Tuesday, 15 November 2011

ಕೆ ಎ ಎಸ್ ಪರೀಕ್ಷೆ....

ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗೆ ಕೆಪಿಎಸ್ಸಿ ಅಜರ್ಿ ಕರ್ದುಟ್ಟು. ಎಸಿ, ಡಿವೈಎಸ್ಪಿ, ತಹಶೀಲ್ದಾರ್ ಸೇರ್ದಂಗೆ 352 ಹುದ್ದೆಗಳಿಗೆ ನೇಮಕ ಮಾಡಿಕೊಂಡವೆ. ಅಜರ್ಿ ಹಾಕಿಕೆ ಕೊನೆ ದಿನ ಡಿಸೆಂಬರ್ 2. ಪ್ರಿಲಿಮಿನರಿ ಪರೀಕ್ಷೆ , 2012 ಫೆಬ್ರವರಿ ತಿಂಗಳಲ್ಲಿ ನಡ್ದದೆ.ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

Monday, 14 November 2011

ಬುರು ಬುರು ರಾಮಾ !


ಇದೇನಪ್ಪಾ ಕಪ್ಪು ಮೋಡ...
ಮಳೆ ಬಂದದೆಯೇನೋ
ಗುಡುಗಿನ ಶಬ್ಧ ಇಲ್ಲೆ...
ಮತ್ತೆಂತ ಅದ್ ಬುರುಬುರು
ಓ ತಲಕಾವೇರಿ ರಾಮ !
ರಾಮಾ ರಾಮಾ ಅದೆಂಥ ಹೊಗೆ !
`ಭೂಮಿ ತಬ್ಬಿದ್ಮೋಡ ಇದ್ದಂಗೆ'
ಕಪ್ಪು ರಸ್ತೆ ಮೇಲೆ ಮಸಿ ಹರಡಿದಂಗೆ
ಭೂಮಿ ಮೇಲೆ ಅಮವಾಸ್ಯೆ ಆಕಾಶ ಬಿದ್ದಂಗೆ !
ರಾಮಾ ರಾಮಾ ಅದೇನ್ ಫಾಸ್ಟ್..
ಮಡಿಕೇರಿ ತಲುಪಿಕೆ 3 ಗಂಟೆ !
ಅಣ್ಣಿ ಹೈದ ನಡ್ದೇ ಮುಟ್ಟಿದೆ
ಬಸವನ ಹುಳಕ್ಕೇ ನಾಚಿಕೆ ಆದೆ
ರಾಮಾ ರಾಮಾ ಪುಟ್ಟ ಪುಟಾಣಿ ಬಸ್!
ಅದಕ್ಕೆರಡ್ ಕಣ್ಣ್.. ಮಿಣ ಮಿಣ ಮಿಂಚಿದೆ
ಕನ್ನಡಕ ಹಾಕೋಕೇನೋ !
ಚಾಂಪನ ದೃಷ್ಟಿನೇ ಎಷ್ಟೋ ಲಾಯ್ಕುಟ್ಟು
ರಾಮಾ ರಾಮಾ ಏನ್ ಲುಕ್ಕು !
ನಮ್ ರೋಡ್ಲಿ ನೀ ಬಾದೇ ನಮ್ಮ ಲಕ್ಕ್ !
ಸಾಕಪ್ಪಾ ಸಾಕ್ ನಿನ್ ಸಹವಾಸ
ಡ್ರೈವರ್ದಾತ್, ನಿಂದ್ ಯಾಗ ರಿಟೈರ್ಮೆಂಟ್ ?

`ಸುಮ'

ನೀವೂ ಬರೆಯನಿ...
arebhase@gmail.com

ಕುಶಾಲನಗರಲಿ ಜಾತ್ರೆಯ ಗೌಜಿ


ಕೊಡಗಿನ ಹೆಬ್ಬಾಗಿಲು ಕುಶಾಲನಗರ. ಗಣೇಶ ಇಲ್ಲಿನ ಪ್ರಸಿದ್ಧ ದೇವ್ರು. ಇಲ್ಲಿ ನಿನ್ನೆ ರಥೋತ್ಸವ ನಡ್ತ್. ಎಲ್ಲಾ ಕಡೆಗಳಿಂದ   ತುಂಬಾ ಜನ ಬಂದಿದ್ದೊ. ರಥಬೀದಿ ಉದ್ದಕ್ಕೂ ಈಡುಕಾಯಿ ಒಡೆಯುದು ಇಲ್ಲಿನ ವಿಶೇಷ. ಅಲ್ಲದೆ ಸಂತೆ ಮೈದಾನದಲ್ಲಿ ನಡೀತ್ತಿದ್ದ ಜಾತ್ರೆನ ಈಸಲ ನೆಹರು ಬಡವಾಣೆಗೆ ಸ್ಥಳಾಂತರ ಮಾಡ್ಯೊಳೊ. ಇನ್ನೊಂದು ತಿಂಗ ಇಲ್ಲಿ ಜಾತ್ರೆ ಸಂಭ್ರಮ ಇದ್ದದೆ.

- ತಳೂರು ಡಿಂಪಿತಾ
ನೀವೂ ಬರೆಯನಿ..
arebhase@gmail.com

Sunday, 13 November 2011

ಲಿಪ್ಸ್ಟಿಕ್ ಲಿಲ್ಲಿ..


ಲಕ್ಕವಳ್ಳಿಯ ಲಕ್ಕಿ ಗೂಡೆ 
ಲಿಪ್ ಸ್ಟಿಕ್ ಲಿಲ್ಲಿ
ಅದೆಂಥ ಸ್ಟೈಲು, ಅದೆಂಥ ಸ್ಮೈಲೂ
ಹೊಂಡ ಬೈಕ್ನ ಅಣ್ಣಿ ಹೈದನೇ
ಹೊಂಡಕ್ಕೆ ಬಿತ್ತ್!
ಬಟ್ಲರ್ ಇಂಗ್ಲಿಷ್, ಹೈ ಹೀಲ್ಡ್ ಚಪ್ಪಲ್
ಕೈಲಿ ಮೊಬೈಲ್, ಕಿವೀಲಿ ಹೆಡ್ಫೋನ್
ಟೈಟ್ ಜೀನ್ಸ್, ಜಂಬದ ಚೀಲ
ಲಿಪ್ಸ್ಟಿಕ್ ಲಿಲ್ಲಿದ್ ಸ್ಟೈಲೋ ಸ್ಟೈಲು
ಓದಿದ್ ಡಿಗ್ರಿ, ಬೆಂಗ್ಳೂರ್ಲಿ ಕೆಲ್ಸ
ಹೈದ ಬೇಕ್ಗಡ ಲಿಪ್ಸ್ಟಿಕ್ ಲಿಲ್ಲಿಗೆ !
ಲಾಯ್ಕ ಕಲ್ತಿರೋಕು, ಸಕರ್ಾರಿ ಚಾಕರಿ ಇರೋಕು
ಅಪ್ಪ, ಅಮ್ಮಂಗೆ ಒಬ್ಬನೇ ಮಂಞ ಆಗಿರೋಕು !
ಪಾಪ ಅಣ್ಣಿ, ಕಾಳ್ ಹಾಕಿದ್ದೇ ಬಾತ್
ಲಿಪ್ಸ್ಟಿಕ್ ಲಿಲ್ಲಿ ಕೈಕೊಟ್ಟೇ ಬಿಡ್ತ್ !
ಲಕ್ಕವಳ್ಳಿಲಿ ಈಗ `ಮುಂಗಾರು ಮಳೆ'
ಅಣ್ಣಿನೇ `ಗಣೇಶ'.. ಲಿಲ್ಲಿ...?

- `ಸುಮ'


ನೀವೂ ಬರೆಯನಿ...
ಎಂಥ ಬೇಕಾರೂ ಬರೆಯಕ್. ಆದ್ರೆ ಅರೆಭಾಷೇಲಿರೋಕು

Friday, 11 November 2011

ಮೊದಲ ಟಿವಿ ಕಥೆ


ಮಳೆಂತೇಳಿರೇ ಕಣ್ಮುಂದೆ ಬಾದು ಭಾಗಮಂಡಲ. ಒಂದ್ಸಲ ಮಳೆ ಶುರುವಾತುಂತೇಳಿರೆ ಜಾತ್ರೆ ವರೆಗೆ ಬಿಡದೇ ಸುರೀತ್ತಿದ್ದದೆ. ಸರಿಯಾಗಿ ಬಿಸಿಲು ಇರ್ದು 6 ತಿಂಗ ಮಾತ್ರ. ಇನ್ನು ಅಲ್ಲಿ ಸುತ್ತ ಮುತ್ತ ಇರ್ವ ಹಳ್ಳಿಗಳಲ್ಲಿ ಇರವ್ರ ಪಾಡಂತೂ ದೇವ್ರಿಗೇ ಪ್ರೀತಿ. ಇದು ಈಗನ ಕಥೆ ಅಲ್ಲ... 30-40 ವರ್ಷ ಹಿಂಗೆ ಇತ್. ಈಗ ಬುಡಿ ಮಳೆ ಬಾಕೆ ಅಲ್ಲಿ ಕಾಡು ಇದ್ದ್ರೆ ತಾನೆ. ಕಾಡೆಲ್ಲಾ ಹೋಗಿ ತೋಟಗ ಬಂದೊಳೊ. ಮಳೆ ಬಂದ್ರೂ ಆಗ ಬರ್ತಿದ್ದಂಗೆ ಜೋರಾಗಿ ಬಾದುಲೆ.
ಅದು 1985-86 ಇರೋಕು ಕಂಡದೆ. ಭಾಗಮಂಡಲದಂಥ ಮಳೆ ಊರಿಗೆ ಮೊದ್ಲ ಸಲ ಟಿವಿ ಬಾತ್. ಅದ್ ವೈಟ್ ಆ್ಯಂಡ್ ಬ್ಲ್ಯಾಕ್ ಟಿವಿ. ರೇಡಿಯೋ ರಿಪೇರಿ ಮಾಡೋ ರಮೇಶ ಈ ಟಿವಿ ತಂದಿತ್ತ್. ಎಲ್ಲೋ ದೂರಲಿ ನಡ್ದದ್ನ ಈ ಟಿವಿ ತೋರ್ಸಿದೆ ಗಡ ಅಂತ ಹೇಳ್ದು ಆಗಿನ ಕಾಲಕ್ಕೆ ದೊಡ್ಡ ವಿಶೇಷ ! ಎಲ್ಲವೂ ರಮೇಶನ ಅಂಗಡಿ ಮುಂದೆ ಸೇರಿದ್ದೊ...ಟಿವಿ ನೋಡಿಕೆ. ಅದಿಕ್ಕೆ ರೇಡಿಯೋಕ್ಕೆ ಇದ್ದಂಗೆ ಒಂದು ಏರಿಯಲ್ ಇತ್... ಅದ್ನ ಮೇಲಕ್ಕೆ ಎಳ್ದ್ ರಮೇಶ ಟಿವಿ ಆನ್ ಮಾಡ್ತ್. ಎಲ್ಲವೂ ಬಿಟ್ಟ ಕಣ್ ಬಿಟ್ಟಹಂಗೆ ನೋಡ್ತಿದ್ದೋ...ಊಹುಂ, ಟಿವಿ ಒಳಗೆ ಬಿಳಿ ಬಿಳಿ ಚುಕ್ಕಿ ಬಿಟ್ರೆ ಬೇರೆಂತನೂ ಕಾಣ್ತಿಲ್ಲೆ! ಎಲ್ಲವ್ಕೆ ರಮೇಶನ ಮೇಲೆ ಸಿಟ್ಟ್ ಬಾತ್. ಇಂವ ಸುಮ್ನೆ ನಮ್ಮನ್ನ ಮಂಗ ಮಾಡಿಕೆ ಹಿಂಗೆಲ್ಲಾ ಮಾಡ್ತುಟ್ಟುತ ಅವ್ನೊಟ್ಟಿಗೆ ಜಗಳಕ್ಕೆ ನಿಂತೊ...`ಭಾಗಮಂಡಲ ಎತ್ತರಲಿ ಉಟ್ಟು. ಸುತ್ತ ಕಾಡ್ ಬೇರೆ. ಅದ್ಕೆ ಸಿಗ್ನಲ್ ಸಿಕ್ಕುಲೆ...ನಾಳೆ ಬನ್ನಿ, ಆ್ಯಂಟೆನಾ ಕಟ್ಟಿ ನಿಮ್ಗೆ ಪಿಚ್ಚರ್ ತೋರ್ಸಿನೆ' ಅಂತ ಹೇಳೆ ಎಲ್ಲರನ್ನ ವಾಪಸ್ ಕಳ್ಸಿತ್ತ್.
ಅಂತೂ ಆ ನಾಳೆ ಬಂದೇಬಿಡ್ತ್. ಬೆಳಗ್ಗೆನೇ ಎಲ್ಲವೂ ರಮೇಶನ ಅಂಗ್ಡಿ ಹತ್ರ ಬಂದೋ... ನೋಡಿರೇ ಅಂಗಡಿಗೆ ದೊಡ್ಡ ಬೀಗ ! ರಮೇಶನ ಮೇಲೆ ಎಲ್ಲವ್ಕೂ ಏನೋ ಅನುಮಾನ. `ಇಂವ ನಮ್ಗೆ ನಿನ್ನೆ ಸರಿಯಾಗಿ ಟೊಪ್ಪಿ ಹಾಕಿತ್ರಾ..' ಅಂತ ಹೇಳ್ಕಂಡ್ ಎಲ್ಲಾ ಜಾಗ ಖಾಲಿ ಮಾಡ್ದೊ... ಸಾಯಂಕಾಲ 3 ಗಂಟೆ ಇರ್ದು... ರಮೇಶನ ಅಂಗಡಿ ತೆಗ್ದಿತ್ತ್ ! ಕಬ್ಬಿಣದ ಉದ್ದ ರಾಡ್ಗೆ ಅದೆಂಥದ್ದೋ ಚಿಕ್ಕ ಚಿಕ್ಕ ಅಲ್ಯೂಮೀನಿಯಂ ಕಡ್ಡಿಗಳ್ನ ಫಿಟ್ ಮಾಡ್ತಿತ್ತ್... ಇದ್ ಪುಟ್ಟುನ ಕಣ್ಣಿಗೆ ಬಿತ್... ಈ ವಿಷಯನ ಊರು ಪೂತರ್ಿ ಟಾಂ ಟಾಂ ಮಾಡ್ತ್. ಮತ್ತೆ ನಿನ್ನೆನಂಗೆನೇ ಇಂದೂ ರಮೇಶನ ಅಂಗಡಿ ಮುಂದೆ ತುಂಬಾ ಜನ ಸೇರ್ದೊ. ಬೆಳಗ್ಗೆ ಅಂವ ಆ್ಯಂಟೆನಾ ತಕ್ಕೊಂಡು ಬಾಕೆ ಮಡಿಕೇರಿಗೆ ಹೋಗಿತ್ತ್. ಅದ್ನೇ ಈಗ ಫಿಟ್ ಮಾಡ್ತಿತ್ತ್... ಬುದ್ಧ ಆಗ್ಲೇ ಮಾಡಿ ಮೇಲೆ ಹತ್ತಿ ಕೂತಿತ್ತ್. ಅಂಗಡೀಲಿ ಟೇಬಲ್ ಮೇಲಿದ್ದ ಟಿವಿ ನಿನ್ನೆ ತರನೇ ಬಿಳಿ ಬಿಳಿ ಚುಕ್ಕಿಗಳ್ನ ತೋರ್ಸ್ತ್ತಿತ್ತ್.. ಸ್ವಲ್ಪ ವ್ಯತ್ಯಾಸ ಅಂದ್ರೆ, ಆ್ಯಂಟೆನಾ ಸ್ವಲ್ಪ ಅಲ್ಲಾಡಿರೂ ಕಪ್ಪು ಅಡ್ಡಡ್ಡ ಗೆರೆ ಕಾಣಿಸ್ತಿತ್ತ್. ಬುದ್ಧ ಮೇಲೆ ನಿಂತ್ಕಂಡ್ ಆ್ಯಂಟೆನಾ ಎತ್ತಿದಂಗೆ ಟಿವಿಲಿ ಏನೋ ಬರೆ ಬರೆ ಕಂಡಂಗೆ ಆಗ್ತಿತ್ತ್. `ಓ ಬುದ್ಧ ಟಿವಿಲಿ ಬರ್ತುಟ್ಟು' ತಾ ಅಲ್ಲಿ ಸೇರಿದ್ದವೆಲ್ಲಾ ಹೇಳಿಕೆ ಶುರು ಮಾಡ್ದೊ...
ಕೊನೆಗೆ ಸಾಯಂಕಾಲ ಆಗ್ತಿದ್ದಂಗೆ ರಮೇಶನ ಅಂಗಡಿ ಮಾಡಿ ಮೇಲೆ ಟಿವಿ ಆ್ಯಂಟೆನಾ ಫಿಟ್ ಮಾಡಿ ಆತ್... ಆದ್ರೆ ಟಿವಿಲಿ ಮಾತ್ರ ಅಡ್ಡ ಕಪ್ಪುಗೆರೆ ಬಿಟ್ರೆ ಬೇರೆಂಥ ಕಾಣ್ತಿತ್ಲೆ. ಮೇಲೆ ಕೂತಿದ್ದ ಬುದ್ಧಂಗೆ ಆ್ಯಂಟೆನಾ ತಿರುಗ್ಸೋ ಕೆಲ್ಸ. ಕೆಳ್ಗೆ ಕುದ್ದಿದ್ದ ರಮೇಶ `ಏ ಬುದ್ಧ... ಲೆಫ್ಟ್ಗೆ ತಿರುಗ್ಸ್ರಾ...ರೈಟ್ಗೆ ತಿರುಗ್ಸ್ರಾ' ಹೇಳ್ತನೇ ಇತ್ತ್... ಅಷ್ಟೊತ್ತಿಗೆ ಟಿವಿಲಿ ಮಲೆಯಾಳಂ ವಾಯ್ಸ್ ಕೇಳಿಕೆ ಶುರುವಾತು... ಬುದ್ಧ ಆ್ಯಂಟೆನನಾ ಇನ್ನುಂಚೂರು ತಿರುಗ್ಸಿಕಾಕನ ಏನೋ ಗೊಂಬೆಗ ಕಂಡ ಹಂಗೆ ಆತ್...`ನಿಲ್ಸ್...ನಿಲ್ಸ್' ರಮೇಶನ ಬೊಬ್ಬೆ... ಅಂವ ಮತ್ತೆ ಟಿವಿ ಹತ್ರ ಬಂದ್ ಮತ್ತೆ ಯಾವುದೋ ಬಟನ್ಗಳ್ನೆಲ್ಲಾ ಒತ್ತಿ ಏನೇನೋ ಮಾಡ್ತ್.... ಆಶ್ಚರ್ಯ...ಮಲೆಯಾಳಂ ಪಿಚ್ಚರ್ ಬರ್ತಿತ್ತ್... ರಮೇಶ ಹೇಳ್ತ್ `ಅದ್ ತಿರುವನಂತಪುರಂ ಸ್ಟೇಷನ್' ಆ ದಿನ ಭಾಗಮಂಡಲದವ್ಕೆ ರಮೇಶ ದೊಡ್ಡ ಹೀರೋ....ಟಿವಿಂಥೇಳಿರೆ ಏನೂತಾ ಮೊದ್ಲ ಸಲ ಆ ಊರಿಗೆ ಅಂವ ಹೇಳಿಕೊಟ್ಟಿತ್ತ್ !


- ಸುನಿಲ್ ಪೊನ್ನೇಟಿ,
ಭಾಗಮಂಡಲ

ವರದಕ್ಷಿಣೆ


 ಅಮ್ಮ ಹೆತ್ತು ಹೊತ್ತು
      ತನ್ನ ಬೆಲೆನೇ ತೆತ್ತು
      ಹೆಣ್ಣು ಸಮಾಜದ ಕಣ್ಣು
      ಹೊರಗಡೆ ಜನಗಳೊಟ್ಟಿಗೆ
      ಸಲಿಗೇಲಿ ಮಾತಾಡಬೇಡ,
      ಜನಗಳ ಕೆಟ್ಟ ಕಣ್ಣಿಗೆ ಬಿದ್ದೀಯ
      ಅಮ್ಮನ ಸಿಹಿಮುತ್ತನಂಥ ಬುದ್ಧಿಮಾತು
      ಹೇಳಿಕೊಂಡು ಕಣ್ಣಲ್ಲಿ ಕಣ್ಣಿಟ್ಟ್
      ಮಗಳ್ನ ಹೂವಂಗೆ ಸಾಂಕಿದೆ
      ಕೊನೆಗೊಂದು ದಿನ
      ಅಮ್ಮಂಗೆ ತಿಳಿಯದೆ
      ವಿಧಿ ಕಾಣದೆ ಮಗಳ ಕೈಸೇರಿಯೋದೆ
      ಅಂದು ಹೂವಂಗೆ ಇದ್ದ ಮಗಳನ್ನ ಮುಳ್ಳಾಗಿಸಿದೆ
      ವಿಧಿಯಾಟ ಮನೆಯೆಂಬ ಲಕ್ಷ್ಮಣರೇಖೆನಾ ಮೀರಿಸಿದೆ
      ಆ ಘಟನೆ
      ಧಾರುಣ ಕಥೆ
      ಅಮಾನುಷ ಕಥೆ
      ಆಗೋದೇ ಒಂದು ದಿನ
      ಇಲ್ಲೆ ಇಲ್ಲೆ ಅದು ಸತ್ಯ ಸತ್ಯ
      ನಿಜ ಘಟನೆತಾ ಸಾವಿನ ಅಂತ್ಯದಲ್ಲಿ
      ಪ್ರಪಂಚಕ್ಕೆ ಗೊತ್ತಾದೆ!

- ತಳೂರು ಡಿಂಪಿತಾ, ರಂಗಸಮುದ್ರ

Thursday, 10 November 2011

ಹುತ್ತರಿ ಹಬ್ಬ...


ಹುತ್ತರಿ ಬಾತ್ ಹುತ್ತರಿ.. ಪೊಯ್ಲೇ ಪೊಯ್ಲೇ
ಕೋಲಾಟ ಆಡಿಕೆ ಪೋಯಿ ಬನ್ನಿ ಸ್ನೇಹಿತರೇ...
ಮಳೆಗಾಲ ಹೋತ್ ಚಳಿಗಾಲ ಶುರುವಾಗ್ಯುಟ್ಟು
ಹೊತಾರೆ ನೋಡಿರೆ ಎಲ್ಲೆಲ್ಲೂ ಮಂಜು ಬಿದ್ದುಟ್ಟು
ಕಂಬಳಿ ಮೇಲೆ ಕಂಬಳಿ ಹೊದ್ರೂ ಚಳಿಯೋ ಚಳಿ
ಹೊರಗೆ ಕಾಲಿಟ್ರೆ ಮೈ ಕೊರ್ದದೆ ಕೋಟ ಗಾಳಿ
ಭೂಮಿ ತಾಯಿಗೆ ಹಸಿರ ಸಿಂಗಾರ..
ಗದ್ದೆಲೆಲ್ಲಾ ಕಾಣ್ತುಟ್ಟು ಭತ್ತ ಬಂಗಾರ
ಕೋಲಾಟ ಬಾಣೇಲಿ ಕಾಡು ಬೆಳ್ದುಟ್ಟು
ಸಫಾಯಿ ಮಾಡಿಕೆ ಅಣ್ಣಿ ಹೈದ ಕಾಯ್ತುಟ್ಟು
ಬನ್ನಿ ಗೆಳೆಯರೇ ಕೋಲಾಟ ಕಲಿಯನಾ..
ದೇವ್ರ ಹೆಸರೇಳ್ಕಂಡ್ ಕುಣಿಯನಾ
ಹುತ್ತರಿ ಬಾತ್ ಹುತ್ತರಿ ಪೊಯ್ಲೇ..ಪೊಯ್ಲೇ...

- `ಸುಮ' ಮಡಿಕೇರಿ

Wednesday, 9 November 2011

ಅರೆಭಾಷೆ ಡಾಕ್ಯುಮೆಂಟರಿ

ನಮ್ಮವ್ರ ಬಗ್ಗೆ ಒಂದು ಡಾಕ್ಯುಮೆಂಟರಿ ಬರ್ತುಟ್ಟು... ಚೀಯಂಡೀರ ತೇಜಶ್ ಪಾಪಯ್ಯ ಮತ್ತೆ ಮಂಜು ಹೊನ್ನುಕೋಟಿ ಈ ಡಾಕ್ಯುಮೆಂಟರಿ ರೆಡಿ ಮಾಡ್ತೊಳೊ. ಈಗಾಗ್ಲೆ ಇದ್ರ ಪ್ರೊಮೋ ಬಿಡುಗಡೆ ಆಗ್ಯುಟ್ಟು... 

ಇಲ್ಲಿ ಕ್ಲಿಕ್ ಮಾಡಿ   ಅರೆಭಾಷೆ ಡಾಕ್ಯುಮೆಂಟರಿ


Saturday, 5 November 2011

ಬನ್ನಿ ಬೇಟೆಗೆ ಪೋಯಿ...


ಬೇಟೆಗೆ ಪೋಯಿ ಬನ್ನಿ...
ಏ ನೀ ಕೋವಿ ತಕ್ಕಾ.. ಅಂವ ತೋಟ ತರ್ಲಿ
ನಾ ಜೂಲನ ಕರ್ಕಂಡನೆ, ಬೇಟೆಗೆ ಪೋಯಿ...
ಅಲ್ಲಿ ಗುಡ್ಡಲಿ ನಿನ್ನೆ ಕ್ಯಾಮ ಕೂಗ್ತಿತ್ತ್ !
ತ್ಯಾಂಪನ ಏಲಕ್ಕಿ ತೋಟಲಿ ಕಡವೆ ಉಟ್ಟುಗಡ
ಕಾವೇರಿ ಹೊಳೇಲಿ ನೀರು ಕುಡಿಯಕ್ಕೆ ಕಾಟಿ ಬಂದಿತ್ತ್
ಬನ್ನಿ ಬೇಟೆಗೆ ಪೋಯಿ....
ಮಲೆ ಕೊಲ್ಲೀಲಿ ತುಂಬಾ ಮೀನುಗ ಒಳೋ
ನೀಲಿ ಮರ ಕೊಡೀಲಿ ದೊಡ್ಡಜೇನ್ ಕಾಣ್ತುಟ್ಟು..
ಬೈನೆ ಮರಲಿ ಮುಚ್ಚ ಕಣ್ಣ್ ಕೊಡ್ತಿತ್
ಬನ್ನಿ ಬೇಟೆಗೆ ಪೋಯಿ
ಗಣಿ ನೀ ಗಣೇಶ ಬೀಡಿ ಹಿಡ್ಕ, ಧಮ್ ಗೆ ಬೇಕಾದೆ
ಮಣಿ ನೀ ಮೆಕ್ಡೋಲ್ ಹಿಡ್ಕ, ಚಳಿಗೆ ಒಳ್ಳೇದ್
ಅಣ್ಣಿ ನೀ ಹಂದಿಸಾರ್ ಮಾಡ್ಕಂಡ್ ಬಾರಾ...
ಎಲ್ಲಾ ಬನ್ನಿ ಬೇಟೆಗೆ ಪೋಯಿ...
ಎಷ್ಟ್ ಲಾಯ್ಕ ಇತ್ತಲ್ಲಾ, ಆ ಕಾಲ !
ಮನಸ್ಸ್ ಬಂದಾಗ ಕಾಡಿಗೆ ಹೋದು, ಢಂ...
ಅಂದ್ ಮನೇಲಿ ಮಾಂಸದೂಟ !
ಇಂದ್ ಹಂಗೆ ಮಾಡಿರೆ ಜೈಲೂಟ !

- `ಸುಮ' ಮಡಿಕೇರಿ

ನೀವೂ ಬರೆಯನಿ. ..

ದರ್ಶನ್ ಪತ್ರ...

ಅರೆ ಭಾಷೆಯ ಬ್ಲಾಗ್ ಶುರಾದ್ದಕ್ಕೆ ಮೊದ್ಲು ನಾನು ಧನ್ಯವಾದಂಗ ತಾ ಹೇಳ್ನೆ . ಮತ್ತೆ ನಮ್ಮ ಭಾಷೆ ನಿಜಕ್ಕೂ ಪೊರ್ಲಾದ ಭಾಷೆ ಅದ್ಕೆ ಸಾವುತೇಳ್ದೇ ಇಲ್ಲೆ. ಪೊಪ್ಪ  ಅಮ್ಮ ಮತ್ತೆ ಅವ್ವ ತಾತಂಗ ಕಲ್ಸಿದ ಈ ಭಾಷೇನಾ ನಾವು ಖಂಡಿತ ನೀರು ಹೊಯ್ದ್ ಬೆಳೆಸೊಕು. 
ಇಂದ್ ನಾ ದಿನಾಲಿ ಕೊಡಗ್ ಬುಟ್ಟು ಹೊರಗೆಲ್ಲೊ ಗೊತ್ತಿಲ್ದಾ ಭಾಷೆನಾ ಮಾತಾಡಿಕಂಡ್  ಕೈಲ್ ಪೊಳ್ದ್ ಗೊ ಹುತ್ತರಿಗೊ ಒಮ್ಮೆ ಮನೆ ಕಡೆ ಬಂದ್ ಮುಖ ತೋರ್ಸಿ ಹೊಗವೇ ಜಾಸ್ತಿ ಅಂಥವು ಅವರ ಮಕ್ಕಳಿಗೆ ಹೆಂಗೆ ಅರೆಭಾಷೆ ಕಲ್ಸಿವೆ. 
ಕೊಡಗ್ ನಾ ಗೌಡ ಬಾಂಧವ್ ಗ ನಮ್ಮ ಭಾಷೆ ಮಣ್ಣ್ ನ ಬುಟ್ಟು ಕೊಡಕಾಗದ್ ಮತ್ತೆ ನಾವು ನಮ್ಮ ಹಬ್ಬ ಹರಿದಿನಗಳ್ನ ಕೂಡ ಲಾಯಾಕ್ಕಾಗಿ ಮಾಡ್ತಾ ಬರೊಕು 
ವೆಂಕಟ್ರಮಣ ಗುಳಿಗ ಪಾಷಣ ಮೂರ್ತಿ ನಮ್ಮ ಮನೆನಾ ಮತ್ತೆ ಅಕ್ಕ ತಂಗೆಕಳ್ನ ಈ ಮಣ್ಣ್ ನ ಲಾಯಕ್ಕ ಇಟ್ಟಿರ್ಲಿ ತಾ ಕೇಳಿ ಕಂಡವೆ.

- ದರ್ಶನ್  ಕಾಸ್ಪಾಡಿ
ಧನ್ಯವಾದಗ ದರ್ಶನ್, ನಿಮ್ಮಿನ್ದನೂ ಲೇಖನಗ ಬರೋಕು - ಸಂ.   

Thursday, 3 November 2011

ಗೂಡೆನ ಸ್ವಪ್ನ !


ಅಂವ ನನ್ನ ಹೈದ.. ಹೀರೋಹೊಂಡ ಬೈಕ್ನ ಹೈದ...
ಕಾಲೇಜು ರೋಡ್ಲಿ ಸಿಕ್ಕಿದ ಹೈದ, ಪೊರ್ಲುನ ಹೈದ
ಮರಗೋಡ್ಲಿ ಕಾಫಿ ತೋಟ ಉಟ್ಟುಗಡ
ಅವನಪ್ಪ ಟಯೋಟ ಕಾರ್ ಓನರ್ಗಡ
ಮಾತಾಡೋಕು...ನನ್ನ ಹೈದನ ಜೊತೆ..
ಜೀನ್ಸ್ ಪ್ಯಾಂಟ್.. ಊಹುಂ, ಅವಂಗೆ ಲಾಯ್ಕ ಇಲ್ಲೆ
ಟೀ ಷಟರ್್... ಪರ್ವಾಗಿಲ್ಲೆ ಅಡ್ಜಸ್ಟ್ ಆದೆ..
ಹೇಳೋಕು... ಇದ್ನೆಲ್ಲಾ ನನ್ನ ಹೈದಂಗೆ...
ಹೇರ್ಸ್ಟೈಲ್ ಓಕೆ...ನಗೆ ಸೂಪರ್..
ಮೀಸೆ... ಬೇಡಪ್ಪಾ, ಇದ್ದರೆ ಚುಚ್ಚುದು ನಂಗೇನೇ...
ಫೋನ್ಲೇ ಹೇಳೊಕು... ನನ್ನ ಹೈದಂಗೆ
ಓ...ಅಮ್ಮಾ ಕರೀತುಟ್ಟು.. ಕೋಳಿ ಕೂಗ್ತುಟ್ಟು
ಆಂದ್ರೆ, ಎಲ್ಲಾ ಕನ್ಸ್...
ಇರ್ಲಿ.. ಇಂದಾದ್ರ್ ಸಿಕ್ಕಿದೇನೋ ನನ್ನ ಹೈದ !

- `ಸುಮ'
ಮಡಿಕೇರಿ

ನೀವೂ ಬರೆಯನಿ...


ಅಡ್ವಾಣಿ ಕೊಡಗಿಗೆ ಬಂದಿದ್ದಾಗ...

ಫೋಟೋ: ತೊರೆನೂರು ಪ್ರೇ0

Wednesday, 2 November 2011

ಕನ್ನಡ ಶಾಲೆಗಳಿಗೆ ಬೀಗ !



ಕಳ್ದ 15-20 ದಿನಂದ ಎಲ್ಲಾ ಕಡೆ ಹರಿದಾಡ್ತಿರೋ ಸುದ್ದಿತೇಳಿರೆ, ಕನ್ನಡ ಸ್ಕೂಲ್ಗಳ್ನ ಮುಚ್ಚಿವೆ ಗಡ ! ಹೌದು, ನಮ್ಮ ಶಿಕ್ಷಣ ಮಂತ್ರಿ ವಿಶ್ವೇಶ್ವರ ಹೆಗಡೆ ಕಾಗೇರಿನೇ ಇದನ್ನ ಹೇಳಿಯೊಳೊ. ಎಲ್ಲಿ 5ಕ್ಕಿಂತ ಕಡಿಮೆ ಮಕ್ಕ ಒಳನೋ ಆ ಸಕರ್ಾರಿ ಕನ್ನಡ ಸ್ಕೂಲ್ಗಳ್ನೆಲ್ಲಾ ಮುಚ್ಚಿಕೆ ಸಕರ್ಾರ ಆದೇಶ ಮಾಡ್ಯುಟ್ಟು. ಇದಕ್ಕೆ ಸಂಬಂಧಿಸಿದಂಗೆ ಕೆಲ್ಸನೂ ಶುರು ಆಗುಟ್ಟು. ಆದ್ರೆ ಇದ್ಕೆ ಕನ್ನಡಕ್ಕಾಗಿ ಹೋರಾಟ ಮಾಡೋವು ವಿರೋಧ ಮಾಡ್ಯೊಳೊ. ಹಿಂಗೆ ವಿರೋಧ ಬರ್ತಿದ್ದಂಗೆ, ಸಕರ್ಾರ ಮಾತ್ ಬದಲಿಸ್ಯುಟ್ಟು. ಶಾಲೆನ ಮುಚ್ಚುಲ್ಲೆ, ವಿಲೀನ ಮಾಡಿವೆ ಅಂತ ಮುಖ್ಯಮಂತ್ರಿ ಸದಾನಂದಗೌಡ ಮತ್ತೆ ಶಿಕ್ಷಣ ಮಂತ್ರಿ ಕಾಗೇರಿ ಹೇಳಿಯೊಳೊ. ಒಂದು ವೇಳೆ ಸಕರ್ಾರ ಹೇಳ್ತಿರೋ ಹಂಗೆ ಆತ್ತ ಆದ್ರೆ, ನಾವು, ನೀವು ಓದಿದ ಆ ಕನ್ನಡ ಶಾಲೆಗಳಿಗೆ ಬೀಗ ಬಿಳ್ದು ಗ್ಯಾರಂಟಿ.
ನಮ್ಮ ಕೊಡಗ್ಲಿ ಹಳ್ಳಿ ಹಳ್ಳೀಲಿ ಕನ್ನಡ ಶಾಲೆ ಉಟ್ಟು. ಹಂಗೆನೆ ಈಗ ಎಲ್ಲಾ ಕಡೆ ಕಾನ್ವೆಂಟ್ಗ ಕೂಡ ಶುರುವಾಗ್ಯೊಳೊ....ಇದ್ರಿಂದ ಕನ್ನಡ ಶಾಲೆಗಳಿಗೆ ಈಗ ಮಕ್ಕ ಹೋದು ಕಮ್ಮಿ. ಒಂದು ಸ್ಕೂಲ್ಲಿ 10 ಮಕ್ಕ ಇದ್ರೆ ಅದೇ ಜಾಸ್ತಿ. ಭಾಗಮಂಡಲ ಮಿಡ್ಲ್ ಸ್ಕೂಲ್ಲಿ ನಾವು ಓದುಕಾಕನ ಸುಮಾರು ನಾನೂರು ಮಕ್ಕ ಇದ್ದೊ. ಆಗ ಒಂದೊಂದು ಕ್ಲಾಸ್ಲೇ 60ರಿಂದ 70 ಮಕ್ಕ ಓದ್ತಿದ್ದೊ... ಈಗ ಅದೇ ಶಾಲೇಲಿ ಎಲ್ಲಾ ಮಕ್ಕ ಸೇರಿರೂ ಇಷ್ಟು ಸಂಖ್ಯೆ ಆಕಿಲ್ಲೆ. ಕೋರಂಗಾಲ, ಚೆಟ್ಟಿಮಾನಿ, ಚೇರಂಬಾಣೆ, ಬೆಟಗೇರಿ, ನಾಪೋಕ್ಲುಲಿ ಕಾನ್ವೆಂಟ್ಗ ಒಳೊ. ಅವ್ರದೇ ವ್ಯಾನ್ಲಿ ಬಂದ್ ಮಕ್ಕಳ್ನ ಕರ್ಕೊಂಡು ಹೋದವೆ. ಇನ್ನು ಅಪ್ಪ ಅಮ್ಮಂಗಂತೂ ನಮ್ಮ ಮಕ್ಕ ಇಂಗ್ಲಿಷ್ಲಿ ಓದಿರೇ ಮಾತ್ರ ಉದ್ಧಾರ ಆದು ಅನ್ನೋ ಹಂಗೆ ಆಗ್ಯುಟ್ಟು. ಇದ್ರಿಂದಾಗಿ ಭಾಗಮಂಡಲದಂಥ ಊರ್ಲಿ ಕನ್ನಡ ಶಾಲೆಗೆ ಮಕ್ಕ ಕಮ್ಮಿ ಆಗ್ತುಟ್ಟು. ಪರಿಸ್ಥಿತಿ ಹಿಂಗೆನೇ ಇದ್ರೆ, ಇನ್ನೊಂದು 2 ವರ್ಷಲಿ ಭಾಗಮಂಡಲ ಮಿಡ್ಲ್ ಸ್ಕೂಲ್ ಬಾಗ್ಲ್ಲಿ ಬೀಗ ನೋಡಿಕಾದು.
ಇನ್ನ್ ಮಡಿಕೇರಿ ಹತ್ರ ಮುಕ್ಕೋಡ್ಲು ತ ಒಂದು ಗ್ರಾಮ ಉಟ್ಟು. ನನ್ನ ಅಮ್ಮ, ಮಾವಂದಿರು, ಮಾವನ ಮಕ್ಕ ಎಲ್ಲಾ ಇಲ್ಲಿನ ಕನ್ನಡ ಸ್ಕೂಲ್ಲಿ ಓದಿದವು. ಆದ್ರೆ ಈಗ ಅಲ್ಲಿ ಒಂದು ಶಾಲೆ ಇತ್ತೇಳುವ ಯಾವುದೇ ಗುತರ್ು ಇಲ್ಲೆ. 10 ವರ್ಷ ಹಿಂದೆನೇ ಆ ಶಾಲೆ ಮುಚ್ಚಿಬಿಟ್ಟೊಳೊ. ಇದ್ ಸಕರ್ಾರ ಮುಚ್ಚಿದ್ ಅಲ್ಲ. ಆ ಊರವು ಮಕ್ಳನ್ನ ಮಡಿಕೇರಿ, ಮಾದಾಪುರ, ಸುಂಟಿಕೊಪ್ಪ, ಸೋಮವಾರಪೇಟೆ... ಹಿಂಗೆ ದೂರದ ಊರಿನ ಕಾನ್ವೆಂಟ್ಗಳಿಗೆ ಕಳಿಸಿಕೆ ಶುರುಮಾಡ್ದೊ... ಮುಕ್ಕೋಡ್ಲು ಸ್ಕೂಲ್ಗೆ ಒಬ್ಬ ಕೂಡ ಬರದಂಗೆ ಆತ್.. ಮಾಸ್ಟ್ರ್ ಒಂದೆರಡು ತಿಂಗ ನೋಡ್ದೊ.. ಹಿಂಗಾರೆ ಬೆಂಚ್ಗಳಿಗೆ ಪಾಠ ಮಾಡಿಕೆ ಆದುತೇಳಿ ಸ್ಕೂಲ್ ಮುಚ್ಚಿ ಬೇರೆ ಕಡೆಗೆ ಟ್ರಾನ್ಸ್ಫರ್ ತಕ್ಕಣ್ತ್. ಈಗ ಅಲ್ಲಿ ಕಷ್ಟ ಆಗಿರ್ದು ಬಡವ್ಕೆ. ದುಡ್ಡಿದ್ದವು ಸ್ಕೂಲ್ ವ್ಯಾಲ್ ಹತ್ತಿಸಿ ತಮ್ಮ ಮಕ್ಕಳನ್ನ ಕಳ್ಸಿವೆ. ಪಾಪ ದುಡ್ಡಿಲ್ದವ್ರ ಮಕ್ಕ ಮಣಬಾರದ ಬ್ಯಾಗ್ ಹಿಡ್ಕಂಡ್ 6 ಕಿಲೋಮೀಟರ್ ದೂರದ ಹಟ್ಟಿಹೊಳೆ ಸ್ಕೂಲ್ಗೆ ನಡ್ದವೆ.
ಸ್ಕೂಲ್ ಮಚ್ಚೋ ತೀಮರ್ಾನನ ಸಕರ್ಾರ ಸುಮ್ನೆ ತಕ್ಕಂಡಿರಿಕಿಲ್ಲೆ... ಸಕರ್ಾರದ ತೀಮರ್ಾನ ಹಿಂದೆ ನಮ್ಮ ಬೇಜವಾಬ್ದಾರಿನೂ ಉಟ್ಟು. ತುಂಬಾ ಮಕ್ಕ ಸಕರ್ಾರಿ ಶಾಲೆಗೆ ಹೋಗ್ತಿದ್ರೆ ಸಕರ್ಾರ ಶಾಲೆನ ಏಕೆ ಮುಚ್ಚಿದೆ ? ಹಂಗೆತ ಸಕರ್ಾರದ ನಿಧರ್ಾರ ಸರಿ ಅಂತ ನಾ ಹೇಳ್ದುಲೆ. ಸಕರ್ಾರಿ ಶಾಲೆಗಳ ಕಡೆ ಮಕ್ಕ ಮತ್ತೆ ಅಪ್ಪ ಅಮ್ಮ ಆಕಷರ್ಿತ ಆಗೋ ಹಂಗೆ ಮಾಡೋ ಕೆಲ್ಸ ಸಕರ್ಾರದ್ದ್. ಅದ್ಬಿಟ್ ಮುಚ್ಚೋ ನಿಧರ್ಾರ ಸರಿ ಅಲ್ಲ. ಇದ್ರಿಂದ ಕಷ್ಟ ಆದು ಬಡವರ ಮಕ್ಕಳಿಗೆ...ಕೊಡಗಿನಂತ ಬೆಟ್ಟಗುಡ್ಡ ಪ್ರದೇಶದಲ್ಲಿ ಇರೋವ್ಕೆ...
ಸಕರ್ಾರದ ನಿಧರ್ಾರಕ್ಕೆ ಈಗ ಬರ್ತಿರೋ ವಿರೋಧ ನೋಡಿರೆ ಶಾಲೆಗಳ್ನ ಮುಚ್ಚಿಕ್ಕಿಲ್ಲೆ ಅಂತ ಕಂಡದೆ. ಆದ್ರೆ ಸಕರ್ಾರ ಹಠ ಮುಂದುವರೆಸಿರೆ ಅದ್ ನಮ್ಮ ದುರಾದೃಷ್ಟ. ಅಲ್ಲಿ ಕನ್ನಡಕ್ಕೆ ಮಾತ್ರ ಅಪಾಯ ಅಲ್ಲ. ಅರೆಭಾಷೆ, ಕೊಡವದಂತ ಸಣ್ಣ ಸಣ್ಣ ಭಾಷೆಗಳ ಮೇಲೂ ಎಫೆಕ್ಟ್ ಆದೆ.

- ಪೊನ್ನೇಟಿ ಬಿ. ಸುನಿಲ್
ಭಾಗಮಂಡಲ

ನೀವೂ ಬರೆಯನಿ....          

ಕುಡೆಕಲ್ ಸಂತೋಷ್ಗೆ ಪ್ರಶಸ್ತಿ


ಕುಡೆಕಲ್ ಸಂತೋಷ್ ಅವ್ಕೆ ಈ ಸಲದ ಕೊಡಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕುಟ್ಟು. ಪತ್ರಿಕೋದ್ಯಮದಲ್ಲಿ ಅವ್ರ ಈ ಸೇವೆನೆ ಗುತರ್ಿಸಿ ಕೊಡಗು ಜಿಲ್ಲಾಡಳಿತ ಈ ಪ್ರಶಸ್ತಿಗೆ ಅವ್ರನ್ನ ಆಯ್ಕೆ ಮಾಡ್ಯುಟ್ಟು. ಮೊನ್ನೆ 1ನೇ ತಾರೀಕಿಗೆ ಮಡಿಕೇರೀಲಿ ನಡ್ದ ರಾಜ್ಯೋತ್ಸವ ಸಮಾರಂಭದಲ್ಲಿ ಸಂತೋಷ್ಗೆ ಪ್ರಶಸ್ತಿ ಕೊಟ್ಟೊ. ಕಾಮರ್ಿಕ ಮಂತ್ರಿ ಬಚ್ಚೇಗೌಡ, ಸಂತೋಷ್ಗೆ ಸಾಲು ಹೊದ್ಸಿ, ಫಲ ತಾಂಬೂಲ ಕೊಟ್ಟು ಗೌರವಿಸಿದೊ...ಕುಡೇಕಲ್ ಸಂತೋಷ್ ಕೊಡಗಿನ `ಶಕ್ತಿ' ಪೇಪರ್ಲಿ ಉಪಸಂಪಾದಕರಾಗಿ ಕೆಲ್ಸ ಮಾಡ್ತೊಳೊ. ಒಳ್ಳೇ ಬರಹಗಾರ. ಈ ಹಿಂದೆನೂ ಇವ್ಕೆ ತುಂಬಾ ಪ್ರಶಸ್ತಿಗ ಬಂದುಟ್ಟು....
ಕುಡೆಕಲ್ ಸಂತೋಷ್ಗೆ `ಅರೆಭಾಷೆ' ಅಭಿನಂದನೆ...
ಸಂತೋಷ್ ನಂಬರ್ -  9845807710

ನೀವೂ ಬರೆಯನಿ...

ಅಣ್ಣಿ ಹೈದನೂ... ಅಮ್ಮಿ ಗೂಡೆನೂ !


ಅಣ್ಣಿ ಹೈದಂಗೆ ಅಮ್ಮಿ ಗೂಡೆ ಮೇಲೆ ಕಣ್ಣ್ಬಿತ್ತ್
ಅವನೋ ಎಸ್ಎಸ್ಎಲ್ಸಿ ಫೇಲ್... ಗದ್ದೆ ಹೂಡೀಕೆ ಹೊರಟುಟ್ಟು
ಅವ್ಳೀಗ ಬಿಎ ಓದ್ತುಟ್ಟು... ಲಾಯರ್ ಆಗೋ ಕನಸುಟ್ಟು !
ಅಣ್ಣಿ ಹೈದಂಗೆ ಅಮ್ಮಿ ಗೂಡೆ ಮೇಲೆ ಮನಸಾತ್
ಲಾಯ್ಕ ಕಾಫಿ ತೋಟ ಮಾಡ್ಯುಟ್ಟು.. ಬೈಕ್ನೂ ತಗೊಂಡುಟ್ಟು !
ಅಮ್ಮಿ ಈಗ ಲಾಯರ್...! ಮೈಮೇಲೆ ಕರಿಕೋಟು ಹಾಕಿಟ್ಟು
ಅಣ್ಣಿ ಹೈದ ಅಮ್ಮಿ ಗೂಡೆನ ಮದುವೆ ಆಗೋಕೆ ಹೊರಟುಟ್ಟು
ಕಾಫಿಗೆ ಒಳ್ಳೇ ರೇಟ್ ಬಂದುಟ್ಟು... ಬೋಡರ್ಿಂಗ್ ಬುಕ್ ಮಾಡ್ಯುಟ್ಟು
ಅಮ್ಮಿ ಬೆಂಗಳೂರು ಬಸ್ ಹತ್ತಿತ್... ಅವ್ಳ ಕ್ಲಾಸ್ಮೆಟ್ ಕರೀತಿತ್ತ್...
ಪಾಪ ಅಣ್ಣಿ ಹೈದ ! ಅಮ್ಮಿಗೆ ಇನ್ನೂ ಕಾಯ್ತುಟ್ಟು...
ಆದ್ರೆ....
`ನೀವು ಕರೆ ಮಾಡಿದ ಚಂದದಾರರು ವ್ಯಾಪ್ತಿ ಪ್ರದೇಶದಲ್ಲಿ ಇಲ್ಲ'
   
- `ಸುಮಾ'

ನೀವೂ ಬರೆಯನಿ...