Tuesday, 14 February 2012

ನಿಸರ್ಗಧಾಮದ ಜಿಂಕೆಗ...

 ಇವು ಕುಶಾಲನಗರದ ಕಾವೇರಿ ನಿಸರ್ಗಧಾಮದ  ಜಿಂಕೆಗ. ಕಾಡಿನಲ್ಲಿ ಖುಷಿಯಾಗಿ ಓಡಾಡಿಕಂಡ್   ಇದ್ದವು, ಇಲ್ಲಿ ಬೇಲಿಯೊಳಗೆ ಬಂಧಿ. ತಮಗೆ ಬೇಕಾದಷ್ಟು ತಿಂದು ಆರಾಮವಾಗಿ ಇದ್ದ ಜಿಂಕೆಗಳಿಗೆ, ಈಗ ಇಲ್ಲಿಗೆ ಬರ್ವ ಪ್ರವಾಸಿಗ ಕೊಡ್ವ ಕೈ ತುತ್ತು ಆಹಾರ !



arebhase@gmail.com           

Sunday, 12 February 2012

ಗುಡ್ಡೆಮನೆ ಸತೀಶ್ (ಗಿರಿ) ಮತ್ತೆ ಹೊಸಮನೆ ತೇಜಸ್ವಿನಿ ಮದುವೆ...

ಸುಖಮಯ ದಾಂಪತ್ಯಕ್ಕೆ ಶುಭಹಾರೈಕೆ.. 

Saturday, 11 February 2012

`ಎಣ್ಣೆ ಅರಸಿಣಕ್ಕೆ ಇದೆಂಥಾ ಹಠ !'


`ಏ SURF ತಕ್ಕಂಬಾರಾ...ಈ ಎಣ್ಣೆ ಅರಸಿಣ ಮೈಗೆ ಲಾಯ್ಕ ಅಂಟಿಕೊಂಡುಟ್ಟು...' ಹೊಳೆ ಮಧ್ಯಲಿ ನಿಲ್ಲಿಸಿಕಂಡ್ ಜೀಪು ತೊಳ್ದ್ ಅಭ್ಯಾಸ ಇದ್ದ ಮಂಜು ಬಾತ್ರೂಮ್ಂದ ಬೊಬ್ಬೆ ಹಾಕ್ತಿತ್ತ್. ಹೌದು, ಅಂವ ಹೇಳ್ದು ನಿಜ. ಮದುಮಂಙ ಗಿರಿಗೆ ಎಲ್ಲವೂ ಸೇರ್ಕಂಡ್ ಲಾಯ್ಕ ಎಣ್ಣೆಅರಸಿಣ ಉಜ್ಜಿಬಿಟ್ಟಿದ್ದೋ... ಮನೆ ಒಳಗೆ 5 ಜನರಿಂದ ಮಾತ್ರ ಶಾಸ್ತ್ರ ಮಾಡ್ಸೊಕೂತ ಹೈದನ ಅಮ್ಮ ಯೋಚನೆ ಮಾಡಿತ್ತ್.. ಆದ್ರೆ ಐದು ಹೋಗಿ ಹತ್ತು ಜನ ಬಂದ್ರೂ ಶಾಸ್ತ್ರ ನಿಲ್ಲುವಂಗೆ ಕಾಣ್ತಿತ್ಲೆ... ಅಡೋಣಿ 15ರ ವರೆಗೆ ಲೆಕ್ಕ ಇಟ್ಟ್ಕಂಡಿತ್ತ್... ಮತ್ತೆ ಯಾರ್ಯಾರೋ ಬಂದ್ ಹೈದಂಗೆ ಎಣ್ಣೆ ಅರಸಿಣ ಉಜ್ಜಿದೇ ಉಜ್ಜಿದ್... ಇದು ಮನೆ ಒಳಗಿನ ಕಥೆ ಆತ್... 
ಚಪ್ಪರದ ಕೆಳಗೂ ಅಷ್ಟೇ...ಐದು ಜನಕ್ಕೆ ಮುಗ್ಸೊಕೂತ ಹೆಣ್ಣ್ಜನ ಎಲ್ಲಾ ಯೋಚನೆ ಮಾಡ್ಕಂಡಿದ್ದೋ... ಆದ್ರೆ ಅದ್ 7, 9, 11 ಕಡೆಗೆ 15 ಜನಕ್ಕೆ ಬಂದ್ ನಿಂತತ್. ಹಂಗಾಗಿ ಮದುಮಂಙ ಗಿರಿಗೆ ಎಣ್ಣೆ ಅರಸಿಣ ಶಾಸ್ತ್ರ ಹೋಗಿ ಎಣ್ಣೆ ಅರಸಿಣಲಿ ಸ್ನಾನ ಆಗಿಬಿಟ್ಟಿತ್ತ್...! ಬಾತ್ರೂಂಗೆ ಹೋಗಿ ಅದ್ನ ತೊಳ್ದು ತೆಗೆಯಕ್ಕೆ ಬರೋಬ್ಬರಿ ಎರಡೂವರೆ ಗಂಟೆ ಹಿಡ್ತ್. ಮೊದಲಿಗೆ ಅವನ ಮೈಗೆ ಪೂರ ಬಾಳೆ ಹಣ್ಣು ಗಿಮ್ಚಿ ಉಜ್ಜಿದೊ... ಅಲ್ಲಿ ಪೂರಾ ಬಾಳೆ ಹಣ್ಣ್ನ ಘಮ ಬಾಕೆ ಶುರುವಾತ್... ಆದ್ರೆ, ಯಾವುದೇ ಪ್ರಯೋಜನ ಆತ್ಲೆ.... ಅಷ್ಟೊತ್ತಿಗೆ ಯಾರೋ ಒಬ್ಬ ಮೈದಲಿ ಉಜ್ಜಿರೆ ಜಿಡ್ಡು ಬಿಟ್ಟದೆ ಹೇಳ್ತ್.... ಪಾಪ ಅವಂಗೆ ತಿಂಡಿ ಮಾಡುವ ಹುಡೀತಾ ಗೊತ್ತಿತ್ತ್. ಆದ್ರೆ, ಅದ್ ಮೈದನಾ ಅಥವಾ ಕಡ್ಲೆ ಹುಡಿನಾತಾ ಹೇಳುವ ಕನ್ಫ್ಯೂಶನ್ ! ಸರಿ, ಇನ್ನೊಬ್ಬ ಕಡ್ಲೆಹುಡಿ ತಕ್ಕಂಡ್ಬನ್ನೇತಾ ಹೋತ್...
ಮದುಮಂಙಂಗೆ ಸ್ನಾನ ಮಾಡಿಸುವ ಜವಾಬ್ದಾರಿ ಹೊತ್ತುಕಂಡಿದ್ದದ್ ಮಂಜು... ಅವ್ರ ಊರುಲಿ ಕೆಸರು ಗದ್ದೆಯಂಗೆ ಇರುವ ರೋಡ್ಲಿ ಓಡಿದ ಮಣ್ಣ್ ಮೆತ್ತಿದ ಜೀಪುನ ತೊಳ್ದ್ ಅವಂಗೆ ಗೊತ್ತಿತ್ತ್ ! ಆ ಪುಣ್ಯಾತ್ಮನೋ, ಜೀಪು ತೊಳ್ದಂಗೆನೇ ಮದುಮಂಙನ ಮೀಯಿಸಿಕೆ ನಿಂತಿತ್ತ್... ಬರ್ಮುಡ  ಚೆಡ್ಡಿ, ಹಳೇ ಟೀ ಶರ್ಟ್  ಒಂದು ಬಕೆಟ್ ಮತ್ತೊಂದು ಲೋಟ ! ಇಲ್ಲಿ ಬಿಸಿ ಬಿಸಿ ನೀರೊಂದು ಮಾತ್ರ ಜಾಸ್ತಿ ಇತ್ತ್ ! 
ಮದುಮಂಙಂಗೆ ಉಜ್ಜಿದ್ದ ಬಾಳೆಹಣ್ಣ್ನ ತೊಳ್ದು ತೆಗೆದ್ರೂ ಎಣ್ಣೆ ಅರಸಿಣ ಮಾತ್ರ ಅವ್ನ ಮೈಂದ ಕಡಿಮೆ ಆತ್ಲೆ. ಸೀಗೆಕಾಯಿ ಸೋಪು ಹಾಕಿದೋ....ಶ್ಯಾಂಪು ಯೂಸ್ ಮಾಡ್ದೊ... ಕಡ್ಲೆಪುಡಿ ತಕ್ಕಂಬಾಕೆ ಹೋಗಿದ್ದವ್ನೂ ಅಷ್ಟೊತ್ತಿಗೆ ಅಲ್ಲಿಗೆ ಬಂದು ತಲುಪಿತ್ತ್. ಅದನ್ನೂ ಹಾಕಿದ್ದಾತ್ ! ಅಂತೂ ಎರಡೂವರೆ ಗಂಟೆ ಮೂರ್ನಾಲ್ಕು ಜನ ಸೇರ್ಕಂಡ್ ಬೆವ್ರು ಇಳಿಸಿದ ಮೇಲೆನೇ ಗಿರಿ ಮೈಲಿದ್ದ ಎಣ್ಣೆ ಅರಸಿಣ ಮಾಯ ಆದ್ ! ಇದನ್ನೆಲ್ಲಾ ನೋಡಿಕಾಕನ, ಮುಂದೊಂದು ದಿನ ನನ್ನ ಮದುವೆಲೂ ಹಿಂಗೆ ತಾನೆತಾ ಸಣ್ಣಗೆ ಬೆವರು ಬಾತ್...

`ಸುಮ'
arebhase@gmail.com

Friday, 10 February 2012

ಅರೆಭಾಷೆ ವಾರ್ತೆ

ಫೆಬ್ರವರಿ 10ಕ್ಕೆ ಮಡಿಕೇರಿ ಆಕಾಶವಾಣೀಲಿ ಪ್ರಸಾರ ಆದ ಅರೆಭಾಷೆ ವಾರ್ತೆ 

KSRTC `ತಿಗಣೆ ಸೇವೆ'


ಅದ್ ಬೆಳಗಿನ ಜಾವ ಮೂರು ಗಂಟೆ. ಮೈಸೂರ್ BUS STAND ಲಿ   ಇಳ್ದ್, ನನ್ನೂರು ಕಡೆ ಹೋಗ್ವ ಬಸ್ನ ಹುಡ್ಕಂಡ್ ಪ್ಲಾಟ್ಫಾರಂನಿಂದ ಪ್ಲಾಟ್ಫಾರಂಗೆ ಅಲ್ದಾಡ್ತಿದ್ದೆ. ಮಡಿಕೇರಿ ಕಡೆ ಹೋಗ್ವ ಬಸ್ ದೂರಲಿ ನಿಂತಿರ್ದು ಕಾಣ್ತ್. ಬಸ್ ಬಾಗ್ಲ್ ಹತ್ರ ತುಂಬಾ ಜನ ನಿಂತ್ಕಂಡ್ ಮೈ ಕೈ ತೊರ್ಸಿಕಂಡ್ ಡ್ರೈವರ್ ಕಂಡೆಕ್ಟರ್ಗೆ ಬಾಯಿಗೆ ಬಂದಂಗೆ ಬೈತಿದ್ದೊ...ಹತ್ರ ಹೋಗಿ ನೋಡಿರೆ, ನಂಗೆ ಪರಿಚಯದ ಲವ, ಅವ್ನ ಹೆಣ್ ಮತ್ತೆ ಭಾಗಮಂಡಲದ ರಿತೇಶ್ ಆ ಗುಂಪುಲಿ ಇದ್ದೊ. `ನೀ ಮಾತ್ರ ಈ ಬಸ್ಗೆ ಹತ್ ಬೇಡ...' ಮೂರು ಜನನೂ ಒಂದೇ ಉಸುರುಲಿ ಹೇಳ್ದೊ...ಸಿಕ್ಕಿದ ಬಸ್ ಹತ್ತುದು ಬಿಟ್ಟು ಇವರದ್ದೆಂಥಪ್ಪ ಪಿರಿಪಿರಿತಾ ಕೇಳಿರೆ....
ಪುನ: ಮೈ ಕೈ ತೊರ್ಸಿಕಂಡ್ ಮೂರು ಜನನೂ ಒಬ್ಬರ ಹಿಂದೆ ಒಬ್ರು ನಡ್ದ ಕಥೆ ಹೇಳಿಕೆ ಶುರುಮಾಡ್ದೊ. ನಾ ಬಂದ ಬಸ್ಗಿಂತ ಮೊದ್ಲು ಅವ್ರಿದ್ದ ಬಸ್ ಬೆಂಗಳೂರು ಬಿಟ್ಟಿತ್ತ್. ನಾ ಲಾಯ್ಕ ನಿದ್ದೆ ಮಾಡ್ಕಂಡ್ ಮೈಸೂರು ತಲುಪಿದ್ದೆ. ಆದ್ರೆ ಅವು ಅಲ್ಲಿಂದ ಇಲ್ಲಿ ತನಕ ಕಣ್ಣು ಮುಚ್ಚಿತ್ಲೆ...ಬದ್ಲಿಗೆ ಮೈ ಕೈ ತೊರ್ಸಿಕಂಡ್ ಗಾಯ ಮಾಡಿಕಂಡ್ ಬಿಟ್ಟಿದ್ದೊ. ಕಾರಣ ಆ ಬಸ್ಲಿದ್ದ ತಿಗಣೆ ಸಂತಾನ ! ಬಸ್ ಲೈಟ್ ಆಫ್ ಮಾಡ್ದ ಕೂಡ್ಲೇ, ಸೆರೆಮರೆಲಿದ್ದ ಅಪ್ಪ ತಿಗಣೆ, ಅಮ್ಮ ತಿಗಣೆ, ಮಕ್ಕತಿಗಣೆ, ಅಜ್ಜ ತಿಗಣೆ, ಅಜ್ಜಿ ತಿಗಣೆ ಎಲ್ಲಾ ಸೇರ್ಕಂಡ್ ದಾಳಿ ಇಟ್ಟಿದ್ದೊ... ಆ ಬಸ್ನ ಕ್ಲೀನ್ ಮಾಡದೆ ಎಷ್ಟು ದಿನ ಆಗಿತ್ತೋ ಏನೋ...ಹಂಗೆ ತಿಗಣೆ ಕಚ್ಚಿಸಿಕಂಡವ್ರ ಸಿಟ್ಟು ಬಸ್ ಡ್ರೈವರ್ ಮತ್ತೆ ಕಂಡೆಕ್ಟರ್ ಕಡೆಗೆ ತಿರ್ಗಿತ್ತ್. ಮೈಸೂರು ತಲುಪಿದ ಕೂಡ್ಲೇ, ಬಸ್ಂದ ಇಳ್ದ್ ಜಗಳ ಶುರು ಮಾಡಿದ್ದೋ. ಏನೇ ಆದ್ರೂ ತಿಗಣೆ ಬಸ್ಲಿ ಬಾಲೆ. ನಮಗೆ ಬೇರೆ ಬಸ್ ಬೇಕುತಾ ಹಠ ಹಿಡ್ದಿದ್ದೊ.
ಕೊನೆಗೆ ಮಡಿಕೇರಿಗೆ ಹೋಗವ್ಕೆ ಗೋಣಿಕೊಪ್ಪಕ್ಕಾಗಿ ಹೋಗುವ ಬಸ್ ಹತ್ತಿಸಿ, ಕಂಡಕ್ಟರ್ ಕೈ ತೊಳ್ಕಣ್ತ್. ಕುಶಾಲನಗರ ಕಡೆ ಹೋಗವು ಮತ್ತೆ ತಿಗಣೆ ಕಚ್ಚಿಸಿಕಂಡೇ ಅದೇ ಬಸ್ಲಿ ಪ್ರಯಾಣ ಮಾಡ್ದೊ. ಇದ್ನೆಲ್ಲಾ ನೋಡ್ತಿದ್ದ ನಾನ್ ಮಾತ್ರ ನಾಲ್ಕು ಗಂಟೆವರೆಗೆ ಕಾದ್ ಬೇರೆ ಬಸ್ ಹತ್ತಿದೆ. 
ಈಗ ಒಂದು ತಿಂಗಳ ಹಿಂದೆ ಸಾರಿಗೆ ಮಂತ್ರಿ ಆರ್ ಅಶೋಕ್ ಡೆಲ್ಲಿಗೆ ಹೋಗಿ ಗರಿ ಗರಿ ಬಟ್ಟೆ ಹಾಕಂಡ್ ಒಂದ್ ಪ್ರಶಸ್ತಿ ತಕ್ಕಂಡಿದ್ದೊ. ಅದು ಅತ್ಯುತ್ತಮ ಸೇವೆಗಾಗಿ ಸೆಂಟ್ರಲ್ ಗೌರ್ನಮೆಂಟ್ ಕೊಡ್ವ ಪ್ರಶಸ್ತಿ. ಆ ಪ್ರಶಸ್ತಿ ಕೊಟ್ಟವ್ರನ್ನ ಒಮ್ಮೆ ಈ ತಿಗಣೆ ಬಸ್ಲಿ ಕೂರ್ಸೊಕು.... ಆಗ ಗೊತ್ತಾದೆ ನಮ್ಮ ಕೆಎಸ್ಆರ್ಟಿಸಿ `ಸೇವೆ'
- `ಸುಮ'
arebhase@gmail.com

Wednesday, 8 February 2012

`ಏಕೆ ಈ ಮೌನ ?'


ರಜೆ ಇತ್ತ್. ಏನೋ ಒಂತರ ಬೋರ್ ಆಗ್ತಿತ್ತ್. ಯಾಕೋ ಯಾರಿಗೂ ಹೇಳಿಕಣಿಕೆ ಆಗದಷ್ಟು ನೋವು, ಸಂಕಟ, ದುಃಖ.... ಹಳೆ ನೆನಪುಗಳ ಮೆರವಣಿಗೆ.. ಅಂದು ಇದ್ದ ಸಂತೋಷ, ನಲಿವುಗಳೆಲ್ಲಾ ಮಾಯಾವಾದಂಗೆ ಆಗ್ತುಟ್ಟು. ಹಿಂಗೇ ಆಲೋಚನೆ ಮಾಡಿಕಂಡ್ ತೋಟದ ಕರೆಲ್ಲಿರುವ ಗದ್ದೆ ಏರಿಲಿ ನಡ್ಕಕಂಡ್ ಹೋಗ್ತಿದ್ದೆ...ಇನ್ನೇನು ಚಂದ್ರ ಕಾಣಿಸಿಕೊಳ್ವ ಹೊತ್ತಾತ್. ಗೆಳೆಯ ಇಂದ್ ಯಾಕೋ ನಿನ್ನ ಜೊತೆ ಇರಕ್ಕುತ್ತಾ ಮನಸ್ಸು   ಬಯಸುತ್ತುಟ್ಟು. ಮೆಲ್ಲೆನೆ ನಾ ಹೆಜ್ಜೆ ಹಾಕಿದಂಗೆ, ಪೋರ್ಲನ ದುಂಡು ಮುಖ ಹೊತ್ತ್ಕಂಡ್ ಹಾಲು ಚೆಲ್ಲಿದಂಗೆ ಬೆಳದಿಂಗಳ ಸೂಸಿಕಂಡ್ ಚಂದಮಾಮನೂ ಹಿಂದೆ ಹಿಂದೆನೇ ಬರ್ತಿತ್ತ್. ಇನ್ನೇನ್ ನನ್ನ ಮನಸ್ಸಿಗೆ ತಡಕಾಣಿಕೆ ಆಗದೆ, ಮೊಬೈಲ್ ತೆಗ್ದು ಕಾಲ್ ಮಾಡಿರೇ ಅತ್ತ ಕಡೆಯಿಂದ ಮಾತೇ ಇಲ್ಲೆ. ಇಬ್ಬರಲ್ಲೂ ಮೌನ ! ಅಂದು ಮಾತಾಡಿದರೂ ಮುಗಿಯದಷ್ಟು ಮತ್ತಷ್ಟು ಮಾತಿನ ರಸಪಾಕ... ಗೆಳೆಯ ಇಂದೇಕೆ  ನಿನ್ನಲ್ಲಿ ಮಾತುಗಳೇ ಇಲ್ಲದ ಮೌನ ? ತಣ್ಣನೆಯ ಗಾಳಿ ಬೀಸ್ತುಟ್ಟು. ಪೊಂಗರೆಮರದ ಒಣ ಎಲೆಗ ಪರಪರ ಸದ್ದ್ ಮಾಡಿಕಂಡ್ ಹಿಂದಿನ ನಮ್ಮಿಬ್ಬರ ಮಾತಿನ ಲೋಕಕ್ಕೆ ಜಾರಿಸ್ತುಟ್ಟು. 
  ಅಂದು ಆ ಪಾರ್ಕ್ ನ  ಕಲ್ಲು ಬೆಂಚಿನ ಮೇಲೆ ಕುದ್ದು, ನಿನ್ನ ತೊಡೆಯ ಮೇಲೆ ತಲೆಯಿಟ್ಟು, ನಿನ್ನ ನೋಟದಲ್ಲಿ ಅದೆಂಥ ಖುಷಿ ನಂಗೇ ! ಎಷ್ಟು ನೋಡಿರೂ ಸಾಕಾಗ್ತಿಲ್ಲೆ. ಮತ್ತೆ ಮತ್ತೆ ನೋಡಕುತ್ತಾ ಅನ್ನಿಸ್ತಿತ್ತ್. ಪಕ್ಕದಲ್ಲಿ ಯಾರಾದರೂ ನಂಗೆ ಗೊತ್ತಿರವು ಒಳನಾತ ಸಂದೇಹ ಪಟ್ಕಂಡ್ ನೋಡ್ರೆ, ನಿಂಗೆ ಮುಸಿ ಮುಸಿ ನಗು.
   ಎಷ್ಟೋ ಸಲ ನನ್ನ ಮನಸ್ಸಿನಾಳದ ಮಾತುಗಳನ್ನ ನಿನ್ನ ಹತ್ತಿರ ಹೇಳಿ ಕಣೋಕುತ್ತಾ ಅನ್ನಿಸಿದ್ರೂ, ನಾಚಿಕೆಯೋ ಭಯದಿಮದಲೋ ಹೇಳದೇ ಹೋಗ್ತಿದ್ದೆ. ಒಮ್ಮೆ ಅದನ್ನೆಲ್ಲಾ ಬದಿಗಿಟ್ಟು ನಿನ್ನೆದುರಿಗೆ ಪ್ರೀತಿಯ ಮಾತಡು ಅನ್ನುವಷ್ಟುರಲ್ಲಿ ಏನ್ವೋ ಒಂಥರ ಹಿಂಜರಿಕೆ ನನ್ನ ತಡೆದು ಬೀಡ್ತಿತ್. ನೀ ಎದುರಿಗೆ ಬಾಕನ ಎಲ್ಲವೂ ಮರ್ತ್ ಹೋಗಿ ನಗುವೊಂದು ಬಿಟ್ಟರೆ ಬೇರೆ ಏನೂ ನಂಗೆ ಹೊಳೆಯುತ್ತಿತ್ಲೆ.
   ಗದ್ದೆ ಏರಿಲಿ ಎಸಂಡು ಹೋದ ದಾರಿ ನೋಡಕಂಡ್ ಹೋಗ್ತೊಳೆ. ಆದ್ರೆ, ನನ್ನ ಮನಸಿನ ತುಂಬಾ ಉತ್ಸಾಹ ತಂದ ನೀ ಮಾತ್ರ ಮೌನ ಮುರ್ತ್ಲೇ. 
   ಗದ್ದೆ ಬದಿಯ ಹೊಳೆ ಮಧ್ಯಲಿ ಹರಿಯುವ ತಿಳಿ ನೀರು ಸುತ್ತಲೂ ಹಸಿರಿನಿಂದ ಕೂಡಿರುವ ಮರಗಿಡಗ ಎಲ್ಲವೂ ಮಾಮುಲಿನಂಗೆ ಸಂತೋಷ ಕೊಡುತ್ತಾ ಉಟ್ಟು. ಕಣ್ಣು ಹಾಯಿಸಿದಷ್ಟು ದೂರ ದೂ..........ರಕ್ಕೆ ಹೋಗಿ ಮತ್ತೆ ಕೆಳೆಗೆ  ಬಂದು ಮತ್ತೆ ಮೇಲೆ ನೋಡ್ರೆ ಎಣಿಸಿಕಾಗದಷ್ಟು ನಕ್ಷತ್ರಗಳ ಚಿತ್ರ ಬಿಡಿಸಿದ ಆಕಾಶನೊಮ್ಮೆ ನೋಡಿ ನನ್ನ ಹೃದಯಲಿ ನೀ ಭಿತ್ತಿದ ಎಣಿಸಿಕಾಗದ ನೆನಪುಗಳ ರಾಶಿ. ಓ ಗೆಳಯಾ ಇನ್ನೂ ಏಕೆ ಇಷ್ಟು ಮೌನ ?
ಗೆಳಯ ನಿನ್ನ ಬಿಟ್ಟು ಬೇರೆ ಯೋಚನೆಗಳಿಲ್ಲೆ... ಭಾವನೆಗಳಿಲ್ಲೆ... ನಿನ್ನ ಬಿಟ್ಟು ಬೇರೆಯೇನೂ ಬೇಕಿಲ್ಲೆ ನಂಗೇ.ನಿನ್ನ ನೆನಪುಗ ನನ್ನ ಮನಸಿನ ಪುಟದಲ್ಲಿ ಮರೆತು ಮೌನವಾಗಿಟ್ಟು. ಹಂಗೇ ನಿನ್ನ ಮನಸಿನಲ್ಲಿರೋ ಮೌನಕ್ಕೂ ಕಾರಣ ಇರೋಕಲ್ವಾ? ಆ ಕಾರಣ ನಾನೇ ಆಗಿರುದಾ ?
    ಗೆಳಯ... ನೀನಿದ್ದ ನಿನ್ನೆಗಳಲ್ಲಿರುವ ನಾ, ನೀನಿರದ ನಾಳೆಗಳಲ್ಲಿ ಬದುಕಲಾರೆ... ಮೌನ ಮುರಿದು ಮಾತನಾಡು ಗೆಳಯ ಪ್ಲೀಸ್ ಪ್ಲೀಸ್ ಪ್ಲೀಸ್....

- ತಳೂರು ಡಿಂಪಿತಾ
arebhase@gmail.com

Tuesday, 7 February 2012

ವಾಸ್ತವ..

ಮುದುಡಿಹೋದ ಕುಸುಮದ
ಎಸಳ್ ಲಿ ಅದೇನೋ ಬಯಕೆ ..!!!
ಪುನ ಘಮಿಸೋ ಆಸೆ...
ದುಂಬಿಯೊಂದು ಬಾದುತ..
ನಿರೀಕ್ಷೆ....!!
ಆದರೆ,ಅದೆಲ್ಲನ ಹುಸಿ
ಮಾಡ್ತ್  "ವಾಸ್ತವ"..!!!
ಮುಂಜಾನೆ ಮಂಜುಲಿ
ರವಿಕಿರಣದ ಹೊಂಬೆಳಕು ..
ಹನಿ ಇಬ್ಬನಿ ತಂಪು...
ಇದೆಲ್ಲದರ ಮಧ್ಯ ಅರಳಿ
ನಿಂತಿತ್  ನವಕುಸುಮ..!!
ಹೊಸಜೀವನ
ಅದರ ಪಾಲಾಗಿತ್..!!
ಘಮಿಸೋ ಆಸೆ...ದುಂಬಿಯ ನಿರೀಕ್ಷೆನ
ಹಸಿಯಾಗಿಸಿತ್ "ವಾಸ್ತವ"...!!!!



ನಿನಗಾಗಿ..
ಪವಿ-ಭಾವನೆಗಳ ಪಲ್ಲವಿ.


Monday, 6 February 2012

ಚಿತ್ರಗುಪ್ತಂಗೇ ಫಿಟ್ಟಿಂಗ್ !


`ಏ... ಯಾರಲ್ಲಿ, ಎಳ್ಕಂಡ್ಬನ್ನಿ ಅವ್ನ...' ಮೀಸೆ ತಿರಿಗಿಸಿಕಂಡ್ ತನ್ನ ಧೂತರಿಗೆ ಯಮ ಆರ್ಡರ್ ಮಾಡ್ತ್ ! ಪಾಪ ಚೋಮುಣಿ, ಧೂತರ ಮಧ್ಯೆ ನಡಗಿಕಂಡ್ ನಿಂತಿತ್ತ್. ಹಂಗೆನೇ ಅವ್ನ ಎಳ್ಕಂಡ್ಬಂದ ಯಮಧೂತಂಗ, ಯಮನ ಮುಂದೆ ನಿಲ್ಲಿಸಿದೋ...
ಚೋಮುಣಿನ ನೋಡ್ದ ಯಮ, ಚಿತ್ರಗುಪ್ತನ ಕೇಳ್ತ್, `ಚಿತ್ರಗುಪ್ತ, ಇಂವ ನೋಡಿಕೆ ಇನ್ನೂ ಹೈದನಂಗೆ ಉಟ್ಟು...ನಿಜವಾಗಿಯೂ ಇವ್ನ ಆಯುಷ್ಯ ಮುಗ್ದುಟ್ಟಾ?' ಅದ್ಕೆ ಚಿತ್ರಗುಪ್ತ, `ಮಹಾಪ್ರಭು, ನೀವು ಹೇಳ್ದು ಸರಿ. ಇವಂಗೆ ಇನ್ನೂ 24 ವರ್ಷ. ಆದ್ರೆ 74 ವರ್ಷದವು ಮಾಡುವ ಕೆಲ್ಸನೆಲ್ಲಾ ಮಾಡಿ ಮುಗ್ಸಿಟ್ಟು.' ಚಿತ್ರಗುಪ್ತನ ಮಾತು ಕೇಳಿ ಯಮಂಗೆ ಸ್ವಲ್ಪ ಸಿಟ್ಟು ಬಾತ್. `ಚಿತ್ರಗುಪ್ತ, ಏನೇ ಹೇಳಿ... 24 ವರ್ಷದ ಇವ್ನನ್ನ ಇಷ್ಟು ಬೇಗ ಇಲ್ಲಿಗೆ ಕರ್ಕಂಡ್ಬಂದದ್ ಸರಿ ಕಾಣ್ತಿಲ್ಲೆ...' ಅಷ್ಟು ಹೊತ್ತು ಹೆದ್ರಿಕಂಡ್ ನಿಂತಿದ್ದ ಚೋಮುಣಿಗೆ, ಯಮ ತನ್ನ ಪರ ಇರ್ದು ನೋಡಿ ಧೈರ್ಯ ಬಾತ್. ಯಮನ ಜೊತೆಗೆನೇ ಮಾತಿಗೆ ಇಳ್ತ್...`ಯಮ, ಈ ಚಿತ್ರಗುಪ್ತ ನಿಂಗೆ ಗೊತ್ತಿಲ್ಲದಂಗೆ ಏನೇನೋ ಫಿಟ್ಟಿಂಗ್ ಇಡ್ತುಟ್ಟು. ನಾನಿನ್ನು ಮದುವೆ ಆತ್ಲೆ... ಮದುವೆ ಆಗಿ ಏನೇನೋ ಸಾಧನೆ ಮಾಡೊಕೂತ ಉಟ್ಟು. ಅಷ್ಟರಲ್ಲೇ ಇಂವ ನನ್ನನ ಇಲ್ಲಿಗೆ ಕರ್ಸಿಕೊಂಡುಟ್ಟು ನೋಡು... ನಾನ್ ಲವ್ ಮಾಡ್ತಿರ್ವ ಗೂಡೆದ್ ಪರಿಸ್ಥಿತಿ ಏನಾಗ್ಬೇಡ....'ತಾ ಕೇಳ್ತ್. ಯಮಂಗೂ ಅವ್ನ ಯವ್ವನದ ದಿನಗ ಯೋಚನೆ ಆತ್, ಚೋಮುಣಿ ಹೇಳ್ದು ಸರಿಯಾಗಿಯೇ ಉಟ್ಟು... ಈ ಚಿತ್ರಗುಪ್ತನೇ ಎಂಥದ್ದೋ ತಪ್ಪು ಲೆಕ್ಕಾಚಾರ ಹಾಕಿಬಿಟ್ಟುಟ್ಟುತಾ ಧೂತರಿಗೆ ಆಜ್ಞೆ ಮಾಡ್ತ್, `ಎಲ್ಲಿಂದ ಕರ್ಕಂಡ್ ಬಂದದೋ ಅಲ್ಲಿಯೇ ಇವ್ನನ್ನ ಬಿಟ್ಟು ಬನ್ನಿ...' ಅಷ್ಟೊತ್ತಿಗೆ ಚಿತ್ರಗುಪ್ತಂಗೆ ಉರ್ದ್ಹೋತ್...`ಮಹಾಪ್ರಭು... ಅವ್ನನ್ನ ನೀವು ವಾಪಸ್ ಕಳ್ಸಿರೆ, ನಾನ್ ಇಲ್ಲಿ ನನ್ನ ಕೆಲ್ಸಕ್ಕೆ ರಾಜೀನಾಮೆ ಕೊಟ್ಟನೆ. ನೀವು ಮಾಡುದು ಮಾಡ್ಕಣಿ...'ತಾ ಹೇಳಿ ಕುದ್ದಲ್ಲಿಂದ ಎದ್ದ್ನಿಂತತ್. `ಸಮಧಾನ...ಸಮಧಾನ ಚಿತ್ರಗುಪ್ತ. ನೀನ್ ಸಿಟ್ಟು ಮಾಡಿಕಂಬೇಡ. ನೀ ರಾಜೀನಾಮೆ ಕೊಟ್ಟರೆ ಇಲ್ಲಿಗೆ ನಾ ಯಾರ್ನ ನೇಮಕ ಮಾಡ್ಲಿ?' ಚಿತ್ರಗುಪ್ತನ ಯಮ ಸಮಧಾನ ಮಾಡಿಕೆ ನೋಡ್ತ್. ಯಮ ಅಷ್ಟ್ ಹೇಳ್ದೇ ತಡ, ಚಿತ್ರಗುಪ್ತ ಮಾತ್ನ ಮುಂದುವರೆಸಿತ್....
`ಮಹಾಪ್ರಭು...ನಾ ಈ ಚೋಮುಣಿನ ಇಲ್ಲಿಗೆ ಕರ್ಸಿದ ಉದ್ದೇಶನ ಬೇರೆ'
`ಹೌದಾ... ಚಿತ್ರಗುಪ್ತ? ಎಂಥ ಅದ್ ?'
`ಮಹಾಪ್ರಭು, ಇಂವ ಉಟ್ಟಲ್ಲಾ ಚೋಮುಣಿ... ಸಾಫ್ಟ್ ವೇರ್  ಎಂಜಿನೀಯರ್...'
`ಹಂಗಂದ್ರೆ ಎಂಥ ಚಿತ್ರಗುಪ್ತ?'
`ಅಂದ್ರೆ ಕಂಪ್ಯೂಟರ್ ನೆಲ್ಲಾ ಈ ಚೋಮುಣಿ ಅರ್ದು ಕುಡ್ದುಬಿಟ್ಟುಟ್ಟು ಮಹಾಪ್ರಭು...'
`ಚಿತ್ರಗುಪ್ತ.. ಕಂಪ್ಯೂಟರ್ ಅಂದ್ರೆ ಎಂಥ?'
`ಮಹಾಪ್ರಭು, ಹಂಗೆ ಬನ್ನಿ ವಿಷಯಕ್ಕೆ... ಇಲ್ಲಿ ಉಟ್ಟಲ್ಲ ಈ ದೊಡ್ಡ ದೊಡ್ಡ ಪುಸ್ತಕಗ.. ಇದ್ನೆಲ್ಲಾ ಒಂದೇ ಕಂಪ್ಯೂಟರ್ಲಿ ತುಂಬುಸಿ ಇಡಕ್. ಭೂಲೋಕದಲ್ಲಿರುವವರ ಹೆಸರನ್ನೆಲ್ಲಾ ಕಂಪ್ಯೂಟರ್ಲಿ ಸೇವ್ ಮಾಡಿಟ್ಟರೆ ತುಂಬಾ ಉಪಯೋಗ ಆದೆ. ಅವ್ರ ಪಾಪ, ಪುಣ್ಯ ಕೂಡ ಲೆಕ್ಕ ಹಾಕಿಕೆ ಇದ್ರಿಂದ ಒಳ್ಳೆದ್. ಯಾರಾದ್ರು ಒಬ್ಬನ ಹೆಸ್ರು ಟೈಪ್ ಮಾಡಿ ಸರ್ಚ್   ಕೊಟ್ಟರೆ, ಅವ್ನ ಪೂರ್ತಿ    ಜಾತಕ ಅದ್ರಲ್ಲಿ ಸಿಕ್ಕಿಬಿಟ್ಟದೆ.'
`ಹಂಗೆನಾ ಚಿತ್ರಗುಪ್ತ ವಿಷಯ...ಕಂಪ್ಯೂಟರ್ಗೂ ಚೋಮುಣಿಗೂ ಏನು ಸಂಬಂಧ?'
`ಮಹಾಪ್ರಭು...ನಂಗೊಂದು ಕಂಪ್ಯೂಟರ್ ತೆಗ್ಸಿಕೊಡಿ...ಚೋಮುಣಿ ಕೈಲಿ ಅದ್ರ ಪಾಠ ಹೇಳಿಸಿಕಂಡನೆ.. ಮತ್ತೆ ಕೆಲ್ಸ ಸುಲಭ ಆದೆ.'
ಅಷ್ಟೊತ್ತಿಗೆ ಚೋಮುಣಿ ಮಧ್ಯೆ ಬಾಯಿ ಹಾಕಿತ್..
`ಹೌದು.. ಯಮ. ಕಂಪ್ಯೂಟರ್ ಇದ್ದರೆ ನಿಂಗೆ ಒಂದು ಕೈ ಹೆಚ್ಚಿಗೆ ಬಂದಂಗೆ ಇದ್ದದೆ. ಈ ಚಿತ್ರಗುಪ್ತ ಇಲ್ಲದಿದ್ದರೂ ನೀನೇ ಮ್ಯಾನೇಜ್ ಮಾಡಕ್' ಚಿತ್ರಗುಪ್ತ ಮೇಲಿದ್ದ ಸಿಟ್ಟ್ನ ಚೋಮುಣಿ ಹಿಂಗೆ ತೀರ್ಸಿಕಂಡತ್.
`ಹೌದಾ... ಹಂಗಾರೆ ನೀ ಈಗ್ಲೇ ಯಮಲೋಕಕ್ಕೆ ಒಂದು ಕಂಪ್ಯೂಟರ್ ತಂದ್ಕೊಡು...ನಂಗೂ ಈ ಚಿತ್ರಗುಪ್ತನ ಸಹವಾಸ ಸಾಕುಸಾಕಾಗ್ಯುಟ್ಟು. ಅವಂಗೆ ರಿಟೈರ್ಮೆಂಟ್ ಕೊಟ್ಟನೆ... ನಂಗೆ ಕಂಪ್ಯೂಟರ್ ಕಲ್ಸಿ ನೀ ಬೇಕಾರೆ ನಿನ್ನ ಗೂಡೆ ಹತ್ರ ಹೋಕ್...'ತಾ ಯಮ ಹೇಳ್ತ್....
ತನ್ನ ಬಾಣ ತನ್ನ ಕುರ್ಚಿಗೇ  ಬಂದ್ ಚುಚ್ಚಿಕಂಡದನ್ನ ಕಂಡ್ ಚಿತ್ರಗುಪ್ತ ಕಣ್ಣೊರೆಸಿಕಂಡ್ ಮನೆ ಕಡೆ ನಡ್ತ್... ಚೋಮುಣಿ ಮುಖಲೊಂದು ಸಣ್ಣ ನಗು ಕಾಣ್ಸಿಕಂಡ್ ಮಾಯ ಆತ್ !
- 'ಸುಮಾ' 
arebhase@gmail.com

Sunday, 5 February 2012

ಕಂಬಳಿ ಹಣ್ಣು ಲವ್ !


ಆಗ ಐದನೇ ಕ್ಲಾಸ್. 'ಉಪ್ಪಿಟ್ಟು ಸ್ಕೂಲ್' ಗಳಲ್ಲಿ ಎಬಿಸಿಡಿ ಕಲಿವಾ ಟೈಂ. ಲಕ್ಷ್ಮಣ ಮಾ ಸ್ಟರ್  ಇಂಗ್ಲೀಷ್ ಆಲ್ಫಬೆಟ್ ಹೇಳಿಕೊಡ್ವ ಮೊದ್ಲೇ ಮಕ್ಕ 'LOVE' ತಿಳ್ಕೊಂಡುಬಿಟ್ಟಿದ್ದೊ. ಪ್ರಪಂಚ ಏನೂತಾ ಇನ್ನೂ ಗೊತ್ತಾಗಿತ್ಲೆ.... ಆಗ್ಲೇ ಲವ್ ! ಬಹುಶ: ಲವ್ ತೇಳಿರೂ ಆಗ ಅವ್ಕೆ ಅರ್ಥ ಗೊತ್ತಿತ್ಲೆಯೇನೋ ! ಕನ್ನಡಲಿ ನೆಟ್ಟಗೆ ನಾಲ್ಕು ಅಕ್ಷರನೂ ಬರಿಯಕ್ಕೆ ಬಾತಿತ್ಲೆ. 'ನನ್ನ ಶಾಲೆ' ತೇಳುವ ವಿಷಯದ ಮೇಲೆ ಪ್ರಬಂಧ ಬರೆಯೊಕುತೇಳಿರೂ ಅಹಲ್ಯ ಟೀಚರ್ ಕೈಲಿ `ದಡ್ಡ..ದಡ್ಡ'ತಾ ಹೇಳಿಸಿಕಂಡ್, ಬರೆ ಬರುವಂಗೆ ಕುಂಡೆಗೆ ಹೊಡ್ಸಿಕಣಕಾಗಿತ್ತ್. ಅಂಥದ್ರಲ್ಲಿ  ಲವ್ ಲೆಟರ್  ಬೇರೆ ಕೇಡು ! 
ಗಂಡು ಮಕ್ಕಳೇ ಒಟ್ಟಿಗೆ ಕುದ್ದರೆ ಜೋರು ಗಲಾಟೆ ಮಾಡಿವೆತೇಳಿ, ಇಬ್ಬರು ಹುಡುಗರ ಮಧ್ಯೆ ಒಂದು ಗೂಡೆನ ಕೂರ್ಸಿಬಿಡ್ತಿದ್ದೋ...ಅಂದ್ರೆ, ಒಂದು ಬೆಂಚ್ಲಿ ನಾಲ್ಕುಜನ ಇದ್ದರೆ ಅಲ್ಲಿ ಇಬ್ಬರು ಗೂಡೆಗೂ ಇರ್ತಿದ್ದೋ .  ಇದು ಕಾಮಿನಿ ಟೀಚರ್ದ್ ಐಡಿಯಾ ! 'ಉರಿಬರೋವ್ಕೆ' ಜೊತೇಲೆ ಗೂಡೆಗ ಇದ್ದರೇನು, ಹೈದಂಗ ಇದ್ದರೇನು ? ಕೋತಿ ಕೋತಿನೇ....ಇಲ್ಲೂ ಮಂಗಾಟ ಮುಂದುವರೆಸಿದ್ದೋ. ಹಿಂಗೆ ಗೂಡೆಗ ಒಟ್ಟಿಗೆ ಕುದ್ದ್ಕಂಡಿದ್ರಿಂದ ಏನೋ, ಹೈದಂಗಳಲ್ಲಿ ಲವ್ ಫೀಲಿಂಗ್ ಶುರುವಾತ್. ಗೂಡೆಗಳಲ್ಲೂ ಈ ಭಾವನೆ ಇದ್ದಿರ್ದು... ಇಂದಿಗೂ ಅವ್ರ ಮನಸ್ನ ಯಾರ್ ಸರಿಯಾಗಿ ಅರ್ಥ ಮಾಡ್ಕೊಂಡೊಳೋ ಹೇಳಿ... 
ಹಿಂಗಿರ್ಕಾಕನ ಒಬ್ಬ ಭಟ್ಟರ ಹೈದಂಗೆ ಬೇರೆ ಜಾತಿ ಗೂಡೆ ಮೇಲೆ ಮನಸ್ಸಾತ್ ! ನೆನಪಿಟ್ಟ್ಕಣಿ, ಇದು ಐದನೇ ಕ್ಲಾಸ್ನ ವಿಷಯ ! ಆ ಭಟ್ಟನ ಮನೇಲಿ ರೇಷ್ಮೆ ಬೆಳೀತ್ತಿದ್ದೊ. ರೇಷ್ಮೆ ಹುಳಕ್ಕೆ ಹಾಕಿವೆಯಲ್ಲಾ, ಹಿಪ್ಪುನೇರಳೆ ಸೊಪ್ಪು... ಆ ಗಿಡಲಿ ಒಂದು ಹಣ್ಣು ಆದೆ. 'ಕಂಬಳಿ ಹಣ್ಣು'ತಾ ಅದ್ರ ಹೆಸ್ರ್. ನಮ್ಮ ಹೀರೋ, ಗೂಡೆಗೆ ಇಂಪ್ರೆಸ್ ಮಾಡಿಕೆ ಅವ್ಳಿಗೆ 'ಕಂಬಳಿ ಹಣ್ಣು' ತಂದ್ಕೊಡ್ತಿತ್. ಇದು ಪ್ರೀತಿತಾ ಹೇಳ್ದು ಆ ಟೈಂಲಿ ಅವ್ರಿಬ್ಬರ ಮನಸ್ಸ್ಲಿ ಇತ್ತೋ ಏನೋ ಗೊತ್ಲೆ. ಆದ್ರೆ ದಿನ ಕಳ್ದಂಗೆ ಅವ್ರಿಬ್ಬರ ಸಂಬಂಧ ಜಾಸ್ತಿ ಆತ್. ಅವ್ಳು ಕ್ಲಾಸ್ಗೆ ಬಾತ್ಲೆತೇಳಿರೆ ಇಂವ, ಇಂವ ಬಾತ್ಲೆತೇಳಿರೇ ಅವ್ಳು ದಿನಪೂರ್ತಿ ಮಂಕಾಗಿ ಕುದ್ದುಬಿಡ್ತಿದ್ದೋ....
ಅವ್ರಿಬ್ಬರ ಮಧ್ಯೆ ಆತ್ಮೀಯತೆ ಎಷ್ಟಿತ್  ತ್ತೇಳಿರೆ, ತಂದ ಬುತ್ತಿನ ಇಬ್ಬರೂ ಹಂಚಿಕಂಡ್ ತಿಂತಿದ್ದೊ. ಒಂದು ದಿನ ಮಧ್ಯಾಹ್ನ ಹೊತ್ತ್. ನಮ್ಮ ಹೀರೋಯಿನ್ ರೊಟ್ಟಿ ತಂದಿತ್ತ್. ಅದಕ್ಕೆ ಬೇಕಾದ ಸಾರ್ ಕೂಡ ಬೇರೆಯೇ ಡಬ್ಬಿಲಿ ಹಾಕಿಕಂಡ್ ಬಂದಿತ್ತ್. ಅವ್ಳ ಮನೇಲಿ ಯಾವಾಗ ನೋಡಿರೂ ರೊಟ್ಟಿ. ತಿಂದ್  ತಿಂದ್  ಬೇಸರ ಆಗಿತ್ತ್. ಇನ್ನು ಈ ಭಟ್ಟನ ಟಿಫಿನ್ಲಿ ಚಪಾತಿ ಮತ್ತೆ ಸಕ್ಕರೆ ತುಪ್ಪ ! ಅವ್ನ ಮನೇಲೂ ಅಷ್ಟೇ, ದಿನಾ ಅದೇ ಚಪಾತಿ. ಹಂಗಾಗಿ ಅವು ತಂದಿದ್ದನ್ನ ಅದಲು ಬದಲು ಮಾಡ್ಕೊಂಡೊ. ಭಟ್ಟ ರೊಟ್ಟಿನ ಚಪ್ಪರಿಸಿಕಂಡ್ ತಿಂದತ್. ಎಲ್ಲಾ ತಿಂದ್ ಆದ್ಮೇಲೆ ನೋಡಿರೆ ಟಿಫಿನ್ ಲಿ ಮೂಳೆ ! ಭಟ್ಟ ತಿಂದದ್ದೆಲ್ಲಾ ಹಂಗೆನೇ ವಾಪಸ್ ಬಂದಿತ್ತ್!
ಈ ಭಟ್ಟ ಓದುದರಲ್ಲಿನೂ ತುಂಬಾ ಹುಷಾರಿತ್ತ್. 7ನೇ ಕ್ಲಾಸ್ಲಿ ಇವನೇ ಸ್ಕೂಲ್ಗೆ ಫಸ್ಟ್. ಇದಾದ್ಮೆಲೆ ಈ ಜೋಡಿ ಒಂದೇ ಹೈಸ್ಕೂಲ್ಗೆ ಸೇರ್ದೊ. ಅಲ್ಲೂ ಇಬ್ಬರದ್ದೂ ಒಂದೇ ಸೆಕ್ಷನ್. ಸ್ವಲ್ಪ ಸ್ವಲ್ಪ ಮೀಸೆ ಬರ್ತಿತ್ ನೋಡಿ, ಇವಂಗೆ, ಓದುದು ಬಿಟ್ಟ್ ಬೇರೆ ಕಡೆ ಗಮನ ಜಾಸ್ತಿ ಆತ್. ಗೂಡೆಗೂ ಅಷ್ಟೆ... 8ನೇ ಕ್ಲಾಸ್ ಅರ್ಧ ವಾರ್ಷಿಕ ಪರೀಕ್ಷೇಲಿ ನಮ್ಮ ಹೀರೋಗೆ ಸಿಕ್ಕಿದ ಮಾರ್ಕ್ಸ್   ನೋಡಿ ಆವನ ಅಪ್ಪಂಗೆ ಯಾಕೋ ಡೌಟ್ ಬಾತ್. ಸುಮ್ನೆ ಒಮ್ಮೆ ಇವನ ಸ್ಕೂಲ್ ಬ್ಯಾಗ್   ಕೊಡ್ಕಿ ನೋಡ್ದೊ... ದಪ...ದಪ ತಾ 10-15 ಲವ್ಲೆಟರ್ ಕೆಳಕ್ಕೆ ಬಿತ್ತ್. ಅದೇ ಹಿಪ್ಪುನೇರಳೆ ಗಿಡದ ಕೋಲು ತಕ್ಕಂಡ್, ಅದ್ ಮುರಿಯುವಂಗೆ ಬಾರ್ಸಿದೋ... ಮಾರನೇ ದಿನನೇ ಟಿಸಿ ತೆಗ್ದ್ ನಮ್ಮ ಹೀರೋನ ಕರ್ಕಂಡ್ ಹೋಗಿ ಪುತ್ತೂರ್ಲಿ ಹೈಸ್ಕೂಲ್ಗೆ ಸೇರಿಸಿದೋ...
ಹೀರೋಯಿನ್ ಮನೆಗೂ ವಿಷಯ ಗೊತ್ತಾತ್. ಇವ್ಳನ ಹಿಂಗೆ ಬಿಟ್ಟರೆ ಮರ್ಯಾ ದೆ ಹರಾಜು ಹಾಕುದುತೇಳಿ, ಸ್ಕೂಲ್ ಬಿಡ್ಸಿದೋ... ಅದರ ಮುಂದಿನ ವರ್ಷ ಮದುವೆನೂ ಮಾಡ್ದೋ...ಅವ್ಳ ಮಕ್ಕ ಈಗ ಹೈಸ್ಕೂಲ್ ಓದ್ತೊಳೊ... ಇನ್ ಹೀರೋ ದೊಡ್ಡ ಎಂಜಿನೀಯರ್, ಮದುವೆ ಆಕೆ ಹೊರಟುಟ್ಟು....ಗೂಡೆ ಹುಡುಕುತ್ತೊಳೋ...
- 'ಸುಮಾ'
arebhase@gmail.com

ಮಾಯವಾದ ಮಲೆನಾಡು !


ಒಂದ್ ದೊಡ್ಡ ಕಾಡು...
ಮಟಮಟ ಮಧ್ಯಾಹ್ನ ಮಾತ್ರ 
ಅಲ್ಲಿ ಸೂರ್ಯಂಗೆ ಪ್ರವೇಶ !
ಮಳೆಬಂದರೂ ನೆಲ ಮುಟ್ಟುಲ್ಲೇ...
ಎತ್ತರದ ಮರಗ, ತಬ್ಬಿ ನಿಂತಿರ್ವ ದಪ್ಪ ಬಳ್ಳಿ !
ಹಾಲು ಹರಿದಂಗೆ ಹೊಳೆ...
ನೇಸರಂಗೆ ಮುತ್ತಿಕ್ಕಿಕ್ಕೆ ಹಾರುವ
ಬಣ್ಣಬಣ್ಣದ ಮೀನುಗ !
ಆಹಾರಕ್ಕೆ ಒಂಟಿ ಕಾಲ್ಲಿ
ತಪಸ್ಸು ಮಾಡ್ವ ಬಕಪಕ್ಷಿ !
ದೂರಲಿ ಮರಡುವ ಗುಳ್ಳೆನರಿ
ಘೀಳಿಡ್ವ ಆನೆಯ ಜೋರು ದನಿ
ಅಲ್ಲೆಲ್ಲೋ ಹುಲಿ ಕೈಗೆ ಸಿಕ್ಕಿಹಾಕಿಕಂಡ
ಗಂಗೆ ಹಸುನ ನೋವಿನ ಕೂಗು !
ಈಗ ಇದೆಲ್ಲಾ ಬರೀ ಕನಸಷ್ಟೇ...!
ಎಲ್ಲಿ ಉಟ್ಟು ಮಲೆನಾಡು ?

- 'ಸುಮ' 
arebhase@gmail.com

Saturday, 4 February 2012

ಆಸೆ ನಿರೀಕ್ಷೆ...

ಪಂಜರದ ಗಿಣಿ ನಾನ್....
ಗರಿಬಿಚ್ಚಿ ಹಾರೋ ಆಸೆ ನಂಗೆ...!!!!!
ಕತ್ತಲಾವರಿಸಿಟ್ಟು ಮನಸಲಿ..
ಕಾಣ್ತಾ ಇಲ್ಲೇ ನಾ,
ಹೋಗೋ ದಾರಿ...
ಹಾರಿಕೆ ಅಸಾಧ್ಯನಾ ನಂಗೆ??
ಭಾವನೆಯ ಪಂಜರಂದ
ಹೊರಬರೋ ಆಸೆ ನಂಗೆ..!!
ಸಾಗೋಕು ನಾ ಮತ್ತಷ್ಟು  ದೂರ..
ನೋವಿನ  ಬಂಧನ ತಡೆಯಾದೆನಾ....???
ಮನಸಿನ ವೀಣೆನ ನುಡಿಸೋ
ಆಸೆ ನಂಗೆ..!!
ಕನಸಿನ ಗೋಪುರ ಮತ್ತೆ 
ತಡೆಯಾದೆನಾ...??
ಆಸೆಗಳ ಸರಮಾಲೇಲಿ ನಿರೀಕ್ಷೆ
ನಂಗೆ ಮನೆಯಾತಾ...???
ಕಾರಣ ನಂಗೆ ಗೊತ್ಹ್ಲೆ...
ಕೊನೆಗೂ..ನಿರೀಕ್ಷೆಯ ಪಂಜರ
ನನ್ನಾವರಿಸಿ ಬಿಟ್ಟತ್...!!!!!
ನಿನಗಾಗಿ ,

- ಪವಿ - ಭಾವನೆಗಳ ಪಲ್ಲವಿ...

Friday, 3 February 2012

ಅಳುವ ಔಷಧಿ !


ದು:ಖ ಅಂದ್ರೆ ಹಿಂಗೆನೂ
ಇದ್ದದೆನಾ?
ಗಂಟಲು ಸೆರೆ ಉಬ್ಬಿಬಂದು
ಮರ್ಡೊಕುತೇಳಿಕಾಕನ ಸ್ವಾಭಿಮಾನದ ಪ್ರಶ್ನೆ
ಕಣ್ಣಲ್ಲಿ ನೀರಿನ ಪಸೆ...
ಉಕ್ಕಿ ಹೊರಬಂದಂಗೆ ಆದ್ರೂ
ಅಲ್ಲೇ ಇಂಗಿ ಹೋಗ್ವ ಹನಿ !
ಸುನಾಮಿಗೂ ಮೊದ್ಲು ಹಿಂದಕ್ಕೆ
ಸರಿಯುವ ಸಮುದ್ರದಂಗೆ !
ಮತ್ತೆ ಎಲ್ಲಾ ಶಕ್ತಿ ಸೇರ್ಸಿ 
ಒಮ್ಮೆಲೇ ನುಗ್ಗಿಬರುವ ರಕ್ಕಸ ಅಲೆಗ
ಕಣ್ಣೀರಿಗೂ ಅಂಥ ಶಕ್ತಿ ಉಟ್ಟಾ?
ಹೌದು....!
ಹೃದಯದ ಸುತ್ತ ಹೆಪ್ಪುಗಟ್ಟಿ ನಿಂತ
ಬೇಸರದ ಮಂಜುಗಡ್ಡೆ !
ನಮಗೆ ನಾವೇ ಹೇಳಿಕೊಳ್ವ
ಸಾಂತ್ವನದ ಬಿಸಿಯುಸಿರು !
ಅಷ್ಟೇ ಸಾಕ್....
ಉಕ್ಕಿ ಬರ್ವ ಅಶ್ರುಧಾರೆಲಿ
ಎಲ್ಲವೂ ಕೊಚ್ಚಿ ಹೋದೆ....
ಮನಸ್ಸು ಹಗುರ ಆದೆ....
ದು:ಖ ಆಗ್ತುಟ್ಟಾ?
ಒಮ್ಮೆ ಅತ್ತುಬಿಡಿ !
- 'ಸುಮಾ'

Thursday, 2 February 2012

ಮೆಟ್ರೋ ಗಾಡಿಯ ಸವಾರಿ


ಮೆಟ್ರೋ ರೈಲ್ಲಿ ಕೂರೊಕುತೇಳ್ವ ನನ್ನ ಆಸೆ ಕೊನೆಗೂ ಈಡೇರ್ತ್. ಮೆಟ್ರೋ ಪ್ರಯಾಣ ತುಂಬಾ ಬೇರೆಯದ್ದೇ ಅನುಭವ ಕೊಟ್ಟದೆತಾ ಅದರಲ್ಲಿ ಹೋಗಿ ಬಂದವು ಹೇಳ್ತಿದ್ದೊ... ಅದ್ರೆ, ನಂಗೆ ಆ ರೀತಿ ವಿಶೇಷತಾ ಏನೂ ಅನ್ನಿಸ್ತಿಲ್ಲೆ. ವೋಲ್ವೋ ಬಸ್ಲಿ ಕುದ್ದ್ಕಂಡ್, ರೈಲ್ವೆ ಕಂಬಿ ಮೇಲೆ ಹೋದಂಗೆ ಆತಷ್ಟೆ ! ವೋಲ್ವೊದಲ್ಲಿ ಒಳ್ಳೇ ಕುಷನ್ ಸೀಟ್ ಆದ್ರೂ ಇದ್ದದೆ. ಮೆಟ್ರೋಲಿ ಅದೂ ಇಲ್ಲೆ ಬಿಡಿ ! (ಮೆಟ್ರೋ ಡಿಸೈನ್ ಮಾಡಿರುದೇ ನಿಂತ್ಕಂಡ್ ಹೋಗವ್ಕೆ...)
ಡೆಲ್ಲೀಲಿ ಮೆಟ್ರೋ ರೈಲ್ನ ಜನ ತುಂಬಾ ಇಷ್ಟ ಪಟ್ಟಳೋ... ಅಲ್ಲಿ ರೈಲೊಳಗೆ ಸಿಟು ಸಿಕ್ಕೋಕುತೇಳಿರೆ ಏಳೇಳು ಜನ್ಮಲಿ ಪುಣ್ಯ ಮಾಡಿರೊಕು ! ಬರೀ ಪೀಕ್ಅವರ್ಲಿ ಮಾತ್ರ ಈ ಪರಿಸ್ಥಿತಿ ಅಲ್ಲ. ದಿನದ ಹೆಚ್ಚು ಟೈಂ ಹಿಂಗೆನೇ ಇದ್ದದೆ. ಆದ್ರೆ, ಬೆಂಗಳೂರು ಜನಕ್ಕೆ ಮೆಟ್ರೋ ರೈಲ್ ಏಕೋ ಇಷ್ಟ ಆದಂಗೆ ಕಾಣ್ತಿಲ್ಲೆ. ಈಗ್ಲೂ ಇದನ್ನ ಜನ ಒಂಥರ ಪಿಕ್ನಿಕ್ಸ್ಪಾಟ್ನಂಗೆ ನೋಡ್ದು ಬಿಟ್ಟರೆ, ದಿನ ನಿತ್ಯದ ಉಪಯೋಗಕ್ಕೆ ಬಳಸುವವು ತುಂಬಾ ಕಡಿಮೆ. ಇದ್ಕೆ ಕಾರಣ ಏನಿರ್ದು ?
`ನಮ್ಮ ಮೆಟ್ರೋ' ಈಗ ಓಡ್ತಿರ್ದು, ಎಂಜಿ ರೋಡ್ನಿಂದ ಬಯ್ಯಪ್ಪನಹಳ್ಳಿವರೆಗೆ ಮಾತ್ರ. ಇದ್ರ ಮಧ್ಯೆ ನಾಲ್ಕೈದು ಸ್ಟೇಷನ್ಗ ಸಿಕ್ಕಿವೆ. ಇಲ್ಲಿ ಇಳ್ದು ಬೇರೆ ಕಡೆ ಹೋಕುತೇಳಿರೆ, ಮತ್ತೆ ಬಿಎಂಟಿಸಿ ಅಥ್ವಾ ಆಟೋ ಬೇಕೇ ಬೇಕು. ಒಂದು ವೇಳೆ, ಬೆಂಗ್ಳೂರ್ಲಿ `ನಮ್ಮ ಮೆಟ್ರೋ'ದ ಯೋಜನೆ ಪೂರ್ತಿ ಆದ್ರೆ, ಅಂದ್ರೆ ಎಲ್ಲಾ ಕಡೆ ಹರಡಿರೆ ತುಂಬಾ ಜನ ಇದ್ನ ಉಪಯೋಗಿಸಿವೆಯೋ ಏನೋ... ಈಗ ಮೆಟ್ರೋ ಕೆಲ್ಸ ನಡೀತ್ತಿರುವ ಸ್ಥಿತಿ ನೋಡಿರೆ ಸದ್ಯಕ್ಕಂತೂ ಇದು ಮುಗಿಯುವಂಗೆ ಕಾಣ್ತಿಲ್ಲೆ.
ಒಂದಂತೂ ನಿಜ. ವೋಲ್ವೋ ಬಸ್ಲಿ ಹೋದ್ರೆ, ದಾರಿಯುದ್ದಕ್ಕೆ ಟ್ರಾಫಿಕ್ಜಾಂ ಕಿರಿಕಿರಿ. ಎಂಜಿ ರೋಡ್ನಿಂದ ಬಯ್ಯಪ್ಪನಹಳ್ಳಿಗೆ ಬಸ್ಲಿ ಹೋಕೆ ಕಡ್ಮೆ ಅಂದ್ರೂ 40 ನಿಮಿಷ ಬೇಕಾದು. ಆದ್ರೆ ಮೆಟ್ರೋ ರೈಲು ತಕಂಬದು ಬರೀ 7 ನಿಮಿಷ ! ದೇವ್ರೇ, ಬೆಂಗಳೂರ್ಲಿ ಎಲ್ಲಾ ಕಡೆ ಬೇಗ ಮೆಟ್ರೋ ರೈಲು ಓಡಲಿಯಪ್ಪಾ...
- 'ಸುಮಾ'

Wednesday, 1 February 2012

ಕೊಡಗ್ನ ಸೌಂದರ್ಯ !


 ಎಷ್ಟು ಪೋರ್ಲುನ  ಕೊಡಗ್ 
        ಎಷ್ಟು ಅಂದದ ಕೊಡಗ್ 
ಕರ್ನಾಟಕ  ಕಾಶ್ಮೀರ ಖ್ಯಾತಿಯ ಕೊಡಗ್
ಹಚ್ಚ ಹಸ್ರ್ ದಟ್ಟಮರಗಳ ಕೊಡಗ್ 
ತೊರೆ ಕಣಿವೆ ಬೆಟ್ಟಗಳ ಪೋರ್ಲುನ ಕೊಡಗ್ 
ಸುಗಂಧ ಹೂಗಳ ಪೋರ್ಲುನ ಕೊಡಗ್
       ಎಷ್ಟು ಪೋರ್ಲುನ ಕೊಡಗ್ 
       ಎಷ್ಟು ಅಂದದ ಕೊಡಗ್ 
ಪರ ಪರ ಮಳೆ ಬರುವ ಕೊಡಗ್ 
ಕಾರ್ಮೋಡಗಳ ಹೊದಿಯುವ ಕೊಡಗ್ 
ಉರಿಯುವ ಮನಸಿಗೆ ತಂಪ್ನ ಸೂಸುವ ಕೊಡಗ್ 
ಪ್ರವಾಸಿಗರ ಮನಸ್ನ ಸೆಳೆಯುವ ಕೊಡಗ್ 
      ಎಷ್ಟು ಪೋರ್ಲುನ ಕೊಡಗ್ 
      ಎಷ್ಟು ಅಂದದ ಕೊಡಗ್ 
ನಿನ್ನ ಮಡಿಲೊಳಗೆ ಬೆಳೆಯುವ ಮಕ್ಕ ನಾವು 
ಹಸಿರ ಭೂಸಿರಿಯ ತೊಟ್ಟ ಕೊಡಗ್ 
ತಂಪ ಕಂಪ ಭೀಕರ ಗಾಳಿಯ ಬೀಸುವ ಕೊಡಗ್ 
ಜುಳು ಜುಳು ಮಂಜುಳ ಸ್ವರಗಳ ನಾದದಿ 
ಹರಿಯುವ ಕಾವೇರಿ ಮಾತೆಯ ಕ್ಷೇತ್ರದಿ
     ಸುಂದರ ಪೋರ್ಲುನ ಕೊಡಗ್
     ಅಂದದ ಕೊಡಗ್
       
ಕುಲ್ಲಚನ ತಾರಾರವಿ, 
ಕುಂಬಳದಾಳು
arebhase@gmail.com

ಕೊಡಗು ಗೌಡ ವಿದ್ಯಾಸಂಘದ ಚುನಾವಣೆ


ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾಗಿ ಹೊಸೂರು ರಮೇಶ್ ಜೋಯಪ್ಪ ಆಯ್ಕೆ ಆಗೊಳೊ...

ಮಾಹಿತಿ: ಕುಲ್ಲಚನ ತಾರಾರವಿ