Sunday 3 March 2013

ಜೈ ಹಿಂದ್..ಭಾರತ್ ಬಂದ್!!!


 ಒಮ್ಮೆ ಪ್ರಸಿದ್ದ ಲೇಖಕರೊಬ್ಬ ಅರ್ಜೆಂಟ್ ಆಗಿ ಇನ್ನೊಂದು ಊರಿಗೆ ಹೋಕೆತಾ  ಹೇಳಿ ಏರ್ಪೊರ್ಟ್ ಗೆ ಬಂದವೆ. ಅಸ್ಟ್ರಲ್ಲಿ ಅವು ಪ್ರಯಾಣ ಮಾಡೊಕಾದ ವಿಮಾನ 3 ಗಂಟೆ ತಡ ಆದೆತಾ ಮೈಕ್ ಲಿ ಹೇಳುವೆ. ಆ ಲೇಖಕರಿಗೆ ಒಮ್ಮೆಲೇ ಇರ್ಸ್ ಮುರ್ಸ್ ಆದೆ. ಆದರೂ ಬೇರೆ ದಾರಿ ಇಲ್ಲೆ. ಕಾದೇ ಕಾಯೊಕು ತಾ ಹೇಳಿ ವೇಟಿಂಗ್ ರೂಮ್ ಗೆ ಹೋಗಿ ಕುದ್ದವೆ. ವಿಮಾನ ಯಾನ ಕಂಪನಿಯವು ರಿಫ್ರೆಶ್ ಮೆಂಟ್(compensation)ತಾ ಹೇಳಿ ಒಂದು ಸ್ಯಾಂಡ್ ವಿಚ್ ಕೊಟ್ಟವೆ. 3 ಗಂಟೆ ಕಳ್ದದೆ, ಅಷ್ಟ್ರಲ್ಲಿ ಮೈಕ್ ಲಿ ಇನ್ನೊಂದು announcement ಬಂದದೆ. "ಸಾರಿ, ದ ಫ್ಲೈಟ್ ಹಾಸ್ ಬೀನ್ ಕ್ಯಾನ್ಸಲ್ಡ್" ತ... ಆಗ ಆ ವಿಮಾನ ಯಾನ ಕಂಪನಿಯವು ಆ ಲೇಖಕರಿಗೆ ಎರಡ್ ಸ್ಯಾಂಡ್ ವಿಚ್ ಕೊಟ್ಟವೆ. ಲೇಖಕರ ಸಿಟ್ಟ್ ನೆತ್ತಿಗೆ ಯೇರ್ದೆ, ಅಲ್ಲಿನ ಸಿಬ್ಬಂದಿಗಳೊಟ್ಟಿಗೆ ಜಗಳ ಆಡ್ದೆ, ಬಿ.ಪಿ. ರೈಸ್ ಆಗಿ ಹಾರಾಡ್ದೆ. ಬೇರೆ ದಾರಿ ಕಾಣದೆ ಅಲ್ಲೇ ತಲೆ ಮೇಲೆ ಕೈ ಹೊತ್ತು ಕುದ್ದವೆ. ಆಗ ಅಲ್ಲಿನ ಸಿಬ್ಬಂದಿಗ ಅವರೊಟ್ಟಿಗೆ ತುಂಬಾ ಕ್ಷಮೆ ಕೇಳಿವೆ, ನಮ್ಮೊದು ಪ್ರಯಾಣಿಕರ ಬಗ್ಗೆ ತುಂಬ ಕಾಳಜಿ ಇರುವ ಸಂಸ್ಥೆ… ಇನ್ನೊಮ್ಮೆ ಹಿಂಗೆ ಆಲೆ ತಾ ಹೇಳುವೆ.. ಅಷ್ಟೇ ಅಲ್ಲ, ಈ ಸಲ ಅವ್ಕೆ ಮೂರು
ಸ್ಯಾಂಡ್ ವಿಚ್ ಕೊಟ್ಟವೆ. ಇಲ್ಲಿ ನಾವು ಗಮನಿಸೊಕಾದ ಅಂಶ ಎಂಥಾತ ಹೇಳ್ರೆ ಕಂಪನಿಯವು ಎಷ್ಟೇ ಸ್ಯಾಂಡ್ ವಿಚ್ ಕೊಟ್ರೂ ವಿಮಾನ ಹೊರ್ಡುದ್ಲೆ, ಆ ಲೇಖಕ ತಲ್ಪುವ ಜಾಗ ತಲ್ಪಿಕೆ ಆದ್ಲೆ.. ಇಂತ ಸಂಸ್ಥೆಗಳ ಬಗ್ಗೆ ನಿಮ್ಮ ಅಭಿಪ್ರಾಯ ಎಂತ?? ನಿಜವಾಗಿಯೂ ಪ್ರಯಾಣಿಕರ ಬಗ್ಗೆ ಕಾಳಜಿ ಇರುವ ಸಂಸ್ಥೆಗಳಾ ಇವು?? ಇಲ್ಲೆ ತಾನೆ?? ಆದ್ರೆ ಇಲ್ಲಿ ನಾನ್ ಹೇಳಿಕೆ ಹೊರ್ಟಿರ್ದು ಯಾವ್ದೊ airline ಕಂಪನಿ ಬಗ್ಗೆ ಅಲ್ಲ. ಅಥವಾ ತೊಂದರೆಗೆ ಒಳಗಾದ ಆ ಲೇಖಕರ ಬಗ್ಗೆನೂ ಅಲ್ಲ.. ನಮ್ಮ ದೇಶದ ಬಗ್ಗೆ.. ನಮ್ಮ ರೈತರ ಬಗ್ಗೆ ನಮ್ಮ ಸರ್ಕಾರದ ದ್ವಂದ್ವ ನಿಲುವು ಗಳ ಬಗ್ಗೆ. ಇಲ್ಲಿ ಆ ಲೇಖಕ = ನಮ್ಮ ದೇಶದ ರೈತ. ವಿಮಾನಯಾನ ಕಂಪನಿ =ನಮ್ಮ ಭ್ರಷ್ಟ ಸರ್ಕಾರ, ಅರ್ಥಾತ್ ರಾಜಕೀಯ ವ್ಯವಸ್ಥೆ.
           ಸರ್ಕಾರ ನಮ್ಮ ರೈತರ ಬಗ್ಗೆ ತಕಣುವ ನಿಲುವುಗ ಎಷ್ಟ್ ಸಮಂಜಸ?? ಮೇಲ್ನೋಟಕ್ಕೆ ಸರ್ಕಾರ ನಮ್ಮ ರೈತರಿಗೆ ಸಬ್ಸಿಡಿ,ಸಾಲ, ಕಡಿಮೆ ದರಕ್ಕೆ ಅಕ್ಕಿ ಎಲ್ಲಾ ಕೊಟ್ಟದೆ.
ಆದರೆ ಭಾರತದ ಪ್ರಜೆಗಳಾಗಿ ಒಂದು ವಿಷ್ಯ ಯೋಚನೆ ಮಾಡೊಕು. ಇಂಥ ಕಣ್ಣೊರ್ಸೊ ಸೌಲಭ್ಯಗ, ಸೇವೆಗ ನಮ್ಮ ಭಾರತದ ಕ್ರಷಿಕನ ನಿಜವಾಗ್ಲೂ ಅಭಿವ್ರದ್ದಿ ಪಡ್ಸಿದೆನಾ?? ಹೌದು, ಭಾರತದ ಕ್ರಷಿ ಮಳೆ ಆಧಾರಿತ.. ಎಲ್ಲವ್ಕೂ ಗೊತ್ತು. ಹಂಗೆತ ಹೇಳಿ ಆಗುವ ಕಷ್ಟ ನಷ್ಟಗಳಿಗೆಲ್ಲಾ ಮಳೆರಾಯನ ಬೈಯ್ಯೋದು ಯಾವ ನ್ಯಾಯ?? ಭಾರತ ಕ್ರಷಿ ಆದಾರಿತ ದೇಶತಾ ಗೊತ್ತಿರುವ ನಾವು ಮಳೆ ಮೇಲೆ ಅವಲಂಬಿತರಾಗದೆ, ಬೇರೆ ನೀರ್ ನ ಮೂಲ, ಅದಿಕೆ ಬೇಕಾದ infrastuctureಗಳ್ನ ಅಭಿವೃದ್ಧಿ ಪಡ್ಸುವ ಕಡೆ ಗಮನ ಕೊಡ್ತಾ ಒಳೊನ?? ನಮ್ಮ ದೇಶದ ಒಟ್ಟು ಕೃಷಿ ಭೂಮಿಲಿ ಹೆಚ್ಚು ಕಡಿಮೆ 2/3 ಶೇಕಡ ಭೂಮಿ ಸ್ವಾತಂತ್ರ್ಯಾ ಸಿಕ್ಕಿ ೫೦ ವರ್ಷ ಕಳ್ದರೂ ಸಂಪೂರ್ಣ ಮಳೆ ಆಧಾರಿತ. ಆದರೆ ನೆನ್ಪಿರ್ಲಿ.. ನಮ್ಮ ನಂತರ  ಸ್ವಾತಂತ್ರ್ಯ ಸಿಕ್ಕಿದ ಚೀನಾದ ಒಟ್ಟು ಕೃಷಿ ಭೂಮಿಲಿ ೬ ಶೇಕಡ(6%) ಮಾತ್ರ ಮಳೆ ಆಧಾರಿತ. ಅಭಿವ್ರುದ್ದಿ ಹೊಂದಿದ ರಾಷ್ಟ್ರಗ ಮಳೆ ಮೇಲೆ ತುಂಬ ಕಡಿಮೆ ಅವಲಂಬಿತರಾದವೆ, ಈ ಅವಲಂಬನೆಯ ಸೂತ್ರ ಆ ದೇಶಗಳಿಗೆ ಉತ್ತಮ ಉತ್ಪಾದನೆ ಕೊಟ್ಟದೆ. ಅದ್ ವರ್ಷಂದ ವರ್ಷಕ್ಕೆ ಏರ್ತಾ ಇದ್ದದೆ. ಒಂದು ಎಕರೆನ ಪರಿಗಣನೆಗೆ ತಕಂಡ್ರೆ, ಚೀನಾ ನಮ್ಮ ದೇಶ ಉತ್ಪಾದನೆ ಮಾಡುವ ಭತ್ತದ ಮೂರರಷ್ಟ್ ಉತ್ಪಾದನೆ ಮಾಡ್ಡೆ. ಆಸ್ಟ್ರೇಲಿಯಾ ಐದು ಪಟ್ಟ್ ಉತ್ಪಾದನೆ ಮಾಡ್ಡೆ. ಅವ್ಕೆ ಹೋಲ್ಸಿರೆ ನಾವು ಹಿಂದೆ. ಆದರೆ ನಾವು ಇದನ್ನ ಮುಕ್ತ ಮನಸ್ಸಿನಿಂದ ಒಪ್ಪಿಕಂಡವೆ. ಯಾಕೆತಾ  ಹೇಳ್ರೆ ನಾವು ಭಾರತೀಯರು.. ನಮ್ಮ ಬುದ್ದಿನೇ ಅಷ್ಟ್ ತಾನೆ...!!! ನಮ್ಮ ಹತ್ರ ಯಾರಾರ್ ನಿಮ್ಮ ಸಮಸ್ಯೆಗಳಿಗೆ ಕಾರಣ ಎಂತಾತ ಕೇಳ್ರೆ ನಾವು ಮೊದ್ಲು ಬೆರ್ಳ್ ಮಾಡ್ಡು ಸರ್ಕಾರ ದ ಕಡೆಗೆ, ಎರಡನೆ ಬೆರ್ಳ್ ಮಾಡ್ಡು ರಾಜಕೀಯದ ಕಡೆಗೆ... ಇನ್ನು ನಮ್ಮ ರೈತನ ಬಗ್ಗೆ ಹೇಳೊಕು ತಾ ಹೇಳ್ರೆ ಅವ ಆಸ್ಪತ್ರೆಲಿ ಅಡ್ಮಿಟ್ ಆಗಿರುವ ರೋಗಿನಂಗೆ. ಸಬ್ಸಿಡಿ , ಸಾಲತಾ ಹೇಳುವ ಡ್ರಗ್ಸ್ ಮಾತ್ರ ಉಳ್ಸುದು ಅವನ. ಅವಂಗೆ ಡ್ರಗ್ಸ್ ಕೊಟ್ಟ್ ಜೀವಂತವಾಗಿ ಇಟ್ಟ್ಕೊಬೊಂದು ಅವ ಹಾಕುವ ವೋಟ್ ಗಾಗಿ ಮಾತ್ರ. ಸರ್ಕಾರ ಕೊಡುವ ಕಡಿಮೆ ಬೆಲೆಯ ಅಕ್ಕಿ ತಾತ್ಕಾಲಿಕವಾಗಿ ಹಸಿವು ನೀಗ್ಸುದು ಅಷ್ಟೇ. ಆದರೆ ಮಳೆ ಅವಲಂಬನೆ ತರದ ಗಂಭೀರ ಸಮಸ್ಯೆನ ಪರಿಹಾರ ಮಾಡ್ದೆನಾ???? ಇಂಥ ಸಮಸ್ಯೆಗ ಪರಿಹಾರ ಆತ್ಲೆತೇಳಿರೆ ಭಾರತದ ಅಭಿವ್ರುದ್ದಿ ನಿಜವಾಗ್ಲೂ ಸಾಧ್ಯನಾ?? ಇನ್ನು ಸರ್ಕಾರ ಕೊಡುವ ಸಬ್ಸಿಡಿ , ಸಾಲಗ ಇನ್ನಷ್ಟು ಕೆಳಗೆ ತಳ್ಳಿದೆ ನಮ್ಮನ. ಸರ್ಕಾರ ನಮಿಗೆ ಸಾಲ ಸೋಲ ಕೊಡಿಕೆ ಮತ್ತೆ ಬೇರೆ ದೇಶದ ಹತ್ರ ಸಾಲ ಮಾಡ್ಡೆ. ಬಸ್ ದರ ಹೆಚ್ಚಳ, ಹಾಲಿನ ದರ ಹೆಚ್ಚಳ, ಪೆಟ್ರೋಲ್ ದರ ಹೆಚ್ಚಳ, ತೆರಿಗೆ ಹೆಚ್ಚಳ, ಇನ್ನೂ ಅರ್ಥ ಆಗುವಂಗೆ ಹೇಳೊಕು ತಾ ಆದರೆ TRAI ಹೆಸ್ರ್ ಲಿ ಮೆಸೇಜ್ ಪ್ಯಾಕ್ ಕಟ್, ಕಾಲ್ ರೇಟ್ ಜಾಸ್ತಿ... ಹಿಂಗೆ ಮತ್ತೆ ನಮಿಗೆ ಕೊಟ್ಟ ಸಾಲನ ನಮ್ಮಿಂದಲೆ ವಸೂಲ್ ಮಾಡ್ದೆ. ಕೊನೆಗೆ  ದಂಡ ಕಟ್ಟುದು ನಾವುಗಳೇ
                          ನಾವು ನಮ್ಮ ಜೀವನ ಶೈಲಿನ ಹಿಂಗೆ ಮುಂದುವರ್ಸಕ್ ಬೇಕಾರೆ. ಆಗಾಗ ಏರುವ ಬೆಲೆಗೆ 2 ದಿನ ಕೂಗಾಡಿ ಮೂರನೆ ದಿನ ಸುಮ್ಮನೆ ಆಕೊಂಡು, 5,10,15,20,25  ವರ್ಷ  ತಕಣುವ ಅಭಿವ್ರುದ್ದಿ ಯೋಜನೆ ಗಳ್ನ (ಉದಾ: ಬೆಂಗಳೂರ್ ಮೆಟ್ರೊ, railway to coorg.) ನೋಡಿ ನೋಡದಂಗೆ ಇದ್ದ್ಕಂಡ್, ಬಡತನ, ಭ್ರಷ್ಟಾಚಾರಕ್ಕೆ ಕಣ್ಣ್ ಮುಚ್ಚಿಕಂಡ್...... ಇದ್ ಒಂದು ಆಯ್ಕೆ. ಆದರೆ ಇನ್ನೊಂದು ಆಯ್ಕೆಸಾ ಉಟ್ಟು. ಇಪ್ಪತ್ತ್  ವರ್ಷದ ಹಿಂದೆ ಏಷ್ಯಾದ ಹಲವು ರಾಷ್ಟ್ರಗ ನಮ್ಮ ಸ್ಥಿತಿಲೇ ಇದ್ದೊ.ಆದರೆ ಇಂದ್ ಅವು ಎಷ್ಟೋ ಮುಂದುವರ್ದೊಳೊ, ಯಾಕೆತ ಹೇಳ್ರೆ ಅವು ಅಂಥ ಆರ್ಥಿಕ ನೀತಿನ ಅಳವಡ್ಸಿಕಂಡೊಳೊ, ಭವಿಷ್ಯದ ಅಭಿವ್ರುದ್ದಿಗಳ ಬಗ್ಗೆ ಗಟ್ಟಿ ನಿಲುವ ಇರುವ ನೀತಿ ಅದ್. ನಮ್ಮ ದೇಶಲಿ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಡಿವ ಅಭಿವ್ರುದ್ದಿ ಕಾರ್ಯಗಳಂಗೆ ಅಲ್ಲ. ಇದೇ  ಆ ದೇಶಗಳ್ನ ೨೦ ವರ್ಷ ಮುಂದಕ್ಕೆ ತಳ್ಳಿತ್. ನಾವು  ೨೦ ವರ್ಷ ಹಿಂದೆನೇ ಒಳೊ. ರಾಜಕಾರಣಿಗಳ್ನ ದೂರಿಕೆ ನಮಿಗೆ ತುಂಬ ಸುಲಭ, ಆದರೆ ಅವರ್ನ ನಾಯಕರನ್ನಾಗಿ ಮಾಡ್ದು ನಾವೆ ತಾ ಹೆಳ್ದು ನಮಿಗೆ ನೆನ್ಪ್ ಇರೊಕು. ನಮ್ಮಲ್ಲಿ ಕೆಲವು ರಾಜಕಾರಣಿಗ ಒಂದು ಮಾತ್ ಹೇಳುವೆ, ಸ್ವತಃ ನಾನೇ ಕಿವಿಯಾರ ಕೇಳೊಳೆ, "ಅಧಿಕಾರ ಇರ್ಕಾಕನ ನೆ ನಮ್ಮ ಲೈಪ್ ಸೆಟ್ಲ್ ಮಾಡಿಕಣೊಕು. ಪ್ರಾಮಾಣಿಕತೆ ತೋರ್ಸಿಕೆ ಹೋದರೆ ನಮ್ಮ ದೇಶಲಿ ಏನ್ ಸ ಮಾಡಿಕೆ ಆಲೆ"ತ... ಈ ಮನೋಬಾವದ ರಾಜಕಾರಣಿಗ ನಮ್ಮ ದೇಶಕ್ಕೆ ಅದ್ ಯಾವ ರೀತಿಯ ಲಾಭ ಹೇಳಿ??  ಇಂತವ್ಕೆ ನಂದೊಂದು ಪ್ರಶ್ನೆ. ನೀವು ನಿಮ್ಮ ಮಕ್ಕಳಿಗೆ ನೀವು ನೋಡ್ದ ಈ ಕೆಟ್ಟ, ಭ್ರಷ್ಟ, ಕೊಳಕು ದೇಶನ ಬುಟ್ಟ್ ಹೋಕೆ ಇಷ್ಟ ಪಟ್ಟಿಯರ?? ಅಲ್ಲ ಒಂದು ಉತ್ತಮವಾದ, ಶ್ರೀಮಂತವಾದ, ಸ್ವಚ್ಚವಾದ ದೇಶನ ಬುಟ್ಟ್ ಹೋಕೆ  ಇಷ್ಟ ಪಟ್ಟಿಯರ??.
                                   ಕ್ರಷಿ ಕ್ಷೇತ್ರಲಿ ಅಭಿವ್ರುದ್ದಿ ತ ಹೇಳ್ರೆ ಬರೀ 10-12 ವರ್ಷ ತಕಣುವ ನೀರಾವರಿ ಯೋಜನೆಗಳ್ನ ಮಾಡಿಕಂಡ್ ಕೂರ್ದು, ಹೊಸ ಹೊಸ ತಳಿಗಳ್ನ ಸಂಶೋದನೆ ಮಾಡ್ಡು ಮಾತ್ರ ಅಲ್ಲ. ಹಾಂಗ್ ಕಾಂಗ್ ಮತ್ತೆ ಸಿಂಗಾಪುರ ಹಾಲು ಮತ್ತು ಹಾಲಿನ ಉತ್ಪನ್ನನ ಆಸ್ಟ್ರೇಲಿಯಾ ದೇಶಂದ ಆಮದು ಮಾಡಿಕಂಡದೆ. ಭಾರತದ ಸಾಫ್ಟ್ ವೇರ್ ಕಂಪೆನಿಗ  ಭಾರತದ ಹೊರಗೆಸ ವಿದೇಶಿ ಕಂಪೆನಿಗಳಿಗೆ ಸವಾಲೊಡ್ಡುವ ರೀತಿಲಿ ಸ್ಪರ್ಧೆ ಮಾಡ್ಕನ,  ನಮ್ಮ ರೈತ ಮಾತ್ರ ಯಾಕೆ ಇನ್ನು ಇ ಮಾರುಕಟ್ಟೆಲೆ ಉಟ್ಟು? ನಮ್ಮ  ಕ್ರಷಿ ಯಾಕೆ ದೇಶಿ ಮಾರುಕಟ್ಟೆ ಬುಟ್ಟ್ ಹೊರಗೆ ಹೋಗ್ತಾ ಇಲ್ಲೆ?? ಅಂತಾರಾಷ್ಟ್ರೀಯ ಮಟ್ಟಲಿ ಭಾರತಕ್ಕೆ ಸ್ಪರ್ಧಾತ್ಮಕ ಶಕ್ತಿ ಕೊಡಿಕೆ ಕ್ರಷಿ ಅಭಿವ್ರುದ್ದಿ ಇಂದ ಮಾತ್ರ ಸಾಧ್ಯ. ನಮ್ಮ ಅನ್ನದಾತ ಭಾರತೀಯ ರೈತ. ಆ ಅನ್ನದಾತನ ಉದ್ಧಾರವೆ ದೇಶದ ಉದ್ಧಾರತ ಮರೀಬೇಡಿ.
                   ಹಾಃ!! ಪಟ್ಟಣ ಪಂಚಾಯಿತಿ ಎಲೆಕ್ಸನ್ ಸದ್ಯಲೇ ಉಟ್ಟು.... 100-200 ರೂಪಾಯಿ ದುಡ್ಡಿಗೋಸ್ಕರ, ಬಿರಿಯಾನಿಗೋಸ್ಕರ, ಹೆಂಡಕೋಸ್ಕರ ಯಾರಿಗೋ ಓಟ್ ಹಾಕಿ ತ ಕ್ಯಾನ್ವಾಸ್ ಮಾಡಿಕೆ ಹೊರ್ಡಿಕೆ ಮುಂದೆ (ಸ್ಯಾಂಡ್ ವಿಚ್ ತಕಣುವ ಮುಂಚೆ..) ಇದರ ಬಗ್ಗೆ ಒಮ್ಮೆ ಯೋಚನೆ ಮಾಡಿ.... ಜೈ ಹಿಂದ್..ಭಾರತ್ ಬಂದ್..!!!!!!!!

                                                                                                                            - ಲತನ್ ಅಯ್ಯೇಟಿರ
ನೀವು ಕೂಡ ಅರೆಭಾಷೇಲಿ ಬರೆಯಕ್. ಬರ್ದದನ್ನ ನಮಿಗೆ ಮೇಲ್ ಮಾಡಿ..

No comments:

Post a Comment