Wednesday 22 February 2012

ಮೈ ಆಟೋಗ್ರಾಫ್ !


ನಮ್ಮ ಜೀವನಲಿ ಅಪ್ಪ ಮತ್ತೆ ಅಮ್ಮನಷ್ಟೇ ಪ್ರಭಾವ ಉಂಟುಮಾಡ್ದು, ನಮಿಗೆ ಪಾಠ ಹೇಳಿಕೊಟ್ಟ ಟೀಚರ್ಗ...ಅವ್ರ ನೆನಪು ನಾವು ಬದುಕಿ ಇರ್ವ ತನಕ ಇದ್ದದೆ...ನಂಗೆ ನೆನಪಿರುವಂಗೆ ಮೊದಲ ಸಲ ಅಕ್ಷರ ಹೇಳಿಕೊಟ್ಟದ್ ನನ್ನ ಅಮ್ಮ. ಇದಾದ್ಮೇಲೆ ಅಂಗನವಾಡಿಯ ರುಕ್ಮಿಣಿ ಟೀಚರ್ ! ಅದ್ ಮಹಿಳಾ ಸಮಾಜದವು ನಡೆಸ್ತಿದ್ದ `ಶಿಶು ವಿಹಾರ'. ಆಗೆಲ್ಲಾ ಪುಟಾಣಿಗಳಿಗೆ ಅಂಗನವಾಡಿಯೇ ಮೊದಲ ಪಾಠಶಾಲೆ. ದಿನಾ ಮಿಠಾಯಿ ತಂದ್ಕೊಟ್ಟ್ ಪ್ರೀತಿಯಿಂದ ನೋಡ್ಕಂಡ ರುಕ್ಮಿಣಿ ಟೀಚರ್, ಈಗ್ಲೂ ನನ್ನ ಹೆಸರು ನೆನಪಿಟ್ಟುಕೊಂಡೊಳೊ ! 
ಅಕ್ಷರಗಳನ್ನ ಜೋಡಿಸಿ ಶಬ್ದಗಳ್ನ ಓದಿಕೆ ಹೇಳಿಕೊಟ್ಟದ್, ಕಾವೇರಮ್ಮ ಟೀಚರ್...`ಕಮಲಳ ಲಂಗ ಝಳ ಝಳ...' ತಾ ಅವು ಅಂದ್ ಹೇಳಿಕೊಟ್ಟದ್ ಇಂದಿಗೂ ಕಿವೀಲಿ ಗುಂಯ್ತಾ ಕೇಳ್ದಂಗೆ ಆದೆ. 
ಶಾಲೆಗಳಲ್ಲಿ ಹೊಡ್ದವೆತಾ ಮೊದ್ಲ ಸಲ ಗೊತ್ತಾದ್ 2ನೇ ಕ್ಲಾಸ್ಲಿ. ವೇದಾವತಿ ಟೀಚರ್ ಕೈಂದ ತಿಂದ ಪೆಟ್ಟು ಪೆನ್ನು ಹಿಡಿಯಕಾಕನೆಲ್ಲಾ ಯೋಚನೆ ಆಗ್ತಿದ್ದೆ !
ಒಂದೇ ಕ್ಲಾಸ್, ಎರಡು ಸೆಕ್ಷನ್... ಇಂಥದ್ದೆಲ್ಲಾ ಉಟ್ಟುತಾ 3ನೇ ಕ್ಲಾಸ್ಲಿ ಗೊತ್ತಾತ್. ನಾ ಮೂರನೇ ಕ್ಲಾಸ್ಲಿ ಬಿ ಸೆಕ್ಷನ್. ಯಶೋಧ ಟೀಚರ್ ನಮ್ಗೆ ಕ್ಲಾಸ್ ಟೀಚರ್. ಅದ್ಯಾಕೋ ಮಧ್ಯದಲ್ಲೇ ಕೆಲಸ ಬಿಟ್ಟು ಹೋಗಿಬಿಟ್ಟೊ...ಅವು ಹೋದ ಮೇಲೆ ಎ, ಬಿ ಎರಡೂ ಸೆಕ್ಷನ್ ಒಟ್ಟಿಗೆ ಸೇರ್ಸಿದೊ. ಲೀಲಾವತಿ ಟೀಚರ್ ಆಗ ಕ್ಲಾಸ್ ಟೀಚರ್. ಇಲ್ಲಿ ಮತ್ತೊಂದು ಶಿಕ್ಷೆ ಪರಿಚಯ ಆತ್, ಅದ್.. ಬಸ್ಕಿ ಹೊಡೆಯುದು !
ನಾಲ್ಕನೇ ಕ್ಲಾಸ್ಲಿ ಕಾಮಿನಿ ಟೀಚರ್ ಕ್ಲಾಸ್ ಟೀಚರ್...15 ಮನೆ ವರೆಗೆ ಮಗ್ಗಿ ಕಲ್ಸಿದ್ದ್ ಅವೇ...! ಈಗ್ಲೂ ನಂಗೆ 15 ಮನೆಗಿಂತ ಜಾಸ್ತಿ ಮಗ್ಗಿ ಬಾಲೆ.
ಒಂದೊಂದು ಸಬ್ಜೆಕ್ಟ್ಗೆ ಒಂದೊಂದು ಟೀಚರ್ ಬಂದವೆತಾ ಗೊತ್ತಾದ್ 5ನೇ ಕ್ಲಾಸ್ಲಿ. ಇಲ್ಲಿಂದಲೇ ನಮ್ಮ ಇಂಗ್ಲೀಷ್ ಕ್ಲಾಸ್ ಶುರುವಾತ್. ಲಕ್ಷ್ಮಣ ಮಾಸ್ಟರ್ ಇಂಗ್ಲೀಷ್ ಹೇಳಿಕೊಡ್ತಿದ್ದೊ. ಅಹಲ್ಯ ಟೀಚರ್ ಕನ್ನಡ ಪಾಠ ಮಾಡ್ತಿದ್ದೊ. ಎಲ್ಲವೂ ಪೈಪೋಟಿ ಮೇಲೆ ಮಕ್ಕಳಿಗೆ ಹೊಡ್ದ್ ಕಲ್ಸ್ತಿದ್ದೊ... ನನ್ನ ಕನ್ನಡಕ್ಕೆ ಒಂದು ರೂಪ ಕೊಟ್ಟದ್ ಅಹಲ್ಯ ಟೀಚರ್.
ಆರನೇ ಕ್ಲಾಸ್ಲಿ ಹಿಂದಿ ಕಲಿಕೆಯೂ ಶುರುವಾತ್. ರುಕ್ಮಿಣಿ ಟೀಚರ್ ಹಿಂದಿ ಹೇಳಿಕೊಡ್ತಿದ್ದೊ...ಇದೇ ಟೈಂಲಿ ಗೀತಾ ಟೀಚರ್ ಹೆಡ್ಮಿಸ್ ಆಗಿ ಬಂದೋ...ಸೈನ್ಸ್ ಕ್ಲಾಸ್ ಇವೇ ತಕ್ಕಣ್ತಿದ್ದೊ... ಪಾಠ ಪುಸ್ತಕ ಬಿಟ್ಟು ಬೇರೆ ಪ್ರಪಂಚ ಕೂಡ ಉಟ್ಟುತಾ ಕಲ್ಸಿಕೊಟ್ಟದ್ ಇದೇ ಗೀತಾ ಟೀಚರ್. ಅವು ಬಂದ ಮೇಲೆ ಶಾಲೆಲಿ `ವಾರ್ತೆ ' ಓದುದು ಶುರುವಾತ್. ನಾನೇ ವಾರ್ತಾ ವಾಚಕ !
ಏಳನೇ ಕ್ಲಾಸ್ಗೆ ಬಾಕಾಕನ ಚೆಡ್ಡಿ ಹೋಗಿ ಪ್ಯಾಂಟ್ ಬಂದಿತ್ತ್. ತಿಮ್ಮಯ್ಯ ಮಾಸ್ಟ್ರು ಥರದ ದೂವರ್ವಾಸ  ಮುನಿಗಳ ಪಾಠ ಕೇಳುವ ಯೋಗನೂ ಸಿಕ್ಕಿತ್ತ್... ಶರ್ಮಾ ಮಾಸ್ಟರ್ ಇಂಗ್ಲಿಷ್ನ ನಮ್ಗೆ ಅರ್ದು ಅರ್ದು ಕುಡಿಸುವ ಕೆಲಸ ಮಾಡ್ದೊ.. ನೀರಧಿ   ಟೀಚರ್ ನಮ್ಮ ಕನ್ನಡನ ಸುಂದರವಾಗಿ ಕೆತ್ತಿದೋ... ಆಗ ನಾ ಒಂದು ಕಥೆ ಬರ್ದ್ `ಶಕ್ತಿ' ಪೇಪರ್ಗೆ ಕಳ್ಸಿದ್ದೆ...`ಔದಾರ್ಯ' ತಾ ಅದ್ರ ಹೆಸ್ರು. ಕಳ್ಸಿದ್ದೇ ಮರ್ತು ಹೋಗಿದ್ದ ಒಂದು ದಿನ ಆ ಕಥೆ ಪೇಪರ್ಲಿ ಬಂದೇ ಬಿಡ್ತ್... ಹಂಗೆ ನನ್ನ ಮೊದಲ ಕಥೆಗೆನೇ ಪೇಪರ್ಲಿ ಸ್ಥಾನ ಸಿಕ್ಕಿಬಿಟ್ಟಿತ್.
8ನೇ ಕ್ಲಾಸ್... ಹೈಸ್ಕೂಲ್. ಮನೇಂದ ಸ್ವಲ್ಪ ದೂರ. ಮಧ್ಯಾಹ್ನ ಊಟಕ್ಕೆ ಬಾಕೆ ಆಲೆ. ಮೊದಲ ಸಲ ಬುತ್ತಿ ತಕ್ಕಂಡ್ ಹೋಕೆ ಕಲ್ತೆ. 9 ಮತ್ತೆ 10ನೇ ಕ್ಲಾಸ್ಲಿ ನಮ್ಮ ಮೇಲೆ ಟೀಚರ್ಗಳ ಪ್ರಭಾವ ತುಂಬನೇ ಜಾಸ್ತಿ. ಶ್ರೀ ಕೃಷ್ಣ ಭಟ್ (ಭಟ್ಟ ಮಾಸ್ಟ್ರು), ಪೂಣರ್ಿಮಾ ಟೀಚರ್, ಗೀತಭಾವೆ ಟೀಚರ್, ದಿವಾಕರ ಮಾಸ್ಟ್ರ್...ಹಿಂಗೆ ನಮ್ಮ ಜೀವನಕ್ಕೆ ಒಳ್ಳೇ ಫೌಂಡೇಶನ್ ಹಾಕಿಕೊಟ್ಟವ್ರ ಸಂಖ್ಯೆ ತುಂಬಾ ಉಟ್ಟು...
ಪಿಯುಸಿ ಅಂತೂ ಮರೆಯಕ್ಕೇ ಆಲೆ. ಇಲ್ಲೂ ಪೆಟ್ಟು ತಿಂದವು ನಾವು ! ಕೋಪಟ್ಟಿ ಬೆಟ್ಟದ ಸಪೂರ ಬೆತ್ತಲಿ ರಾಮಕೃಷ್ಣ ಸರ್ ಹೊಡೀತ್ತಿದ್ದ ಪೆಟ್ಟು... ಯೋಚನೆ ಮಾಡಿರೆ, ಈಗಲೂ ಮೈ ನಡುಗಿದೆ. ಆದ್ರೂ ಅವು ನನ್ನ ಫೆವರಿಟ್ ಲೆಕ್ಚರರ್.. ಇಂದಿಗೂ ಕಾಂಟ್ಯಾಕ್ಟ್ಲಿ ಒಳೆ....
ಆದ್ರೆ ಪಿಯುಸಿ ನಂತರದ ಗುರುಗಳ ಬಗ್ಗೆ ಅಷ್ಟೊಂದು ಟಚ್ ಇರ್ದುಲ್ಲೆತ್ತಾ ನನ್ನ ಅಭಿಪ್ರಾಯ.. ನೀವು ಏನು ಹೇಳಿಯರಿ ? 
- `ಸುಮ'


(ಇಂಥ ಸವಿ ನೆನಪುಗಳ್ನ ನೀವೂ ಬರೆಯಕ್... ಬರ್ದದನ್ನ mail ಮಾಡಿ )arebhase@gmail.com

No comments:

Post a Comment