Wednesday 23 November 2011

ನೆನಪಾದೆ ಆ ದಿನಗ...


ಎಂದ್ನಂಗೆ ಇಂದ್ ಕೂಡ ನಾನ್ ಸರಿಯಾಗೇ 9-00 ಗಂಟೆಗೆ ಆಫೀಸ್ಗೆ ಹೊರಟೆ. ದಾರೀಲಿ ಯಾರೊಬ್ಬರೂ ಇಲ್ಲೆ ನಾನೊಬ್ಬನೆ ತೇಳಿ, ಹಂಗೆ ನಡ್ಕಂಡ್ ಹೊಗ್ತಾ ಇದ್ದೆ. ಸೂರ್ಯನ ಎಳೆ ಬಿಸಿಲ್ ನನ್ನ ಮೇಲೆ ಬಿದ್ದರೂ ಚೂರು ಚಳೀಲಿ ನಡಕ ಹತ್ತ್ತಾ ಇತ್ತ್. ಹಂಗೆ ಸ್ವಲ್ಪ ದೂರ ಹೋಕನ ಮುಂದೆನಾ ತಿರ್ಗಾಸ್ಲಿ ಐದಾರ್ ಮಕ್ಕ ಕಾಂಬೊತ್ತಿದ್ದೊ. ಹೆಂಗಾರಾಗ್ಲಿ ಎರಡ್ ಮೈಲ್ವರೆಗೆ ಇವು ಒಳೊ ಬೇಜಾರ್ ಕಳೆಯಕ್ಕ್ತಾ, ಅಲ್ಲಿಂದಾ ಹೆಂಗಾರ್ ಹೇಂಟಿಕಂಡ್ ಹೊಗಿಬುಡಕ್ತಾ ಯೊಚ್ನೆ ಮಾಡಿ ಅವರ್ನ ಹಿಡಿಯಕ್ಕೆ ಎರಡ್ ಹೆಜ್ಜೆ ಹೆಚ್ಚ್ ಹಾಕಿ ಹೊಗ್ತಾ ಇದ್ದೆ. ದೂರಂದ ಅವರ ಎರಡ್ ಕೈ ಮತ್ತೆ ಬೆನ್ನಲೀ ಏನೋ ನೇತಾಡ್ಸಿಕಂಡ್ ಹೋದರ ಕಂಡ್ ಹತ್ತಿರ ಹೋಗಿ ಏನ್ರಾ ಅದ್ ಬಿಸಿಯೂಟಕ್ಕೆ ಸೊಪ್ಪು ತರಕಾರಿನಾ ತ ಕೇಳ್ದೆ. ಹಳ್ಳೀಲಿ ಹಂಗೆ ತಮ್ಮ ತಮ್ಮ ಮನೇಲಿ ಬೆಳ್ದದರ ಹತ್ರ ಪತ್ರ ಕೊಟ್ಕಂಡವೆ. ಹಿತ್ಲಲ್ಲಿ ಬೆಳ್ದದರ ಮಕ್ಕ ಶಾಲೆಗೆ ತಂದೊಳೊತಾ ತಿಳ್ಕಂಡ್ ಕೇಳ್ರೆ ಅವು, `ಇದ್ ತರಕಾರಿ ಅಲ್ಲ' ತೇಳಿ ಜೋರಾಗಿ ನಗಾಡ್ದೊ. ಮಕ್ಕ ಹಂಗೇನೆ ಸಣ್ಣ ಪುಟ್ಟದಕ್ಕೆ ಗೊಳ್ಳ್ತೇಳಿ ನಗಾಡಿಬುಟ್ಟವೆ ಅದನ್ನ ನೋಡಿಕೆ ಖುಷಿ. `ಇದ್ ನಮಿಗೆ ಛದ್ಮವೇಷ ಹಾಕಿಕೆ, ನಾವು ಟೀಚರ್ಗಳೆಲ್ಲಾ ಇಂದ್ ಮಡಿಕೇರಿಗೆ ಹೋದವೆ, ಇದನ್ನ ನಾವು ಮೈಪೂರ ಕಟ್ಟಿಕಂಡ್ ಕಾಡ್ ಮನ್ಷನಂಗೆ ಡ್ಯಾನ್ಸ ಮಾಡಿವೆ.' ತಾ ಹೇಳ್ದೊ. ನಾನ್ ಪುನ ಅವರ್ನ `ಮತ್ತೆ ಏನೆಲ್ಲಾ ಮಾಡ್ಸಿವೆ' ತಾ ಕೇಳ್ದೆ `ಮತ್ತೆ ಏನ್ ಇಲ್ಲೆ ಹಾಡ್ ಹಾಡ್ವೆ ಅಷ್ಟೆ' ತಾ ಹೇಳಿ ನಗಾಡಿಕಂಡ್ ಅವರ ಶಾಲೆಗೆ ಹೋದೊ. ನಾನ್ ನನ್ನ ದಾರಿ ಹಿಡ್ದೆ. ಹಿಂಗೆ ಆಫೀಸ್ಗೆ ಬಾಕನ ನನ್ನ ಬಾಲ್ಯದ ಆ ದಿನಗ ಯೋಚ್ನೆ ಆತ್ ನಾವೂ ಕೂಡ ಹಿಂಗೆ ನಾಲ್ಕ್ ಐದ್ ಜನ ಸೇರಿ ಶಾಲೆಗೆ ಹೋದು, ಮಾತಾಡಿಕಂಡ್ ನಗಾಡಿಕಂಡ್ ಆಟಾಡಿಕಂಡ್... ನಾನ್ ಹಿಂಗೆ ಒಂದು ಸಲ ಛದ್ಮ್ಮವೇಷ ಹಾಕಿದ್ದೆ. ಆದರೆ ಸೊಪ್ಪು ಕೊನೆಗಳ್ನ ಕಟ್ಟಿತ್ಲೆ ಗಾಂಧೀಜಿ, ಸುಭಾಷ್ಚಂದ್ರ ಬೋಸ್, ವಿವೇಕಾನಂದ ಇವರ ವೇಷಗಳ್ನ ಹಾಕಿದ್ದೆ. ಗಾಂಧೀಜಿದ್ ಕನ್ನಡಕಕ್ಕೆ ನನ್ನ ಅವ್ವಂದ್ ಕನ್ನಡಕ, ಅವ್ವಂದ್ ಬಿಳಿ ಶಾಲ್, ಬೋಳು ತಲೆಗೆ ಚಪಾತಿ ತಟ್ಟಿ ಕೊಟ್ಟದ್ದ್ ಅಮ್ಮ. ಮತ್ತೆ ಒಂದು ದೊಣ್ಣೆ ಊರಿಕೆ.. ಅದ್ ಕೆಳಗೆ ಮನೆ ತಾತಂದ್. ಆಗನೇ ಒಂಥರಾ ಲಾಯಕ್ಕಿತ್. ಈಗನ ಮಕ್ಕಳಿಗೆ ಅಂಥ ಯಾವ ಆದರ್ಶ ವ್ಯಕ್ತಿಗಳ ವೇಷಾನ ಹಾಕದೆ ಕಾಡ್ ಮನ್ಷರಂಗೆ ಸೊಪ್ಪು ತೊಗಟೆನ ಕಟ್ಟಿಕಂಡ್ ಕೊಣಿಯೊದು ಲಾಯಕ್ಕಿಲ್ಲೆ. ಯಾಕೆತೇಳ್ರೆ ಸಮಾಜ, ದೇಶ ಮುಂದುವರ್ದಂಗೆ ನಮ್ಮ ವ್ಯಕ್ತಿತ್ವನೂ ಬದಲಾಗ್ತಾ ಹೋಕು. ನಾಗರಿಕರಾಗ್ತಾ ಹೋದರೂನು ಅನಾಗರಿಕರಂಗೆ ವರ್ತನೆ ಮಾಡ್ದು ಸರಿಯಿಲ್ಲೆ. ಮಕ್ಕಳ್ದ್ ತಪ್ಪಿಲ್ಲೆ ಬುಡಿ ಶಾಲೆಲಿ ಹೇಳಿಕೊಡೋಕು. ಇಲ್ಲೆತೇಳಿರೆ ಅಪ್ಪ ಅಮ್ಮ ಹೇಳೋಕು. ಮಕ್ಕ ಮಾಡ್ದೆ ಸರಿತೆಳೊ ಅಪ್ಪ ಅಮ್ಮಂದರ್ ಮಕ್ಕಳ್ನ ತಾವಾಗೇ ಅಜ್ಞಾನದ ಕೂಪಕ್ಕೆ ತಳ್ಳಿವೆ. ಮಕ್ಕ ಕೂಡ ಹಂಗೆ ಕಲ್ತವೆ. ತೊಂದರೆ ಇಲೆ...ಮಕ್ಕಳಿಗೆ ಯಾವುದು ತಪ್ಪು ಯಾವುದು ಸರಿ ತಾ ನಿಧರ್ಾರ ಮಾಡಿಕೆ ಆದ ಮೇಲೆ ಸರಿಯಾದವೆತಾ ನಾನ್ ಯೋಚ್ನೆ ಮಾಡ್ದೆ. ಅಷ್ಟೊತ್ತಿಗೆ ನನ್ನ ಆಫೀಸ್ ಬಾತ್ ತೇಳಿ ನನ್ನ ಯೋಚ್ನೆನಾ ನಿಲ್ಸಿ ಒಳಗೆ ಹೋದೆ.....


- ದರ್ಶನ್ ಕಾಸ್ಪಾಡಿ, ಮಡಿಕೇರಿ

ನೀವೂ ಬರೆಯನಿ...
arebhase@gmail.com

No comments:

Post a Comment