Thursday, 19 January 2012

ಒಲವೇ ನೀ ಎಲ್ಲಿ ಒಳಾ ..??

ನನ್ನ ಪ್ರೀತಿಯ ಹೈದ..ನನ್ನ ಕಾಡುವ ಹೈದ..ನಿಂಗೆ ಗೊತ್ತು ತಾನೇ, ನಾನ್ ನಿನ್ನ ಮುಖ ನೋಡದೆ  ಹೊತಾರೆ ಎದ್ದೆಳುಲೆತಾ..ಹೇಯ್  ನೀನೇ  ನನ್ನ ಅಲಾರಂ ಕ್ಲಾಕ್ ರಾ.. ನಾನ್ ಕಾಲೇಜಿಗೆ ಬಸ್ಲಿ ಹೋಕಾಕನಸಾ  ನೀ ನನ್ನ ಫಾಲೋ ಮಾಡಿಯಾ  .. ಹೇ ಇಲ್ಲೇತಾ ಹೇಳ್ಬೆಡಾ..ಈ ವಿಷಯಎಲ್ಲವಕೇ ಗೊತ್ತು...ಮತ್ತೆ, ದಿನಾ  ಕೆಮೆಸ್ಟ್ರಿ 
ಕ್ಲಾ ಸ್ಲಿ  ,ಬಂದ್ ಕಿಟಿಕಿ ಸೆರೆಂದ ಇಣುಕಿ ನೋಡ್ತಿದ್ದ...ಮೊದಲೇ ನಾನ್ ಕಾರ್ಬನ್ ಕಾಪಿ, ನನ್ನ  ಮಸಿಕೆಂಡ  ಮಾಡುವ ಯೋಚನೇಲಿ ಇದ್ದ ಅಲಾ...ನಂಗೆ ಗೊತ್ತು ರಾ ...ಆಗ ಎಲ್ಲ ನಾನ್ ನಿಂಗೆ  ಎಷ್ಟ್  ಬೈತ ಇದ್ದೆ ಗೊತ್ತಾ .??? ನೀ ನನ್ನ 
ನೋಡ್ಕಾಗದ್ತಾ  ,ಕ್ಲಾಸ್ಲಿ ಬೇರೆ ಜಾಗಲಿ ಕುದ್ದಿದ್ದೆ ಗೊತ್ತಾ...!!ಒಂದ್  ಸಲ ಬಸ್ ದ ಕಿಟಕಿನೇ ಮುಚ್ಹಿದ್ದೆ..ನಂಗೆ ಗೊತ್ತುರಾ ಅದಿಕೆ ನಿಂಗೆ
ನನ್ನ ಮೇಲೆ ಸಿಟ್ಟತಾ...ಹೇಯ್, ನಾನ್ ನಿನ್ನ ತುಂಬಾ ಮಿಸ್ ಮಾಡ್ಕತಾ ಒಳೆರಾ          
...ನಿನ್ನಂದಾಗಿ ನಾನ್ 
ಹೊತಾರೆ ಎಳ್ಕಾಕಾಕನ ಗಂಟೆ  8..ಎಷ್ಟೋ ಸಲ ಬಸ್ ಬೇರೆ ಮಿಸ್ ಆದೆ...ಈಗ ನನ್ನ ಫಾಲೋ ಮಾಡಿಕೆ ...ಕ್ಲಾಸಿಲಿ ನನ್ನ ಕಾಡಿಕೆ ಯಾರ್ ಇಲ್ಲೆರಾ..ನನ್ನ ಫೀಲಿಂಗ್ ನಿಂಗೆ ಅರ್ಥ ಆಗ್ತಾ ಉಟ್ತಾ ?..."ನೀ ನಿಲ್ಲದೆ ನನಗೇನಿದೆ "ತಾ  ಹಾಡು ಹೇಳಕುತಾ  ಅನ್ನಿಸಿದೆ...ಮತ್ತೆ ಈಗ ನೀ ಯಾಕೆ ಬೇಗ ಬಾಲೆ...ನಾನ್ ಕಳೆದ ವಾರ ಮಡಿಕೇರಿಗೆ ಹೋಗಿದ್ದರೆ ಅಲ್ಲಿ ಎಷ್ಟ್  ಚಳಿ ಉಟ್ಟು ಗೊತ್ತಾ...?? ಎಲ್ಲವೂ ನಿನ್ನೇ ಕಾಯ್ತಾ ಇದ್ದೋ..!! ಅದ್ಸರಿ, ನಿಂಗೆ ಈ ಪ್ರಪಂಚ ಸುತ್ತಿಕೆ ವೀಸಾ ಯಾರ್ ಕೊಟ್ಟದ್ ರಾ...?? ನೀ ಮತ್ತೆ ಅಲ್ಲಿಗೆಲ್ಲಾ  ಹೋಗ್ಬೆಡಾ    ...ನನ್ನ  ಹತ್ರ  ಮೊದಲು  ಬಾ.. ಹೇಯ್, ನಿಂಗೆ
ಮತ್ತೊಂದ್ ವಿಷಯ ಗೊತ್ತಾ ...ಎಲ್ಲಾ  ಪೇಪರ್ ಲಿ ಆ ನಿನ್ನ ಅತ್ತೆ ಮಗಳ,
ತಮ್ಮನ,ತಂಗೆನ,ಭಾವನ ,ತಮ್ಮನ ಹೆಣ್ ಅದೇ ರ ಆ "ಚಳಿ "   ..ಹೊಸ ದಾಖಲೆ ಬರ್ದುಟ್ಟು ಗಡ..ಅದರ್ದೇ  ಸುದ್ದಿ ...ನಂಗೆ ಅದೆಲ್ಲಾ ಗೊತ್ಹ್ಲೆ  ನೀ ಬೇಗ ಬಾ ಅಷ್ಟೇ...ಅಷ್ಟೇ..ಅಷ್ಟೇ......!!!
ನಂಗೆ ಗೊತ್ತು ನಾ ಎಷ್ಟ್ ಜೋರು ಕೂಗಿ ಹೇಳ್ರೂ  ನಿಂಗೆ  ಕೇಳ್ದುಲೆತಾ...ಅದಿಕೆ ನಾನ್ ನಮ್ಮ ಅರೆಭಾಷೆ ಬ್ಲಾಗಿ ಗೆ ನಿನ್ನ ಬಗ್ಗೆ ಬರ್ದ್ ಕಳಿಸ್ತಾ
ಒಳೆ..ಅವು ನಿನ್ನ ಹುಡುಕಿ ಕೊಟ್ತವೆ..   ಮತ್ತೆ ನೀ ಬೇಗ 9 ಗಂಟೆ ಮೊದಲೇ ಬರೋಕು... ನಾನ್ ನಿನ್ನ ವಿವರನ ಬರ್ದ್ ಕಳಿಸ್ತಾ ಒಳೆ...
ನಮ್ಮ ಬ್ಲಾಗಿನ ಸಂಪಾದಕರೇ  ಸ್ವಲ್ಪ ವಿವರ ನೋಡಿಕಣಿ,...
ಹೆಸರು - ಸೂರ್ಯ ಆಲಿಯಾಸ್ ರವಿ..
ಸ್ತಳ - ಆಕಾಶ
ಬಣ್ಣ - ಒಂತರಾ ಕೆಮ್ಪುಮಿಶ್ರ ಹಳದಿ ಇರೋಕು..
ಎತ್ತರ- 12345678910 ಕಿ.ಮಿ
ದಪ್ಪ -ನನ್ನಕಿಂತ ಒಂದ್ಚೂರು ಸಣ್ಣ..
ಕೈ ಕಾಲ್ ಇಲ್ಲೆ...
ಉರುಟು ಮುಖ...ಕಣ್ , ಬಾಯಿ ಗೊತ್ಹ್ಲೆ...
ನೀವೆಲ್ಲ ಸೇರಿ ಅವನ್ನ ಹುಡುಕಿ ಕೊಡಿ.....ಹೇಯ್ ಗೋಡೆಗಳೇ ಅಂವ    ನನ್ನ ಹೈದ  ನೀವೆಲ್ಲಾ  ಜಾಸ್ತಿ  ಹುಡುಕಿಕೆ ಹೋಗ್ಬಡಿ ...ಅವ ಸಕತ್ ಹಾಟ್ ಗೊತ್ತಾ....????

ನಿನಗಾಗಿ,
ನಿನ್ನ ಪ್ರೀತಿಯ ಪವಿ ..

- ಪವಿತ್ರ ನೆರಿಯನ 
ಭಾವನೆಗಳ ಪಲ್ಲವಿ.

Wednesday, 18 January 2012

ಕೊಡಗುಲಿ ಚಳಿ ಚಳಿ...

  ಮಡಿಕೇರೀಲಿ 4 ಡಿಗ್ರಿ ಚಳಿ ! 112 ವರ್ಷಗಳ ಹಿಂದೆ ಇಂಥ ಕೋಟ ಇತ್ತ್ಗಡ. ಅದ್ಬಿಟ್ಟರೆ ಈಗಿನ ಚಳಿ ದಾಖಲೆ ಬರ್ದುಟ್ಟು. 
ಮೊನ್ನೆ ಮಧ್ಯಾಹ್ನ 12ಗಂಟೆಗೆ ಗೆಳೆಯ ಧ್ಯಾನ್   ಪೂಣಚ್ಚ ಕಾಲ್ ಮಾಡಿತ್ತ್. ನಡು ಮಧ್ಯಾಹ್ನದ ಆ ಹೊತ್ತಲ್ಲೂ ಚಳಿ ತಡೆಯಕ್ಕಾದೆ ಅಂವ, ಅಷ್ಟೊತ್ತಿಗೆನೇ ಒಂದ್ ಪೆಗ್ ಏರ್ಸಿ ಆಗಿತ್ತ್ ! ಕೊಡಗ್ನ ಕನರ್ಾಟಕದ ಕಾಶ್ಮೀರತಾ ಹೇಳಿವೆ. ಈಗಿನ ಕೋಟದ ಕಾಟ ನೋಡಿರೆ, ಹಂಗೆನೇ ಅನ್ನಿಸಿದೆ. ಕಾಶ್ಮೀರಲಿ ವಾತಾವರಣ ಮೈನಸ್ 0 ಕ್ಕಿಂತ ಕಡಿಮೆ ಆಗಿ, ಹಿಮದ ಮಳೆ ಸುರೀತ್ತುಟ್ಟು. ರಸ್ತೆಗಳ ಮೇಲೆಲ್ಲಾ ಐಸ್ ಬಿದ್ದ ವಾಹನಗಳ ಓಡಾಟನೇ ಕಷ್ಟ ಆಗಿಬಿಟ್ಟುಟ್ಟು. ನಮ್ಮ ಕೊಡಗುಲಿ ಏನು ಕಮ್ಮಿ, ಇಲ್ಲೂ ಬೆಳಗ್ಗೆ ಬೆಳಗ್ಗೆನೇ ಮಂಜು ಬಿದ್ದಿದ್ದದೆ. ಬಗ್ಗಿದರೆ ಕಾಲೇ ಕಾಂಬಲೆ ಅಂಥ ಮಂಜು ! 
ಹೋದ ತಿಂಗ ಭಾಗಮಂಡಲದ ನನ್ನ ಫ್ರೆಂಡ್ ಮುನ್ನನ ಜೊತೆ ಮಾತಾಡಿಕಾಕನ ಚಳಿ ಇಲ್ಲೆತಾ ಬೇಸರ ಮಾಡಿಕಣ್ತಿತ್ತ್. ಪಾಪ, ಹೊಸದಾಗಿ ಮದುವೆ ಆದಂವ, ಬೇಸರ ಇದ್ದದ್ದೇ... ! ಭಾಗಮಂಡಲಲಿ ಜಾತ್ರೆ ಕಳ್ದ ಕೂಡ್ಲೆ, ಚಳಿಗಾಲ ಶುರುವಾದಂಗೆ ಲೆಕ್ಕ. ನವೆಂಬರ್, ಡಿಸೆಂಬರ್ಲಿ ಅಂತೂ ಚಳಿ ತಡ್ಕಂಬಕ್ಕೆ ಆದುಲ್ಲೆ. ಆದ್ರೆ, ಈ ವರ್ಷ ಹವಾಮಾನ ಸ್ವಲ್ಪ ಬದಲಾವಣೆ ಆಗಿತ್ತ್. ಚಳಿ ಈಗ ಅಂದ್ರೆ, ಜನವರಿಲಿ ಶುರುವಾಗ್ಯುಟ್ಟು. ಅದೇ ಮುನ್ನಾ ಈಗ ಚಳಿ ತಡ್ಕಂಬಕ್ಕೆ ಆಲೆತಾ ಬೊಬ್ಬೆ ಹೊಡ್ದದೆ. ಕೈ ಕಾಲೆಲ್ಲಾ ಮರಗಟ್ಟಿ ಹೋಗುವಂಗೆ ಕೋಟಗಡ ! ಭಾಗಮಂಡಲದ ಅಜ್ಜಂಗ ಹೇಳುವ ಪ್ರಕಾರ, ಅವು ಅವ ಜೀವನಲ್ಲಿ ಇಂಥ ಚಳಿ ನೋಡಿತ್ಲೆ ಗಡ. 
ಯಾವ ವರ್ಷ ಚಳಿಗಾಲಲಿ ಜಾಸ್ತಿ ಚಳಿ ಇದ್ದದೆನೋ ಅದರ ಮುಂದೆ ಬರ್ವ ಮಳೆಗಾಲದಲ್ಲಿ ಮಳೆ ಕಡಿಮೆ ಇದ್ದದೆತಾ ಹೇಳಿವೆ. ನೋಡೊಕು, ಈ ವರ್ಷ ಏನು ಆದೆತಾ ...

Tuesday, 17 January 2012

ಭೂಮಿ ಮೇಲಿನ ಸ್ವರ್ಗ ರಾಮೋಜಿ ಫಿಲಂ ಸಿಟಿ


ಭೂಮಿ ಮೇಲೆ ಮನುಷ್ಯ ಕಟ್ಟಿದ ಸ್ವರ್ಗತೇಳುದು ಏನಾರ್ ಇದ್ದ್ರೆ, ಅದ್ ರಾಮೋಜಿ ಫಿಲಂ ಸಿಟಿ ! ನೀವು ಹೈದರಾಬಾದ್ಗೆ ಹೋದ್ರೆ, ರಾಮೋಜಿ ಫಿಲಂ ಸಿಟಿ ನೋಡ್ದುನ ಮಾತ್ರ ಮಿಸ್ ಮಾಡ್ಕಂಬೇಡಿ. ಅದಕ್ಕಾಗಿ ಒಂದ್ ದಿನ ರಿಸರ್ವ್ ಮಾಡಿ ಇಟ್ಟ್ಬಿಡಿ...ಇದ್ರಿಂದ ಖಂಡಿತ ನಿಮ್ಗೆ ಯಾವುದೇ ನಷ್ಟ ಆದುಲ್ಲೆ... ನಾನ್ ಈಟಿವಿಲಿ ಕೆಲ್ಸ ಮಾಡಿಕಾಕನ ನಾಲ್ಕು ವರ್ಷ ಅಲ್ಲೇ ಇದ್ದೆ. ಇಡೀ ರಾಮೋಜಿ ಫಿಲಂ ಸಿಟೀನ ತಿರುಗಾಡ್ವ ಅವಕಾಶ ತುಂಬಾ ಸಲ ಸಿಕ್ಕಿತ್ತ್. ಅದ್ನೆಲ್ಲಾ ನಾ ಸರಿಯಾಗೇ ಉಪಯೋಗಿಸಿಕಂಡೆ...ಅಲ್ಲಿನ ಪ್ರತಿಯೊಂದು ನಿಮರ್ಾಣ ಕೂಡ ಒಂದು ಆಶ್ಚರ್ಯನೇ... ಹ್ಯಾಟ್ಸಪ್ ರಾಮೋಜಿ ರಾವ್ !
ಈಟಿವಿಗೆ ಸೇರಿಕಂಡ ಕೂಡ್ಲೇ ಹೊಸಬರಿಗೆ ಅಲ್ಲೊಂದ್ ಕ್ಲಾಸ್ ತಕ್ಕಂಡವೆ. ರಾಮೋಜಿ ಗ್ರೂಪ್ಗೆ ಸೇರ್ದ ಎಲ್ಲಾ ಸಂಸ್ಥೆಗಳನ್ನ ಪರಿಚಯ ಮಾಡಿಕೊಡ್ದು, ಆ ಕ್ಲಾಸ್ನ ಉದ್ದೇಶ. ಸ್ಲೈಡ್ ಶೋ, ಫಿಲಂ ಶೋ ಮತ್ತೆ ಪವರ್ಪಾಯಿಂಟ್ ಉಪಯೋಗಿಸಿಕಂಡ್ ಆ ಕ್ಲಾಸ್ಲಿ ಮಾಹಿತಿ ಕೊಟ್ಟವೆ. ನಂಗೆ ಆಗ ಇಷ್ಟ ಆದ್ ರಾಮೋಜಿ ಫಿಲಂ ಸಿಟಿ. ಸುಮಾರ್ 1400 ಎಕರೆ ಪ್ರದೇಶಲಿ ಈ ಫಿಲಂ ಸಿಟಿ ಹರಡಿ ನಿಂತುಟ್ಟು. ಈ ಜಾಗ ರಾಮೋಜಿ ರಾವ್ ಕೈಗೆ ಸಿಕ್ಕಿಕೆ ಮೊದ್ಲು ಬರಡು ಬೆಂಗಾಡು. ಕಾಲ್ ಹಾಕಿದ್ದಲ್ಲೆಲ್ಲಾ ಸಿಕ್ಕುದು ಬರೀ ಕಲ್ಲು. ತಲೆ ಸುಡುವ ಬಿಸಿಲು. ಆದ್ರೆ ಈಗ ನೋಡಿರೆ, ಎಲ್ಲಾ ಅದಲು ಬದಲು. `ನೀವು ಬರುವಾಗ ಬರೀ ಹಣ ತೆಗೆದುಕೊಂಡು ಬನ್ನಿ, ವಾಪಸ್ ಹೋಗುವಾಗ ಒಂದು ಸಿನಿಮಾ ಮಾಡಿ ರೀಲ್ ಡಬ್ಬ ತೆಗೆದುಕೊಂಡು ಹೋಗಬಹುದು' ಫಿಲಂ ಸಿಟಿ ಸುತ್ತಾಡಿಸಿಕಾಕನ ಅಲ್ಲಿನ ಗೈಡ್ಗ ಹಿಂದಿಲಿ ಈ ಮಾತ್ ಹೇಳಿವೆ. ಇದು ನೂರಕ್ಕೆ ನೂರು ಸತ್ಯ. ಒಂದು ಸಿನಿಮಾ ಮಾಡಿಕೆ ಏನೇನು ಬೇಕೋ ಎಲ್ಲಾ ಅಲ್ಲಿ ಸಿಕ್ಕಿದೆ. ಕಥೆಗಾರ, ನಿದರ್ೇಶಕ, ಆ್ಯಕ್ಟರ್ಸ್ ಹಿಂಗೆ... ನಿಮಗೆ ಸಮುದ್ರದ ಸೆಟ್ ಬೇಕ್ತೇಳಿರೆ, ಒಂದೆರಡು ದಿನಲಿ ಅದ್ನೂ ರೆಡಿ ಮಾಡಿ ಕೊಡ್ವ ಕಲಾವಿದರು ಅಲ್ಲಿ ಒಳೊ. ತೆಲುಗುನ `ಮಗಧೀರ' ಸಿನಿಮಾದಲ್ಲಿನ ಅದ್ಭುತ ಸೆಟ್ ಅಲ್ಲಿದ್ದೇ. ಕನ್ನಡ, ತಮಿಳು, ಹಿಂದಿ, ಇಂಗ್ಲೀಷ್ ಫಿಲಂಗಳ ಶೂಟಿಂಗ್ ಕೂಡ ಅಲ್ಲಿ ನಡ್ದದೆ. ಹಂಗಾಗಿ ಅಮಿತಾಬ್ ಬಚ್ಚನ್, ಕರೀನಾ ಕಪೂರ್ ಸೇರ್ದಂಗೆ ದೊಡ್ಡ ದೊಡ್ಡ ಆ್ಯಕ್ಟರ್ಗಳ್ನ ನೋಡ್ವ ಭಾಗ್ಯ ನಂಗೆ ಸಿಕ್ಕಿತ್ತ್. ನಿಮ್ಗೆ ಅದೃಷ್ಟ ಇದ್ದ್ರೆ, ನಿಮ್ಗೂ ಇಂಥವೆಲ್ಲಾ ನೋಡಿಕೆ ಸಿಗ್ವ ಸಾಧ್ಯತೆ ತಳ್ಳಿಹಾಕಿಕೆ ಆದುಲೆ...
ಅಲ್ಲಿನ ವ್ಯವಸ್ಥೆ ಕೂಡ ತುಂಬಾ ಅಚ್ಚುಕಟ್ಟು. ಟೂರ್ ಬಂದವ್ರನ್ನ ಲಾಯ್ಕಲಿ ನೋಡಿ ಕಂಡವೆ. ಒಮ್ಮೆ ರಾಮೋಜಿ `ಕೋಟೆ' ಒಳಗೆ ನುಗ್ಗಿದ ಮೇಲೆ ಅವ್ರ ಬಸ್ಲೇ ಕರ್ಕಂಡ್ ಹೋದವೆ. ಎಲ್ಲಾ ಕಡೆ ಅವ್ರ ಗೈಡ್ಗ ಇದ್ದವೆ. ಪ್ರತಿಯೊಂದನ್ನ ವಿವರಿಸಿ ಹೇಳಿವೆ. ಫಿಲಂ ಸಿಟಿ ಒಳಗೆ ಊಟಕ್ಕೆ, ಉಳ್ಕಣಿಕೆ ಎಲ್ಲಾ ರೀತಿಯ ಸೌಲಭ್ಯಗ ಮಾಡ್ಯೊಳೊ. ಅಲ್ಲಿ ಏನೇನ್ ಉಟ್ಟುತಾ ಬರವಣಿಗೆಲಿ ಹೇಳಿಕೆ ತುಂಬಾ ಕಷ್ಟ... ನೀವೇ ಒಮ್ಮೆ ಹೋಗಿ ನೋಡಿ. ಆದ್ರೆ, ಮಾಚರ್್ ಮಧ್ಯ ಭಾಗಂದ ಜೂನ್ ಮಧ್ಯ ಭಾಗದ ವರೆಗೆ ಅಲ್ಲಿ ಹೋದು ಬೇಡ. ಏಕೆತೇಳಿರೆ, ತುಂಬಾ ಬಿಸಿಲು ಇದ್ದದೆ. 45 ಡಿಗ್ರಿಗಿಂತ ಜಾಸ್ತಿ ಬಿಸಿ, ತಡ್ಕಂಬಕೆ ಆದುಲ್ಲೆ. ಹೈದರಾಬಾದ್ ಟೂರ್ಗೆ ಇದ್ ಒಳ್ಳೇ ಟೈಂ.. ರಾಮೋಜಿ ಫಿಲಂ ಸಿಟಿ ವೆಬ್ಸೈಟ್...www.ramojifilmcity.com


ಚಿಂತೆ ಜ್ವಾಲಾಮುಖಿಯಾಕನ...


ಚಿಂತೆ ಚಿತೆಯ ಕಿಡಿ
ನೂರಾರ್ ಯೋಜನೆಗಳ್ನ
ಸರದಿಲಿ ಕಳೆಗುಂದ್ಕನ 
ಗೆಲುವುಗಳ ಗೋಡೆ..........
ಕುಸ್ತ್ ಮಾಯವಾಗಿ 
ಜೀವ ಬರಡಾಗಿ ನಿಂತತ್........!
ನಿಮಿಷದ ಧ್ಯಾನ...........!
ಲೋಕದ ಪ್ರದಕ್ಷಿಣೆ ಹಾಕಿತ್ 
ಮತ್ತೆ ಕಣ್ಣ್ ಮಿಟುಕಿಸಿರೆ
ಕುದ್ದ ಜಾಗನೇ ಬ್ಯಾರೆಯಾಗಿ 
ದುತ್ತನೆ ಕೆಡಗಿದಂಗೆ
ನಿತ್ಯದ ಕೊರಗ್ ರೋಗದ ಬಾಧೆಗೆ
ಸುಖದ ಜೀವ ರೋಗಿಯ ಪಾಲಿಗೆ
ಅದರೇನ್ ಮಾಡುದು............?
ಮನಸ್ಸ್ ಸ್ಥೀಮಿತನೇ ಒಳ್ಳೇ ಮದ್ದು
     

- ಕುಲ್ಲಚನ ತಾರಾರವಿ, 
ಕುಂಬಳದಾಳು 
arebhase@gmail.com

Monday, 16 January 2012

ಕುವೆಂಪು


ಮಲೆನಾಡ ಮೈಸಿರಿಲಿ ಕಣ್ ತೆರೆದ
ಮಲ್ಲಿಗೆಯ ನಾಡ್ಲಿ ಬೆಳ್ದ
ನಿಸರ್ಗ ಚೆಲುವಿಗೆ ಒಲಿದ,
ಚೈತ್ರದ ಕುಸುಮಗಳ್ಲಿ ನಲಿದ,
ಕನ್ನಡ ಅವ್ವನ ಕೂಸಾಗಿ................!
ಬರ್ದ ಕವನಗಳ್ನ ಸವಿಯಾಗಿ
ಅಂದ್ ಕನ್ನಡ ಅವ್ವನ ತೊಟ್ಟ್ಲ್ಲಿ
ಕೇಕೆಯ ಪೊರ್ಲ್ನ ಕಂದ
ಮತ್ತಿಂದ್ ಕನ್ನಡ ನಾಡಲಿ 
ಮಹಾಶಯ ಕವಿಯಾಗಿ ನಿಂತ
ಮುಪ್ಪುನ ನಯನ ಸೆಳೆಯುತ್ತಿತ್ 
ಮುಪ್ಪು ಮುತ್ತಿರುವ ನಿಸರ್ಗ ಕಡೆ
ಬರ್ದ್ಟ್ಟ ಮೆರ್ದಿಟ್ಟ ಅಕ್ಷರ ಹಸಿರಾಗಿಟ್ಟು 
ಹಾ ಕನ್ನಡತ ಹೇಳ್ರೆ ಬಹಳ ಖುಷಿ ನಿಂಗೆ
ಅವನ ವರ್ಣನೆತಾ ಹೇಳ್ರೆ ಬಲು ರೀತಿ ನಿಂದ್   

- ಕುಲ್ಲಚನ ತಾರಾರವಿ, ಕುಂಬುಳದಾಳು  
arebhase@gmail.com

ನಿದ್ರೆಗೆ ಜಾರಿದಾಗ...

ಕುದ್ದಿದ್ದೆ ನಾನ್ ಕ್ಲಾಸ್ಲಿ ...
ಮನಸಿಲ್ಲದ ಮನಸ್ಲಿ !!
ಮೊಬೈಲ್ ಕಡೆ ಕಣ್ಣಾಡಿಸಿದೆ..
ಹಂಗೆ ಸುಮ್ಮನೆ,...
ಮೆಸೇಜ್  ಇತ್ಲೆ .. ಮಿಸ್ಡ್  ಕಾಲ್  ಇತ್ಲೆ...!!
ಗೆಳತಿಗೆ ಕೀಟಲೆ ,
ಮಾಡಿಕೆ  ಮನಸಿತ್ಲೇ..!!
ಗೀಚೋಣ ಹೇಳ್ರೆ ..
ಏನೂ ತೋಚಿತ್ಲೆ..!!
ದೂರಲಿ ಕೇಳ್ತಾ ಇತ್..
ಯಾರೋ ಹಾಡ್  ಹೇಳ್ದಂಗೆ...!!
ಕೇಳಿ ಕೇಳಿ ಹಂಗೆ,
ಜಾರಿ ಬಿದ್ದೆ ನಿದ್ರೆಗೆ...!!!!!
ಎದ್ದ್  ನೋಡ್ರೆ ನಾನಿದ್ದೆ..
ಲೈಬ್ರರಿಲಿ .....!!
ಕಣ್ಣುಜ್ಜಿ ಮತ್ತೆ ನೋಡ್ದೆ..
ಕ್ಲಾಸ್ ಅಲ್ಲ ಲೈಬ್ರರಿನೇ !!!
ಹೋ ಕನಸ್ ಲಿ ,ಮತ್ತೊಂದ್
ಕನಸ್ ಕಂಡಿದ್ದೆ ನಾನ್...!!
ನಗೆ ಬಾತ್,
ಕನಸ್ನ  ಗ್ಯಾನ ಮಾಡಿ..!!
ಎಲ್ಲ ನಿದ್ರಾ ದೇವಿ
ಕೃಪೆತಾ  ಹೇಳಿ..
ಹೊರಟ್ ಹೋದೆ..
ಕ್ಲಾಸಿಗೆ....!!!!
ನಿನಗಾಗಿ..


ಪವಿತ್ರ ನೆರಿಯನ, ಭಾವನೆಗಳ ಪಲ್ಲವಿ
arebhase@gmail.com

ನನ್ನೂರು ನಂಗೆ ಪ್ರೀತಿ

ಒಂದೂರು...
ಊರಂದ್ರೆ ಅಂಥ ದೊಡ್ಡದೇನಲ್ಲಾ...
ಒಂದ್ಹತ್ತು ಮನೆಗ
ಮನೆಗೆ ನಾಲ್ಕರಂಗೆ ನಲವತ್ತು ಜನಗ
ನಾಲ್ಕು ಗೂಡಂಗಡಿಗ
ಒಂದ್ ದೊಡ್ಡ ಹೆಂಡದಂಗಡಿ !
ಇದ್ ಇದ್ರೆನೇ ಊರು !
ಆ ಊರಲ್ಲೂ ಸೂರ್ಯ ಹುಟ್ಟಿದೆ
ಬೆಟ್ಟದ ಮೂಲೇಲಿ ಮರದ ಸೆರೇಲಿ
ದೊಡ್ಡ ಕೆಂಪು ಚೆಂಡಿನಂಗೆ
ಸಂಜೆ ಒಮ್ಮೆ ಮರೆಯಾದೆ !
ಅಲ್ಲೂ ಅಜ್ಜಿ ಸಾಂಕಿದ ಕೋಳಿ ಕೂಗಿದೆ !
ಅತ್ತೆ, ಸೊಸೆ ಜಗಳ ಆಡಿವೆ
ಅಪ್ಪನ ಆಸ್ತಿಗಾಗಿ ಸಣ್ಣಮಂಞ
ಕೋವಿ ಹಿಡ್ಕಂಡದೆ !
ಇಲ್ಲೂ ಬೆಟ್ಟದ ಮೇಲೆನೇ ಹೊಳೆ
ಹುಟ್ಟುದು !
ಗಂಗೆ ಹಸುನ ಹಾಲಿನ ಬಣ್ಣ ಬಿಳಿ !
ಮಲ್ಲಿಗೆ ಹೂವಿಗೆ ಅದೇ ಪರಿಮಳ
  ಮತ್ತೆಂಥ ವಿಶೇಷ ?
ಅದ್ ನನ್ನ ಊರು !
ನನ್ನ ಬೆಳೆಸಿದ ಊರು !
ಅನ್ನ ಕೊಟ್ಟ ಊರು !
ಅಕ್ಷರ ಕಲಿಸಿದ ಊರು !
arebhase@gmail.com

Sunday, 15 January 2012

`ಕಲ್ಯಾಣಿ ಬಿರಿಯಾನಿ' ಗೊತ್ತಾ...?


ಹೈದರಾಬಾದ್ತಾ ಹೇಳಿರೆ ಕಣ್ಮುಂದೆ ಬಾದು ಬಿರಿಯಾನಿ. `ಹೈದರಾಬಾದ್ ಬಿರಿಯಾನಿ' ವರ್ಲ್ಡ್ ಫೇಮಸ್. ಬೆಂಗಳೂರ್ಲಿ ಕೂಡ `ಹೈದರಾಬಾದ್ ಬಿರಿಯಾನಿ' ಹೊಟೇಲ್ಗ ತುಂಬಾ ಒಳೊ. ಆದ್ರೆ, ಹೈದರಾಬಾದ್ಲಿ ಸಿಗ್ವ ಬಿರಿಯಾನಿ ಟೇಸ್ಟೇ ಬೇರೆ. ಅದ್ರಲ್ಲೂ `ಬಾವರ್ಚಿ  ಹೈದರಾಬಾದ್ ಬಿರಿಯಾನಿ' ಅಂತೂ ಸಕತ್ ರುಚಿ, ಅದೆಂಥ ಹಾಕುವೆತಾ ಮಾತ್ರ ಗೊತ್ಲೆ. ಬಾಸ್ಮತಿ ಅಕ್ಕಿಯಿಂದನೇ ಬಿರಿಯಾನಿ ಮಾಡ್ದರಿಂದ ರೇಟೂ ಜಾಸ್ತಿ...ಕಡಿಮೆತೇಳಿರೆ ನೂರು ರೂಪಾಯಿಂದ ಶುರು ಆದೆ. ಅದೇ ಹೈದರಾಬಾದ್ಲಿ ಇನ್ನೂ ಒಂದು ಬಿರಿಯಾನಿ ಸಿಕ್ಕಿದೆ. ಅದ್ `ಕಲ್ಯಾಣಿ ಬಿರಿಯಾನಿ'
`ಕಲ್ಯಾಣಿ ಬಿರಿಯಾನಿ' ಹೆಸ್ರು ಕೇಳಿಕೆ ಎಷ್ಟು ಲಾಯ್ಕನೋ, ನೋಡಿಕೂ ಅಷ್ಟೇ ಲಾಯ್ಕ ಇದ್ದದೆ...ಕಡ್ಡಿಹಂಗೆ ಉದ್ದುದ್ದ ಬಾಸ್ಮತಿ ಅಕ್ಕಿಯ ಅನ್ನ, ಅದಕ್ಕೆ ಕೆಂಪು-ಹಸಿರು ಬಣ್ಣ, ಮೇಲೆ ಹಂಗೆ ಹರಡಿರ್ವ ಏಲಕ್ಕಿ, ಲವಂಗ, ಪಟ್ಟೆ, ಸಂಬಾರ ಸೊಪ್ಪು...ಮೂಳೆ ಇಲ್ಲದ ಮೆತ್ತನೆ ಮಾಂಸ ! ಘಮ ಘಮ ಪರಿಮಳ. ಆದ್ರೂ ಇದ್ರ ರೇಟ್ ತುಂಬಾ ಕಡ್ಮೆ... ಹೈದರಾಬಾದ್ನ ಹೈವೆ ಸೈಡ್ನ ಡಾಬಾಗಳಲ್ಲಿ 35 ರೂಪಾಯಿ ಕೊಟ್ರೆ, ಹೊಟ್ಟೆತುಂಬಾ `ಕಲ್ಯಾಣಿ ಬಿರಿಯಾನಿ' ಸಿಕ್ಕಿದೆ. 
ಹೈದರಾಬಾದ್ನ ರಾಮೋಜಿ ಫಿಲಂ ಸಿಟೀಲಿ ಈಟಿವಿ ಆಫೀಸ್ ಇರ್ದು. ನಾವೆಲ್ಲಾ ಅಲ್ಲಿಂದ ಸುಮಾರು 30 ಕಿಲೋಮೀಟರ್ ದೂರದ `ಸುಷ್ಮಾ'ತೇಳುವಲ್ಲಿ ರೂಂ ಮಾಡಿಕಂಡಿದ್ದೊ. ರುಚಿ ನೋಡ್ನೋತೇಳಿರೆ, ನಾವು ಇದ್ದಲ್ಲಿ ಈ `ಕಲ್ಯಾಣಿ ಬಿರಿಯಾನಿ' ಸಿಕ್ತಿತ್ಲೆ. ಕಂಪೆನಿ ಬಸ್ಲಿ ಆಫೀಸ್ಗೆ ಹೋಕಾಕನ, ಬಾಕಾಕನ `ಕಲ್ಯಾಣಿ ಬಿರಿಯಾನಿ - 35 ರೂ.' ತೇಳುವ ಬೋರ್ಡ್  ನಮ್ಮ ಕಣ್ಣ್ಕುಕ್ಕುತ್ತಿತ್. ಒಂದ್ಸಲ ತಿಂದುನೋಡೊಕುತೇಳುವ ಆಸೆನೂ ನಮಗೆಲ್ಲಾ ಬಂದ್ಬಿಟ್ಟಿತ್ತ್. ಆದ್ರೂ ಏನೋ ಒಂದು ಸಣ್ಣ ಅನುಮಾನ....ಹೊಟೇಲ್ಗಳಲ್ಲಿ ಅಷ್ಟೊಂದು ರೇಟ್ ಇರ್ವ ಬಿರಿಯಾನಿ ಈ ಡಾಬಾಗಳಲ್ಲಿ ಇಷ್ಟು ಕಡ್ಮೆಗೆ ಮಾರಿವೆಯಲ್ಲಾ.. ಏನೋ ಮಸಲತ್ತು ಉಟ್ಟುತಾ ತಲೆ ಕೊರಿಯಕೆ ಶುರುವಾತ್. ಒಂದ್ ವೀಕ್ಲಿ ಆಫ್ ದಿನ `ಶೋಧ'ನೆಗೆ ಹೊರಟೋ...
ಸಂಜೆ ಹೊತ್ತ್... ಹಯತ್ನಗರದಲ್ಲಿರ್ವ, ಡಾಬಾಕ್ಕೆ ತುಂಬಾ ಲಾಯ್ಕಲಿ ಸೀರಿಯಲ್ ಲೈಟ್ ಹಾಕಿದ್ದೊ. ಚಿರಂಜೀವಿದ್  ಯಾವುದೋ ಒಂದ್ ತೆಲುಗು ಹಾಡ್ ಜೋರಾಗಿ ಕೇಳ್ತಿತ್. ಒಳಗೆ ಡಿಮ್ ಲೈಟ್ ಇರ್ವ ಒಂದ್ ಕಡೆ ಹೋಗಿ ಕುದ್ದೊ. ಡಾಬಾ ಪೂತರ್ಿ ಬಿರಿಯಾನಿ ಘಮ ಘಮ ! ನಮ್ಮ ಜೊತೆ ಇದ್ದಂವ ಒಬ್ಬ `ಕಲ್ಯಾಣಿ ಬಿರಿಯಾನಿ'ಗೆ ಆರ್ಡರ್ ಮಾಡಿಯೇ ಬಿಡ್ತ್. ಕಾಲು ಗಂಟೆ ವೇಯ್ಟ್ ಮಾಡ್ದ ಮೇಲೆ ನಮ್ಮ ಟೇಬಲ್ಗೆ ಬಿಸಿಬಿಸಿ `ಕಲ್ಯಾಣಿ ಬಿರಿಯಾನಿ' ಬಾತ್.... ಏನೋ ಡೌಟ್ ಇಟ್ಕಂಡ್ ಮಾಂಸನ ಮುಟ್ಟಿ ನೋಡ್ದೆ... ಯಾಕೋ ಅದ್ ಚಿಕನ್ ಇದ್ದಂಗೆ ಇತ್ಲೆ... ಎಲ್ಲಕ್ಕಿಂತ ಮೊದ್ಲ್ ಆರ್ಡರ್ ಮಾಡ್ದಂವ ಅದಾಗ್ಲೆ ಚಪ್ಪರಿಸಿಕೆ ಶುರ್ ಮಾಡಿಯಾಗಿತ್ತ್. `ಬೋನ್ಲೆಸ್' ಮಾಂಸನ ಎಳ್ದೆಳ್ದ್ ತಿನ್ತಿತ್. ಅಂವ ಹಂಗೆ ತಿಂಬಕಾಕನ ನಂಗೆ ದೂರದಲ್ಲೆಲ್ಲೂ `ಅಂಬಾ' ತೇಳ್ದ ಹಂಗೆ ಆತ್ !
ವೇಯ್ಟರ್ನ ಕರ್ದ್, ನಂಗೆ ಗೊತ್ತಿರ್ವ ಹರಕುಮುರುಕು ತೆಲುಗುಲಿ ಅವ್ನ ಇದೆಂಥ ಮಾಂಸತಾ ಕೇಳ್ದೆ... ನನ್ನ ಊಹೆ ಸರಿಯಾಗಿತ್... ಅದೆಂಥ ಮಾಂಸತಾ ವೇಯ್ಟರ್ ಹೇಳ್ತಿದ್ದ್ರೆ, ನನ್ ಪಕ್ಕ ಚಪ್ಪರಿಸ್ತಿದ್ದಂವ ಬಾಯಿಗೆ ಕೈ ಅಡ್ಡ ಇಟ್ಟ್ಕಂಡ್ ವಾಷ್ಬೇಷನ್ ಕಡೆ ಓಡ್ತಿತ್... ಆಗ ನನ್ನ ಮುಂದೆ ಇದ್ದ `ಕಲ್ಯಾಣಿ ಬಿರಿಯಾನಿ' ಮಧ್ಯೆಂದನೂ `ಅಂಬಾ' ತೇಳುವ ಧ್ವನಿ ಕೇಳ್ತಿತ್...    
arebhase@gmail.com

Friday, 13 January 2012

ಮಿನುಪುಳ


ಹಗಲೆಲ್ಲ ಜಂದು
ನಕ್ಕು ನಲಿದು
ರಾತ್ರಿಯಲಿ ಒಳನಡೆದು 
ರಾಣಿಯರು ನಿದ್ರಿಸಿದಾಗ.........!
          ನೀನೊಬ್ಬಳೆ ಬೆಳಕ
          ಹೊತ್ತುಕೊಂಡು ಹಾರಡಿಯ 
          ನಿಂಗೆಷ್ಟು ಪೊಗರು
          ನಾನೊಂದು ಮಿನುಪುಳವಾಗಿದ್ದರೆ..........!
ಆಗಸದಿ ತಾರೆ ಮಿನುಗಿದರೆ
ಭೂಮಿಗೆ ನೀನೊಂದು
ತಾರೆಗಳಂಗೆ ಮಿನುಗುವ 
ಅಪ್ಸರ ರಾಣಿ..........!
        ಗೀಳಿ ಕೋಗಿಲೆಗಳ
        ಕಲರವ ಪೊದರಿನಲ್ಲಿ
        ನೀ ಮಿಂಚುತೊಳ, ತಾರ ಸುಂದರಿನಂಗೆ
        ನಿಂಗೆ ಯಾರು ತೊಡಸಿದೊ
        ಬೆಳಗುವ ಹೊದಿಕೆಯ..............!
                                                 

ಕುಲ್ಲಚನ ತಾರಾರವಿ, 
ಕುಂಬುಳುದಾಳು
aeebhase@gmail.com      

Thursday, 12 January 2012

ಭಾಗಮಂಡಲಲಿ ಭಂಡಾರ ಲೆಕ್ಕ ಹಾಕುದು...


        ಭಾಗಮಂಡಲ ಜಾತ್ರೆತೇಳಿರಿ ಗೊತ್ತಲ್ಲಾ....ಜನವೋ ಜನ. ಕೊಡಗಿನವು ಮಾತ್ರ ಅಲ್ಲ, ಕುಂದಾಪುರ, ಮಂಡ್ಯ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಜೊತೇಲಿ ವಿದೇಶಗಳಿಂದ ಕೂಡ ತುಂಬಾ ಭಕ್ತರು ಬಂದವೆ. ತುಲಾ ಸಂಕ್ರಮಣಂದ ಕಿರು ಸಂಕ್ರಮಣ ವರೆಗೆ ಭಾಗಮಂಡಲ ಮತ್ತೆ ತಲಕಾವೇರೀಲಿ ತುಂಬಾ ಜನ ಇದ್ದವೆ. ಈ ಎರಡೂ ಜಾಗಗಳಲ್ಲಿ ಮತ್ತೆ ರೋಡ್ಸೈಡ್ಲಿ ಇರ್ವ ಅಂಗಡಿಗಳಿಗೆ ಇದೊಂದು ತಿಂಗ ಭರ್ಜರಿ ವ್ಯಾಪಾರ. ಹಂಗೆನೇ ತಲಕಾವೇರಿ ಮತ್ತೆ ಭಾಗಮಂಡಲ ದೇವಸ್ಥಾನಗಳಲ್ಲಿ ಕೂಡ ದೊಡ್ಡ ಪ್ರಮಾಣಲಿ ಕಾಣಿಕೆ ಸಂಗ್ರಹ ಆದೆ.
ಜಾತ್ರೆಯ ತಿಂಗ ಮುಗ್ದ ಕೂಡ್ಲೆ, ದೇವಸ್ಥಾನಗಳಲ್ಲಿ ಸಂಗ್ರಹ ಆದ ಕಾಣಿಕೆನ ಲೆಕ್ಕ ಮಾಡಿವೆ. ಇದ್ನ `ಭಂಡಾರ ಲೆಕ್ಕ'ತಾ ಕರ್ದವೆ. ತಲಕಾವೇರೀಲಿ ಕುಂಡಿಕೆ, ಕೆರೆ ಮತ್ತೆ ಕಾಣಿಕೆ ಡಬ್ಬಿಗಳಲ್ಲಿ ಇರ್ದುನೆಲ್ಲಾ ತೆಗ್ದ್, ಮೂಟೆಗಳಲ್ಲಿ ತುಂಬಿಸಿಕಂಡ್ ಭಾಗಮಂಡಲಕ್ಕೆ ತಂದವೆ. ಇಲ್ಲೂ ಅಷ್ಟೇ, ಭಗಂಡೇಶ್ವರ ಸೇರ್ದಂಗೆ ಬೇರೆ ಬೇರೆ ಗುಡಿಗಳಲ್ಲಿರ್ವ ಕಾಣಿಕೆ ಡಬ್ಬಗಳ್ನ ಓಪನ್ ಮಾಡಿ ಅದರಲ್ಲಿ ಇರುದ್ದನ್ನೆಲ್ಲಾ ಒಂದು ಕಡೆ ತಂದು ಸುರ್ದವೆ.
ಈ ಭಂಡಾರ ಲೆಕ್ಕ ಮಾಡ್ದು ಉಟ್ಟಲ್ಲಾ.. ಒಂದ್ ಒಳ್ಳೇ ಅನುಭವ. ಜಾತ್ರೆ ಟೈಂಲಿ ಸಿಕ್ಕಿದ್ದನ್ನ ಲೆಕ್ಕ ಹಾಕಿಕೆ ದೇವಸ್ಥಾನಲಿ ಇರ್ವ ಕೆಲ್ಸದವು ಸಾಕಾಲೆ. ಅದ್ಕೆ ಭಾಗಮಂಡಲ ಟೌನ್ನ ಹೈದಂಗ ಕೂಡ ಅಲ್ಲಿ ಹೋಗಿ ಭಂಡಾರ ಲೆಕ್ಕ ಹಾಕಿಕೆ ಸೇರಿಕಂಡವೆ. ನೋಟು ಮತ್ತೆ ಕಾಯಿನ್ಗಳ್ನ ಬೇರೆ ಬೇರೆ ಮಾಡ್ದು ಚಿಕ್ಕ ಮಕ್ಕಳ ಕೆಲಸ. 50 ಪೈಸೆ, 1 ರೂಪಾಯಿ, 2 ರೂಪಾಯಿ 5 ರೂಪಾಯಿ ಹಿಂಗೆ ಕಾಯಿನ್ಗಳ್ನ ಬೇರೆ ಬೇರೆ ಮಾಡಿ ಇಡ್ದು, ಸ್ವಲ್ಪ ದೊಡ್ಡ ಮಕ್ಕಳ ಜವಾಬ್ದಾರಿ. ಇನ್, ನೋಟುಗಳ್ನ ಅದ್ರ ಮುಖಬೆಲೆಗೆ ಸರಿಯಾಗಿ ಜೋಡ್ಸುದು ಹೈಸ್ಕೂಲ್ ಹೈದಗಳ ಕೆಲ್ಸ. ಮಕ್ಕಳಿಗೆ ಹಿಂಗೆ ಜೋಡ್ಸುವ ಕೆಲ್ಸ ಮಾತ್ರ ಕೊಟ್ಟವೆ. ಇದ್ನೆಲ್ಲಾ ಮಾಡ್ಕಂಡ್ ಇರ್ಕಾಕನ ಮಧ್ಯ ಮಧ್ಯ ಸಂತೋಷ್ ಹೊಟೇಲ್ನ ಟೀ, ಪೊಕ್ಕಡ ಕೂಡ ಸಿಕ್ಕಿದೆ.
ಇನ್ ಈ ಸಣ್ಣ ಮಕ್ಕ ಬೇರೆ ಬೇರೆ ಮಾಡಿ ಇಟ್ಟಿದ್ದವೆಯಲ್ಲಾ ಆ ಕಾಯಿನ್ಗಳನ್ನ ಲೆಕ್ಕ ಮಾಡ್ದು, ಪಿಯುಸಿ ಓದ್ತಿರೋ ಹೈದಂಗ. ಅದಕ್ಕಿಂತ ದೊಡ್ಡ ಕ್ಲಾಸ್ ಇರವುಕ್ಕೆ ನೋಟುಗಳ್ನ ಲೆಕ್ಕ ಮಾಡಿಕೆ ಬಿಟ್ಟವೆ. ಭಂಡಾರ ಲೆಕ್ಕ ಮಾಡಿಕಾಕನ ನಮ್ಮ ದೇಶದ ಕಾಯಿನ್, ನೋಟ್ಗ ಮಾತ್ರ ಸಿಕ್ಕುದಲ್ಲ, ಅಮೆರಿಕಾದ ಡಾಲರ್, ಆಸ್ಟ್ರೇಲಿಯಾದ ಡಾಲರ್, ಶ್ರೀಲಂಕಾದ ರೂಪಾಯಿ, ಚಿನ್ನ, ಬೆಳ್ಳಿ ಎಲ್ಲಾ ಸಿಕ್ಕಿದೆ. ವಿಶೇಷ ತೇಳಿರೆ, ಭಸ್ಮ, ಕುಂಕುಮ, ದೇವರಿಗೆ ಬರ್ದ ಪತ್ರ ಇಂಥವೂ ಕೂಡ ಒಮ್ಮೊಮ್ಮೆ ಕಾಣಿಕೆಗಳ ಜೊತೆ ಕಾಣಿಸಿಕೊಳ್ಳುದು ಉಟ್ಟು.
ಮಧ್ಯಾಹ್ನ ಒಳಗೆ ಈ ಭಂಡಾರ ಲೆಕ್ಕ ಮಾಡ್ದು ಮುಗ್ದು ಹೋಕು. ಯಾಕೆತೇಳಿರೆ, ಮಧ್ಯಾಹ್ನ ಮೇಲೆ ಬ್ಯಾಂಕ್ಗ ಇರ್ದುಲ್ಲೆ. ಎಲ್ಲಾ ಲೆಕ್ಕ ಮಾಡಿ ಆದ್ಮೇಲೆ, ಅಂಗಡಿಯವ್ಕೆ ಚಿಲ್ಲರೆ ಬೇಕಾರೆ ಚಿಲ್ಲರೆ ಕೊಟ್ಟವೆ. ಮತ್ತೆ ಉಳ್ದದನ್ನೆಲ್ಲಾ ಮೂಟೆ ಕಟ್ಟಿ ಬ್ಯಾಂಕಿಗೆ ಹೊತ್ತ್ಕಂಡ್ ಹೋಗಿ ಹಾಕಿವೆ. ಲೆಕ್ಕಚಾರ ಎಲ್ಲಾ ಮುಗ್ದಮೇಲೆ ಅಲ್ಲಿ ಹೆಲ್ಪ್ ಮಾಡ್ದವ್ಕೆ ದೇವಸ್ಥಾನಂದ ಒಳ್ಳೇ ಒಂದು ಊಟ ಕೊಟ್ಟವೆ.
ನಾವು ಎಂಥ ತಪ್ಪಿಸಿಕಂಡ್ರೂ, ಈ ಭಂಡಾರ ಲೆಕ್ಕ ಹಾಕುವ ದಿನನ್ನಂತೂ ತಪ್ಪಿಸಿಕಣ್ತಿತ್ಲೆ. ಅಲ್ಲಿ ಎಲ್ಲವೂ ಒಂದು ಕಡೆ ಸೇರ್ಕಾಕನ ಮಾತಿಗೆ ಬರದ ವಿಷಯಗಳೇ ಇತ್ಲೇ..ಇನ್ನ್, ಅಲ್ಲಿ ಸಿಗ್ವ ಬೇರೆ ಬೇರೆ ದೇಶಗಳ ದುಡ್ಡ್ನ ನೋಡ್ದೇ ಒಂದು ಖುಷಿ. ಅಲ್ಲದೆ, ಕೆಲವು ಭಕ್ತರು ದೇವರಿಗೆ ಬರೀತ್ತಿದ್ದ ಪತ್ರಗಳಂತೂ ತುಂಬಾ ತಮಾಷೆಯಾಗಿ ಇರ್ತಿದ್ದೊ...ಇದೆಲ್ಲಾ 10-15 ವರ್ಷ ಹಿಂದಿನ ಕಥೆ. ಈಗ ಹೆಂಗುಟ್ಟೋ ಗೊತ್ಲೆ... 
arebhase@gmail.com


ಬಿದಿರ ಚೆದರಂಗಿ


ವನವನಗಳಲ್ಲಿ ನೀ ಬೆಳೆದೋಳ
ಪೋಲರ್ುನ ಬಿದಿರಾಗಿ
ನಿನ್ನ ನೋಡದವು ಯಾರೊಳೋ ?
ನಿನ್ನ ಹೆಸರ ಕೇಳದವು ಯಾರೊಳೋ?
ನಿನ್ನ ಸೊಬಗಿಗೆ
ಎಲ್ಲವೂ ಮೈ ಮರೆತೋಳ
ನೀ ಬೇಕು ಎಲ್ಲವಕ್ಕೆ
ವನಭನಗಳಲ್ಲಿ ನೀ ಬೆಳೆದೋಳ
ಪೋಲರ್ುನ ಬಿದಿರಾಗಿ.........
ಮುಗ್ಧಕಂದನಾಗಿರಕನ
ಹೊತ್ತುಕೂಳಿನ ಜೊತೆಗಾದೆ
ಎತ್ತರವಾಗಿ ಬೆಳೆದು
ಬಡವರ ಗುಡುಸಿನ ಪೊದರಾದೆ
ಮೊಳೆಕೆಯೊಡಕನ ಕೆಂಪುಡಿಗೆ ಧರಿಸಿ ಬಂದೆ
ಬೆಳೆದಂಗೆ ಹಸಿರುಡಿಗೆ ಧರಿಸಿ ಮೆರೆದೆ
ವನಭನಗಳಲ್ಲಿ ನೀ ಬೆಳೆದೋಳ
ಪೋಲರ್ುನ ಬಿದಿರಾಗಿ.........
ತೂಗುವ ಕಂದನ ತೊಟ್ಟಿಲಾದೆ
ಬೆಣ್ಣೆ ತೆಗೆಯುವ ಸಾಧನವಾದೆ
ಕುರಡಂಗೆ ಕಣ್ಣಾದೆ
ಕುಂಟಂಗೆ ಕಾಲಾದೆ
ತಾತಂಗೆ ಕೈಗೋಲಾದೆ
ಅಕ್ಷರಮಾಲೆಗೆ ಹಾಳೆಯಾದೆ
ಜೋಡು ಎತ್ತುಗಳ ಗಾಡಿಗಾದೆ
ನದಿ ದಾಟುವ ತೆಪ್ಪವಾದೆ
ಪಕ್ಷಿವಾಸಕ್ಕೆ ಪೊದರಾದೆ
ವನಭನಗಳಲ್ಲಿ ನೀ ಬೆಳೆದೋಳ
ಪೋಲರ್ುನ ಬಿದಿರಾಗಿ.......
ಅರವತ್ತು ವರ್ಷಕೊಮ್ಮೆ ಬಂದದೆ
ನಿಂಗೆ ಕಟ್ಟೆ
ನಿನ್ನ ನೋಡದವೂ ಯಾರೊಳೋ ?
ನಿನ್ನ ಹೆಸರನ್ನ ಕೇಳದವು ಯಾರೊಳೋ ?
ನಿನ್ನ ಪೊಲರ್ುಗೆ ಮೈ ಮರೆಯದವೂ
ಯಾರೊಳೋ ?
ವನಭನಗಳಲ್ಲಿ ನೀ ಬೆಳೆದೋಳ
ಪೊಲರ್ುನ ಬಿದಿರಾಗಿ.........


ಕುಲ್ಲಚನ ತಾರಾರವಿ,
ಕುಂಬುಳುದಾಳು

arebhase@gmail.com

Wednesday, 11 January 2012

ನೀವೂ ಬರೆಯಕ್..




ಅರೆಭಾಷೆ ಬ್ಲಾಗ್ಗೆ ನೀವೂ ಬರೆಯಕ್... ಆದ್ರೆ ಅದ್ ಅರೆಭಾಷೆಲೇ ಇರೋಕು. ಕಥೆ, ಕವನ, ಲೇಖನ, ಹನಿಗವನ... ಹಿಂಗೆ ಏನ್ ಬೇಕಾರ್ ಬರೆಯನಿ... ಅದ್ ಓದುವಂಗೆ ಇರ್ಲಿ ಅಷ್ಟೇ... ಕೆಲವು ಜನ ಕನ್ನಡ ಮತ್ತೆ ಇಂಗ್ಲಿಷ್ಲಿ ಬರ್ದು ಕಳಿಸ್ತೊಳೊ. ದಯವಿಟ್ಟು ಕ್ಷಮಿಸಿ.... ಅರೆಭಾಷೆ ಬ್ಲಾಗ್ಲಿ ಬರೀ ಅರೆಭಾಷೆಯ ಬರಹಗಳನ್ನ ಮಾತ್ರ ಹಾಕುದು... ನುಡಿ ಸೇರ್ದಂಗೆ ಯಾವುದೇ ಯೂನಿಕೋಡ್ ಭಾಷೆಲಿ ಬರ್ದು ಕಳ್ಸಿ... ನಮ್ಮ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದಂಗೆ ಫೋಟೋ, ವೀಡಿಯೋ, ಆಡಿಯೋ ಇದ್ದರೂ ಕಳ್ಸಿಕೊಡಿ....
-ಸಂ. 
arebhase@gmail.com

ನೇಗಿಲ ಯೋಗಿಯ ಭಾಗ್ಯದಾತೆ !


ಅದೇನೋ ದೂರದ ಬೆಟ್ಟಗಳಂದ


ಜನ್ಮತಾಳಿ ಹರಿದು ಬಾತ್
ಕನ್ಯಾ ಚಿಕ್ಲಿಹೊಳೆ..!
ಇವಳಿಗೊಂದು ಅಡ್ಡಕಟ್ಟೆ
ದಟ್ಟ ಮರಗಳ ಬೆಟ್ಟ ಗುಡ್ಡಗಳ
ತನ್ನಯ ಸೆರಗಿನಲ್ಲಿ
ಅವರಿಸಿ ನಿಂತುಟ್ಟು 
ಈ ಕನ್ಯಾ ಚಿಕ್ಲಿಹೊಳೆ..!
ಸುತ್ತೆಲ್ಲಾ ಕೈಯ ಬೀಸಿ
ಸೇರಗ್ಹರಡಿ ವಿಶಾಲವಾಗಿ
ವಿಸ್ಮಯಕರವಾಗಿ ನಿಂತುಟ್ಟು
ಈ ಕನ್ಯಾ ಚಿಕ್ಲಿಹೊಳೆ..!
ಇವಳ ಸೊಬಗ ನೋಡಿಕೆ
ಬಂದವೆ ಹಲವು ಮಂದಿ
ಸಂಜೆಯ ಹೊಂಬೆಳಕಿನಲ್ಲಿ
ಹಕ್ಕಿಗಳ ಚಿಲಿಪಿಲಿನಾದೊಂದಿಗೆ
ತಂಪಾದ ತಂಗಾಳಿ ಬೀಸಿಕಾಕನ
ಬಂಗಾರದ ಬಣ್ಣಲಿ ಹೊಳ್ದದೆ
ಈ ಕನ್ಯಾ ಚಿಕ್ಲಿಹೊಳೆ..!
ಗಗನ ನಡುಗಿ ಮಿಂಚು ಎರಗಿ
ಭೂ ತಾಯಿ ಜಡೆಬಿಚ್ಚಿ ಮೈದೊಳೆದಾಗ
ಭೋರ್ಗರೆದು  ಉಕ್ಕಿ ಹರಿವಳು 
ಈ ಕನ್ಯಾ ಚಿಕ್ಲಿಹೊಳೆ..!
ನೇಗಿಲು ಹಿಡ್ದವ್ರ ಬಾಳಿಗೆ ಬೆಳಕಾಗಿ
ಪ್ರವಾಸಿಗರ ನಗುನಲಿವಿನ ಮಾತುಗಳಿಗೆ
ಕಿವಿಯಾಗಿ ರಾತ್ರಿಯಿಡಿ ಒಂದೇ ಒಂದು 
ಕುಟಿರವಾಸಿಗಳ ಗುಗುಣುಮಾತು 
ಕೇಳುತ್ತುಟ್ಟು 
ಈ ಕನ್ಯಾ ಚಿಕ್ಲಿಹೊಳೆ..!
ನೋಡಿರೆ ಮತ್ತೊಮ್ಮೆ ನೋಡುವಾಸೆ
ಹಾಡಿರೆ ಮತ್ತೊಮ್ಮೆ ಹಾಡುವಾಸೆ
ಎಲ್ಲಾ ಕೋಮಲ ಹೃದಯಗಳ
ತಲ್ಲಣಗೊಳಿಸುವಾಕೆ
ಈ ಕನ್ಯಾ ಚಿಕ್ಲಿಹೊಳೆ..!

ಕುಲ್ಲಚನ ತಾರಾರವಿ,
ಕುಂಬುಳುದಾಳು


                         


Tuesday, 10 January 2012

ನಿನ್ನ ಹಾಡು !


ಒಂದು ಪುಟ್ಟ ಹೃದಯ
ಎಡಗೈ ಮುಷ್ಟಿಯಷ್ಟೇ ದಪ್ಪ
ಅದ್ ಮರ್ತೇಬಿಟ್ಟುಟ್ಟು... 
ಲಬ್ಡಬ್ ಲಬ್ಡಬ್ ಶಬ್ದ
ಅಲ್ಲಿ ಕೇಳ್ದು ಬರೀ ನಿನ್ನ ಹೆಸ್ರು !
ಅದ್ಯಾವ ಮೋಡಿ ಮಾಡ್ಯೊಳನೆ ?
ನಿದ್ದೆಲೆಲ್ಲಾ ನಿನ್ನದೇ ಕನವರಿಕೆ !
ಕನಸಲ್ಲೂ, ಮನಸ್ಸಲ್ಲೂ ನೀನೇ..ನೀನೇ..
ನೀ ಮಯಾ ಕನ್ನಿಕೆಯಾ ?
ಕೆಂಪು ಗುಲಾಬಿ ಎಸಳಿನ ಮೇಲೆ
ಫಳ ಫಳ ಹೊಳೆಯೋ ಮಂಜಿನ ಮುತ್ತು !
ಮನೆ ಗೋಡೆ ಸುತ್ತ ಹಬ್ಬಿರ್ವ
ಮೈಸೂರು ಮಲ್ಲಿಗೆಯ ಘಮ ಘಮ !
ಅದ್ ನೀನೇ... ಮರಳುಗಾಡಿನ ಓಯಸಿಸ್
ಗೋಧೂಳಿಯ ಹೊತ್ತಲ್ಲಿ 
ದೊಡ್ಡಕೆರೆ ಮೂಲೇಲಿ ಮುಳುಗ್ವ ಸೂರ್ಯ
ಆಕಾಶಕ್ಕೆಲ್ಲಾ ಓಕುಳಿ ಹರಡಿ
ತಾನೂ ನಾಚಿ ಕೆಂಪು ಕೆಂಪಾದೆ ನೇಸರ...
ಅದೂ ಥೇಟ್ ನನ್ನ ಗೂಡೆನಂಗೆ !
arebhase@gmail.com

ಯಮಹ ಸ್ಕೂಟರ್ ಬೈಕ್ !


ಡೆಲ್ಲಿಲಿ ಭಾರಿ ಜೋರಾಗಿ ಆಟೋ ಎಕ್ಸ್ ಪೋ ನಡ್ತ್. ಇಲ್ಲಿ ತುಂಬಾ ಕಂಪೆನಿಗ ಹೊಸ ಹೊಸ ವಾಹನಗಳ್ನ ಪ್ರದರ್ಶನ ಮಾಡ್ದೋ. ಅದ್ರಲ್ಲಿ ಯಮಹ ಸಂಸ್ಥೆ ಸ್ಕೂಟರ್ ಬೈಕ್ ನ ರಿಲೀಸ್ ಮಾಡ್ತ್.  ಯಮಹ ಬ್ರಾಂಡ್ ರಾಯಬಾರಿ ಜಾನ್ ಅಬ್ರಾಹಂ officeal ಆಗಿ  ಸ್ಕೂಟರ್ Launch ಮಾಡ್ದೋ
 
- ಪ್ರವೀಣ್ ನಡುಮನೆ
 arebhase@gmail.com