Thursday 5 April 2012

ನನ್ನ ಊರಿನ ಕಥೆ


ಕೊಡಗಿನ 
ಪುಟ್ಟ ಮತ್ತೆ ತುಂಬಾ ಲಾಯ್ಕದ ಊರು ಮರಗೋಡು. ಇಲ್ಲೇ ಪಕ್ಕಲಿ ಒಂದು ಸಣ್ಣ ಗ್ರಾಮ ಉಟ್ಟು. ಅದೇ ಹೊಸ್ಕೇರಿ... ಈ ಗ್ರಾಮಲಿ ಒಂದು ವಿಶೇಷ ದೇವಸ್ಥಾನ. ಹೆಸ್ರೂ ಅಷ್ಟೇ ಲಾಯ್ಕ. ಚಿಲಿಪಿಲಿ ಮಹಾದೇವ ದೇವಸ್ಥಾನ ! ಹೊಸ್ಕೇರಿತೇಳುವ ಗ್ರಾಮ ಹುಟ್ಟಿಕೆ ಕಾರಣ ಇದೇ ಮಹಾದೇವ ದೇವಸ್ಥಾನ. ತುಂಬಾ ವರ್ಷಗಳ ಹಿಂದೆ ಹೊಸ್ಕೇರಿತೇಳುದು ದೊಡ್ಡ ಕಾಡು. ಯಾರೂ ವಾಸ ಮಾಡಿಕೆ ಆಗದ ದಟ್ಟಡವಿ. ಆದ್ರೆ ಅಲ್ಲಿಗೆ ಸೌದೆ ಕಡ್ಕಂಡ್ ಹೋಕೆ ಜನ ಬರ್ತಿದ್ದೊ. ಒಬ್ಬ ಸನ್ಯಾಸಿ ಒಮ್ಮೆ ಈ ಕಾಡ್ ಗೆ ಅಲೆದಾಡಿಕಂಡ್ ಬಂದಿತ್.  ಆಗ ಅವಂಗೆ ಅಲ್ಲೊಂದು ಗುಹೆ ಮತ್ತೆ ಅಲ್ಲೊಂದು ಉದ್ಭವ ಶಿವಲಿಂಗ ಕಂಡತ್. ಹಂಗಾಗಿ ಆ ಸನ್ಯಾಸಿ ಅಲ್ಲೇ ತಪಸ್ಸಿಗೆ ಕುದ್ದುಕಣ್ತ್. ಕೊನೆಗೆ ಇವನ ಭಕ್ತಿಗೆ ಮೆಚ್ಚಿ ಶಿವ ಪ್ರತ್ಯಕ್ಷ ಕೂಡ ಆತ್. ಅಲ್ಲಿಂದ ಆ ಸನ್ಯಾಸಿ ದೊಡ್ಡ ಸ್ವಾಮೀಜಿಯಾಗಿ ಬದಲಾತ್. ಸೌದೆ ಕಡಿಯಕ್ಕೆ ಬರ್ತಿದ್ದ ಜನಕ್ಕೆ ಇಲ್ಲಿ ಸ್ವಾಮೀಜಿ  ಇರುದು ಗೊತ್ತಾತ್. ಅವು ದಿನಾ ಇಲ್ಲಿಗೆ ಬಾಕೆ ಶುರುಮಾಡ್ದೊ. ಬಾಕಾಕನ ಜೊತೇಲಿ ಹಣ್ಣುಹಂಪಲು ತರ್ತಿದ್ದೊ. ಸ್ವಾಮೀಜಿ ಈ ಜನಗಳಿಗೆ ಪ್ರವಚನ ಕೊಡ್ತಿತ್. ಸ್ವಾಮೀಜಿ ಹೇಳಿದ್ದನ್ನೆಲ್ಲಾ ಕಣ್ಮುಚ್ಚಿಕಂಡ್ ಪಾಲಿಸ್ತಿದ್ದೊ. ಹಿಂಗೆ ಇರ್ಕಾಕನ ಒಂದು ದಿನ ತನ್ನ ನೋಡಿಕೆ ಬರ್ತಿದ್ದ ಜನಗಳಿಗೆ ಸ್ವಾಮೀಜಿ ಒಂದು ಸಲಹೆ ಕೊಟ್ಟತ್. ಕಾಡ್ ಕಡ್ದ್ ಮನೆಗಳ್ನ ಕಟ್ಟಿಕಣಿಕೆ ಹೇಳ್ತ್. ಸ್ವಾಮೀಜಿ ಮಾತು ಕೇಳಿ ಜನ ಅಲ್ಲಿ ಮನೆಗಳ್ನ ಕಟ್ಟಿಕೊಂಡು. ಆ ಊರಿಗೆ ಹೊಸಕೇರಿ  ಅಂತ ಹೆಸ್ರು ಕೂಡ ಇಟ್ಟೊ. ಅದೇ ಹೊಸಕೇರಿ ಈಗ ಜನಗಳ ಬಾಯಿಲಿ ಹೊಸ್ಕೇರಿ ಆಗುಟ್ಟು ! 


ಈಗಲೂ ಇಲ್ಲಿ ದೇವಸ್ಥಾನಲಿ ಮಧ್ಯರಾತ್ರಿ ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳಿದೆಗಡ ! ಜೊತೆಲಿ ಘಂಟಾನಾದನೂ ಕೇಳಿಬಂದದೆ. !ಹಂಗಾಗಿ ಈ ದೇವಸ್ಥಾನಕ್ಕೆ ಚಿಲಿಪಿಲಿ ಮಹಾದೇವ ದೇವಸ್ಥಾನತಾ ಹೆಸ್ರು.  ಇಲ್ಲಿ ನಿತ್ಯ ಪೂಜೆ ನಡ್ದದೆ. ಪ್ರತಿವರ್ಷ ಶಿವರಾತ್ರಿ ದಿನ ಮಹಾದೇವಂಗೆ ವಿಶೇಷ ಪೂಜೆನೂ ಇದ್ದದೆ. ಜೊತೆಗೆ ಊರವು ಜಾಗರಣೆ ಮಾಡಿವೆ. ಅಲ್ಲದೆ ಈ ದೇವಸ್ಥಾನ ತುಂಬಾ ಕಟ್ಟುನಿಟ್ಟು. ಅಶುದ್ಧಲಿ ದೇವಸ್ಥಾನಕ್ಕೆ ಪ್ರವೇಶ ಮಾಡಿಕೆ ನೋಡಿರೆ, ಗುಹೆಯ ಅಡ್ಡಕ್ಕೆ ಹುಲಿ ಮಲಗಿದಂಗೆ ಕಂಡದೆ ಗಡ....ಸಮಯ ಸಿಕ್ಕಾಕನ ನೀವೂ ಒಮ್ಮೆ ಈ ದೇವಾಲಯಕ್ಕೆ ಬನ್ನಿ...


- 'ಮಂದಸ್ಮಿತ'
(ಮಾಹಿತಿ: ಶ್ರೀ ಶಿವರಾಮ ಶಾಸ್ತ್ರಿ ಅವ್ರ 'ಚಿಲಿಪಿಲಿ ಮಹಾದೇವ' ಪುಸ್ತಕ )
arebhase@gmail.com

No comments:

Post a Comment