Friday 11 November 2011

ವರದಕ್ಷಿಣೆ


 ಅಮ್ಮ ಹೆತ್ತು ಹೊತ್ತು
      ತನ್ನ ಬೆಲೆನೇ ತೆತ್ತು
      ಹೆಣ್ಣು ಸಮಾಜದ ಕಣ್ಣು
      ಹೊರಗಡೆ ಜನಗಳೊಟ್ಟಿಗೆ
      ಸಲಿಗೇಲಿ ಮಾತಾಡಬೇಡ,
      ಜನಗಳ ಕೆಟ್ಟ ಕಣ್ಣಿಗೆ ಬಿದ್ದೀಯ
      ಅಮ್ಮನ ಸಿಹಿಮುತ್ತನಂಥ ಬುದ್ಧಿಮಾತು
      ಹೇಳಿಕೊಂಡು ಕಣ್ಣಲ್ಲಿ ಕಣ್ಣಿಟ್ಟ್
      ಮಗಳ್ನ ಹೂವಂಗೆ ಸಾಂಕಿದೆ
      ಕೊನೆಗೊಂದು ದಿನ
      ಅಮ್ಮಂಗೆ ತಿಳಿಯದೆ
      ವಿಧಿ ಕಾಣದೆ ಮಗಳ ಕೈಸೇರಿಯೋದೆ
      ಅಂದು ಹೂವಂಗೆ ಇದ್ದ ಮಗಳನ್ನ ಮುಳ್ಳಾಗಿಸಿದೆ
      ವಿಧಿಯಾಟ ಮನೆಯೆಂಬ ಲಕ್ಷ್ಮಣರೇಖೆನಾ ಮೀರಿಸಿದೆ
      ಆ ಘಟನೆ
      ಧಾರುಣ ಕಥೆ
      ಅಮಾನುಷ ಕಥೆ
      ಆಗೋದೇ ಒಂದು ದಿನ
      ಇಲ್ಲೆ ಇಲ್ಲೆ ಅದು ಸತ್ಯ ಸತ್ಯ
      ನಿಜ ಘಟನೆತಾ ಸಾವಿನ ಅಂತ್ಯದಲ್ಲಿ
      ಪ್ರಪಂಚಕ್ಕೆ ಗೊತ್ತಾದೆ!

- ತಳೂರು ಡಿಂಪಿತಾ, ರಂಗಸಮುದ್ರ

No comments:

Post a Comment