟತ್ತ್. ಗಪ್ಪು ಮಾತ್ರ ಎಂಟ್ಗಂಟೆಗೆಲ್ಲಾ ರೆಡಿಯಾಗಿ, `ಎಲ್ಲವೂ ಬೇಗ ಬೇಗ ಏಳಿನೆ.. ಗಂಟೆ ಎಂಟಾವುಟು. ಯಾರೂ ಪರೀಕ್ಷೆ ಬರಿಯಲೆನಾ'ತಾ ಕೇಳಿಕೆ ಶುರು ಮಾಡ್ತ್. ಅಂವನ ಫ್ರೆಂಡ್ಸ್ಲಿ ಒಬ್ಬ ಹೇಳ್ತ್, `ಎಂಥರ ಗಪ್ಪು ನಿನ್ನೆ ಕುಡ್ದದ್ ಇನ್ನು ಬುಟ್ಟತ್ಲೆನಾ? ಟೈಮ್ನೋಡ್... ಸರಿಯಾಗಿ ಇನ್ನು ಗಂಟೆ ಏಳ್ ಮಾರಾಯ. ಬೆಳಿಗ್ಗೆ ಬೆಳಿಗ್ಗೆನೇ ನಿಂದೊಂದು ರಾಮಾಯಣ'ತಾ ಹೇಳ್ತ್. ಗಪ್ಪು ಹೆಂಗೆ ಹೇಳ್ರೂ ಅಂವನ ಫ್ರೆಂಡ್ಸ್ ನಂಬಿಕೆ ರೆಡಿ ಇಲ್ಲೆ. ಸರಿ ಲಾಸ್ಟ್ಗೆ ನ್ಯೂಸ್ ಚಾನಲ್ ಹಾಕಿ ನೊಡ್ಕಾಕನ ನಿಜ ಗಂಟೆ ಎಂಟ್ ಇಪ್ಪತೈದ್ ಆಗಿತ್ತ್. ಗಪ್ಪು ಮಾತ್ರ ನಗಾಡಿಕಂಡ್ ನಡ್ದ ವಿಷ್ಯನ ಹೇಳ್ತ್. 
 ಎಲ್ಲವೂ ಸೇರಿ ಗಪ್ಪುಗೆ ನಾಕ್ ಬಡ್ದೊ. ಅಂದರೂ ಗಪ್ಪು ನಗಾಡಿಕಂಡೇ ಇತ್ತ್. ಒಬ್ಬೊಬ್ಬ ಒಂದೊಂದ್ ಥರ ಬಯ್ಕಂಡ್ ರಾಮಾಯಣ ಮುಗಿಯಕಾಕನ ಪರೀಕ್ಷೆಗೆ ಬರೀ ಇಪ್ಪತ್ತು ನಿಮಿಷ ಇತ್ತ್. ಸರಿ ಗಪ್ಪುನ ಬುಟ್ಟು ಯಾರ್ ಸಹ ಮುಖ ತೊಳಿಯದೆ ಹೋಗಿ ಪರೀಕ್ಷೆ ಬರ್ದ್ ಬಂದೊ. ರಿಸಲ್ಟ್...? ನೀವೇ ಯೋಚನೆ ಮಾಡಿಕಣಿ...!!!

- ಸ್ಪಂದನ ಗೌರಿ
arebhase@gmail.com

Thursday 23 August 2012

ಶ್ರಾವಣಿ


ಶ್ರಾವಣಿ ಓದಕ್ಕಾಗಿದ್ದ ಅದೇ ತೆಲುಗು ನ್ಯೂಸ್ ನೋಡ್ತಿದ್ದೆ. ಆದ್ರೆ ಅಲ್ಲಿ ಅವಳ ಬದ್ಲು ಬೇರೆ ಯಾರೋ ನ್ಯೂಸ್ ಓದ್ತಿದ್ದೊ. ವಿಶಾಖಪಟ್ಟಣಕ್ಕೆ ಹೋಗ್ತಿದ್ದ ರೈಲಿಗೆ ಬೆಂಕಿಹತ್ತಿಕಂಡಿದ್ದ ಸುದ್ದಿ ಬ್ರೇಕಿಂಗ್ಲಿ ಬರ್ತಿತ್ತ್. ಸತ್ತವ್ರ ಲಿಸ್ಟ್ಲಿ ಶ್ರಾವಣಿ ಹೆಸ್ರು, ಫೋಟೋ...!! ಊರಿಗೆ ಹೊರಟಿದ್ದ ಅವ್ಳು ರೈಲೊಳಗೇ ಬೆಂದು ಹೋಗಿತ್ತ್...ನ್ಯೂಸ್ ನೋಡ್ತಿದ್ದಂಗೆ ನಂಗೆ ಅಳು ತಡ್ಕಂಬಕೆ ಆತ್ಲೆ....ಅವ್ಳು ನನ್ನ ಕೈಗೆ ಕಟ್ಟಿದ್ದ ವಾಚ್ `ಟಿಕ್ ಟಿಕ್ ಟಿಕ್..' ಶಬ್ದ ಮಾಡ್ತಿತ್ತ್...ವಾಚ್ ಕಡೆ ನೋಡ್ದೆ, ಮುಳ್ಳುಗ ಹಿಂದಕ್ಕೆ ಓಡಿದಂಗೆ ಅನ್ನಿಸಿಕೆ ಶುರುವಾತ್. ಮುಂದೆ ಎಲ್ಲಾ ಹಳೇ ನೆನಪುಗಳದ್ದೇ ಮೆರವಣಿಗೆ... 
ನಾ ಗೋಲ್ಕೊಂಡ ಕೋಟೆಯ ತುತ್ತ ತುದಿ ಹತ್ತಿ ನಿಂತಿದ್ದೆ. ಒಂದ್ಸಲ ಉಸಿರು ಬಿಟ್ಟು, ಮತ್ತೆ ಜೋರಾಗಿ ಎಳ್ಕಂಡೆ. ಹೈದರಾಬಾದ್ನ ಆ ಕೊಳಕು ವಾಸನೆಂದ ಮುಕ್ತಿ ಸಿಕ್ಕಿ, ಶುದ್ಧ ಗಾಳಿ ಎದೆಯೊಳಗೆಲ್ಲಾ ತುಂಬಿ ಒಂಥರ ಖುಷಿ ಆತ್. ದೂರಲಿ ಹುಸೇನ್ ಸಾಗರ್ ಸಣ್ಣ ಕೆರೆ ಥರ ಕಾಣ್ತಿತ್. ಅದ್ರೊಳಗೆ ಓಡಾಡ್ತಿದ್ದ ದೊಡ್ಡ ದೊಡ್ಡ ಬೋಟ್ಗ, ಮಕ್ಕ ಆಟ ಆಡಿಕೆ ಮಾಡ್ದ ಪೇಪರ್ ದೋಣಿಗಳಂಗೆ ಇದ್ದೊ. ನನ್ನ ಆಫೀಸ್ ಇರ್ವ ರಾಮೋಜಿ ಫಿಲಂಸಿಟಿ ಎಲ್ಲಾರೂ ಕಂಡದೆಯೇನೋತಾ ದೂರ...ದೂರಕ್ಕೆ ದೃಷ್ಟಿ ಹಾಯಿಸಿದೆ...ಊಹುಂ, ಕಣ್ಣು ನೋವಾದ್ ಬಿಟ್ಟರೆ ಎಂಥದ್ದೂ ಪ್ರಯೋಜನ ಆತ್ಲೆ. ಹಂಗೆ ಆ ಅರಮನೆಯ ನಾಲ್ಕೂ ದಿಕ್ಕುಗಳಿಗೆ ಓಡಾಡಿ ಯಾವ ಜಾಗಲಿ ಏನೆಲ್ಲಾ ಕಂಡದೆತಾ ನಾ ಸರ್ವೆ ಮಾಡ್ತಿದ್ದರೆ, ನನ್ ಜೊತೆ ಬಂದಿದ್ದ ಶ್ರಾವಣಿ ಸುಸ್ತಾಗಿ ಕುದ್ದ್ಕಂಡ್ಬಿಟ್ಟಿತ್ತ್. ಭಾಗಮಂಡಲದಂಥ ಬೆಟ್ಟ-ಗುಡ್ಡ ಇರ್ವ ಜಾಗಲಿ ಓಡಾಡಿದ್ದ ನಂಗೆ, ಈ ಗೋಲ್ಕೊಂಡ ಕೋಟೆ ಇರ್ವ ಬೆಟ್ಟ ಹತ್ತುದು ಕಷ್ಟ ಏನೂ ಆತ್ಲೆ. ಆದ್ರೆ, ಶ್ರಾವಣಿ ವಿಶಾಖಪಟ್ಟಣ ಹತ್ರ ಸಮುದ್ರ ಬದಿ ಇರ್ವ ಯಾವುದೋ ಹಳ್ಳಿಯ ಗೂಡೆ. ಬೆಟ್ಟತೇಳಿ ಹತ್ತುದು ಇದೇ ಮೊದ್ಲು. ಸುಮಾರು ಐನೂರು ಅಡಿ ಹತ್ತಿಕೆ 50 ಸಲ ಮಧ್ಯ ಮಧ್ಯ ಕುದ್ದಿತ್. 2 ಲೀಟರ್ ನೀರು ಖರ್ಚು ಮಾಡಿತ್ತ್. 
ನಾ ಕನ್ನಡ ಚಾನೆಲ್ಲಿ ಕೆಲ್ಸ ಮಾಡ್ದು. ಶ್ರಾವಣಿ ತೆಲುಗು ಚಾನೆಲ್ಲಿ ಆ್ಯಂಕರ್. ನಂಗೆ ಸರಿಯಾಗಿ ತೆಲುಗು ಬಾದುಲೆ. ಅವಳಿಗೆ ಸರಿಯಾಗಿ ಕನ್ನಡ ಬಾದುಲೆ. ಆದ್ರೂ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ! ಹೈದರಾಬಾದ್ಗೆ ಹೋದ ಮೇಲೆನೆ ನಂಗೆ ತೆಲುಗುತೇಳುವ ಭಾಷೆಯ ಪರಿಚಯ ಆದ್. ತೆಲುಗು ಲಿಪಿ ಹೆಚ್ಚು-ಕಡಿಮೆ ನಮ್ಮ ಕನ್ನಡಭಾಷೆಯಂಗೆನೇ ಇರ್ದು. ಶಬ್ದಗಳೂ ಅಷ್ಟೆ, ಅರ್ಥ ಆಗುವಂಗೆ ಇದ್ದದೆ. ಇನ್ನು ಶ್ರಾವಣಿ 2 ವರ್ಷ ಬೆಂಗಳೂರ್ಲಿ ಯಾವುದೋ ಕಂಪೆನಿಲಿ ಹೆಚ್ ಆರ್ ಆಗಿ ಕೆಲ್ಸ ಮಾಡಿತ್ತ್. ಹಂಗಾಗಿ ಅವ್ಳು ಹೇಳುಕತಾ ಇದ್ದದ್ದನ್ನ ನಂಗೆ ಅರ್ಥ ಮಾಡಿಸುವಷ್ಟರ ಮಟ್ಟಿಗೆ ಕನ್ನಡ ಮಾತಾಡ್ತಿತ್ತ್. ನಂಗೂ ಅವ್ಳಿಗೂ ಫ್ರೆಂಡ್ಶಿಪ್ ಶುರುವಾದು ಕೂಡ ಒಂದು ವಿಚಿತ್ರ ಸನ್ನಿವೇಶಲಿ.
ರಾಮೋಜಿ ಫಿಲಂಸಿಟೀಲಿ ಒಟ್ಟು 12 ಚಾನೆಲ್ಗಳ ಆಫೀಸ್ ಉಟ್ಟು. ಎಲ್ಲಾ ಇರ್ದು, ಒಂದೇ ಕಟ್ಟಡದೊಳಗೆ. ನಮ್ಮ ಕನ್ನಡ ಚಾನೆಲ್ ಆಪೀಸ್ನ ಒಂದು ಬದಿಗೆ ಬಂಗಾಳಿ ಚಾನೆಲ್ ಆಫೀಸ್, ಮತ್ತೊಂದು ಬದಿ ತೆಲುಗು ಚಾನೆಲ್ ಆಫೀಸ್ ಇತ್ತ್. ಕನರ್ಾಟಕಲಿ ಎಲೆಕ್ಸನ್ ಆಕಾಕನ ಎಲೆಕ್ಸೆನ್ಗೆ ಸಂಬಂಧಪಟ್ಟ ಎಲ್ಲಾ ಸುದ್ದಿಗಳ್ನ ನಾ ನೋಡಿಕಣ್ತಿದ್ದೆ. ನಂ ರಾಜ್ಯದ ಎಲೆಕ್ಸನ್ ಬಗ್ಗೆ ತೆಲುಗು ಚಾನೆಲ್ನವು ಕೂಡ ದಿನಕ್ಕೆ ಅರ್ಧ ಗಂಟೆಯ ಒಂದು ಪ್ರೋಗ್ರಾಂ ಮಾಡ್ತಿದ್ದೊ. ಅದಕ್ಕೆ ಆ್ಯಂಕರ್ ಆಗಿದ್ದದ್ ಇದೇ ಶ್ರಾವಣಿ. ಅವ್ಳಿಗೆ ಎಂಥದೇ ಡೌಟ್ ಬಂದ್ರೂ, ನನ್ನನ್ನೇ ಬಂದ್ ಕೇಳ್ತಿತ್ತ್. ಎಷ್ಟೊತ್ತಿಗಾದ್ರೂ ಸರಿ ಫೋನ್ ಮಾಡಿ ಅವಳ ಸಂಶಯನ ಪರಿಹಾರ ಮಾಡಿಕಣ್ತಿತ್ತ್. ಕರ್ನಾಟಕಲಿರ್ವ ವಿಧಾನಸಭಾ ಕೇತ್ರಗಳಿಂದ ಹಿಡ್ದ್, ಕೆ ಜಿ ಬೋಪಯ್ಯ ಮಡಿಕೇರಿಲಿ ಎಷ್ಟು ಸಲ ಗೆದ್ದೊಳೊತೇಳುವವರೆಗೆ ಅವಳಿಗೆ ನಾ ಇನ್ಫರ್ಮೇಶನ್ ಕೊಡ್ತಿದ್ದೆ. ಈ ಸಲುಗೆ ಫ್ರೆಂಡ್ಶಿಪ್ ವರೆಗೆ ಹೋತ್. ಕ್ಯಾಂಟೀನ್ಗೆ ಒಟ್ಟಿಗೆ ಹೋಕೆ ಶುರುಮಾಡಿದ್ದ ನಾವು, ಎಲೆಕ್ಷನ್ ಮುಗ್ದ್ ಯಡಿಯೂರಪ್ಪ ಮುಖ್ಯಮಂತ್ರಿ ಆಕಾಕನ ಹೈದರಾಬಾದ್ ಸುತ್ತಿಕೆ ಶುರುಮಾಡಿದ್ದೊ.
ಕರಾವಳಿ ಪ್ರದೇಶಂದ ಬಂದದಕ್ಕೋ ಏನೋ, ಶ್ರಾವಣಿ ತುಂಬಾ ಲಾಯ್ಕ ಮೀನುಗೈಪು ಮಾಡ್ತಿತ್. ಆಗೆಲ್ಲಾ ನನ್ನ ಮರೆಯದೇ ಕರೀತಿತ್ತ್. ನಂದು ಮತ್ತೆ ಅವಳ್ದು ಒಂದೇ ದಿನ ವೀಕ್ಲಿಆಫ್ ಇದ್ದದ್ದರಿಂದ ಸಾಮಾನ್ಯವಾಗಿ ಮಧ್ಯಾಹ್ನ ಊಟ ಒಟ್ಟಿಗೆ ಮಾಡ್ತಿದ್ದೊ. ನಾ ಕ್ಯಾರೆಟ್ ಹಲ್ವ ತುಂಬಾ ಟೇಸ್ಟಿಯಾಗಿ ಮಾಡ್ತಿದ್ದೆ. ಅದ್ರಲ್ಲೂ ಶ್ರಾವಣಿಗೆ ನಾ ಮಾಡ್ದ ಕ್ಯಾರೆಟ್ ಹಲ್ವತೇಳಿರೆ ತುಂಬಾ ಇಷ್ಟ. ಇಂಥ ಸಣ್ಣ, ಸಣ್ಣ ವಿಷಯಗಳೇ ನಮ್ಮನ್ನ ತುಂಬಾ ಹತ್ತಿರಕ್ಕೆ ತಂದಿತ್ತ್. ನಮ್ಮ ಕೊಡಗು, ಇಲ್ಲಿನ ಕಾಡು, ಜಲಪಾತ, ಪ್ರಾಣಿಗಳ ಬಗ್ಗೆ ನಾ ಹೇಳ್ದುನ ಕೇಳಿ ಕೇಳಿ ಅವ್ಳಿಗೂ ನಮ್ಮೂರಿನ ಬಗ್ಗೆ ಆಸಕ್ತಿ ಹುಟ್ಟಿಕಂಡಿತ್ತ್. ಅದ್ರಲ್ಲೂ ಗಾಳಿಪಟ ಪಿಚ್ಚರ್ ನೋಡ್ದಮೇಲಂತೂ `ನನ್ನನ್ನ ಒಂದ್ಸಲ ಮಡಿಕೇರಿಗೆ ಕರ್ಕೊಂಡು ಹೋಗು'ತಾ ತುಂಬಾ ಸಲ ಹೇಳಿತ್ತ್. ಅಷ್ಟೊತ್ತಿಗೆ ನಂಗೆ ಬೆಂಗಳೂರಿಗೆ ಟ್ರಾನ್ಸ್ಫರ್ ಆಗಿಬಿಡ್ತ್...ಹೈದರಾಬಾದ್ಂದ ನಾ ಬಾಕಾಕನ ನನ್ನ ಕಳಿಸಿ ಕೊಡಿಕೆ ಅವ್ಳು ಬಸ್ಸ್ಟ್ಯಾಂಡ್ವರೆಗೆ ಬಂದಿತ್ತ್. ಯಾವತ್ತೂ ವಾಚ್ ಕಟ್ಟದಿದ್ದ ನನ್ನ ಕೈಗೆ ಫಾಸ್ಟ್ಟ್ರ್ಯಾಕ್ ವಾಚ್ ಕಟ್ಟಿ `ಇದು ನನ್ನ ನೆನಪಿಗೆ...'ತಾ ಕಣ್ಣಲ್ಲಿ ನೀರ್ ತಂದ್ಕಂಡಿತ್ತ್. ನಂಗೂ ಯಾಕೋ ಎದೆಯೆಲ್ಲಾ ಭಾರ ಭಾರ ಅನ್ನಿಸಿದಂಗೆ ಆತ್. ನಂಗೆ ಗೊತ್ತಿಲ್ಲದಂಗೆ ನನ್ನ ಕಣ್ಣಲ್ಲಿ ನೀರ್ ಬಾತ್...ಟಾಟಾ ಮಾಡಿಕಂಡೇ ಬಸ್ ಹತ್ತಿದ್ದೆ....ಈಗ ನೋಡಿರೆ, ಶ್ರಾವಣಿ ತುಂಬಾ ದೂರ ಹೋಗಿಬಿಟ್ಟುಟ್ಟು....ಆದ್ರೆ ಅವಳು ಕೊಟ್ಟ ವಾಚ್ ಈಗ್ಲೂ ನನ್ನ ಕೈಲಿ `ಟಿಕ್ ಟಿಕ್ ಟಿಕ್'ತಾ ಹೇಳ್ತುಟ್ಟು.

- ಸುನಿಲ್ ಪೊನ್ನೇಟಿ
arebhase@gmail.com

Wednesday 22 August 2012

ದೂರ ತೀರದ ನೋಟ..



ಇನ್ನು ಮೂರು ದಿನಕ್ಕೆ ನನ್ನ ಮದುವೆ. ಮನೆಯವೆಲ್ಲವೂ ಸಂಭ್ರಮ ಸಡಗರಲಿ ಓಡಾಡ್ತ ಒಳೊ. ಊರವು ಚಪ್ಪರ ಹಾಕಿಕೆ ಪ್ಲ್ಯಾನ್ ಮಾಡ್ತ ಒಳೊ. ಮನೆಗೆ ಬಂದಿರುವ ನೆಂಟ್ರೆಲ್ಲಾ ನಂಗೆ ತಮಾಷೆ ಮಾಡಿಕಂಡ್ ಖುಷಿ ಪಡ್ತೊಳೊ. ಅಮ್ಮ ಮತ್ತೆ ಅತ್ತಿಗೆ ಮಾತ್ರ ಕೆಲಸಗಳ ಒತ್ತಡಗಳ ನಡುವೆಯೂ ನನ್ನ ಕಳ್ಸೊಕಲತಾ ದುಃಖಲಿದ್ದೊ. ಪೊಪ್ಪ ಮತ್ತೆ ಅಣ್ಣ ಕೈಗೆ ಸಿಗ್ತ ಇಲ್ಲೆ.
  ಈ ಎಲ್ಲಾ ಸಂಭ್ರಮ ಸಡಗರಗಳ ಮಧ್ಯೆನೂ ಅಂವ ನಂಗೆ ಪದೆ ಪದೆ ಗ್ಯಾನ ಆಗ್ತ ಇತ್. ಮರೆಯಕೂತ ಪ್ರಯತ್ನಪಟ್ಟರೂ ಅವನ ನೆನಪು ಬೆನ್ನು ಬಿಡದಂಗೆ ಕಾಡ್ತಾ ಇತ್. ಮನ್ಸ್ ಐದು ವರ್ಷಗಳ ಹಿಂದೆ ಓಡ್ತಿತ್ತ್.
ಆಗ ನಾನಿನ್ನು ಪಿಯುಸಿ ಮುಗ್ಸಿ ಬಿಕಾಂ ಸೇರಿದ್ದೆ. ಮೈಸೂರ್ಲಿ ಕಾಲೇಜಿಗೆ ಸೇರ್ದರ್ಂದ, ಮೊದಲನೇ ಸಲ ಭಾಗಮಂಡಲ ಬುಟ್ಟು ಪಟ್ಟಣ ಸೇರಿದ್ದೆ. ಅಮ್ಮನ ಸೆರಗ್ನ ಹಿಡ್ಕಂಡ್ ಓಡಾಡ್ತಿದ್ದ ನಂಗೆ, ಮೈಸೂರಿಗೆ ಹೊಂದಿಕಣಿಕೆ ಕಷ್ಟ ಆಗ್ತಿತ್ತ್. ನನ್ನ ಹಾಸ್ಟೆಲ್ ರೂಮ್ಮೇಟ್ ಆಗಿ ಸಿಕ್ಕಿದವ್ಳು ಸಾನ್ವಿ. ಅವ್ಳು ತುಂಬಾ ಲವಲವಿಕೆಂದ ಇರ್ತಿತ್. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಆಕೆ ಜಾಸ್ತಿ ಟೈಮ್ ಬೇಕಾತ್ಲೆ. ಹೊಸ ಫ್ರೆಂಡ್ಸ್, ಹೊಸ ಕಾಲೇಜು, ಹೊಸ ಜೀವನಕ್ಕೆ ಮನ್ಸ್ತೇಳುವ ಹಕ್ಕಿ ರೆಕ್ಕೆನ ಮೆಲ್ಲಮೆಲ್ಲನೆ ಬಿಚ್ಚಿ ಹಾರಿಕೆ ಶುರು ಮಾಡಿತ್ತ್.
   ಸಾನ್ವಿಯ ಅಣ್ಣ ವಿಕಾಸ್ ಬೆಂಗಳೂರ್ಲಿ ಇಂಜಿನಿಯರಿಂಗ್ ಮಾಡ್ತಿತ್ತ್. ಅವಂಗೆ ಸಾನ್ವಿತೇಳ್ರೆ ಜೀವ. ವಾರಕ್ಕೆ ಒಮ್ಮೆ ಅವಳ್ನ ನೋಡಿಕೆ ಮೈಸೂರ್ಲಿ ಪ್ರತ್ಯಕ್ಷ ಆಗ್ತಿತ್ತ್. ಅವಳ ಬೆಸ್ಟ್ ಫ್ರೆಂಡ್ ನಾನೇ ಆದ್ದರಿಂದ ಅವನ ಮೀಟ್ ಮಾಡಿಕೆ ಅವಳೊಟ್ಟಿಗೆ ನಾನ್ ಸಹ ಹೋದು ಮಮೂಲಿ ಆಗಿತ್ತ್. ಅವ್ಳಿಗೆ ಸಿಗ್ವ ಪಾನಿಪೂರಿಂದ ಹಿಡ್ದ್ ಐಸ್ಕ್ರೀಮ್ವರಗೆ ಎಲ್ಲಾ ಸಹ ನಂಗೂ ಸಿಗ್ತಿತ್ತ್. ದಿನ ಕಳ್ದಂಗೆ ವಿಕಾಸ್ ಮೇಲೆ ಪ್ರೀತಿ ಹುಟ್ಟಿಕೆ ಶುರುಆತ್. ಹೆಂಗೆ ಅವನ ಹತ್ರ ಹೇಳ್ದುತಾ ಗೊತ್ತಾಗದೆ ಮನಸ್ಲೇ ಮಂಡಿಗೆ ತಿನ್ತಿದ್ದೆ. ಒಂದ್ ದಿನ ಸಾನ್ವಿ ಮೊಬೈಲ್ ರಿಂಗ್ ಆಗ್ತಿತ್. ನಾನ್ ರಿಸೀವ್ ಮಾಡ್ಕಾಕಕನ ವಿಕಾಸ್ ಮಾತಾಡ್ತಿತ್. ಅಂವ "ನಂಗೆ ನೀನ್ತೇಳ್ರೆ ಇಷ್ಟ, ನಾನ್ ನಿನ್ನ ತುಂಬಾ ಪ್ರೀತ್ಸ್ತೊಳೆ"ತಾ ಹೇಳ್ತ್. ಇತ್ತ ಸಾನ್ವಿಗೆ ವಿಷ್ಯ ಗೊತ್ತಾಗಿ ಅವ್ಳು ಸಹ ಅತ್ತಿಗೆ ಅತ್ತಿಗೆತಾ ಕರ್ದ್ ತನ್ನ ಒಪ್ಪಿಗೆನ ಸೂಚಿಸಿತ್ತ್. 
  ಇನ್ನು  ಓದುವ ವಿಷ್ಯಕ್ಕೆ ಬಂದರೆ ಸಾನ್ವಿ ಮತ್ತೆ ವಿಕಾಸ್ ಯಾಗೊಳೂ ಮುಂದೆ ಇದ್ದರೆ, ನಾನ್ ಸಾಮಾನ್ಯ ವಿದ್ಯಾಥರ್ಿನಿ. ಫಸ್ಟ್ರ್ಯಾಂಕ್ ಬಾರದಿದ್ದರೂ ಫೇಲ್ ಅಂತು ಆಗ್ತಿತ್ಲೆ. ನಮ್ಮ ಡಿಗ್ರಿ ಮುಗ್ಸೊ ಹೊತ್ತಿಗೆ ವಿಕಾಸ್ನ ಇಂಜಿನಿಯರಿಂಗ್ ಮುಗ್ದಿತ್ತ್. ಆದ್ರೆ ರಿಸೆಷನ್ನಿಂದಾಗಿ ಅವಂಗೆ ಒಳ್ಳೆ ಮಾರ್ಕ್ಸ್ ಇದ್ದರೂ ಕೆಲ್ಸ ಸಿಕ್ಕಿಕೆ ಕಷ್ಟ ಆತ್. ಅಂವ ಎಂ.ಟೆಕ್ ಮಾಡುವ ನಿರ್ಧಾರಕ್ಕೆ ಬಂದಿತ್ತ್. ಹಾಸನಲಿ ಕಾಲೇಜಿಗೆ ಸೇರಿಕಣ್ತ್. ಇತ್ತ ನಾನ್ ಎಂ.ಕಾಮ್ ಮಾಡಿಕೆ ಕೊಣಾಜೆಗೆ ಸೆರ್ರೆ, ಸಾನ್ವಿ  ಮೈಸೂರ್ಲಿ ಕಾಲೇಜಿಗೆ ಸೇರಿಕಣ್ತ್. ಅಂವ ನನ್ನ ಆಗಾಗ ಬಂದ್ ನೋಡಿಕಂಡ್ ಹೋಗ್ತಿತ್ತ್. ಅಷ್ಟು ಹೊತ್ತ್ಗೆ ಅಂವನ ಮನೆಲಿ ವಿಷ್ಯ ಗೊತ್ತಾಗಿ ಅಮ್ಮ , ಎರ್ಡ್ ವರ್ಷ ಲಾಯ್ಕ ಓದಿಕಣಿ ಆಮೇಲೆ ನಿಮ್ಮ ಮದುವೆತಾ ಹೇಳ್ದೊ. ಅದೇ ಖುಷಿಲಿ ದಿನ ಕಳ್ದದ್ ಗೊತ್ತೇ ಆತ್ಲೆ.
   ನನ್ನ ಎಮ್.ಕಾಮ್. ಮುಗ್ದ್ ಮೂರ್ತಿಂಗ ಆಗಿತ್ತ್. ಮನೆಲಿ ನಂಗೆ ಗಂಡ್ ಹುಡ್ಕಿಕೆ ಶುರು ಮಾಡಿದ್ದೊ. ಅಷ್ಟು ಹೊತ್ತಿಗೆ ನಾನ್ ಮಡಿಕೇರಿಲಿ ಲೆಕ್ಚರರ್ ಆಗಿ ಸೇರಿದ್ದೆ. ಅಂವ ಬೆಂಗಳೂರ್ ನಾನ್ ಮಡಿಕೇರಿ ಆದ ಮೇಲೆ ಕಾಂಟ್ಯಾಕ್ಟ್ ಕಮ್ಮಿ ಆಗಿತ್ತ್. ಮದುವೆ ವಿಷ್ಯ ಬಂದಾಗೆಲ್ಲಾ, ನಾನ್ ಮದ್ವೆ ಆದ್ ಎರ್ಡ್ ವರ್ಷ ಕಳ್ದ ಮೇಲೆನೆತಾ ಹೇಳ್ತಾ ಇತ್ತ್. ಇತ್ತ ಸಾನ್ವಿದ್ ಮದ್ವೆ ಆಗಿ ಗಂಡನ ಜೊತೆ ಫಾರಿನ್ಗೆ ಹಾರಿ ಹೋಗಿತ್ತ್. 
ನಂಗೆ ಮನೇಲಿ ಹೈದ ನೋಡ್ದೊ. ಮನೆಲಿ ತುಂಬಾ ಹಠ ಮಾಡ್ತಿದ್ದೊ. ವಿಕಾಸ್ಗೆ ಫೋನ್ ಮಾಡ್ರೆ ನಾನ್ ನಿನ್ನ ಮದ್ವೆ ಆಕೆ ಆದುಲೆ ನಾನ್ ಪಿ.ಹೆಚ್.ಡಿ ಮಾಡಿಕೆ  ಅಮೇರಿಕಕ್ಕೆ ಹೋಗ್ತೋಳೆತ ಬಾಂಬ್ ಸಿಡ್ಸಿತ್ತ್. ಬೇರೆ ದಾರಿ ಇಲ್ಲದೆ ಈ ಮದುವೆಗೆ ಒಪ್ಪಿಕೊಂಡೊಳೆ. ಒಡ್ದ ಮನ್ಸ್ನ ಚೂರ್ಗಳ್ನ ಜೋಡ್ಸಿಕಂಡ್ ಹೊಸ ಜೀವನಕ್ಕೆ ತಯಾರಾಗ್ತಾ ಒಳೆ....

 - ಸ್ಪಂದನ ಗೌರಿ
arebhase@gmail.com

Tuesday 21 August 2012

ಸುಹಾಸಿನಿ


ಇನ್ನೂ ನಂಗೆ ಲಾಯ್ಕ
ನೆನಪುಟ್ಟು..
ಆ ಗೂಡೆನ ನಗು !
ಹೆಸರೂ ಅಷ್ಟೇ...
ಸುಹಾಸಿನಿ !
ಥೇಟ್ ಮುತ್ತಿನ ಹಾರದ
ಸುಹಾಸಿನಿಯಂಗೆ...
ನಗಾಡಿರೆ ಬಾಯಿ ತುಂಬಾ
ಮುತ್ತಿನಹಾರ ಪೋಣಿಸಿದಂಗೆ !
ತುಂಬಾ ಸಲ ಹೇಳೊಕೂತಾ
ಅನ್ನಿಸಿಟ್ಟು....
ಜೋರು ನಗಾಡ್ಬೇಡನೇ ಗೂಡೆ
ನಾಳೇಂದ ಚಂದ್ರ ಬೆಳದಿಂಗಳ ಚೆಲ್ಲಿಕಿಲ್ಲೆ !!
ಆದ್ರೆ...
ಮಾತೆಲ್ಲಾ ಮೌನ
ಮೊದಲ ಸಲ `ಐ ಲವ್ ಯೂ'ತಾ 
ಹೇಳಿಕೆ ಹೊರಟ ಹೈದನಂಗೆ
ಬಾಯಿಯೆಲ್ಲಾ ಒಣಗಿದೆ !
ನೀರು ಬೇಕು ನೀರು...
ಬಾಯಾರಿಕೆನೂ ಮರೆಸಿದೆ !
ಊಟ ಬೇಡ...ನಿದ್ದೆ ಬಾಲೆ..
ಅವಳ ನಗು ಕಣ್ಣು ಮುಂದಿದ್ದರೆ !

- ಸುನಿಲ್ ಪೊನ್ನೇಟಿ
arebhase@gmail.com

Sunday 19 August 2012

ಥ್ಯಾಂಕ್ಸ್ ಪುಟ್ಟಾ..!



ಚೋಮುಣಿ ತುಂಬಾ ಸೋಮಾರಿ. ಸೂರ್ಯ ಬಂದ್ ಕಾಲಿಗೆ ಕಿಕ್ಕಳಿ ಮಾಡ್ದ ಮೇಲೆನೇ ಅಂವ ಎದ್ದೇಳ್ದು. ಹಾಸಿಗೆಗೇ ಕಾಫಿ ಬರೋಕು. ಕಾಫಿಗೆ ಸಕ್ಕರೆ ಹಾಕಿರಿಕ್ಕಾದ್. ಬೆಲ್ಲ ಹಾಕಿದ ನೀರ್ನ ಒಲೇಲಿ ಕುದ್ಸಿ, ಕುದ್ಸಿ ಜೋನಿ ಥರ ಆದ್ಮೇಲೆ ಹುಡಿ ಹಾಕಿ ಮಾಡ್ದ ಕಾಫಿನೇ ಆಕು. ರುಚೀಲಿ ಒಂದುಚೂರು ಹೆಚ್ಚುಕಮ್ಮಿ ಆದ್ರೂ, ಕಾಫಿನ ಗ್ಲಾಸ್ ಸಮೇತ ಕಿಡ್ಕಿಂದ ಹೊರಗೆ ಬಿಸಾಕಿ ಬಿಡ್ತಿತ್ತ್. ಹಂಗಾಗಿ ಚೋಮುಣಿನ ಹೆಣ್ಣ್ ಚುಮ್ಮಿ, ಹೆದ್ರಿಕಂಡ್ ಹೆದ್ರಿಕಂಡೇ ಹೋಗಿ ಗಂಡಂಗೆ ಕಾಫಿ ಕೊಡ್ತಿತ್ತ್. ಹಂಗೆತೇಳಿ ಮಲಗಿದವ್ನ ಎದ್ದೇಳ್ಸಿ ಕಾಫಿ ಕೊಡುವಂಗಿಲ್ಲೆ. ಅದಕ್ಕೂ ಒಂದು ರಿತಿ ನೀತಿ ಉಟ್ಟು. ಚುಮ್ಮಿ ಸದ್ದಾಗದಂಗೆ ಮೆಲ್ಲನೆ ಚೋಮುಣಿನ ಕೋಂಬರೆ ಹತ್ರ ಹೊಗ್ತಿತ್ತ್. ಸದ್ದಾಗದಂಗೆ ಬಾಗಿಲು ಸೆರೇಲಿ ಬಗ್ಗಿ ನೋಡ್ತಿತ್ತ್. ಎಚ್ಚರ ಇದ್ದ್, ಮಲಗಿದ್ದಲ್ಲೇ ಆಚೆ ಈಚೆ ಹೊರಳಾಡ್ತಿದ್ದರೆ ಮಾತ್ರ ಕಾಫಿ ಗ್ಲಾಸ್ ತಕ್ಕಂಡ್ ಹೋಗಿ ಅಂವನ ಮುಂದೆ ಹಿಡೀತಿತ್ತ್. ಆಗ ಚೋಮುಣಿ ಹಾಸಿಗೆಲೇ ಒಮ್ಮೆ ಮೈಮುರ್ದ್, ಊರಿಗೆಲ್ಲಾ ಕೇಳುವಂಗೆ ಆ...ಆ...ತಾ ಆಕಳಿಸಿ ಎದ್ದ್ ಕೂತ್ಕಣ್ತಿತ್. ಹೆಣ್ಣ್ನ ಒಮ್ಮೆ ತಲೆಂದ ಕಾಲ್ ವರೆಗೆ ನೋಡಿ, ಅವಳ ಕೈಂದ ಕಾಫಿ ತಕ್ಕಣ್ತಿತ್ತ್. ಒಂದು ಗುಟುಕು ಕಾಫಿ ಚೋಮುಣಿದ್ ಗಂಟ್ಲ್ಲಿ ಇಳಿವ ವರೆಗೆ ಚುಮ್ಮಿಗೆ ಒಂಥರಾ ಟೆನ್ಶನ್. ಎಲ್ಲಿ ಕಾಫಿನ ಗ್ಲಾಸ್ ಸಮೇತ ಕಿಡ್ಕಿಂದ ಬಿಸಾಕಿಬಿಟ್ಟದೆಯೇನೋತಾ ಹೆದ್ರಿಕೆ....ಅಂವ ಸುರ್...ಸುರ್... ತಾ ಬಾಯಿ ಚಪ್ಪರಿಸಿಕಂಡ್ ಕುಡ್ತ್ತೇಳಿರೆ ಇವಳಿಗೆ ನೆಮ್ಮದಿ. ಸೆರ್ಗ್ನ ಸೊಂಟಕ್ಕೆ ಸಿಕ್ಕಿಸಿಕಂಡ್ ಹಟ್ಟಿಗೆ ಸಗಣಿ ಬಾಚಿಕೆ ಹೋಗಿಬಿಡ್ತಿತ್ತ್. ಈ ಪುಣ್ಯಾತ್ಮ ಮಾತ್ರ ಗ್ಲಾಸ್ಲಿ ಜೆಂಡ್ ಕೂಡ ಬಿಡದಂಗೆ ಕಾಫಿನ ಕುಡ್ದ್ ಪುನಃ ಗುಡಿ ಹೊದ್ದ್ ಮಲಗಿಬಿಡ್ತಿತ್. ಮತ್ತೆ ಇಂವ ಏಳ್ತಿದ್ದ್, `ಹೋಯ್...ರೊಟ್ಟಿ ಆಗುಟ್ಟು ಬನ್ನಿಯಾ ತಿಂಬಕೆ..'ತಾ ಹೆಣ್ಣ್ ಕರ್ದ ಮೇಲೆನೇ...   
ಸ್ನಾನ ಮಾಡುದು ಇರ್ಲಿ, ಹಲ್ಲು ಕೂಡ ಉಜ್ತಿತ್ಲೆ. ಬಿಸಿನೀರ್ನ ಒಂದ್ಸಲ ಬಾಯೊಳಗೆ ಹಾಕಿ ಬುಳುಬುಳುತಾ ಮುಕ್ಕಳ್ಸಿ, ಪ್ಲೇಟ್ ಹಿಡ್ಕಂಡ್ ಒಲೆ ಬುಡಲಿ ಕುದ್ದ್ಬಿಡ್ತಿತ್ ಚೋಮುಣಿ. ಯಾರು ಎಷ್ಟು ಹೇಳಿರೂ ಈ ಕೆಟ್ಟ ಬುದ್ಧಿನ ಇಂವ ಬಿಡ್ತಿತ್ಲೆ. ಮೂರು ದಿನಕ್ಕೊಂದ್ಸಲ ರಾತ್ರಿ ಮಲಿಗಿಕೆ ಮೊದ್ಲು ಸ್ನಾನ ಮಾಡ್ತಿತ್ತ್. ಅದೂ ಊಟ ಮಾಡ್ದಮೇಲೆ. `ನಿಮಿಗೆ ಊಟಕ್ಕೆ ಮೊದ್ಲು ಸ್ನಾನ ಮಾಡಿಕೆ ಎಂಥ ರೋಗ..'ತಾ ತುಂಬಾ ಸಲ ಹೆಣ್ಣ್ ಬೈದುಟ್ಟು. ಅದಕ್ಕೆ ಚೋಮುಣಿದ್ ಉತ್ತರ ಎಂಥ ಗೊತ್ತಾ? `ಊಟಕ್ಕೆ ಮೊದ್ಲು ಸ್ನಾನ ಮಾಡಿರೆ, ಹೊಕ್ಕುಳಲಿ ಇರ್ವ ಕೊಳೆ ಹೋಲೆ...ಅದೇ ಊಟ ಆದ್ಮೇಲೆ ಸ್ನಾನ ಮಾಡಿರೆ ಹೊಕ್ಕುಳ ಮುಂದೆ ಬಂದಿದ್ದದೆ. ಸ್ನಾನ ಮಾಡಿಕನ ಸುಲಭಲಿ ಕೊಳೆ ಹೋದೆ ಗೊತ್ತಾ..'ತಾ ವಿತಂಡ ವಾದ ಮಾಡ್ತಿತ್ತ್. ಚುಮ್ಮಿ ತಲೆ ತಲೆ ಚಚ್ಚಿಕಂಡ್ ರಾತ್ರಿ ಉಳ್ದ ಅನ್ನ, ಸಾರ್ನ ತೆಗ್ದ್ ಗೋಡೆಪೆಟ್ಟಿಗೆಯೊಳಗೆ ಇಟ್ಟ್ ಚಿಲ್ಕ ಸಿಕ್ಕಿಸಿ ಹೋಗಿ ಮಲಗಿಕಣ್ತಿತ್. ಇಂಥ ಈ ಜೋಡಿದ್ ಲವ್ ಮ್ಯಾರೇಜ್ತಾ ಹೇಳಿರೆ ನೀವು ನಂಬಿಕ್ಕಿಲ್ಲೆ.
ಚೇರಂಗಾಲಲಿ ಎರಡು ವರ್ಷಕ್ಕೆ ಒಂದ್ಸಲ ಹಬ್ಬ. ಒಂದು ವರ್ಷ ತಣ್ಣಿಮಾನಿಲಿ ಹಬ್ಬ ಇದ್ದರೆ, ಇನ್ನೊಂದು ವರ್ಷ ಚೇರಂಗಾಲಲಿ. ಒಂಥರ ಪರ್ಯಾಯ ಉತ್ಸವ ಇದ್ದಂಗೆ ! ಹಂಗೆ ಆ ವರ್ಷನೂ ಚೇರಂಗಾಲಲಿ ಹಬ್ಬ ಬಂದಿತ್ತ್. ಆಗಷ್ಟೇ ಪಿಯುಸಿ ಪರೀಕ್ಷೆ ಬರ್ದಿದ್ದ ಚೋಮುಣಿ, ಹಬ್ಬ ದಿನ ದೇವಸ್ಥಾನ ಬಾಣೇಲಿ ಐಸ್ಕ್ಯಾಂಡಿ ಮಾರಿಕೆ ಕುದ್ದ್ಕಂಡಿತ್ತ್. ಎರಡು ಮೂರು ಮಾಪ್ಳೆ ಹೈದಂಗಳೂ ಐಸ್ಕ್ಯಾಂಡಿ ಡಬ್ಬ ತಂದ್ ವ್ಯಾಪಾರ ಮಾಡ್ತಿದ್ದೊ... ಆದ್ರೆ ಗೂಡೆಗ ಮಾತ್ರ ಚೋಮುಣಿ ಹತ್ರನೇ ಬಂದ್ ಐಸ್ಕ್ಯಾಂಡಿ ತಕ್ಕಣ್ತಿದ್ದೊ. ಆ ಪೈಕಿ ಒಂದ್ ಗೂಡೆ ಚೋಮುಣಿಗೆ ತುಂಬಾ ಇಷ್ಟ ಆತ್. `ಲವ್ ಎಟ್ ಫಸ್ಟ್ ಸೈಟ್'ತಾ ಹೇಳಿವೆಯಲ್ಲಾ..ಹಂಗೆ. ಆ ಗೂಡೆನೂ ಹಂಗೆನೇ. ಅಲ್ಲಿ ದೇವಸ್ಥಾನಲಿ ತೆರೆ ಜೋರಾಗಿ ನಡೀತ್ತಿದ್ದರೆ, ಅವಳ ಕಣ್ಣೆಲ್ಲಾ ಚೋಮುಣಿ ಮೇಲೆನೇ. ನಾಲ್ಕೈದ್ ಸಲ ಬಂದ್ ಐಸ್ಕ್ಯಾಂಡಿ ತಕ್ಕಂಡ್ ಹೋತ್. ಐದನೇ ಸಲ ಚೋಮುಣಿ ದುಡ್ಡ್ ತಕ್ಕಣ್ತ್ಲೆ. ಇವಳೇ ಅವನ ಜೋಬೊಳಗೆ 5 ರೂಪಾಯಿ ನೋಟ್ ತುರ್ಕಿಸಿತ್ತ್. ಆ ಗೂಡೆನೇ ಚುಮ್ಮಿ. ಹಬ್ಬ ಮುಗ್ದ ಮೇಲೆ ದನ ನೋಡಿಕೆ ಹೋಕಾಕನ, ಮದುವೆ ಮನೆಗಳಲ್ಲಿ, ಕೂಸಿಗೆ ಹೆಸ್ರು ಹಾಕುವಲ್ಲಿ.. ಹಿಂಗೆ ಆಗಾಗ ಭೇಟಿ ಆಗ್ತಿದ್ದೊ. ಕೊನೆಗೆ ಇಬ್ಬರ ಮನೆಯವ್ಕೂ ವಿಷಯ ಗೊತ್ತಾತ್. ಒಂದು ದಿನ ಭಾಗಮಂಡಲ ಗೌಡಸಮಾಜಲಿ ಜೋರಾಗಿ ಮದುವೆನೂ ಆತ್.
ಮೂರು ತಿಂಗ ಎಲ್ಲಾ ಸರಿ ಇತ್ತ್. ಮತ್ತೆ ಎಂಥ ಆತೋ ಯಾರಿಗೂ ಗೊತ್ಲೆ. ಚೋಮುಣಿ ದೊಡ್ಡ ಸೋಮಾರಿ ಆಗಿಬಿಡ್ತ್. ಇದೇ ಗ್ಯಾನಲಿ ಅವನ ಅಪ್ಪ, ಅಮ್ಮ ಸತ್ತುಹೋದೊ. ಮನೆ ಜವಾಬ್ದಾರಿ ಚುಮ್ಮಿ ಹೆಗಲಿಗೆ ಬಿತ್ತ್. ಚೋಮುಣಿನ ಮೊದಲಿನಂಗೆ ಮಾಡಿಕೆ ಇವ್ಳು ತುಂಬಾ ಕಷ್ಟ ಪಟ್ಟತ್. ಇದ್ದ ಬದ್ದ ದೇವರು ದೆವ್ವಗಳಿಗೆಲ್ಲಾ ಹರಕೆ ಹೊತ್ತ್ಕಂಡತ್. ತೋಟದ ಮೂಲೆಲಿರ್ವ ಕರಿಚೌಂಡಿಗೆ ಹಂದಿ ಕೊಯ್ಸಿನೆತಾ ಹೇಳಿಕಂಡತ್...ಊಹುಂ, ಚೋಮುಣಿ ಬದಲಾತ್ಲೆ. ಹಂಗೆನೇ ಎರಡು ವರ್ಷ ಕಳ್ತ್.
ಒಂದ್ ದಿನ ಬೆಳಗ್ಗೆ ಚುಮ್ಮಿ ಚೋಮುಣಿಗೆ ಕಾಫಿ ತಂದ್ ಕೊಡಿಕಾಕನ ವಾಂತಿ ಮಾಡಿಕಂಡ್ಬಿಡ್ತ್. ಅಲ್ಲೇ ತಲೆ ತಿರುಗಿ ಬಿದ್ದ್ತ್. ಗುಡಿ ಹೊದ್ದ್ ಮಲಗಿಕಂಡಿದ್ದ ಚೋಮುಣಿಗೆ ಹೆದ್ರಿಕೇಲಿ ಸ್ವಲ್ಪ ಹೊತ್ತು ಏನು ಮಾಡೊಕೂತ ಗೊತ್ತಾತ್ಲೆ. ಅಡುಗೆ ಕೋಂಬರೆಗೆ ಹೋಗಿ ಸ್ವಲ್ಪ ನೀರ್ ತಂದ್ ಚುಮ್ಮಿದ್ ತಲೆಗೆ ಹಾಕಿ ತಟ್ಟಿತ್. ಅವ್ಳಿಗೆ ಎಚ್ಚರ ಆಗಿ ಕುದ್ದ ಕೂಡ್ಲೆ ಓಡಿ ಹೋಗಿ ಅಣ್ಣಿನ ಜೀಪ್ ತಂದ್ ಭಾಗಮಂಡಲ ಆಸ್ಪತ್ರೆಗೆ ಕರ್ಕಂಡ್ ಹೋಗಿ ಸೇರ್ಸಿತ್. ಚುಮ್ಮಿನ ಪರೀಕ್ಷೆ ಮಾಡ್ದ ಡಾಕ್ಟರ್ ಹೊರಗೆ ಬಂದ್. `ಕಂಗ್ರಾಟ್ಸ್ ಚೋಮುಣಿ...ನೀವು ಅಪ್ಪ ಆಗ್ತಿದ್ದೀರಿ.. ಬೇಗ ಸ್ವೀಟ್ ಕೊಡಿ'ತಾ ಖುಷಿ ವಿಷಯನ ಹೇಳಿ ಮತ್ತೆ ಒಳಗೆ ಹೋತ್.
ಈಗ ಎಲ್ಲಾ ಉಲ್ಟಾ...ಚೋಮುಣಿ ಜಾಗಲಿ ಚುಮ್ಮಿ ! ಇವನೇ ಬೇಗ ಎದ್ದ್ ಕಾಫಿ ಮಾಡಿಕಂಡ್ ಹೋಗಿ     ಮಲಗಿದಲ್ಲಿಯೇ ಅವಳಿಗೆ ಕುಡಿಸಿದೆ. ಹಟ್ಟಿಗೆ ಹೋಗಿ ಸಗಣಿನೂ ಬಾಚಿದೆ. ಇದನ್ನೆಲ್ಲಾ ನೋಡ್ದ ಚುಮ್ಮಿ ಹೊಟ್ಟೆ ಮೇಲೆ ಕೈಯಾಡಿಸಿಕಂಡ್ `ಥ್ಯಾಂಕ್ಸ್ ಪುಟ್ಟ'ತಾ ಹೇಳಿ ಕಣ್ಣ್ಮುಚ್ಚಿಕಂಡತ್. ಅಲ್ಲಿ ಖುಷಿಯ ಕಣ್ಣೀರು !

- ಸುನಿಲ್ ಪೊನ್ನೇಟಿ
arebhase@gmail.com

Friday 17 August 2012

ಥ್ಯಾಂಕ್ಯೂ ದಿವ್ಯಾ...


ತುಂಬಾ ಹೆಮ್ಮೆ ಅನ್ನಿಸ್ತಾ ಉಟ್ಟು. ನಮ್ಮ ಭಾಷೆ ಗೊತ್ತಿಲ್ಲದವು  ಕೂಡ 'ಅರೆಭಾಷೆ ಬ್ಲಾಗ್' ಓದ್ತೊಳೊ. ಇಲ್ಲಿರ್ವ ಲೇಖನಗಳ್ನ ಓದಿ ಖುಷಿ ಪಡ್ತೊಳೊ...ಥ್ಯಾಂಕ್ಯೂ ದಿವ್ಯಾ...
arebhase@gmail.com      ಥ್ಯಾಂಕ್ಯೂ ದಿವ್ಯಾ

Sunday 12 August 2012

ಚೋಮುಣಿಗೆ ದೇವರು ಬಂದದೆ..!


ಊರಲ್ಲೆಲ್ಲಾ ಒಂದೇ ಸುದ್ದಿ...`ಚೋಮುಣಿಗೆ ಮೈಮೇಲೆ ದೇವರು ಬಂದದೆ ಗಡ..!' ಚೋಮುಣಿ ಬೆಳಗ್ಗೆ ಐದೂವರೆಗೆ ಎದ್ದದೆ. ಎದ್ದ ಕೂಡ್ಲೇ ಎಂಥೆಲ್ಲಾ ಮಾಡೋಕೋ ಅದನ್ನೆಲ್ಲಾ ಅಂವ ಹೊಳೆಕರೆಗೆ ಹೋಗಿ ಮಾಡ್ದೆ. ಅಲ್ಲಿಯೇ ಸ್ನಾನ ಮಾಡಿ, ಬಿಳಿಪಂಚೆ ಉಟ್ಟ್ಕಂಡ್ ಬಂದ್, ಮನೆ ಹತ್ರ ಇರ್ವ ದೇವ್ರ ಕಲ್ಲು ಎದ್ರು ಕೈಮುಗ್ದ್ ನಿಂತ್ಕಣ್ತ್ತೇಳಿರೆ....ಕಾಲ್ಂದ ತಲೆ ವರೆಗೆ ಗಡ ಗಡತಾ ನಡ್ಗಿಕೆ ಶುರುವಾದೆ. ಹಂಗೆ ನಡ್ಗ್ತಾ... ನಡ್ಗ್ತಾ...ಕಾಲೆತ್ತಿ ಹೆಜ್ಜೆನೂ ಹಾಕಿದೆ. ಮತ್ತೆ ಬಾಯಿಲಿ ಉಸ್...ಉಸ್...ತಾ ಶಬ್ದ ಮಾಡ್ತಾ ಅರ್ಥ ಆಗದ ಭಾಷೇಲಿ ಎಂತೆಂಥದ್ದೋ ಗೊಣಗಿದೆ. ಅವನ ಅವ್ವ, ಹೆಣ್ಣ, ಮಕ್ಕ ದೂರಲಿ ನಿಂತ್ಕಂಡ್ ಕೈಮುಗ್ದವೆ. ಈಚೆಗೆ ಒಂದೆರಡು ದಿನಂದ ಒಂದಿಬ್ಬರು ಊರವೂ ಬರ್ತೊಳೊ. 
ಹಂಗೆತೇಳಿ ಚೋಮುಣಿಗೆ ಮೈಮೇಲೆ ದೇವ್ರು ಬಾಕೆ ಶುರುವಾಗಿ ತುಂಬಾ ದಿನ ಏನೂ ಆತ್ಲೆ. ನಾಲ್ಕು ತಿಂಗಳ ಹಿಂದೆ ಊರು ಹಬ್ಬಲಿ ಮೇದರ ಚಂಗನ ಚೆಂಡೆ ಶಬ್ದ ಕೇಳಿಕಾಕನ ಇವನ ಮೈ ಎಲ್ಲಾ ನಡ್ಗಿತ್ತ್. ಭಟ್ಟ ಬಂದ್ ತೀರ್ಥ ಹಾಕಿದ ಮೇಲೆನೇ ಸರಿಯಾದ್. ಮತ್ತೆ ಮೂಲೆಗದ್ದೆ ಬಸಪ್ಪನ ಮನೆ ಹರಿಸೇವೆಲಿ ಜಾಗಟೆ ಬಾರಿಸಿಕಂಡ್ ಶಂಖ ಊದಿಕಾಕನನೂ, ಚೋಮುಣಿದ್ ಕೈಕಾಲೆಲ್ಲಾ ನಡುಗಿ ಒಂದೆರಡು ಸಲ ಹಾರಿ ಹಾರಿ ಬಿದ್ದಿತ್ತ್. ದಾಸ ಬಂದ್ ಧೂಪದ ಹೊಗೆ ಇವನ ಮುಂದೆ ಹಿಡ್ದಾದ ಮೇಲೆ ಇಂವ ಸರಿಯಾಗಿದ್ದದ್ದ್. 
ಚೋಮುಣಿ ದೊಡ್ಡ ಕುಡುಕ. ಎಲ್ಲವೂ ಬೆಳಗ್ಗೆ ಮುಖ ತೊಳ್ದು ಕಾಫಿ ಕುಡ್ದರೆ, ಇಂವ ಹೆಂಡ ಕುಡಿತಿತ್ತ್. ಎದ್ದ ಕೂಡ್ಲೇ ಒಂದು ಸಿಕ್ಸ್ಟಿ ತಕ್ಕಣದಿದ್ದರೆ ಇವನ ಕೈಕಾಲೆಲ್ಲಾ ಗಡಗಡತಾ ನಡಗ್ತಿತ್ತ್. ಸಾಯಂಕಾಲ ಸೂರ್ಯ ಮುಳುಗುವ ಹೊತ್ತಿಗೆಲ್ಲಾ ಚೋಮುಣಿ ಮನೇಲಿ ಇತ್ಲೆತೇಳಿರೆ ಅಂವ ಎಲ್ಲಾರೂ ಚರಂಡೀಲಿ ಬಿದ್ದ್ಹೋಗಿಟ್ಟುತನೇ ಅರ್ಥ. ಕೊನೆಗೆ ಹೆಣ್ಣ್ ಮತ್ತೆ ಮಕ್ಕ ಹೋಗಿ ಹುಡಿಕ್ಯಾಡಿ ಮನೆಗೆ ಎಳ್ಕಂಡ್ ಬರೋಕು. ಮೂರುಕಾಸಿನ ಸಂಪಾದನೆ ಸನಾ ಇತ್ಲೆ. ಇದೇ ಕೊರುಗುಲಿ ಚೋಮುಣಿ ಅಪ್ಪ ಕೈಲಾಸ ಸೇರಿಕಂಡಿತ್ತ್. ಅವ್ವ, ಹೆಣ್ಣ್, ಮಕ್ಕಳಿಗೆ ಇವನ ಮೇಲೆ ಒಂದು ಚೂರು ಕೂಡ ಗೌರವ ಇತ್ಲೆ. ಒಂದು ದಿನ ಹಿಂಗೆ ಚೋಮುಣಿ ಟೈಟಾಗಿ ಮನೆಗೆ ಬಂದಿರ್ಕಾಕನ ಹೆಣ್ಣ್ ಜೊತೆ ಜೋರಾಗಿ ಜಗಳ ಆತ್. ಅವ್ಳು `ನಾನೀಗ್ಲೇ ಮಕ್ಕಳ ಜೊತೆ ಹೊಳೆಗೆ ಹಾರಿ ಸತ್ತುಬಿಟ್ಟನೆ'ತಾ ಹೊರಟು ನಿಂತಾಕನ ಚೋಮುಣಿಗೆ `ಜ್ಞಾನೋದಯ' ಆದಂಗೆ ಆತ್. `ನಾಳೆಂದ ನಿನ್ನಾಣೆಗೂ ಬಾಟ್ಲಿ ಮುಟ್ಟುಲೆ'ತಾ ಹೆಣ್ಣ್ನ ತಲೆ ಮೇಲೆ ಕೈ ಇಟ್ಟ್ ಶಪಥ ಮಾಡ್ತ್. ಅದರಂಗೆನೇ ನಡ್ಕಣ್ತ್ ಕೂಡ...!
ಚೋಮುಣಿ ಆ ಶಪಥ ಮಾಡಿತ್ತಲ್ಲಾ... ಅದರ ಮಾರನೇ ದಿನಂದನೇ ಅಂವ ಮನೆ ಹತ್ರ ಇರ್ವ ಹೊಳೆಗೆ ಹೋಗಿ ಸ್ನಾನ ಮಾಡಿಕೆ ಶುರು ಮಾಡ್ದ್. ಆ ದಿನಂದನೇ ಅವಂಗೆ ದೇವರು ಬರ್ತಿರ್ದು ! ದೇವರು ಬಂದಿರ್ಕಾಕನ ಬರೀ ವಟ ವಟತಾ ಎಂಥೆಂತದ್ದೋ ಗೊಣಗ್ತಿದ್ದ ಚೋಮುಣಿ, ಮನೆ ಹತ್ರ ಜನ ಸೇರ್ತಿದ್ದಂಗೆ ಎಲ್ಲವ್ಕೂ ಅರ್ಥ ಆಗುವ ಸ್ಪಷ್ಟ ಕನ್ನಡಲೇ ಮಾತಾಡಿಕೆ ಶುರುಮಾಡ್ತ್. ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರನೂ ಕೊಡ್ತಿತ್ತ್. ಅದೇ ಟೈಮ್ಲಿ ಕೋಳಿಕಾಡು ಗಂಗುನ ನಾಲ್ಕು ಲೀಟರ್ ಹಾಲು ಕೊಡ್ವ ಹಸು ಕಾಣೆ ಆಗಿತ್ತ್. ಎಲ್ಲಿ ಹುಡುಕಿರೂ ಸಿಕ್ಕಿತ್ಲೆ. ಕೊನೆಗೆ ಗಂಗು ಒಂದು ದಿನ ಬೆಳಗ್ಗೆ ಚೋಮುಣಿ ಹತ್ರ ಬಾತ್. ಅವನ ಮೈಮೇಲೆ ದೇವ್ರು ಬರ್ತಿದ್ದಂಗೆ, ಗಂಗು ಎರಡೂ ಕೈ ಜೋಡ್ಸಿ...`ಸಾಮಿ, ನನ್ನ ಪಟೇಯ ಹಸು ವಾರಂದ ಕಾಣ್ತಿಲ್ಲೆ...ಒಳ್ಳೆ ಹಸು ಸಾಮಿ. ದಿನಕ್ಕೆ ನಾಲ್ಕು ಸೇರು ಹಾಲು ಕೊಡ್ತಿತ್ತ್. ಎಲ್ಲಿ ಉಟ್ಟುತಾ ಹೇಳಿರೆ ನಿಂಗೆ ನೂರಾಒಂದು ರೂಪಾಯಿ ಕಾಣಿಕೆ ಹಾಕಿನೆ..'ತಾ ಹೇಳಿಕಂಡತ್. ಕುಣ್ದಾಡಿಕಂಡೆ ಸ್ವಲ್ಪ ಹೊತ್ತು ಕಣ್ಣ್ಮುಚ್ಚಿಕಂಡ ಚೋಮುಣಿ, `ಹೆದರಬೇಡ ಶಿಶು...ನಿನ್ನ ಹಸು ಎಲ್ಲಿದೆ ಅಂತ ನನಗೆ ಗೊತ್ತು. ಅದಾಗಿಯೇ ನಿನ್ನ ಮನೆಗೆ ಬರುತ್ತದೆ...ನೀನು ನಿಶ್ಚಿಂತೆಯಿಂದ ಮನೆಗೆ ಹೋಗು...'ತಾ ಹೇಳ್ತ್. ಆಶ್ಚರ್ಯತೇಳಿರೆ, ಗಂಗು ಮನೆಗೆ ಹೋಗಿ ತಲುಪಿಕಾಕನ ಅವನ ಪಟೇಯ ಹಸು ಕೊಟ್ಟಿಗೆಲಿ ನಿಂತ್ಕಂಡ್ ತಲೆ ಅಲ್ಲಾಡಿಸ್ತಿತ್ತ್. ಹೇಳಿಕಂಡಿದ್ದಂಗೆ ಗಂಗು, ಚೋಮುಣಿ ಮನೆ ಮುಂದೆ ದೇವ್ರ ಕಲ್ಲು ಹತ್ರ ಇದ್ದ ಭಂಡಾರ ಡಬ್ಬಿಗೆ ನೂರಾಒಂದು ರೂಪಾಯಿ ಕಾಣಿಕೆನೂ ಹಾಕಿ, ಕೈ ಮುಗ್ದ್ ಬಾತ್.
ಇಂಥ ವಿಷಯ ಎಲ್ಲಾ ಊರೊಳಗೆ ಬೇಗ ಬೇಗ ಹರಡಿ ಬಿಟ್ಟದೆ. ಹಂಗಾಗಿ ದಿನ ಕಳ್ದಂಗೆ ಸಮಸ್ಯೆ ಹೇಳಿಕಂಡ್ ಚೋಮುಣಿ ಹತ್ರ ಬರ್ವವರ ಸಂಖ್ಯೆನೂ ಜಾಸ್ತಿ ಆತ್. ಒಂದೇ ವರ್ಷಲಿ, ಮನೆ ಮುಂದೆ ಇದ್ದ ಕಲ್ಲು ಸುತ್ತ ದೇವಸ್ಥಾನನೂ ಎದ್ದ್ನಿಂತ್ಕಂಡತ್ ! ಈಗೀಗ ಚೋಮುಣಿ ಎಷ್ಟು ಬ್ಯುಸಿ ಇದ್ದದೇತಾ ಹೇಳಿರೆ, ಇವನ ಹತ್ರ ಬರುವವು ಮೂರು ದಿನದ ಹಿಂದೆನೇ ಬುಕ್ ಮಾಡಿ ಅಪಾಯಿಂಟ್ಮೆಂಟ್ ತಕ್ಕಣೊಕು...ಕೈಲಿ ಸ್ವಲ್ಪ ದುಡ್ಡು ಓಡ್ತಿದ್ದಂಗೆ ಚೋಮುಣಿ ಮತ್ತೆ ಕುಡಿತ ಶುರು ಮಾಡ್ತ್. ಆದ್ರೆ ಮೊದಲಿನಂಗೆ ಚರಂಡಿಗೆ ಬೀಳುವಂಗೆ ಕುಡೀತಿತ್ಲೆ. ಬಾರ್ಗೆ ಹೋಗಿ ಫ್ರೆಂಡ್ಸ್ ಜೊತೆ ನಾಲ್ಕ್ ಪೆಗ್ಗು ಹಾಕಿ ಹಂಗೇ ಕಾರ್ ಹತ್ತಿ ಮನೆಗೆ ವಾಪಸ್ ಬಂದ್ಬಿಟ್ಟದೆ.. ಮತ್ತೆ ಬೆಳಗ್ಗೆ ಮೈ ಮೇಲೆ ದೇವರು ಬರ್ಸಿಕಣಿಕೆ ರೆಡಿ ಆಕೊಲಾ....!

- ಸುನಿಲ್ ಪೊನ್ನೇಟಿ
arebhase@gmail.com

Friday 10 August 2012

ಸ್ಫೂರ್ತಿಯ ಸೆಲೆ


        ಅಂದ್ ಮಡಿಕೇರಿಲಿ ಜನಜಂಗುಳಿ ಜಾಸ್ತಿ ಇತ್ತ್. ಶುಕ್ರವಾರ ಸಂತೆ ಆದ್ದರಿಂದ ಎಲ್ಲಾ ಬಸ್ಸ್ಗ ತುಂಬಿ ತುಳುಕುತಾ ಇದ್ದೊ. ಸಾಯಂಕಾಲ ಹೊತ್ತು... ಭಾಗಮಂಡಲ ರಾಮಕ್ಕೆ ಸೀಟ್ ಹಿಡಿಯಕ್ಕೆ ಸ್ಪರ್ಧೆನೇ  ಏರ್ಪಟ್ಟಂಗೆ ಕಾಂಬತಿತ್. ಅಂತೂ ಇಂತೂ ನಂಗೆ ಒಂದು ಸೀಟ್ ಸಿಕ್ಕಿತ್ತ್. ನನ್ನ ಪಕ್ಕದ ಸೀಟ್ಗೆ ಒಂದು ಗೂಡೆ ಬಂದ್ ಕುದ್ದತ್ತ್. ಪೊರ್ಲ್ನ ಗೂಡೆತಾ ಹೇಳಕ್. ಬೇಬಿ ಪಿಂಕ್ ಕಲರ್ ಚೂಡಿದಾರ್ಲಿ ಬಿಳಿ ಹೂಗಳ ಚಿತ್ತಾರ...
ಬಸ್ಸ್ ಮಡಿಕೇರಿ ಬಸ್ಸ್ಸ್ಟಾಂಡ್ಂದ ಟೋಲ್ಗೇಟ್ಗೆ ನಿಧಾನಕ್ಕೆ ಹೊರ್ಟತ್. ನಾನ್ ಸಹ ಅಷ್ಟು ಜನರ ಮಧ್ಯೆ ಸೀಟ್ ಸಿಕ್ಕಿದ ಖುಷೀಲಿ ಕಿಟಕಿಂದ ಹೊರಗೆ ನೋಡಿಕೆ ಶುರು ಮಾಡ್ಡೆ. ನಂಗೆ ಹಂಗೆ ಹೊರಗೆ ನೋಡಿಕಂಡ್ ಹೋದ್ತೇಳ್ರೆ ಭಾರೀ ಖುಷಿ. ಭಾಗಮಂಡಲ ತಲುಪುವರೆಗೂ ನಾನ್ ಯಾರ ಜೊತೆನೂ ಮಾತಡ್ತಿತ್ಲೆ. ಆದರೆ ನನ್ನ ಹತ್ರ ಕುದ್ದಿದ್ದ ಗೂಡೆ ಸುಮ್ಮನೆ ಕೂರಿಕೆ ಬುಟ್ಟತ್ಲೆ. ಅವಳಾಗಿಯೇ ಹಾಯ್ತಾ ಹೇಳ್ತ್. ಸರಿ ನಾನ್ ಸಹ ಹಾಯ್ತಾ ಹೇಳಿ ಸುಮ್ಮನೆ ಕುದ್ದಕಣಿಕೆ ನೋಡ್ದೆ. ಅವ್ಳು ಬುಡುವಂಗೆ ಕಂಡತ್ಲೆ. ಮಾತ್ ಮುಂದುವರಸುವಂಗೆ, ಎಲ್ಲಿಗೆತಾ ಕೇಳ್ತ್. ಹಿಂಗೆ ಶುರು ಆದ ಮಾತ್ ನಿಲ್ಲುವ ಯಾವ ಲಕ್ಷಣನೂ ಇತ್ಲೆ. ಅವಳ ಮುದ್ದು ಮುಖ, ಸ್ನಿಗ್ಧ ನಗು ನನ್ನ ಮನ ಸೆಳಿತ ಇತ್ತ್. ಪಟಪಟತಾ ಹರಳು ಹುರ್ದಂಗೆ ಮಾತಡ್ತ ಇತ್ತ್. ಇನ್ನೂ ಪಿಯುಸಿ ಇರ್ದುತ ಮನಸ್ಲಿ ಗ್ಯಾನ ಮಾಡಿಕಂಡೆ.
ಅವಳ ಹೆಸ್ರ್ ಗ್ರೀಷ್ಮಾತಾ ಹೇಳ್ತ್. ಅಪ್ಪ ಅಮ್ಮಂಗೆ ಒಬ್ಬಳೇ ಮಗ್ಳು. ಅಪ್ಪ ತೀರಿಕಂಡ್ ಆರ್ ತಿಂಗ ಸಹ ಆಗಿತ್ಲೆ ಗಡ. ನಂಗೆ ಪಾಪತಾ ಅನಿಸಿಕೆ ಶುರುವಾತ್. ಈಗ ತಾನೆ ಎಸ್ಎಸ್ಎಲ್ಸಿ ಪಾಸ್ ಆಗಿತ್ತ್. ಅಮ್ಮ ಮತ್ತೆ ಅವಳ್ನ ಬುಟ್ರೆ ಮನೇಲಿ ಯಾರೂ ಇಲ್ಲೆ. ಅಮ್ಮ ಕೆಲ್ಸಕ್ಕೆ ಹೊದುಲೆ. ಹಂಗಾಗಿ ಗ್ರೀಷ್ಮ ಬ್ಯೂಟಿಷಿಯನ್  ಕೋರ್ಸ್ ಮಾಡ್ತ ಉಟ್ಟು. ಕೋರ್ಸ ಮುಗ್ದಂಗೆ  ಭಾಗಮಂಡಲಲಿ ಬ್ಯೂಟಿಪಾರ್ಲರ್ ಶುರು ಮಡೋಕುತಾ ಅವಳ ಯೋಚನೆ. ಆಮೇಲೆ ಅಮ್ಮನ ಲಾಯ್ಕ ನೋಡಿಕಣೋಕುತಾ ಹೇಳಿಕಣ್ತ್. ಅಷ್ಟು ಹೊತ್ತು ಸುಮ್ಮನೆ ಕೇಳಿಕಂಡ್ ಕುದ್ದಿದ್ದ ನಾನ್ ಒಮ್ಮೆ ಅವಳ ಮುಖನ ಸೂಕ್ಷ್ಮವಾಗಿ ಗಮನಿಸಿದೆ. ಅವಳ ಕಣ್ಣುಗಳಲಿ ನೋವು, ಅಸಹಾಯಕತೆ ಯಾವುದೂ ಕಾಣ್ತ್ತಿತ್ಲೆ. ಅಲ್ಲಿ ಕಾಂಬತಿದ್ದದ್ ಗೆಲ್ಲುವ ಆತ್ಮವಿಶ್ವಾಸ ಮಾತ್ರ. ಎಂತಹ ಕಷ್ಟಕ್ಕೂ ಕುಗ್ಗದೆ ಮುನ್ನೆಡೆಯುವ ಸ್ಫೂರ್ತಿಯ ಸೆಲೆ !
ಗ್ರೀಷ್ಮಾನ ಒಂದೊಂದು ಮಾತುಗ ಮನಸ್ನ ಆಳಕ್ಕೆ ಇಳತಿರ್ಕಾಕನನೇ ಅದೇ ನಗು ಮುಖಲಿ ಬಾಯ್ ಹೇಳಿ ಕಾವೇರಿ ಕಾಲೇಜು ಸ್ಟಾಪ್ಲಿ ಇಳ್ದು ಹೋತ್. ದಿನಾ ಎಲ್ಲಾ ಇದ್ದ್ ಕೊರ್ಗಿಕಂಡ್ ಇರ್ವ ನೂರಾರ್ ಜನರ ನಡುವೆ ಇವ್ಳು ಮಾತ್ರ ವಿಶೇಷವಾಗಿ ಕಂಡತ್. ಅದೇ ಉತ್ಸಾಹಲಿ ಮನೆಕಡೆ ಹೆಜ್ಜೆ ಹಾಕಿದೆ.

- ಸ್ಪಂದನ ಗೌರಿ   

--------------------

ನೀವೂ ಬರೆಯನಿ...
ಬರ್ದದನ್ನ ಇಮೇಲ್ ಮಾಡಿ,
ನಮ್ಮ ಇಮೇಲ್ ಐಡಿ.. arebhase@gmail.com

Thursday 9 August 2012

ಫೇಸ್ ಬುಕ್ ಸಂಬಂಧ !


ಚೆಂದದ ಪ್ಲಾಸ್ಟಿಕ್ ಟ್ರೇ. ಅದ್ರೊಳಗೆ ತಣ್ಣನೆ ಕೋಕಾಕೋಲಾ ತುಂಬಿದ ಗ್ಲಾಸ್ಗ. ಬಹುಶಃ ಆಗಷ್ಟೇ ಕೋಕಾಕೋಲನ ಫ್ರಿಡ್ಜ್ಂದ ತೆಗ್ದ್ ಗ್ಲಾಸ್ಗೆ ಹಾಕಿದ್ದೊ ಕಂಡದೆ... ಆ ಕೋಟಕ್ಕೆ ನೀರಿನ ಪುಟ್ಟ ಹನಿಗ ಗ್ಲಾಸ್ಗೆ ಅಂಟಿಕೊಂಡಿದ್ದೊ. ಹಂಗೆ ಕೋಟ ಕೋಟ ಕೋಕಾಕೋಲ ಹಿಡ್ದದಕ್ಕೋ...ಇಲ್ಲ ಎದುರಿಗೆ ಹೈದ ಕುದ್ದಿದ್ದಕ್ಕೋ...ಅನನ್ಯಳ ಕೈ ನಡುಗ್ತಿತ್ತ್. ಅದ್ರ ಪರಿಣಾಮ ಅವ್ಳು ಹಿಡ್ದ ಟ್ರೇ ಮೇಲಾಗಿ ಆ ಟ್ರೇಲಿದ್ದ ಗ್ಲಾಸ್ಗ ಒಂದಕ್ಕೊಂದು ತಾಗಿ ಟಣ್ ಟಣ್ ಶಬ್ದ ಮಾಡ್ತಿದ್ದೊ. ಗೂಡೆಕ್ಕಿಂತ ಹೆಚ್ಚು ನಾಚಿಕೆಲಿ ತಲೆತಗ್ಗಿಸಿ  ಕುದ್ದ್ಕಂಡಿತ್ ಚರಣ್ !
ಬ್ಯಾಂಕ್ಲಿ ಕೆಲ್ಸ ಮಾಡ್ತಿದ್ದ ಚರಣ್ಗೆ ಮದುವೆ ಮಾಡಿಕೆ ಗೂಡೆ ಹುಡುಕುತ್ತಿದ್ದೊ. ಇಂವ ಇದ್ದದ್ ಮೈಸೂರ್ಲಿ. ಹಂಗಾಗಿ ಅಲ್ಲೇ ಇರ್ವ ಗೂಡೆ ಸಿಕ್ಕಿರೆ ಒಳ್ಳೆದುತಾ ಚರಣ್ ಮನೆಯವ್ರ ಅಭಿಪ್ರಾಯ. ಅದ್ಕೆ ಸರಿಯಾಗಿ ಬ್ರೋಕರ್ ಬಸಪ್ಪ ಒಂದು ಸಂಬಂಧ ಹುಡುಕಿ ತಂದಿತ್ತ್. ಗೂಡೆನ ಕಡೆಯವು ಮೈಸೂರ್ಲೇ ಸೆಟ್ಲ್ ಆಗಿದ್ದೊ. ಅವ್ಳ ಹೆಸ್ರು ಅನನ್ಯ. ಮಹಾರಾಣಿ ಕಾಲೇಜ್ಲಿ ಕಾಮರ್ಸ್ ಲೆಕ್ಚರರ್. ಫೋಟೋ ನೋಡಿ ಚರಣ್ಗೆ ಗೂಡೆ ಹಿಡ್ಸಿತ್. ಒಂದು ಭಾನುವಾರ ಬೆಳಗ್ಗೆ ಬಸಪ್ಪ, ಚರಣ್ ಮತ್ತೆ ಚರಣ್ದ ಭಾವ ಗೂಡೆ ನೋಡಿಕೆ ಹೋಗಿದ್ದೊ. ಆಗನೇ ಅನನ್ಯ ಹಿಂಗೆ ನಡುಗುವ ಕೈಲಿ ಕೋಕಾಕೋಲಾ ಹಿಡ್ಕಂಡ್ ಬಂದದ್.
`ಚರಣ್ ಗೂಡೆನ ಸರಿಯಾಗಿ ನೋಡಿಕ...ಮತ್ತೆ ನನ್ನ ಅದ್ ಇದ್ತಾ ಕೇಳ್ಬೇಡಾ...' ತಲೆ ತಗ್ಗಿಸಿ ಕೂತಿದ್ದ ಚರಣ್ ಕಿವಿ ಹತ್ರ ಬಂದ್ ಬಸಪ್ಪ ಹೇಳ್ದೊ. ಕೋಕಾಕೋಲಾ ಕೊಟ್ಟಾದ್ಮೆಲೆ ಅನನ್ಯ ಹೋಗಿ ಅವಳ ಅಮ್ಮನ ಜೊತೆ ಕುದ್ದ್ಕಂಡಿತ್ತ್. ಚರಣ್ನ ಭಾವ ಮತ್ತೆ ಬಸಪ್ಪ, ಅನನ್ಯಳ ಅಪ್ಪ, ಅಮ್ಮನ ಜೊತೆ ಲೋಕರೂಢಿ ಮಾತಾಡ್ತಿದ್ದೊ. ಚರಣ್ ಒಮ್ಮೆ ತಲೆಎತ್ತಿ ಅನನ್ಯಳನ್ನ ನೋಡ್ತ್. ಗೂಡೆ ನೋಡಿಕೆ ಪರ್ವಾಗಿಲ್ಲೆ. ಒಳ್ಳೇ ಕಲರ್ ಉಟ್ಟು. ಯಾಕೋ ಸೀರೆ ಸರಿಯಾಗಿ ಉಡಿಕೆ ಬರ್ವಂಗೆ ಕಾಣ್ತಿಲ್ಲೆ. ಮೇಕಪ್ ಸ್ವಲ್ಪ ಜಾಸ್ತಿ ಆದಂಗೆ ಉಟ್ಟು. ಚಿನ್ನ ಉಟ್ಟುತಾ ತೋರಿಸಿಕಂಬಕೆ ಕುತ್ತಿಗೆ, ಕಿವಿ, ಕೈಲಿ ಅಗತ್ಯಕ್ಕಿಂತ ಜಾಸ್ತಿ ಕೋಸಿಕಂಡಂಗೆ ಕಾಣ್ತಿತ್ತ್...ಅವ್ಳೂ ಒಂದ್ಸಲ ಚರಣ್ನ ಓರೆಕಣ್ಲಿ ನೋಡಿ, ಅಮ್ಮನ ಸೆರಗ್ಲಿ ಆಟಾಡಿಕಂಡ್ ಕುದ್ದತ್.
`ಸರಿ ನಾವು ಮನೆಗೆ ಹೋಗಿ ಒಂದ್ಸಲ ಎಲ್ಲವೂ ಸೇರಿ ಮಾತಾಡಿ ಅಭಿಪ್ರಾಯ ತಿಳ್ಸಿವೆ...'ತಾ ಚರಣ್ನ ಭಾವ ಹೇಳಿದ್ಮೇಲೆ ಎಲ್ಲವೂ ಅನನ್ಯಳ ಮನೇಂದ ಹೊರಟೋ...ದಾರಿಲಿ ಹೋಗ್ತಾ ಚರಣ್ನ ಅವನ ಭಾವ ಕೇಳ್ತ್, `ಹೆಂಗೆ ಗೂಡೆ ? ಹಿಡ್ಸಿತಾ?' ಚರಣ್ ಸ್ವಲ್ಪ ದೂರ ಏನೂ ಮಾತಾಡ್ತ್ಲೆ. ಮತ್ತೆ ಮೆಲ್ಲೆ ಬಾಯಿ ಬಿಟ್ಟತ್...
`ಹುಂ ನಂಗೆ ಗೂಡೆ ಹಿಡ್ಸಿತ್...ಆದ್ರೆ ಅನನ್ಯ ಅಲ್ಲ...'
`ಅನನ್ಯ ಅಲ್ಲನಾ? ಮತ್ತೆ ಯಾರ್ ?'
`ಸುಕನ್ಯಾ...'
`ಸುಕನ್ಯಾ...? ಅದ್ಯಾರ್ ?'
`ಅನನ್ಯನ ತಂಗೆ...'
`ಓ ದೇವರೆ...ಅವಳ್ನ ನೀ ಎಲ್ಲಿ ನೋಡ್ದ್ ಮಾರಾಯ?'
`ಸುಕನ್ಯಾ ಫೇಸ್ಬುಕ್ಲಿ ನನ್ನ ಪ್ರೆಂಡ್...ಆದ್ರೆ ಅವ್ಳು ಅನನ್ಯಳಾ ತಂಗೆತಾ ಗೊತ್ತಿತ್ಲೆ...' 
`ಮತ್ತೆ ಇಂದ್ ಹೆಂಗೆ ಗೊತ್ತಾತ್?'
`ಅಲ್ಲಿ ಅವ್ರ ಮನೆ ಗೋಡೆಲಿ ಫೋಟೋ ಇತ್ತಲ್ಲ...ಅನನ್ಯ ಮತ್ತೆ ಸುಕನ್ಯಾ ಒಟ್ಟಿಗೆ ಇದ್ದದ್. ಅದ್ನ ನೋಡಿಕಾಕನ ಗೊತ್ತಾತ್...'
`ಅಲ್ಲರಾ...ನಿನ್ನ ನಾ ಎಂಥದ್ದೊ ತಿಳ್ಕಂಡಿದ್ದೆ...ಅಕ್ಕನ ನೋಡಿಕೆ ಹೋಗಿ ತಂಗೆಗೆ ಕಾಳ್ ಹಾಕಿಬಿಟ್ಟೆ ಅಲಾ...'

ಇದೆಲ್ಲಾ ಕಳ್ದ್ ಈಗ ಎರಡು ವರ್ಷ. ಇಂದ್ ಚರಣ್ ಮತ್ತೆ ಸುಕನ್ಯಾ ಮದುವೆ. ಅನನ್ಯ ಕೈಲಿ ಒಂದು ಕೂಸಿತ್ತ್. ಪಕ್ಕಲಿ ಅವಳ ಗಂಡ. ಅಂವ ಚರಣ್ ತಮ್ಮ ಕಿರಣ್ ! ಇದೂ ಫೇಸ್ಬುಕ್ ಸಂಬಂಧ !

- ಸುನಿಲ್ ಪೊನ್ನೇಟಿ 
arebhase@gmail.com

Wednesday 8 August 2012

ಮೇಘ ಸ್ಫೋಟ !


ಅದೊಂದು ದಿನ ಸಾಯಂಕಾಲದ ಹೊತ್ತು. ಆಗಷ್ಟೇ ಮಳೆ ಬಂದ್ ನಿಂತಿತ್ತ್... ಆದ್ರೆ ಮರಗಳ ಎಲೆಗಳಿಂದ ಕೆಳಗೆ ಬಿಳ್ತಿದ್ದ ಹನಿಗ ಪುರುಷೊತ್ತ್ ತಕ್ಕಂಡಿತ್ಲೆ. ಆ ನಿಶ್ಯಬ್ದಲಿ `ಟಪ್... ಟಪ್..' ತಾ ನೆಲಕ್ಕೆ ಬೀಳುವ ಸದ್ದು ತಂಬಾ ಸ್ಪಷ್ಟವಾಗಿ ಕೇಳ್ತಿತ್ತ್. ಮಳೆಯೆಲ್ಲಾ ಸುರಿದಿದ್ದರಿಂದ ಮೋಡಗಳ ಹಿಂಡು ಕೂಡ ತಮ್ಮ ಕೆಲ್ಸ ಮುಗ್ತುತಾ ಹೇಳುವಂಗೆ ಜಾಗ ಖಾಲಿ ಮಾಡಿದ್ದೊ. ಹೆದರಿದ್ದಂಗೆ ಅಡಗಿಕಂಡಿದ್ದ ಸೂರ್ಯ ಮೆಲ್ಲನೇ ಮುಖ ತೋರಿಸಿತ್ತ್. ನಾಚಿಕೆನೋ..ಇಲ್ಲ ಅಷ್ಟೊತ್ತು ಅಡಗಿ ಕುದ್ದಿದ್ದಕ್ಕೆ ಅವಮಾನನೋ... ಅವನ ಮುಖ ಎಲ್ಲಾ ಕೆಂಪು ಕೆಂಪು ! ಅದರ ಪ್ರತಿಬಿಂಬ ಭೂಮಿ ಮೇಲೆ ಬಿದ್ದ್ ಅಲ್ಲೊಂದು ಸುಂದರ ವಾತಾವರಣ ನಿರ್ಮಾಣ ಆಗಿತ್ತ್. ಮನೆ ಮಾಡ್ಲಿ ನಿಂತ್ಕಂಡ್ ನೋಡಿರೆ ಥೇಟ್ ರವಿವರ್ಮನ ಕುಂಚಲಿ ಅರಳಿದ ಚಿತ್ರದಂಗೆ ಕಾಣ್ತಿತ್ತ್ ! ಆ ಖುಷಿ ಇದ್ದದ್ದ್ ಸ್ವಲ್ಪ ಹೊತ್ತು ಮಾತ್ರ.
ಅಷ್ಟು ಹೊತ್ತು ಇಲ್ಲದ ಮಳೆಹುಳಗ ಆಗ ಮರಡಿಕೆ ಶುರುಮಾಡ್ದೊ. `ಕಿರ್ರಿ...ಕಿರ್ರಿ...ಕಿರ್ರಿ...'ತಾ ಕಿವಿ ತೂತ ಆಗುವಂಗೆ ಶಬ್ದ. ಅದು ಅಪಶಕುನನಾ ? ಗೊತ್ಲೆ.... ಇನ್ನೊಂದು ಕಡೆಂದ `ಊ..ಊ..ಊ...' ತಾ ನಾಯಿಗಳ ಮರಡಾಟ. ಛೇ...ಇನ್ನೂ ಆರೂವರೆ ಗಂಟೆ ಆತ್ಲೆ. ಇಷ್ಟು ಬೇಗ ಈ ನಾಯಿಗಳಿಗೆ ಎಂಥಾತ್ ? ಅಷ್ಟೊತ್ತಿಗೆ ಒಂದು ಹಿಂಡು ದನಗ ಬಾಲ ಮೇಲೆ ಎತ್ತಿಕಂಡ್ ನಿಶಾನೆಮೊಟ್ಟೆ ಕಡೇಂದ ಓಡಿಬಂದೊ.. ಆ ಹಿಂಡ್ಲಿ ಸುಮಾರು 30-40 ದನಗ ಇದ್ದೊ ಕಂಡದೆ. ಎಲ್ಲವೂ ತುಂಬಾ ಹೆದರಿದ್ದೋ. ತೊಳೆದಿಟ್ಟ ಕನ್ನಡಿ ಹಂಗೆ ಫಳ ಫಳತಾ ಹೊಳೀತಿದ್ದ ನೆಲ, ದನಗಳ ಹೆಜ್ಜೆ ತಾಂಗಿ ಕೆಸರು ಗದ್ದೆಯಾಗಿಬಿಡ್ತ್. ಅಲ್ಲಿ.. ಆ ಪರಿಸರಲಿ ಏನು ಆಗ್ತುಟ್ಟುತಾ ಗೊತ್ತಾಗ್ತಿಲ್ಲೆ. ಆದ್ರೆ ಮುಂದೆ ಏನೋ ಕಾದುಟ್ಟುತಾ ಭವಿಷ್ಯ ಹೇಳುವಂಗೆ ಗುಮ್ಮಗ `ಊಂ...ಊಂ..ಊಂ..'ತಾ ರಾಗ ಶುರು ಮಾಡಿದ್ದೊ. ಹಂಗಾರೆ ಅಲ್ಲಿ ಎಂಥ ಅಪಾಯ ಕಾದುಟ್ಟು ?
ವರ್ಷ ವರ್ಷ ಅಲ್ಲಿ ದಾರಿ ಬದಿ ಇರ್ವ ಗುಳಿಂಗನ ಕಲ್ಲು ಎದ್ರು ಊರವೆಲ್ಲಾ ಸೇರಿಕಂಡ್ ಕೋಳಿ ಕುಯ್ಸುತ್ತಿದ್ದೊ. ಆದ್ರೆ ಈಸಲ ಕೋಳಿ ಕುಯ್ಸೋಕೂತ ಗ್ಯಾನ ಮಾಡಿಕಾಕನ ಆಟಿ ತಿಂಗ ಬಂದುಬಿಟ್ಟಿತ್ತ್. ಅಗೆ, ನಾಟಿತಾ ಎಲ್ಲವೂ ಬ್ಯುಸಿ ಆಗಿಬಿಟ್ಟಿದ್ದೊ. ಹಂಗಾರೆ ಈ ವರ್ಷ ಕೋಳಿ ಕುಯ್ತ್ಲೇತಾ ಹೇಳಿ ಗುಳಿಂಗ ಸಿಟ್ಟು ಮಾಡಿಕಂಡುಟ್ಟಾ ? ಈ ಅಮವಾಸ್ಯೆ ದಿನನೇ ಹಿಂಗೆಲ್ಲಾ ಆಗ್ತುಟ್ಟುತಾ ಹೇಳಿರೆ, ಅಂಥ ಒಂದು ಡೌಟ್ ಬರ್ತುಟ್ಟು. ಹಿಂಗೆ ಯೋಚನೆ ಮಾಡಿಕಂಡ್ ಇರ್ಕಾಕನ ಅದೇ ಆ ನಿಶಾನೆಮೊಟ್ಟೆ ಕಾಡ್ ಕಡೇಂದ ಆನೆಗ ಘೀಳಿಟ್ಟ ಶಬ್ದ... ಜೊತೆಗ ಒಂದು ಹುಲಿ ಕೂಡ ಘರ್ಜಿಸಿದಂಗೆ ಆತ್. ಹೌದು, ಆ ಕಡೆ ಕೇರಳ ಕಾಡ್ಂದ ಒಂದು ಹುಲಿ ಕೂಡ ನಿಶಾನೆಮೊಟ್ಟೆಗೆ ಬಂದು ಸೇರಿಕಂಡುಟ್ಟು ಗಡ. ಹೋದ ವಾರ ಹೊಳೆಕರೆ ಬಸಪ್ಪನ ಹೂಡುವ ಎತ್ತುನೇ ಆ ಹುಲಿ ಕೊಟ್ಟಿಗೆಂದ ಎಳ್ಕಂಡ್ ಹೋಗಿತ್ತ್ !
ಊರವ್ಕೆಲ್ಲಾ ಹೆದ್ರಿಕೆ ಶುರುವಾತ್. ಅವ್ರವ್ರ ಮನೇಲೇ ಕುದ್ದ್ಕಂಡ್ ಗುಳಿಂಗನ ಪ್ರಾರ್ಥನೆ ಮಾಡಿಕೆ ಶುರು ಮಾಡ್ದೊ. `ನಮ್ಮ ಊರುನ ಕಾಪಾಡಪ್ಪ ದೇವ್ರೇ...ಆಟಿ ತಿಂಗ ಮುಗ್ದ ಕೂಡ್ಲೇ ಮನೆಗೆ ಎರಡರಂಗೆ ಕೋಳಿ ಕುಯ್ಸಿವೆ....'ತಾ ಹೇಳಿಕಂಡೊ... ಆದ್ರೆ ಯಾಕೋ ಇವ್ರ ಪ್ರಾರ್ಥನೆ ಗುಳಿಂಗನ ಕಿವಿ ವರೆಗೆ ಹೋದ ಹಂಗೆ ಕಾಣ್ತ್ಲೇ.... ಜೋರಾಗಿ `ಛಳಾರ್' ತಾ ಒಂದು ಶಬ್ದ ಜೊತೇಲಿ ಮನೆಯೆಲ್ಲಾ ಹೊತ್ತಿ ಉರ್ದು ಹೋಗುವಂಗೆ ಮಿಂಚಿನ ಬೆಳಕು. ಅದ್ರ ಹಿಂದೆನೇ ಭೂಮಿ ನಡುಗುವಂಗೆ ಗುಡುಗು. ಒಲೆ ಮುಂದೆ ಬೆಂಕಿ ಕಾಯಿಸಿಕಂಡ್ ಕುದ್ದಿದ್ದ ವಯಸ್ಸಾದವು ಹಂಗೆನೇ ದೊಡ್ಡ ದೊಡ್ಡ ಹೆಜ್ಜೆ ಹಾಕಿಕಂಡ್ ಬಂದ್ ಕಂಬಳಿ ಒಳಗೆ ಸೇರಿಕಂಡೊ....ಸಣ್ಣ ಮಕ್ಕ ಅಮ್ಮನ ಸೆರಗು ಹಿಂದೆ ಅಡಗಿಕಂಡೊ....ಮನೆಯಜಮಾನತಾ ಅನ್ನಿಸಿಕಂಡವು ಭತ್ತಕಡಿಕೆ ಒಳಗೆ, ಅಲ್ಲಿ-ಇಲ್ಲಿ ಅಡಗಿಸಿ ಇಟ್ಟ್ಕಂಡಿದ್ದ ಬಾಟಲಿಗಳ್ನ ಹೊರಗೆ ತೆಗ್ದ್ ಖಾಲಿ ಮಾಡ್ದೊ. ಮಿಂಚು, ಗುಡುಗು ಜೋರಾಗ್ತಿದ್ದಂಗೆ ಸಣ್ಣಗೆ ಮಳೆ ಹನಿಯಕೆ ಶುರುವಾತ್...ನಿಮಿಷ ನಿಮಿಷಕ್ಕೂ ಮಳೆಯ ರಭಸ ಜೋರಾಗ್ತನೇ ಹೋತ್....ಅಷ್ಟೊತ್ತಿಗೆ ಬಂದ ಒಂದು ಮಿಂಚು ತಾಂಗಿ ಗುಳಿಂಗನ ಕಲ್ಲು ಸನಾ ಚೂರು ಚೂರು ಆಗಿಬಿಟ್ಟತ್. ಅಷ್ಟೇ ಊರವ್ಕೆ ನೆನಪಿದ್ದದ್...!
ಮಾರನೇ ದಿನ ಎಲ್ಲಾ ಟೀವಿಗಳಲಿ ಒಂದೇ ಸುದ್ದಿ...`ನಿಶಾನೆ ಮೊಟ್ಟೆಯಲಿ ಮೇಘ ಸ್ಫೋಟ...ಬೆಟ್ಟದ ಕೆಳಗಿನ ಊರು ನಿರ್ನಾಮ...' 
ಗುಳಿಂಗಂಗೆತಾ ಬಿಟ್ಟಿದ್ದ ಹುಂಜ ಪೊಂಗಾರೆ ಮರದ ಮೇಲೆ ಕುದ್ದ್ಕಂಡ್ `ಕೊಕ್ಕೊ...ಕ್ಕೋ'ತಾ ಕೂಗ್ತಿತ್ತ್ !

- ಸುನಿಲ್ ಪೊನ್ನೇಟಿ
arebhase@gmail.com

ಮದುವೆ ಮನೇಲಿ 'ಟ್ರ್ಯಾಜಿಡಿ'


       ಅಂದ್ ನನ್ನ ಅತ್ತೆ ಮಗ ಚೇತುದು ಮದ್ವೆ. ಎಲ್ಲವೂ ಅದ್ ಇದ್ ಕೆಲ್ಸತಾ, ಆಚೆ ಈಚೆ ಓಡಾಡಿಕಂಡ್ ಇದ್ದೊ.. ಆದರೆ ನಂಗೆ ಅದ್ಯಾವ್ದೂ ನಿಗ ಇತ್ಲ್ಲೆ... ನನ್ನ ಕಣ್ಣ್ ಬೇರೆ ಏನೋ ಹುಡುಕ್ತಾ ಇತ್ತ್.. ಕಣ್ಣ್ ಗೌಡ ಸಮಾಜದ ಗೇಟ್ ಕಡೆಗೆನೇ ಪುನಃ ಪುನಃ ಹೊಗ್ತಿತ್ತ್...ಛೇ!! ಇನ್ನೂ ಯಾಕೆ ಬಾತ್ಲೆ ಅವ್ಳು.. ಚಪ್ಪರಕ್ಕೆ ಬಂದವ್ಳು ಮದ್ವೆಗೆ ಬಾತ್ಲೆತೇಳಿರೆ.. ಅಯ್ಯೋ... ಕಣ್ಣ್, ನೋಟ, ನೆಗೆ.. ಮತ್ತೆ ನೋಡಿಕೆ ಸಿಕ್ಕಿರೆ.. ಛೇ... ನೆನ್ನೆನೇ  ಎಲ್ಲಾ ವಿಷ್ಯ ಹೇಳಿ ಬುಡೊಕ್ಕಾಗಿತ್... ಹೌದು.. ಹಿಂದಿನ ದಿನ ಚಪ್ಪರಲಿ ಅವ್ಳು ಯಾಕೆ ನನ್ನ ಕಣ್ಣಿಗೆ ಬೀತ್ತೋ.. ಕಣ್ ಮುಚ್ಚಿರೂ ಅವ್ಳೇ.. ಬುಟ್ರೂ ಅವ್ಳೇ.. ಒಂದೇ ಮಾತ್, ಒಂದೇ ನೋಟ..

             ಮನೆ ತುಂಬಾ ನೆಂಟ್ರ್ ಇದ್ದೊ.. ಬೆಳಿಗ್ಗೆ ಈರುಳ್ಳಿ ಕೊಯ್ಕಂಡ್ ಕುದ್ದಿದ್ದ ನನ್ನ ಮನ್ಸ್ 'ನೋಕಿಯಾ ಸಣ್ಣ ಪಿನ್ ಚಾರ್ಜರ್ ಉಟ್ಟಾ' ಒಂದೇ ಒಂದು ಮಾತ್ ಕೇಳಿ ನೂರು ಚೂರು ಮಾಡಿ ಹಾಕಿತ್ತ್ ಆ ಗೂಡೆ.. ಲವ್ ಅಟ್ ಫಸ್ಟ್ ಸೈಟ್ ತಾ.. ಹೇಳಿವೆಯಲ್ಲಾ ಹಂಗೆ. 'ಟೀವಿ ಮೇಲೆ ಉಟ್ಟು, ತಕಣಿತಾ ಹೇಳ್ದೆ.. "ಅಡುಗೆಗೆ ಈರುಳ್ಳಿ ಇಲ್ಲದಿದ್ರೂ ನಡ್ದದೆ, ಗೂಡೆನ ಮಿಸ್ ಮಾಡ್ಬೇಡ"ತಾ ಒಳಗೆಂದ ಮನ್ಸ್ ಮತ್ತೆ ಮತ್ತೆ ಹೇಳಿಕೆ ಶುರು ಮಾಡ್ತ್..!! ಈರುಳ್ಳಿನ ಅಲ್ಲೇ ಬುಟ್ಟ್ ಹಿಂದೆ ಹೋದೆ.. ಯಾರೀ ಗೂಡೆ.. ಇಷ್ಟ್ ಚಂದ ಉಟ್ಟಲಾ.. ನಮ್ಮ ನೆಂಟ್ರೇನಾ?.. ಅಲ್ಲ ಬೆಂಗಳೂರ್ ಸೆಟ್ಟಾ?.. ಮತ್ತೆ ಅರೆಭಾಷೆ ಲಾಯ್ಕ ಮಾತಾಡ್ದೆ?.. ಯಾರಪ್ಪ ಇವ್ಳು?.. ಹಿಂಗೆ ನೂರಾರು ಪ್ರಶ್ನೆಗ ತಲೆಲಿ ಬಂದ್ ಬಂದ್ ಹೋಗ್ತಿದ್ದೊ.. ಸೀದಾ ಮನೆ ಒಳಗೆ ಹೋದೆ, ಅವ್ಳ ಹಿಂದೆ.. ಕಣ್ಣ್ ಇಡಿ ರೂಮ್ ನ 3G ಸ್ಪೀಡ್ಲಿ ಸ್ಕ್ಯಾನ್  ಮಾಡ್ತಾ ಇತ್ತ್ , .. ಗೂಡೆ ಟೀವಿ ಹಿಂದೆ ಇದ್ದ ಪ್ಲಗ್ ಗೆ ಚಾರ್ಜರ್ ಹಾಕಿಕೆ ಪರ್ದಾಡ್ತ ಇತ್ತ್.. ಒಳ್ಳೇ ಛಾನ್ಸ್, ಹೆಲ್ಪ್ ಮಾಡನ ತಾ ಇನ್ನೇನ್ ಹೋಕು, ಅಷ್ಟ್ರಲ್ಲಿ ರಶ್ಮಿ ಆಂಟಿ ಪಟ್ ಎಂಟ್ರಿ ಕೊಟ್ಟೊ, "ವಿಕ್ಕಿ, ಇವನ ಒಮ್ಮೆ ಬಾತ್ ರೂಮ್ ಗೆ ಕರಕೊಂಡ್ ಹೋಗು, ಅರ್ಜೆಂಟ್ ಗಡ"ತಾ , ಅವರ ಮೂರು ವರ್ಷದ ಮಂಞ ಶೋಭಿತ್ ನನ್ನ ಕೈಗೆ ಕೊಟ್ಟೊ.. ಛೇ!!ತಾ ಮನ್ಸ್ ಲಿ ಬೈಕಂಡ್ ಅವನ ಕೈ ಹಿಡ್ಕಂಡ್(ಎಳ್ಕಂಡ್) ಹೋದೆ..
    ಬೇಗ ಬೇಗ ಕೆಲ್ಸ ಮುಗ್ಸಿ ಬಂದ್ ನೋಡ್ನೆ, ಗೂಡೆ ಕಾವ್ಯಕ್ಕನೊಟ್ಟಿಗೆ ಮಾತಾಡಿಕಂಡ್ ಉಟ್ಟು.. ಕಾವ್ಯ ನನ್ನ ದೊಡಮ್ಮನ ಮಗ್ಳು.. ಕಾವ್ಯಕ್ಕಂಗೆ ಆ  ಗೂಡೆನ ಗೊತ್ತಿರ್ದೇನೋ.. ಅವ್ಳ್ನ ಹತ್ರ ಗೂಡೆ ಬಗ್ಗೆ ಕೇಳ್ರೆ ಹೆಂಗೆ... ಬೇಡ..ಬೇಡ.. ಕಾವ್ಯಕ್ಕ ಎಂತಾರೂ ತಿಳ್ಕೊಂಬೊದು.. ಅವ್ಳ ಪ್ರಕಾರ ನಾನ್ ಡೀಸೆಂಟ್ ಹೈದ.. ಹಿಂದಿನ ದಿನ ಎಲ್ಲವೂ ಮಾತಾಡಿಕಂಡ್ ಕುದ್ದಿರ್ಕನ ಸಟ್೯ಫಿಕೇಟ್ ಕೊಟ್ಟುಟ್ಟು.. ಛೇ!! ಬೇಡ ಬೇಡ.. ಮನ್ಸ್ ಲಿ ಮತ್ತೆ ಪ್ರಶ್ನೆಗ.. ಅಷ್ಟ್ರಲಿ ಗೂಡೆ ಅಲ್ಲಿಂದ ಸ್ಟೇರ್ಕೇಸ್ ಮೆಟ್ಲ್ ಹತ್ತಿಕೊಂಡು ಮೇಲೆ ರೂಮಿಗೆ ಹೋಗ್ತಾ ಇತ್ . ಈಗಾರ್ ಮಾತಾಡ್ಸನ ತಾ ಹೇಳಿ ಅವಳ ಹಿಂದೆ ಹೋಕೆ ಹೆಜ್ಜೆ ಮುಂದೆ ಇಟ್ಟೆ ಅಷ್ಟೆ.. "ಮಿಂಚಾಗಿ ನೀನು ಬರಲು,ನಿಂತಲ್ಲಿಯೇ ಮಳೆಗಾಲ...." ನನ್ನ ಫೋನ್ ರಿಂಗ್ ಆತ್.. ಪವಿ ಅಣ್ಣ ಕಾಲ್.. ವಿಕ್ಕಿ, ಹಂದಿ ಮಾಂಸ ರೆಡಿ ಆಗುಟ್ಟು ಗಡ.. ಓಮ್ನಿ ತಕಂಡ್ ಹೋಗು, ಐದ್ ನಿಮ್ಸಲಿ ಬರೋಕು, ಅಡಿಗೆಯವು ಅರ್ಜೆಂಟ್ ಮಾಡ್ತ ಒಳೊ"..( ನಂಗೆ ಯಾಕಪ್ಪ ಫೋನ್ ರಿಸೀವ್ ಮಾಡ್ದೆತಾ  ಆತ್.) ಬೇರೆ ದಾರಿ ಇಲ್ಲೆ.. ಬಂದ್ ನೋಡಿಕಣನತಾ  ಬೇಗ ಹೋಗಿ ಬೇಗ ಬಂದೆ.. ಬಾಕನ ದಾರಿಲಿ ಸನಾ ಅವ್ಳ್ ದೆ ಯೋಚನೆ, ಹೋದ ತಕ್ಷಣ ಮಾತಾಡ್ಸಕು ತಾ ಪ್ಲಾನ್ ಮಾಡಿಕಂಡೇ ಬಂದ್ದಿದ್ದೆ.. ಬಂದ ತಕ್ಷಣ ಒಳಗೆ ಹೋಗಿ ಇನ್ನೊಮ್ಮೆ  ಸ್ಕ್ಯಾನ್ ಮಾಡ್ದೆ.. ಒಳಗೆ ಎಲ್ಲೂ ಕಂಡತ್ತ್ಲೆ.. ಸೀದಾ ಮನೆ ಹಿಂದೆ ಹೋದೆ.. ನೋಡ್ರೆ ಅವ್ಳು ಒಬ್ಳೆ ಬಟ್ಟೆ ಒಗಿವ ಕಲ್ ಹತ್ರ ದೀಪಗಳ್ನ ತೊಳ್ಕಂಡ್ ನಿತ್ತುಟ್ಟು.. ಛಾನ್ಸ್ ಬುಟ್ರೆ ಪುನಃ ಸಿಕ್ಕುದ್ಲೆ ತಾ ಸೀದಾ ಹೋದೆ ಕಲ್ ಹತ್ರ... ನಾನ್ ಹೋಗಿ ನಿಲ್ಲುದು, ಕಡೆಂದ ಬಕೆಟ್ ಲಿ ನೀರ್ ಹಿಡ್ಕಂಡ್ ಮೇಘ ಕಲ್ಲು ಹತ್ರ ಬಾದು ಸರಿ ಆತ್.. ಬಂದವ್ಳೆ "ಎಂಥ ವಿಕ್ಕಿ ಅಣ್ಣ"ತಾ ಕೇಳ್ತ್...ನಾನ್  "ನಿನ್ನ ಅಮ್ಮ ಕರಿತುಟ್ಟು, ಹೋಕಡ" ತಾ ಹೇಳ್ದೆ.. ಆಗ ಅವ್ಳು "ಹೌದಾ, ಆಗ ನೀನ್ ಅಕ್ಕಂಗೆ ಹೆಲ್ಪ್ ಮಾಡ್ ಸ್ವಲ್ಪ, ಈಗ ಬನ್ನೆ"ತಾ  ಹೇಳಿ ಓಡ್ತ್...
( ನಾ ಮನ್ಸ್ ಲೆ ಹೇಳಿಕಂಡೆ "ಅಕ್ಕ ಅಲ್ಲ ಮೇಘ, ಅತ್ತಿಗೆ")....
"ಹಾಯ್".. ನಾನ್ ಧೈರ್ಯ ಮಾಡಿ ಹೇಳ್ದೆ... ಅವ್ಳ ಕಡೆಂದ "ಹಾಯ್" ವಾಪಾಸ್ ಬಾತ್..
ನಾನ್:- ಚಾರ್ಜರ್ ಹೆಸ್ರ್ ಎಂತ,
ಅವ್ಳು:- ಎಂತ???!!
ನಾನ್:- ಆಆಆಆ.. ಸಾರಿ, ಸಾರಿ,.. ನಿನ್ನ ಹೆಸ್ರ್ ಎಂತ...
ಅವ್ಳು:- ಪ್ರಿಯಾ!! ನಿಂದ್ ??
(ಅವ್ಳು ದೀಪನ ಉಜ್ತಾ ಇತ್ತ್, ನಾ ನೀರ್ ಹಾಕ್ತಾ ಇದ್ದೆ..)
ನಾನ್:- ನನ್ನ ಹೆಸ್ರ್ ಲತನ್.. ಮನೆಲಿ ಕರಿಯೊದು ವಿಕ್ಕಿತಾ ... ನಿಮ್ಮ ಮನೆ ಎಲ್ಲಿ??
ಅವ್ಳು:- ಮೂರ್ನಾಡ್.. ನಿಮ್ಮದ್??
ನಾನ್:-ಸುಂಟಿಕೊಪ್ಪ..
(ಮೇಘ ವಾಪಸ್ ಬಾಕೆ ಮುಂದೆ ಹೇಳಿಕೆ ಇರುವ ವಿಷ್ಯನೆಲ್ಲ ಹೇಳೊಕು, ಅಟ್ಲಿಸ್ಟ್ ಫೋನ್ ನಂಬರ ಆದ್ರೂ ತಕಣೊಕುತಾ  ಮನ್ಸ್ ಲಿ ಲೆಕ್ಕಾಚಾರ ಹಾಕಿದೆ).. ,
ನಾನ್:- ನಾನ್ ನಿಂಗೆ ಎಂತೊ ಹೇಳೊಕು..
ಅವ್ಳು:-ಎಂತ?? ಹೇಳಿ!!
ನಾನ್:- ಎಂತ ಅಂದರೆ... ನಿನ್ನ ಫಸ್ಟ್ ಟೈಮ್ ನೋಡ್ಕನ ನೇ... ನಂಗೆ.. ಅದ್.... ಹಂಗೆ.. ನೊಕಿಯಾ. ಅಲ್ಲ.. ನೋಡಿ... ಅದ್...

(ಫಸ್ಟ್ ಟೈಮ್ ನನ್ನ ನಾಲಿಗೆ ಕಂಟ್ರೋಲ್ ತಪ್ಪಿದ್)

ಅವ್ಳು:- ( ಕಡೆ ತಿರ್ಗಿ ಒಮ್ಮೆ ನೆಗಾಡಿ) ಎಂತತಾ  ಹೇಳಿ...
ನಾನ್:- ನಾನ್ ನಿನ್ನ… ........ ನಿನ್ನ ಫೋನ್ ನಂಬರ್ ಕೊಡು!! (ನಾನ್ ಏನೋ ಅವಳ ಒಂದು ಕಿಡ್ನಿ ಕೇಳ್ದೆ ತಾ ಹೇಳುವಂಗೆ ನೋಡ್ತ್ ಒಮ್ಮೆ, ಅವ್ಳು ಇನ್ನೇನೋ ಮಾತಾಡೊಕು, ಅಷ್ಟರಲಿ ಮೇಘ ಬಾತ್)
ಮೇಘ:- ಅಣ್ಣಾ,.. ಅಂಕಲ್ ಕರಿತಾ ಒಳೊ.. ಕಾರು ಅಡ್ಡ ನಿಲ್ಸಿ ಬಂದೊಳನಾ.. ತೆಗಿಯೊಕು ಗಡ...
        ನಾನ್ ಸೀದ ಹೋದೆ.. ಮತ್ತೆ ಪುನಃ ಟೈಮೇ ಸಿಕ್ತ್ಲೆ.. ಅದ್ ಇದ್ ಕೆಲ್ಸ, ಓಡಾಟ.. ಅದೇ ಆತ್.. ಆದ್ರೆ  ಓಡಾಟಪರ್ದಾಟದ ಮಧ್ಯಲಿ ಸುಮಾರು 20-25 ಸಲ ಆದರೂ ಅವ್ಳು ನನ್ನ, ನಾನ್ ಅವ್ಳ್ನ ನೋಡ್ದು .. ಸ್ಮೈಲ್ ಕೊಡ್ದು.. ಕೈ ಸನ್ನೆ, ಕಣ್ ಸನ್ನೆ ಎಲ್ಲಾ ನಡ್ತ್... ಚಪ್ಪರ ಮುಗ್ದ್ ನೆಂಟ್ರೆಲ್ಲ ಕರಗಿದೊ.. ನಾನ್ ತುಂಬಾ ಸಲ ನಂಬರ್ ಕೇಳ್ದೆ.. ಆದರೆ ಹಂಗೆ ಹಿಂಗೆ ತಾ ಆಟ ಆಡ್ಸಿತ್.. ಕಡೆಗೆ ನಾಳೆ ಕೊಟ್ನೆತಾ  ಹೇಳ್ತ್.. ಸರಿ ತಾ ಹೇಳಿ ನಾನ್ ಸುಮ್ಮನೆ ಆದೆ.. ನಂಬರ್ ಕೊಡದೆ ಇರಿಕಿಲೆತಾ ನಂಬಿಕೆ ಅಂತೂ ಇತ್ತ್ ನಂಗೆ...
ಸಂಜೆ ಆತ್... ಅಷ್ಟೊತ್ತು ಕಣ್ಣಿಗೆ ಆಗಾಗ ಬೀಳ್ತ ಇದ್ದ 'ಪ್ರಿಯ', "ನನ್ನ ಪ್ರಿಯ" ಎಲ್ಲಿ ನೋಡ್ರೂ ಕಂಡತ್ಲೆ.. ಅಲ್ಲಿ ಇಲ್ಲಿ, ಒಳಗೆ ಹೊರಗೆ, ಹಿಂದೆ ಮುಂದೆ ಎಲ್ಲಾ ಕಡೆ ಸ್ಕ್ಯಾನ್ ಮಾಡ್ದೆ.. ಅದರೆ ಪ್ರಿಯಾ ಕಾಂಬಕ್ಕೆ ಸಿಕ್ಕಿತ್ಲೆ.. ಸ್ಲಲ್ಪ ಹೊತ್ತಾದ ಮೇಲೆ ಮೇಘಾ ಚಾರ್ಜರ್ ತಂದ್ ಕೊಟ್ಟತ್.. ' ಅಕ್ಕ ಎಲ್ಲಿ' ತಾ ಕೇಳ್ದೆ.. 'ಮನೆಗೆ ಹೋದೊ'ತಾ  ಹೇಳ್ತ್.. 'ನಾಳೆ ಬಂದವೆನಾ' ತಾ ಕೇಳ್ದೆ.. ಅಷ್ಟಕ್ಕೆ ಮೇಘಾ "ಯಾಕಪ್ಪ, ಏನ್ ಕಥೆ, ಹಾ?? ತಾ ಅನುಮಾನಲಿ ಕೇಳ್ತ್.. ಏನಿಲ್ಲೆ ತಾ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡ್ದೆ..           ………………….
ಹಿಂದಿನ ದಿನದ ನೆನಪುಗ ಪಟ ಪಟನೆ ಬಂದು ಹೋತ್ ತಲೆಲಿ...ಟೈಮ್ 10:30 ಆತ್.. ಇನ್ನೂ ಯಾಕೆ ಬಾತ್ಲೆ ಗೂಡೆ..(ಕಣ್ಣ್ ಮತ್ತೆ ಮತ್ತೆ ಗೇಟ್ ಕಡೆಗೆನೇ ಹೋಗ್ತಿತ್).. ಅಷ್ಟರಲ್ಲಿ ಅಮ್ಮ ಬಂದ್ " ಮಾವ ಬಸ್ ಸ್ಟಾಂಡ್ಲಿ ಒಳೊ ಗಡ, ಒಮ್ಮೆ ಹೋಗಿ ಕರ್ಕಂಡ್ ಬಾ" ಹೇಳ್ದೊ.. ಬಂದವೆ ಬುಡಮ್ಮ, ಅದಿಕೆ ನಾನ್ ಬೇರೆ 'ಕೆಲ್ಸ' ಎಲ್ಲ ಬುಟ್ಟ್ ಹೋಕಾ? ಈಗ.. 'ಬ್ಯುಸಿ' ಇರ್ಕನ ನಿಂದ್ ಒಂದು ತಾ ಮುಖ ತಿರ್ಗಿಸಿದೆ.. ಅದಿಕೆ ಅಮ್ಮ "ಡೊಡ್ಡ ಬ್ಯಾಗ್ ಉಟ್ಟು ಗಡ, ಒಮ್ಮೆ ಹೋಗಿ ಬಾ, ಬೇಗ" ತಾ ಹೇಳ್ತ್.. ಪವಿ ಅಣ್ಣನ ಹತ್ರ ಜೀಪ್ ಕೀ ತಕ್ಕಂಡ್ (ಮಾವಂಗೆ ಮನ್ಸ್ ಲೇ ಬೈಕಂಡ್) ಬಸ್ ಸ್ಟಾಂಡ್ ಗೆ ಹೋದೆ.. ಮಾವ ಅರ್ಧ ಕೇಜಿ ಪ್ಲಾಸ್ಟಿಕ್ ಕವರ್ ಥ ಇದ್ದ  "ದೊಡ್ಡ"  ಬ್ಯಾಗ್ ಹಿಡ್ಕಂಡ್ ಡೈರಿ ಹತ್ರ ನಿಂತ್ತಿದ್ದೊ..ಹೋಗಿ ಜೀಪ್ ನಿಲ್ಸಿದಂಗೆ ಬಂದ್ ಹತ್ತಿದ್ದೊ.. "ಎಂಥರ, ದೊಡ್ಡ ಮನ್ಸ" ತಾ ಅವರ ಮಾಮುಲಿ ಗತ್ತ್ ಲಿ ಕೇಳ್ದೊ.. "ಹೇಳಿ ಮಾವ" ತಾ ಹೇಳಿ ಸುಮ್ಮನೆ ಆದೆ.. ಕಳ್ದ ವರ್ಷ ತಾತನ ತಿಥಿ ದಿನ ಯಾವ್ದೊ ಸಣ್ಣ ವಿಷ್ಯಕ್ಕೆ ನಂಗೂ ಮಾವಂಗೂ ಜೋರು ಜೋರು ಮಾತ್ ಆಗಿತ್ತ್.. ಅದರ ಮೇಲೆ ನಮ್ಮಿಬ್ಬರಿಗೆ ಅಷ್ಟಕ್ಕೆ ಅಷ್ಟೇ.. ಜೀಪ್ ಐಬಿ ರೋಡ್ಂದ ಟರ್ನ್ ಮಾಡಿ apmc ಹಾಲ್ ರೋಡ್ ಲಿ ತಕ್ಕಂಡ್  ಹೋಗ್ತಾ ಇದ್ದೆ.  ಮುಂದೆ ಓಂದಷ್ಟ್ ದೂರಲಿ ಪ್ರಿಯ ಅವ್ಳ ಅಮ್ಮನೊಟ್ಟಿಗೆ ನಡ್ಕಂಡ್ ಹೊಗ್ತಾ ಇತ್ತ್... ಅವರ ಹತ್ರನೇ ಹೋಗಿ ಬ್ರೇಕ್ ಹಾಕಿದೆ, " ಸಮಾಜಕ್ಕೆ ಅಲಾ ಆಂಟಿ, ಬನ್ನಿ" ತಾ ಹೇಳ್ದೆ.. ಹಿಂದೆ ಹತ್ತಿದೊ ಅಮ್ಮ ಮಗ್ಳು.. ಕನ್ನಡಿ ನೋಡ್ದೆ, ಪ್ರಿಯಾ ನಾ ನೋಡಿಕೆ ಮುಂದೆನೇ ಕನ್ನಡಿ ನೋಡ್ತಿತ್.. ಒಂದು ಸಣ್ಣ ನಗೆ ಅವಳ ಮುಖಲಿ, ನಾನೂ ನಗಾಡ್ದೆ..ನೀಲಿ ಸೀರೆಲಿ, ಕೂದ್ಲು ಹರ್ಡಿಕಂಡ್, ತುಂಬಾ ಲಾಯ್ಕ ಕಾಣ್ತಿತ್ ಅವ್ಳು.. ಸಮಾಜಲಿ ಎಲ್ಲರ್ನೂ ಇಳ್ಸಿದೆ, ಎಲ್ಲವೂ ಹಾಲ್ ಒಳಗೆ ಹೋದೊ.. ಟೈಮ್ 11 ಗಂಟೆ ಆಗಿತ್ತ್.. ಪುನಃ ನಂದು ಪ್ರಿಯಂದ್ ಶುರು ಆತ್,  ನಗೆ, ಕೈ ಭಾಷೆ, ಕಣ್ ಭಾಷೆ, ಇತ್ಯಾದಿ.. ಇತ್ಯಾದಿ.. ಸ್ವಲ್ಪ ಹೊತ್ತಾಕನ ಸ್ನ್ಯಾಕ್ಸ್ ಕೊಡಿಕೆ ಶುರು ಮಾಡ್ದೊ.. ಪ್ರಿಯಾ ಹೋಗಿ ಕಬಾಬ್ ಸರ್ವ್ ಮಾಡಿಕೆ ನಿಂತ್ಕಂಡತ್. ಅವ್ಳ ಪಕ್ಕಲೇ ಪೋರ್ಕ್ ಸರ್ವ್ ಮಾಡಿಕಂಡ್ ಒಬ್ಬ ಆಂಟಿ ನಿಂತ್ತಿದ್ದೊ, "ಕೊಡಿ ಆಂಟಿ, ನಾ ಸರ್ವ್ ಮಾಡ್ನೆ" ತಾ ಅವರ ಜಾಗಲಿ ನಾ ನಿತ್ಕಂಡೆ.. ಸರ್ವ್ ಮಾಡಿಕಂಡೇ ನಮ್ಮ ಮಾತ್ ಶುರು ಆತ್..
ನಾನ್:- ಏನ್ ಲೇಟ್?? 
ಅವ್ಳು:- ಮೂರ್ನಾಡ್ಂದ ಬಾದು ಬೇಡನಾ? ..
ನಾನ್:- ಹಹಾ.. ನಂಬರ್ ಕೊಟ್ನೆತಾ  ಹೇಳ್ದ ಅಲ ನೆನ್ನೆ.. ಕೊಡು ಈಗ..
ಅವ್ಳು:- ......! ಕೊಟ್ನೆ ಹೇಳ್ರೆ, ಕೊಟ್ಟೆ ಕೊಡೊಕಾ?
ನಾನ್:- ಮತ್ತೆ.. ನೆನ್ನೆಂದ ಎಷ್ಟ್ ಸಲ ನೆನ್ಸಿಕಂಡೆ ಗೊತ್ತಾ ನಿನ್ನ ?
ಅವ್ಳು:-  ಯಾಕೊ??
ನಾನ್:- "ಚಾರ್ಜರ್ ಬೇಕಿತ್ತ್".. ಅದಿಕೆ..
(ಪುನಃ ಅವ್ಳ ಒಂದು ಕಿಡ್ನಿ ಕೇಳ್ದೆ ತಾ ಹೇಳುವಂಗೆ ಒಮ್ಮೆ ನೋಡ್ತ್, ಅವು ನಿರೀಕ್ಷೆ ಮಾಡ್ದ ಉತ್ತರ ನಮ್ಮ ಕಡೆಂದ ಬಾತ್ಲೆ ತೇಳಿರೆ ಗೂಡೆಗಳಿಗೆ ಸಿಟ್ಟ್ ಬಾದು ಮಾಮುಲಿ ಅಲಾ)
 ಅವ್ಳು:- ಬರೀ ಅಷ್ಟಕ್ಕೆನಾ?
ನಾನ್:- ಅಲ್ಲ.. ನೀ ತಪ್ಪು ತಿಳ್ಕಂಬಲೆತಾ  ಆದರೆ ನಿಂಗೆ ಎಂತೊ ಹೇಳೊಕು!!
ಅವ್ಳು:- ಎಂಥ? ಹೇಳ್! ಹೊಸ ಚಾರ್ಜರ್ ಬೇಕ? (ಬಾಯಿಗೆ ಕೈ ಇಟ್ಕಂಡ್ ಪಿಸಿ ಪಿಸಿತಾ  ನಗಾಡ್ತ್, ಗೂಡೆಗಳ ಕೆಲವು ಜೋಕ್ ಗಳಿಗೆ ಅವೇ ನಗಾಡೊಕು, ನಮಿಗೆ ನಗೆ ಬಾಲೆ)
ನಾನ್:- ಅಲ್ಲ.. ಲವ್ ಯು!!!
ಅವ್ಳು:- ಹಾಂ...!! ...(ಪುನಃ ಒಂದು "ಕಿಡ್ನಿ" ನೋಟ..) ನನ್ನ ನಂಬರ್ ಒಂದು ಟಿಷ್ಯು ಪೇಪರ್ ಮೇಲೆ ಬರ್ದ್ ಅವ್ಳ ಕೈಗೆ ಕೊಟ್ಟ್ ಸೀದಾ ಬಂದೆ..

             ಛೇ!! ನಾ ತಪ್ಪ್ ಮಾಡ್ಡೆ ನಾ?? ಅವ್ಳ ಅಭಿಪ್ರಾಯ ಕೇಳದೆ ನಾ ಹಿಂಗೆ ಮಾಡ್ದ್ ಸರಿನಾ ? ಮತ್ತೇ ಮನ್ಸ್ ಲಿ ಪ್ರಶ್ನೆಗ... ಆದು ಆಗಲಿ, ಹೋಗೆ ಬುಟ್ನೆ ಅವ್ಳ ಮುಂದೆತಾ  ಹೇಳಿ ಪುನಃ ಲೇಡಿಸ್ ಕೌಂಟರ್ ಹತ್ರ ಹೋದೆ..ನೋಡ್ರೆ ಅಲ್ಲಿ ಪ್ರಿಯಾ ಇಲ್ಲೆಆಚೆ ಈಚೆ ಎಲ್ಲಾ ನೋಡ್ದೆ.. ಎಲ್ಲೂ ಇಲ್ಲೆ.. "ಒಂದೇ ಸಮನೆ ನಿಟ್ಟುಸಿರು, ಪಿಸುಗುಡುವ ನೀರವ ಮೌನ...." ರಿಂಗ್ ಟೋನ್ ಚೇಂಜ್ ಮಾಡಿದ್ದೆ.. ಪೋನ್ ರಿಂಗ್ ಆತ್.. ಯಾವ್ದೋ ಹೊಸ ನಂಬರ್.. ರಿಸೀವ್ ಮಾಡಿ ಕಿವಿಗಿಟ್ಟೆ.. " ಕಡೆ ಒಳೆ ನೋಡು, ಹಿಂದೆ ತಿರ್ಗ್" ಕಡೆಂದ ಪ್ರಿಯನ ವಾಯ್ಸ್.. ಅಬ್ಬಾ!! ಆಗ ಆದ ಖುಷಿನ ಹೇಳಿಕೆ ಆಲೆ.. ಪಿಯುಸಿ ಎಂಟ್ನೆ ಅಟಂಪ್ಟ್ ಲಿ ಪಾಸ್ ಮಾಡಿರ್ಕನ ನಾ ಅಷ್ಟ್ ಖುಷಿ ಪಟ್ಟಿತ್ಲೆ... ಪ್ರಿಯಾ ಹತ್ರ ಹೋದೆ, ಅವ್ಳೊಟ್ಟಿಗೆ ಇನ್ನಿಬ್ಬರು ಗೂಡೆಗ ಇದ್ದೊ.. "ವಿಕ್ಕಿ, ಇವು ನನ್ನ ಕಸಿನ್ಸ್.. ಗಾನ ಮತ್ತೆ ಹರ್ಷಿತಾ"... ಇಬ್ಬರೂ ಕೈ ಕೊಟ್ಟೊ.. ನಾನೂ ಕೊಟ್ಟೆ.. "ಇವು ನನ್ನ ಹೊಸ ಫ್ರೆಂಡ್, ವಿಕ್ಕಿತಾ "... ನನ್ನ ಅವ್ಕೆ ಪರಿಚಯ ಮಾಡ್ಸಿತ್.. ಸ್ವಲ್ಪ ಹೊತ್ತು ಮಾತಾಡಿಕಂಡ್ ಅಲ್ಲೇ ಇದ್ದೊ.
( ಗಾನ ಮತ್ತೆ ಹರ್ಷಿತಾ ನೋಡಿಕೆ ಚಂದ ಇದ್ದೊ.. ಆದರೂ ನನ್ನ ಕಣ್ಣಿಗೆ ಅವು ಕರಡಿಗಳಂಗೆ ಕಾಣ್ತಿದ್ದೊ.. ಶಿವ ಪೂಜೆ ಮಧ್ಯ ಕರಡಿಗಳಂಗೆ...)
    ಮತ್ತೆ ನಾನ್ ಮಧ್ಯಾಹ್ನ ಊಟದ ಅರೆಂಜ್ಮೆಂಟ್, ಸರ್ವಿಂಗ್, ಅದ್ ಇದ್ ತಾ  ಬ್ಯುಸಿ ಆದೆ.. ಅದ್ರ ಮಧ್ಯೆ ಪ್ರಿಯಂದು ನಂದು ನೋಡ್ದು, ನೆಗಾಡ್ದು, ಮಿಸ್ ಕಾಲ್ ಕೊಡ್ದು ನಡ್ದೆ ಇತ್ತ್... ನೆಂಟ್ರೆಲ್ಲಾ ಊಟ ಮಾಡ್ತ ಇದ್ದೊ.. ಊಟ ಮುಗ್ಸಿದವೆಲ್ಲಾ ಮೆಲ್ಲೆ ಮೆಲ್ಲೆ ಹೊರಡ್ತಾ ಇದ್ದೊ.. ಮದ್ವೆ ಸಮಾರಂಭ ನಿಧಾನಕ್ಕೆ ಕರಗ್ತಾ ಇತ್ತ್... ಹತ್ರದ ನೆಂಟ್ರೆಲ್ಲಾ ಹೆಣ್ಣ್ ಇಳ್ಸುವ ಶಾಸ್ತ್ರಕ್ಕೆ ರೆಡಿ ಆಗ್ತಿದ್ದೊ.. ಮದ್ವೆ ಗೂಡೆ ಮರ್ಡಿಕೆ ರೆಡಿ ಆಗಿತ್ತ್ ( ಮನೆಯವು ಬೇಡತಾ ಹೇಳ್ರೂ ತಾವೇ ಇಷ್ಟಪಟ್ಟ್ ಲವ್ ಮ್ಯಾರೇಜ್ ಆಕಾಕನ ಗೂಡೆಗ ಮರ್ಡುದು ಎಂತಕೆತಾ  ಹೇಳುದೇ ನನ್ನ ಪ್ರಶ್ನೆ)
  ಪ್ರಿಯಾ ಮತ್ತೆ ಕಾಣೆ ಆಗಿತ್ತ್.. ಕಡೆ, ಕಡೆ, ಹಿಂದೆ ಮುಂದೆ ಎಲ್ಲಾ ನೊಡ್ದೆ.. ಎಲ್ಲೂ ಕಾಣ್ತಿಲ್ಲೆ ಅವ್ಳು... "ಒಂದೇ ಸಮನೆ ನಿಟ್ಟುಸಿರು, ಪಿಸುಗುಡುವ ನೀರವ ಮೌನ" ಮತ್ತೆ ಫೋನ್ ರಿಂಗ್ ಆತ್.. ಅಮ್ಮ ಕಾಲಿಂಗ್. ರಿಸೀವ್ ಮಾಡ್ದೆ..
ಅಮ್ಮ:-"ಎಲ್ಲಿ ಒಳ, ಒಮ್ಮೆ ಹಾಲ್ ಒಳಗೆ ಬಾ"
ನಾನ್:- ಎಂತಮ್ಮ ನಿಂದ್ ಬ್ಯುಸಿ ಇರ್ಕನ..
ಅಮ್ಮ:- ಒಮ್ಮೆ ಬಾ ಮರಾಯ.. ಒಂದು ಆಂಟಿನ ಪರಿಚಯ ಮಾಡ್ಸಿನೆ, ಕೇಳ್ತಾ ಒಳೊ ನಿನ್ನ, ಬೇಗ ಬಾ..
ಅಮ್ಮಂದ್ ಒಳ್ಳೆ ಕಥೆ, ಇನ್ನು ಹೋತ್ಲೆತಾ ಹೇಳಿರೆ ಸರಿ ಆದ್ಲೆ ತಾ ಹೇಳಿ ಒಳಗೆ ಹೋದೆ.. ಸೀನ್ ನೋಡಿ ಶಾಕ್ ಆದೆ!!
ಅಮ್ಮ ಪರಿಚಯ ಮಾಡ್ಸೊಕುತಾ ಇದ್ದ ಆಂಟಿ ಬೇರೆ ಯಾರೂ ಅಲ್ಲ.. ಪ್ರಿಯಾನ ಅಮ್ಮ.. ದೂರಂದ ಸೀನ್ ನೋಡಿಕಂಡ್ ಒಳಗೊಳಗೆ ಖುಷಿ ಪಟ್ಟ್ ಕಂಡೇ  ಹೋದೆ.. ನನ್ನ ಅಮ್ಮ ಮತ್ತೆ ಅವ್ಳ ಅಮ್ಮ ಮಾತಾಡ್ತ ಇದ್ದೊ.. ಪಕ್ಕಲೇ ಪ್ರಿಯಾ ನಿಂತ್ಕಂಡ್ ಇತ್ತ್.. ನಾನ್ ಹತ್ರ ಹೋದೆ..

ಅಮ್ಮ:- ರಾಧಕ್ಕ.. ನನ್ನ ಮಗ.. ವಿಕ್ಕಿ..
 ನಾನ್:- ನಮಸ್ತೆ ಆಂಟಿ..
ಪ್ರಿಯನ ಅಮ್ಮ:- ಇವನೇ ನಮ್ಮನ ಕರ್ಕೊಂಡ್ ಬಂದದ್ ಹೇಮ.. ಗೊತ್ತೇ ಆತ್ಲೆ ನೋಡು, ಸಣ್ಣದರ್ಲಿ ನೋಡ್ದ್ ಅಲ..
ಅಮ್ಮ:- ಹಾ.. ಮಕ್ಕ ಬೆಳಿಯೊದೇ ಗೊತ್ತಾಲೆ..
ಪ್ರಿ.ಅಮ್ಮ:- ಹೌದೌದು.. ವಿಕ್ಕಿ ಎಂಥ ಮಾಡ್ತ ಒಳ ಈಗ??
ನಾನ್:- ('ಸದ್ಯಕ್ಕೆ ನಿಮ್ಮ ಮಗಳ್ನ ನೋಡ್ತಾ ಒಳೆತಾ ಮನ್ಸ್ ಲಿ ಹೇಳಿಕಂಡೆ) ಹಾ... ಡಿಪ್ಲೊಮೊ ಮುಗ್ಸಿ ಜಾಬ್ ಗೆ ಟ್ರೈ ಮಾಡ್ತ ಒಳೆ ಆಂಟಿ..
ಪ್ರಿ.ಅಮ್ಮ:- ಹೌದಾ.. ಸರಿ ಸರಿ.. ಒಳ್ಳೆದಾಗಲಿ.. (ಪ್ರಿ.ಅಮ್ಮ ಅರ್ಜೆಂಟ್ ಲಿ ಇದ್ದೊ ಕಂಡದೆ) ಸರಿ ಹೇಮ.. ನಾವು ಹೊರ್ಟವೆ ಆಗ..
ಅಮ್ಮ:- ಸರಿ, ಸರಿ..ಅಕ್ಕ.. ಲೇಟ್ ಆತ್ ಅಲಾ..
(ಪ್ರಿಯನ ಅಮ್ಮ ಅವರ ಬ್ಯಾಗ್ಂದ ಎಂತೊ ಹೊರಗೆ ತೆಗ್ದೊ.. ನಾನ್ ಎಂತಪ್ಪ ಅದ್ ನೋಡ್ದೆ..ಕವರೊಳಗೆ ಇತ್ತ್.. ನಂಗೆ ಗೊತ್ತಾತ್ಲೆ..)
ಪ್ರಿ. ಅಮ್ಮ:- ಹೇಮಾ, ಮದ್ವೆ... ಮನೆಯವೆಲ್ಲಾ ಬರೊಕು, ದಿನ ಮುಂಚಿತವಾಗಿ ಬರೊಕು.. ಆತಾ.. ಇನ್ನು ಸರಿ 15 ದಿನಕ್ಕೆ..
ನಾನ್:- ಯಾರ ಮದ್ವೆ ಆಂಟಿ..
ಪ್ರಿಯನ ಅಮ್ಮ:- ಇವ್ಳ್ದೆ.. ನನ್ನ ಮಗ್ಳು.. ಪ್ರಿಯಂದ್... (ಢಮಾರ್! ತಾ ಒಂದು ಶಬ್ದ ಬಾತ್.. ಎಲ್ಲರ ಪ್ರಕಾರ ಅದ್ ಅಡುಗೆ ಮನೇಲಿ ದೊಡ್ಡ ಪಾತ್ರೆ ಬಿದ್ದದ್.. ಆದ್ರೆ ನಂಗೆ ಅದ್ ನನ್ನ ಹ್ರದಯ ಬ್ಲಾಸ್ಟ್ ಆದ್..) ನನ್ನ ಅವಸ್ಥೆ ನೊಡ್ದ
ಪ್ರಿಯನ ಮುಖಲಿ ಅದೇನೊ ಸಾಧನೆ ಮಾಡ್ದಂಗೆ, ನನ್ನ ಗೇಲಿ ಮಾಡ್ದಂಗೆ ಒಂದು ನಗೆ... (ಗೂಡೆಗಳಿಗೆ ಆಟ ಆಡಿಕೆ ಮನೇಲಿ ಕೇಳಿದೆಲ್ಲಾ ತೆಗ್ದ್ ಕೊಟ್ಟವೆ.. ಆದರೂ ಯಾಕೆ ಹೈದಗಳ ಭಾವನೆಗಳೊಟ್ಟಿಗೆ ಆಟ ಆಡುವೆ??)..
                                                                                       -ಲತನ್ ಅಯ್ಯೇಟಿ