Thursday 23 August 2012

ಶ್ರಾವಣಿ


ಶ್ರಾವಣಿ ಓದಕ್ಕಾಗಿದ್ದ ಅದೇ ತೆಲುಗು ನ್ಯೂಸ್ ನೋಡ್ತಿದ್ದೆ. ಆದ್ರೆ ಅಲ್ಲಿ ಅವಳ ಬದ್ಲು ಬೇರೆ ಯಾರೋ ನ್ಯೂಸ್ ಓದ್ತಿದ್ದೊ. ವಿಶಾಖಪಟ್ಟಣಕ್ಕೆ ಹೋಗ್ತಿದ್ದ ರೈಲಿಗೆ ಬೆಂಕಿಹತ್ತಿಕಂಡಿದ್ದ ಸುದ್ದಿ ಬ್ರೇಕಿಂಗ್ಲಿ ಬರ್ತಿತ್ತ್. ಸತ್ತವ್ರ ಲಿಸ್ಟ್ಲಿ ಶ್ರಾವಣಿ ಹೆಸ್ರು, ಫೋಟೋ...!! ಊರಿಗೆ ಹೊರಟಿದ್ದ ಅವ್ಳು ರೈಲೊಳಗೇ ಬೆಂದು ಹೋಗಿತ್ತ್...ನ್ಯೂಸ್ ನೋಡ್ತಿದ್ದಂಗೆ ನಂಗೆ ಅಳು ತಡ್ಕಂಬಕೆ ಆತ್ಲೆ....ಅವ್ಳು ನನ್ನ ಕೈಗೆ ಕಟ್ಟಿದ್ದ ವಾಚ್ `ಟಿಕ್ ಟಿಕ್ ಟಿಕ್..' ಶಬ್ದ ಮಾಡ್ತಿತ್ತ್...ವಾಚ್ ಕಡೆ ನೋಡ್ದೆ, ಮುಳ್ಳುಗ ಹಿಂದಕ್ಕೆ ಓಡಿದಂಗೆ ಅನ್ನಿಸಿಕೆ ಶುರುವಾತ್. ಮುಂದೆ ಎಲ್ಲಾ ಹಳೇ ನೆನಪುಗಳದ್ದೇ ಮೆರವಣಿಗೆ... 
ನಾ ಗೋಲ್ಕೊಂಡ ಕೋಟೆಯ ತುತ್ತ ತುದಿ ಹತ್ತಿ ನಿಂತಿದ್ದೆ. ಒಂದ್ಸಲ ಉಸಿರು ಬಿಟ್ಟು, ಮತ್ತೆ ಜೋರಾಗಿ ಎಳ್ಕಂಡೆ. ಹೈದರಾಬಾದ್ನ ಆ ಕೊಳಕು ವಾಸನೆಂದ ಮುಕ್ತಿ ಸಿಕ್ಕಿ, ಶುದ್ಧ ಗಾಳಿ ಎದೆಯೊಳಗೆಲ್ಲಾ ತುಂಬಿ ಒಂಥರ ಖುಷಿ ಆತ್. ದೂರಲಿ ಹುಸೇನ್ ಸಾಗರ್ ಸಣ್ಣ ಕೆರೆ ಥರ ಕಾಣ್ತಿತ್. ಅದ್ರೊಳಗೆ ಓಡಾಡ್ತಿದ್ದ ದೊಡ್ಡ ದೊಡ್ಡ ಬೋಟ್ಗ, ಮಕ್ಕ ಆಟ ಆಡಿಕೆ ಮಾಡ್ದ ಪೇಪರ್ ದೋಣಿಗಳಂಗೆ ಇದ್ದೊ. ನನ್ನ ಆಫೀಸ್ ಇರ್ವ ರಾಮೋಜಿ ಫಿಲಂಸಿಟಿ ಎಲ್ಲಾರೂ ಕಂಡದೆಯೇನೋತಾ ದೂರ...ದೂರಕ್ಕೆ ದೃಷ್ಟಿ ಹಾಯಿಸಿದೆ...ಊಹುಂ, ಕಣ್ಣು ನೋವಾದ್ ಬಿಟ್ಟರೆ ಎಂಥದ್ದೂ ಪ್ರಯೋಜನ ಆತ್ಲೆ. ಹಂಗೆ ಆ ಅರಮನೆಯ ನಾಲ್ಕೂ ದಿಕ್ಕುಗಳಿಗೆ ಓಡಾಡಿ ಯಾವ ಜಾಗಲಿ ಏನೆಲ್ಲಾ ಕಂಡದೆತಾ ನಾ ಸರ್ವೆ ಮಾಡ್ತಿದ್ದರೆ, ನನ್ ಜೊತೆ ಬಂದಿದ್ದ ಶ್ರಾವಣಿ ಸುಸ್ತಾಗಿ ಕುದ್ದ್ಕಂಡ್ಬಿಟ್ಟಿತ್ತ್. ಭಾಗಮಂಡಲದಂಥ ಬೆಟ್ಟ-ಗುಡ್ಡ ಇರ್ವ ಜಾಗಲಿ ಓಡಾಡಿದ್ದ ನಂಗೆ, ಈ ಗೋಲ್ಕೊಂಡ ಕೋಟೆ ಇರ್ವ ಬೆಟ್ಟ ಹತ್ತುದು ಕಷ್ಟ ಏನೂ ಆತ್ಲೆ. ಆದ್ರೆ, ಶ್ರಾವಣಿ ವಿಶಾಖಪಟ್ಟಣ ಹತ್ರ ಸಮುದ್ರ ಬದಿ ಇರ್ವ ಯಾವುದೋ ಹಳ್ಳಿಯ ಗೂಡೆ. ಬೆಟ್ಟತೇಳಿ ಹತ್ತುದು ಇದೇ ಮೊದ್ಲು. ಸುಮಾರು ಐನೂರು ಅಡಿ ಹತ್ತಿಕೆ 50 ಸಲ ಮಧ್ಯ ಮಧ್ಯ ಕುದ್ದಿತ್. 2 ಲೀಟರ್ ನೀರು ಖರ್ಚು ಮಾಡಿತ್ತ್. 
ನಾ ಕನ್ನಡ ಚಾನೆಲ್ಲಿ ಕೆಲ್ಸ ಮಾಡ್ದು. ಶ್ರಾವಣಿ ತೆಲುಗು ಚಾನೆಲ್ಲಿ ಆ್ಯಂಕರ್. ನಂಗೆ ಸರಿಯಾಗಿ ತೆಲುಗು ಬಾದುಲೆ. ಅವಳಿಗೆ ಸರಿಯಾಗಿ ಕನ್ನಡ ಬಾದುಲೆ. ಆದ್ರೂ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ! ಹೈದರಾಬಾದ್ಗೆ ಹೋದ ಮೇಲೆನೆ ನಂಗೆ ತೆಲುಗುತೇಳುವ ಭಾಷೆಯ ಪರಿಚಯ ಆದ್. ತೆಲುಗು ಲಿಪಿ ಹೆಚ್ಚು-ಕಡಿಮೆ ನಮ್ಮ ಕನ್ನಡಭಾಷೆಯಂಗೆನೇ ಇರ್ದು. ಶಬ್ದಗಳೂ ಅಷ್ಟೆ, ಅರ್ಥ ಆಗುವಂಗೆ ಇದ್ದದೆ. ಇನ್ನು ಶ್ರಾವಣಿ 2 ವರ್ಷ ಬೆಂಗಳೂರ್ಲಿ ಯಾವುದೋ ಕಂಪೆನಿಲಿ ಹೆಚ್ ಆರ್ ಆಗಿ ಕೆಲ್ಸ ಮಾಡಿತ್ತ್. ಹಂಗಾಗಿ ಅವ್ಳು ಹೇಳುಕತಾ ಇದ್ದದ್ದನ್ನ ನಂಗೆ ಅರ್ಥ ಮಾಡಿಸುವಷ್ಟರ ಮಟ್ಟಿಗೆ ಕನ್ನಡ ಮಾತಾಡ್ತಿತ್ತ್. ನಂಗೂ ಅವ್ಳಿಗೂ ಫ್ರೆಂಡ್ಶಿಪ್ ಶುರುವಾದು ಕೂಡ ಒಂದು ವಿಚಿತ್ರ ಸನ್ನಿವೇಶಲಿ.
ರಾಮೋಜಿ ಫಿಲಂಸಿಟೀಲಿ ಒಟ್ಟು 12 ಚಾನೆಲ್ಗಳ ಆಫೀಸ್ ಉಟ್ಟು. ಎಲ್ಲಾ ಇರ್ದು, ಒಂದೇ ಕಟ್ಟಡದೊಳಗೆ. ನಮ್ಮ ಕನ್ನಡ ಚಾನೆಲ್ ಆಪೀಸ್ನ ಒಂದು ಬದಿಗೆ ಬಂಗಾಳಿ ಚಾನೆಲ್ ಆಫೀಸ್, ಮತ್ತೊಂದು ಬದಿ ತೆಲುಗು ಚಾನೆಲ್ ಆಫೀಸ್ ಇತ್ತ್. ಕನರ್ಾಟಕಲಿ ಎಲೆಕ್ಸನ್ ಆಕಾಕನ ಎಲೆಕ್ಸೆನ್ಗೆ ಸಂಬಂಧಪಟ್ಟ ಎಲ್ಲಾ ಸುದ್ದಿಗಳ್ನ ನಾ ನೋಡಿಕಣ್ತಿದ್ದೆ. ನಂ ರಾಜ್ಯದ ಎಲೆಕ್ಸನ್ ಬಗ್ಗೆ ತೆಲುಗು ಚಾನೆಲ್ನವು ಕೂಡ ದಿನಕ್ಕೆ ಅರ್ಧ ಗಂಟೆಯ ಒಂದು ಪ್ರೋಗ್ರಾಂ ಮಾಡ್ತಿದ್ದೊ. ಅದಕ್ಕೆ ಆ್ಯಂಕರ್ ಆಗಿದ್ದದ್ ಇದೇ ಶ್ರಾವಣಿ. ಅವ್ಳಿಗೆ ಎಂಥದೇ ಡೌಟ್ ಬಂದ್ರೂ, ನನ್ನನ್ನೇ ಬಂದ್ ಕೇಳ್ತಿತ್ತ್. ಎಷ್ಟೊತ್ತಿಗಾದ್ರೂ ಸರಿ ಫೋನ್ ಮಾಡಿ ಅವಳ ಸಂಶಯನ ಪರಿಹಾರ ಮಾಡಿಕಣ್ತಿತ್ತ್. ಕರ್ನಾಟಕಲಿರ್ವ ವಿಧಾನಸಭಾ ಕೇತ್ರಗಳಿಂದ ಹಿಡ್ದ್, ಕೆ ಜಿ ಬೋಪಯ್ಯ ಮಡಿಕೇರಿಲಿ ಎಷ್ಟು ಸಲ ಗೆದ್ದೊಳೊತೇಳುವವರೆಗೆ ಅವಳಿಗೆ ನಾ ಇನ್ಫರ್ಮೇಶನ್ ಕೊಡ್ತಿದ್ದೆ. ಈ ಸಲುಗೆ ಫ್ರೆಂಡ್ಶಿಪ್ ವರೆಗೆ ಹೋತ್. ಕ್ಯಾಂಟೀನ್ಗೆ ಒಟ್ಟಿಗೆ ಹೋಕೆ ಶುರುಮಾಡಿದ್ದ ನಾವು, ಎಲೆಕ್ಷನ್ ಮುಗ್ದ್ ಯಡಿಯೂರಪ್ಪ ಮುಖ್ಯಮಂತ್ರಿ ಆಕಾಕನ ಹೈದರಾಬಾದ್ ಸುತ್ತಿಕೆ ಶುರುಮಾಡಿದ್ದೊ.
ಕರಾವಳಿ ಪ್ರದೇಶಂದ ಬಂದದಕ್ಕೋ ಏನೋ, ಶ್ರಾವಣಿ ತುಂಬಾ ಲಾಯ್ಕ ಮೀನುಗೈಪು ಮಾಡ್ತಿತ್. ಆಗೆಲ್ಲಾ ನನ್ನ ಮರೆಯದೇ ಕರೀತಿತ್ತ್. ನಂದು ಮತ್ತೆ ಅವಳ್ದು ಒಂದೇ ದಿನ ವೀಕ್ಲಿಆಫ್ ಇದ್ದದ್ದರಿಂದ ಸಾಮಾನ್ಯವಾಗಿ ಮಧ್ಯಾಹ್ನ ಊಟ ಒಟ್ಟಿಗೆ ಮಾಡ್ತಿದ್ದೊ. ನಾ ಕ್ಯಾರೆಟ್ ಹಲ್ವ ತುಂಬಾ ಟೇಸ್ಟಿಯಾಗಿ ಮಾಡ್ತಿದ್ದೆ. ಅದ್ರಲ್ಲೂ ಶ್ರಾವಣಿಗೆ ನಾ ಮಾಡ್ದ ಕ್ಯಾರೆಟ್ ಹಲ್ವತೇಳಿರೆ ತುಂಬಾ ಇಷ್ಟ. ಇಂಥ ಸಣ್ಣ, ಸಣ್ಣ ವಿಷಯಗಳೇ ನಮ್ಮನ್ನ ತುಂಬಾ ಹತ್ತಿರಕ್ಕೆ ತಂದಿತ್ತ್. ನಮ್ಮ ಕೊಡಗು, ಇಲ್ಲಿನ ಕಾಡು, ಜಲಪಾತ, ಪ್ರಾಣಿಗಳ ಬಗ್ಗೆ ನಾ ಹೇಳ್ದುನ ಕೇಳಿ ಕೇಳಿ ಅವ್ಳಿಗೂ ನಮ್ಮೂರಿನ ಬಗ್ಗೆ ಆಸಕ್ತಿ ಹುಟ್ಟಿಕಂಡಿತ್ತ್. ಅದ್ರಲ್ಲೂ ಗಾಳಿಪಟ ಪಿಚ್ಚರ್ ನೋಡ್ದಮೇಲಂತೂ `ನನ್ನನ್ನ ಒಂದ್ಸಲ ಮಡಿಕೇರಿಗೆ ಕರ್ಕೊಂಡು ಹೋಗು'ತಾ ತುಂಬಾ ಸಲ ಹೇಳಿತ್ತ್. ಅಷ್ಟೊತ್ತಿಗೆ ನಂಗೆ ಬೆಂಗಳೂರಿಗೆ ಟ್ರಾನ್ಸ್ಫರ್ ಆಗಿಬಿಡ್ತ್...ಹೈದರಾಬಾದ್ಂದ ನಾ ಬಾಕಾಕನ ನನ್ನ ಕಳಿಸಿ ಕೊಡಿಕೆ ಅವ್ಳು ಬಸ್ಸ್ಟ್ಯಾಂಡ್ವರೆಗೆ ಬಂದಿತ್ತ್. ಯಾವತ್ತೂ ವಾಚ್ ಕಟ್ಟದಿದ್ದ ನನ್ನ ಕೈಗೆ ಫಾಸ್ಟ್ಟ್ರ್ಯಾಕ್ ವಾಚ್ ಕಟ್ಟಿ `ಇದು ನನ್ನ ನೆನಪಿಗೆ...'ತಾ ಕಣ್ಣಲ್ಲಿ ನೀರ್ ತಂದ್ಕಂಡಿತ್ತ್. ನಂಗೂ ಯಾಕೋ ಎದೆಯೆಲ್ಲಾ ಭಾರ ಭಾರ ಅನ್ನಿಸಿದಂಗೆ ಆತ್. ನಂಗೆ ಗೊತ್ತಿಲ್ಲದಂಗೆ ನನ್ನ ಕಣ್ಣಲ್ಲಿ ನೀರ್ ಬಾತ್...ಟಾಟಾ ಮಾಡಿಕಂಡೇ ಬಸ್ ಹತ್ತಿದ್ದೆ....ಈಗ ನೋಡಿರೆ, ಶ್ರಾವಣಿ ತುಂಬಾ ದೂರ ಹೋಗಿಬಿಟ್ಟುಟ್ಟು....ಆದ್ರೆ ಅವಳು ಕೊಟ್ಟ ವಾಚ್ ಈಗ್ಲೂ ನನ್ನ ಕೈಲಿ `ಟಿಕ್ ಟಿಕ್ ಟಿಕ್'ತಾ ಹೇಳ್ತುಟ್ಟು.

- ಸುನಿಲ್ ಪೊನ್ನೇಟಿ
arebhase@gmail.com

No comments:

Post a Comment