Wednesday 5 September 2012

ದರುಶನ ಕೊಡು ಚಂದಮಾಮ


ಚಂದಮಾಮತಾ ಹೇಳಿರೆ ನಂಗೊಂಥರ ಖುಷಿ...ಅವನ ನೋಡ್ತಿದ್ದರೆ ಮನಸ್ನ ದುಃಖ ಎಲ್ಲಾ ಮಾಯ ಆಗ್ತಿತ್..ಆದ್ರೆ ಇಂದ್ಯಾಕೋ ಚಂದಮಾಮಂಗೂ ನನ್ನ ಬಗ್ಗೆ ಜಿಗುಪ್ಸೆ ಬಂದುಟ್ಟು ಕಂಡದೆ....ಅಂವ ನಂಗೆ ಮುಖನೇ ತೋರಿಸ್ತಿಲ್ಲೆ. ನಾ ಯಾರ ಹತ್ರ ನನ್ನ ನೋವು ಹೇಳಿಕಣಲಿ? ಈ ಮೊದ್ಲು ಯಾವತ್ತು ಕೂಡ ಹಿಂಗೆ ಆಗಿತ್ತ್ಲೆ...ಸಣ್ಣಂವ ಇರ್ಕಾಕನ ನಾ ಊಟನೇ ಸರಿಯಾಗಿ ಮಾಡ್ತಿತ್ಲೆ. ಆಗ ಅಮ್ಮ ಒಂದ್ ಕೈಲಿ ನನ್ನ ಎತ್ತಿಕಂಡ್, ಮತ್ತೊಂದು ಕೈಲಿ ಹಾಲು ಕಲಿಸಿದ ಅನ್ನ ಹಿಡ್ಕಂಡ್, ನಂಗೆ ಚಂದ್ರನ ತೋರಿಸ್ತಿತ್ತ್...ಅದ್ಯಾಕೋ ಗೊತ್ಲೆ, ಚಂದ್ರನ ನೋಡ್ತಿದ್ದಂಗೆ ತಟ್ಟೆಲಿದ್ದ ಅನ್ನ ಎಲ್ಲಾ ಖಾಲಿ ಆಗಿಬಿಡ್ತಿತ್ತ್. ಬಾಯಿಗೆ ತುತ್ತು ಕೊಟ್ಕಂಡೇ ಚಂದ್ರನ ಒಳ್ಳೊಳ್ಳೇ ಕಥೆಗಳ್ನ ಹೇಳ್ತಿದ್ದೊ ಅಮ್ಮ...ಹಿಂಗೆ ನಂಗೂ, ಚಂದಮಾಮಂಗೂ ಒಂಥರ ನೆಂಟಸ್ಥನ ಬೆಳ್ತ್. ಲೆಕ್ಕ ಇಲ್ಲದಷ್ಟು ಸಲ ನಂಗೆ ಬದುಕಿನ ಭರವಸೆ ಕೊಟ್ಟದ್ ಇದೇ ಚಂದಮಾಮ. ಮನಸ್ಸೊಳಗೆ ಎಂಥದ್ದೇ ನೋವು, ಸಂಕಟ, ದುಃಖ ಇರ್ಲಿ, ಒಂದರ್ಧ ಗಂಟೆ ಸುಮ್ಮನೆ ಚಂದ್ರ ನೋಡ್ತಿದ್ದರೆ ಸಾಕ್ ಎಲ್ಲಾ ಮಾಯ ಆಗಿ ನನ್ನಲ್ಲಿ ಹೊಸ ಮನುಷ್ಯ ಹುಟ್ಟಿಕಂಡ್ಬಿಡ್ತಿತ್ತ್...ಆದ್ರೆ ಈಗ ಎಲ್ಲಾ ಉಲ್ಟಾ...ಅದ್ಕೆ ಸರಿಯಾಗಿ ಕೆಟ್ಟ ಕನಸು ಬೇರೆ...
ನಾ ಒಂದು ಹಕ್ಕಿ. ಅದೇ ಚಂದ್ರ ಮೇಲೆ ಕುದ್ದ್ಕಂಡ್ ನನ್ನ ಕರೀತುಟ್ಟು. ಆ ತಂಪಾದ ಬೆಳಕು ನನ್ನಲ್ಲಿ ಎಂಥದ್ದೋ ಆಸೆ ಹುಟ್ಟಿಸ್ಯುಟ್ಟು. ನನ್ನ ರೆಕ್ಕೆಗಳಲ್ಲಿ ಶಕ್ತಿ ಇಲ್ಲೆ...ಆದ್ರೂ ಚಂದ್ರನ ಸೇರುವ ಆಸೆ. ಇದ್ದ ಬದ್ದ ಎಲ್ಲಾ ಬಲ ಸೇರಿಸಿ ಆಕಾಶ ಕಡೆ ಹಾರಿನೆ...ಹೂಂ, ಆಗ್ತಿಲ್ಲೆ...ರೆಕ್ಕೆಗಳಲ್ಲಿ ತುಂಬಾ ನೋವು. ಕಣ್ಣೆತ್ತಿ ಚಂದ್ರನ ನೋಡಿನೆ. ಅಂವ ಇನ್ನೂ ಅಲ್ಲಿ ನಗ್ತುಟ್ಟು. ಎರಡೂ ಕೈ ಬೀಸಿ ನನ್ನ ಕರೀತುಟ್ಟು...ಆ ನಗು ನಂಗೆ ಅಯಸ್ಕಾಂತ ! ತುಟಿಕಚ್ಚಿ ನೋವೆಲ್ಲಾ ಸಹಿಸಿಕಂಡ್ ಚಂದ್ರನ ಹತ್ತಿರ ಹೋಕಾಕನ ಅಂವ ಅಲ್ಲಿಂದ ನನ್ನ ಜೋರಾಗಿ ತಳ್ಳಿಬಿಟ್ಟದೆ...ಕಣ್ಣು ಬಿಟ್ಟು ನೋಡಿರೆ, ನಾ ರೆಕ್ಕೆ ಮುರ್ಕಂಡ್ ಬಿದ್ದಿದ್ದೆ... ನಿದ್ದೆಂದ ಎಚ್ಚರ ಆತ್....
ಮಧ್ಯರಾತ್ರಿ 1 ಗಂಟೆಗೆ ಮತ್ತೆ ಹೊರಗೆ ಬಂದೆ. ಈಗ್ಲಾದ್ರೂ ಚಂದ್ರ ಕಾಂಬದೇನೋತಾ ಆಸೆ. ಭಾಗಮಂಡಲಲಿ, ಕುಶಾಲನಗರಲಿ, ಮೈಸೂರ್ಲಿ, ಹೈದರಾಬಾದ್ಲಿ, ಡೆಲ್ಲಿಲಿ...ಹಿಂಗೆ ಎಲ್ಲಾ ಕಡೆ ನನ್ನ ಜೊತೆ ಬರ್ತಿದ್ದ ಚಂದ್ರ ಬೆಂಗಳೂರ್ಲಿ ಮಾತ್ರ ನನ್ನ ಅನಾಥ ಮಾಡಿಬಿಟ್ಟುಟ್ಟು...
`ಚಂದಮಾಮ, ನೀನೇ ಹಿಂಗೆ ಮಾಡಿರೆ ನನ್ನ ಮತ್ತೆ ಮನುಷ್ಯನಾಗಿ ಮಾಡುದು ಯಾರ್? ಮೋಡದ ಮರೇಂದ ಹೊರಗೆ ಬಾ...ಕಾದನೆ, ನಿಂಗಾಗಿ ಕಾದನೆ, ಗಂಟೆ....ದಿನ...ವಾರ...ತಿಂಗ...ಅಷ್ಟೇ... ಅದಕ್ಕಿಂತ ಜಾಸ್ತಿ ಆಲೆ...ನೀ ಬಾರದಿದ್ದರೆ ನಾ ಉಳಿಯಲ್ಲೆ...' 

- ಸುನಿಲ್ ಪೊನ್ನೇಟಿ
arebhase@gmail.com

No comments:

Post a Comment