Friday 20 April 2012

ಮಾಯವಾದ ನಿಧಿ !


ವಿನು ಮತ್ತೆ ದಿನು ಶಾಲೆಂದ ವಾಪಸ್ ಮನೆಗೆ ಬರ್ತಿದ್ದೊ....ಅದ್ ಮಳೆಗಾಲದ ಟೈಂ ಆಗಿದ್ದರಿಂದ ಚೇರಂಗಾಲದ ಆ ಕಾಡು ಮೂಲೇಲಿ ಐದೂವರೆಗೆಲ್ಲಾ ಕತ್ತಲೆ ಆಗಿಬಿಡ್ತಿತ್. ಅವಿಬ್ಬರೂ ಭಾಗಮಂಡಲಲಿ ಸ್ಕೂಲ್ಗೆ ಹೋಗ್ತಿದ್ದೊ. ಇವರ ಮನೇಂದ ಭಾಗಮಂಡಲಕ್ಕೆ ಸುಮಾರು 5 ಮೈಲಿ ದೂರ. ಹಂಗಾಗಿ ಮನೆ ಸೇರಿಕಾಕನ ಕತ್ತಲೆ ಆಗ್ತಿತ್. ಇಂದೂ ಹಂಗೆನೆ ಆಗಿತ್ತ್. ಕೋಳಿಕಾಡು ಹತ್ರ ಹೋಕಾಕನನೇ ಕುದುಕಗ ಮರಡಿಕೆ ಶುರುಮಾಡಿದ್ದೊ...ಇಬ್ಬರ ಪೈಕಿ ವಿನು ಸ್ವಲ್ಪ ಧೈರ್ಯವಂತ. ಆದ್ರೆ ದಿನು ಪುಕ್ಕಲ. ಹಂಗಾಗಿ ವಿನು ಮುಂದೆ ಮುಂದೆ ಹೋದರೆ, ದಿನು ಅವನ ಹಿಂದೆ ಹಿಂದೆ ಕಳ್ಳನಂಗೆ ಹೆಜ್ಜೆ ಹಾಕ್ತಿತ್. ಕೋಳಿಕಾಡು ತೋಡು ದಾಟಿ, ಈಚಪ್ಪಾಚಾರಿ ಮಂಟಿ ಮೇಲೆ ಹತ್ತಿಬಿಟ್ಟರೆ, ಇವ್ರ ಮನೆ ಗುಡ್ಡದ ಒಲೆಗೆ ಹಾಕಿದ ಬೆಂಕಿ ಕಾಣ್ತಿತ್. ಅಲ್ಲಿಂದ ಮತ್ತೊಂದು ಕಾಲು ಗಂಟೆ ಮಾತ್ರ ದಾರಿ.
ಅಣ್ಣ ಮತ್ತೆ ತಮ್ಮ ಇಬ್ಬರೂ ಈಚಪ್ಪಾಚಾರಿ ಮಂಟಿ ಹತ್ತುತ್ತಿದ್ದೊ. ಅಷ್ಟೊತ್ತಿಗೆ ಹಿತ್ತಾಳೆ ಮಡಿಕೆನ ನೆಲ್ಲಕ್ಕೆ ಜೋರಾಗಿ ಎತ್ತಿಹಾಕಿದಂಗೆ ಎಡಗಡೆ ಕಾಡೊಳಗಿಂದ ಒಂದು ಶಬ್ದ ಕೇಳ್ತ್. ವಿನು ಕುತೂಹಲಂದ ಅತ್ತ ಕಡೆ ನೋಡಿರೆ, ದಿನು ವಿನುನ ಗಟ್ಟಿಯಾಗಿ ಹಿಡ್ಕಂಡ್ಬಿಡ್ತ್. ಇವನ ಕೈ ಕಾಲೆಲ್ಲಾ ನಡಿಗಿಕೆ ಶುರುವಾತ್ ! `ಏ ಬಾರಾ ಪೋಯಿ...ಇಲ್ಲಿ ನಿಂತುಕೊಂಬದು ಬೇಡ... ನಂಗೆ ತುಂಬಾ ಹೆದರಿಕೆ ಆಗ್ತುಟ್ಟು...' ದಿನು ನಡಗಿಕಂಡ್ ನಡಗಿಕಂಡೇ ಹೇಳ್ತ್. ಅಷ್ಟೊತ್ತಿಗೆ ಮತ್ತೊಂದು ಶಬ್ದ. ಹಾವಿನ ಬಾಯಿಂದ ಬಂದದೆಯಲ್ಲಾ ಹಂಗೆ ಜೋರಾಗಿ `ಹಿಸ್ಸ್...'ತಾ.. ! ನಡುಗುತ್ತಿದ್ದ ದಿನು ಈಗ ಪ್ಯಾಂಟ್ಲೇ ಉಚ್ಚೆಹೊಯ್ಕಂಡತ್. ಇನ್ನೇನೆಲ್ಲಾ ಮಾಡ್ಕಂಡತೋ ಏನೋ ಕೆಟ್ಟ ವಾಸನೆ ಬೇರೆ ! ಆದ್ರೆ ವಿನು ಶಬ್ದ ಬಂದ ಕಡೆ ತುಂಬಾ ಧೈರ್ಯಲಿ ನೋಡ್ತಿತ್. ದಿನು ಮಾತ್ರ ಕಣ್ಣು ಮುಚ್ಚಿಕಂಡ್ ನೆಲಲಿ ಕುದ್ದೇಬಿಡ್ತ್ ! ಪುನ: ಹಿತ್ತಾಳೆ ಮಡಿಕೆ ಬಿದ್ದಂಗೆ ಸದ್ದು ! ಮತ್ತೆ ಹಾವಿನ ಬಾಯಿಂದ ಬಂದಂಗೆ `ಹಿಸ್ಸ್...' ಶಬ್ದ. ಹಿಂಗೆನೇ ಒಂದು ನಾಲ್ಕೈದು ಸಲ ಆದ್ಮೇಲೆ, ಕಾಡು ಮಧ್ಯಂದ ಒಂಥರ ಚಿನ್ನದ ಬಣ್ಣದ ಬೆಳಕು ಬಂದಂಗೆ ಆತ್. ಹಂಗೆನೇ ಅದ್ ಆಕಾಶಕಡೆಗೆ ಮುಖ ಮಾಡಿ ಒಳ್ಳೆ ಕೋಲು ಥರ ಬೆಳ್ದ್ ನಿಂತತ್ ! ವಿನುಗೆ ಏನೋ ಕನಸು ಕಾಣ್ತಿರುವಂಗೆ ಅನುಭವ ! ಕಣ್ಣು ಮುಚ್ಚಿಕೆ ಕೂಡ ಮರ್ತವನಂಗೆ ಆ ದೃಶ್ಯನೇ ನೋಡಿಕಂಡ್ ನಿಂತ್ಬಿಟ್ಟತ್. ಅಷ್ಟು ಆಕಾಕನ ಆ ಆಕಾಶದೆತ್ತರಕ್ಕೆ ಬೆಳ್ದು ನಿಂತಿದ್ದ ಕೋಲು ಕರಗಿ ನೀರಾದಂಗೆ ನೆಲದ ಮೇಲೆ ಬಿತ್ತ್ ! ಮತ್ತೆ ಅದೇ ಸದ್ದು ! ಹಿತ್ತಾಳೆ ಮಡಿಕೆ ಬಿದ್ದಂಗೆ...! ಹಾವಿನ ಬಾಯಿಂದ ಬಂದಂಗೆ `ಹಿಸ್ಸ್...' 
ಹತ್ತು ನಿಮಿಷ ಕಳ್ದ ಮೇಲೆ ಎಲ್ಲಾ ನಿಶ್ಯಬ್ದ ! ಅಷ್ಟೊತ್ತಿಗೆ ಕರಿಕತ್ತಲೆ ಬೇರೆ ಆಗಿ ಹೋಗಿತ್ತ್...ದಿನು ಹೆದ್ರಿ ಸೊಯ ತಪ್ಪಿ ಬಿದ್ದುಬಿಟ್ಟಿತ್. ಅವ್ನ ಎಚ್ಚರ ಮಾಡಿಸಿ, ಇಬ್ಬರೂ ಮೆಲ್ಲೆ ಮನೆ ಸೇರಿಕೊಂಡೊ. ನಡ್ದ ಎಲ್ಲಾ ವಿಷಯನ ವಿನು ಅಪ್ಪಂಗೆ ಹೇಳ್ತಿದ್ದರೆ, ದಿನು ಜ್ವರ ಬಂದ್ ಮಲಗಿಬಿಟ್ಟಿತ್ತ್ ! ವಿನು ಅಪ್ಪ ಸೋಮಯ್ಯಂಗೂ ಇದೆಲ್ಲಾ ಕೇಳಿ ಆಶ್ವರ್ಯ. ನಾಳೆ ಹೆಂಗಾರು ಹೋಗಿ ಆ ಜಾಗ ನೋಡೊಕುತಾ ಯೋಚನೆ ಮಾಡಿಕಂಡ್ ಮಲಗಿದೋ.
ಗುಳಿಗಂಗೆ ಕೊಡಿಕೆತಾ ಬಿಟ್ಟಿದ್ದ ದೊಡ್ಡ ಹುಂಜ ಬೆಳಗ್ಗೆ ಕೂಗಿಕೆ ಮೊದ್ಲು. ವಿನು ಮತ್ತೆ ಸೋಮಯ್ಯ ಈಚಪ್ಪಾಚಾರಿ ಮಂಟಿ ಕಡೆ ನಡ್ದಿದ್ದೊ. ನಿನ್ನೆ ಏನೇನೆಲ್ಲಾ ಆಗಿತ್ತಲ್ಲಾ ಅಲ್ಲಿಗೆ ಅಪ್ಪನ ವಿನುನೇ ಕರ್ಕಂಡ್ ಹೋರಟತ್. ಕೈಲಿ ಕೋವಿನೂ ಇತ್. ಅಲ್ಲಿ ಹೋಗಿ ನೋಡಿರೆ, ಇಬ್ಬರಿಗೂ ಆಶ್ಚರ್ಯ ! ಒಂದು ದೊಡ್ಡ ಹೊಂಡ! ಬಗ್ಗಿ ನೋಡಿರೆ, ತಲೆ ತಿರುಗುವಷ್ಟು ಆಳ ! ಹೌದು, ಅಲ್ಲಿ ನಿಧಿ ಮಾಯ ಆಗಿತ್ತ್ !
- `ಸುಮಾ'

No comments:

Post a Comment