Saturday 5 May 2012

ಹೊಲ ಮೇಯ್ದ ಬೇಲಿ !


ನಂಬೂದರಿಯ ಹಣೇಲಿದ್ದ ಅಷ್ಟೂ ಗೆರೆಗೆ ನೆರಿಗೆಗಳಾಗಿ ಅಲ್ಲಿ ಹಾಕ್ಕಂಡಿದ್ದ ಗಂಧಬೊಟ್ಟು ಉದುರಿ ಬೀಳ್ತಿತ್ತ್ ! ತಲೆ ಮೇಲೆ ಗಿರ ಗಿರ ತಿರುಗ್ವ ಫ್ಯಾನ್ಂದ ತಣ್ಣನೆ ಗಾಳಿ ಬರ್ತಿದ್ದರೂ ಮುಖ ತುಂಬಾ ಬೆವ್ರು ! ಮಣ ಮಣ ಮಂತ್ರ ಹೇಳ್ತಾ ಮರದ ಮಣೆ ಮೇಲೆ ಇದ್ದ ಕವಡೆಗಳ ರಾಶಿನ ನಂಬೂದರಿ ಬಲಗೈಲಿ ತಿರುಗಿಸ್ತನೇ ಇದ್ದೊ...ಅವರ ಎದುರು ಇದ್ದ ಕಾಲುದೀಪಲಿ ಎಣ್ಣೆ ಮುಗ್ದ್ ಕರಿ ಕರಿ ವಾಸನೆ ಬಂದ್ ದೀಪ ಕೆಟ್ಟು ಹೋದರೂ ಅದರ ಬಗ್ಗೆ ಇವ್ಕೆ ಗ್ಯಾನನೇ ಇಲ್ಲೆ. ಅಲ್ಲಿ ಚಾಪೆ ಮೇಲೆ ಕುದ್ದಿದ್ದವು, ಕೈ ಕಟ್ಟಿಕಂಡ್ ನಿಂತಿದ್ದವು, ಕಣ್ಣುಮುಚ್ಚಿ ಮಂತ್ರ ಹೇಳ್ತಿದ್ದ ನಂಬೂದರಿ ಮುಖದಲ್ಲಿ ಆಗುವ ಬದಲಾವಣೆಗಳ್ನ ಬಿಟ್ಟಕಣ್ ಬಿಟ್ಟಂಗೆ ಭಯ ಭಕ್ತಿಲಿ ನೋಡ್ತಿದ್ದೊ....
ಅದು ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ. ಆ ತಣ್ಣೀರುಹಳ್ಳದ ಜನ ಎಲ್ಲಾ ಸೇರಿ ಭಗವತಿ ದೇವಸ್ಥಾನಲಿ ಇದ್ನ ಇಟ್ಟುಕೊಂಡಿದ್ದೊ. ಈ ಊರಿನ ಜನ ಸಂಖ್ಯೆ ತುಂಬಾ ಕಡ್ಮೆ. ಅಬ್ಬಬ್ಬಾತೇಳಿರೆ ಒಂದು 30 ಮನೆಗೆ ಇರುದೇನೋ. ಒಂದೊಂದು ಮನೆಗೆ ನಾಲ್ಕು ನಾಲ್ಕು ಜನತಾ ಲೆಕ್ಕ ಹಾಕಿರೂ ತಲೆಗಳ ಸಂಖ್ಯೆ 150 ದಾಟುಲ್ಲೆ. ಇಲ್ಲಿ ಎಲ್ಲವ್ಕೂ ವರ್ಷ ಪೂತರ್ಿ ಕೆಲ್ಸ ಕೊಡುವಷ್ಟು ಗದ್ದೆ, ಕಾಫಿ ತೋಟಗ ಉಟ್ಟು. ಆದ್ರೆ ಪ್ರಯೋಜನ ಇಲ್ಲೆ. ಇಲ್ಲಿನವ್ರ ಗ್ರಹಚಾರನೋ ಏನೋ...ಗಿಡ ತುಂಬಾ ಕಾಫಿ ಫಸಲು ಬಿಟ್ಟ ವರ್ಷ ಜೋರಾಗಿ ಮಳೆ ಬಂದ್ ಎಲ್ಲನೂ ಉದುರಿ ಹೋಗಿಬಿಡ್ತಿತ್ತ್. ಇನ್ನ್ ಭತ್ತಕ್ಕೆ ವರ್ಷಕ್ಕೊಂದು ರೋಗ ! ಎಲ್ಲಾ ಬಿಟ್ಟು ಶುಂಠಿ ಬೆಳ್ದರೆ, ಆ ವರ್ಷ ಮೂಟೆಗೆ ನೂರು ರೂಪಾಯಿಗೂ ಕೇಳುವವು ಇರ್ದುಲ್ಲೆ. ಪರಿಸ್ಥಿತಿ ಹಿಂಗಿರ್ಕಾಕನ ಭಗವತಿ ದೇವಸ್ಥಾನದ ಭಟ್ಟ ಕೊಟ್ಟ ಐಡಿಯಾನೇ ಅಷ್ಟಮಂಗಲ ಪ್ರಶ್ನೆ.
ಅಷ್ಟಮಂಗಲ ಪ್ರಶ್ನೆ ಇಡುದ್ರಲ್ಲಿ ನೀಲೇಶ್ವರದ ನಂಬೂದರಿಗ ತುಂಬಾ ಫೇಮಸ್. ಕೊಡಗುನ ತುಂಬಾ ಕಡೆಗಳಲ್ಲಿ ಅವು ಈ ಕೆಲ್ಸ ಮಾಡ್ಯೊಳೊ...ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಟ್ಟೊಳೊ. ಹಂಗಾಗಿ ತಣ್ಣೀರು ಹಳ್ಳದ ಜನ ನಂಬೂದರಿಗಳ್ನ ನಂಬಿ ತಮ್ಮ ಊರಿಗೆ ಕರ್ಕಂಡ್ ಬಂದಿದ್ದೊ. ನಂಬೂದರಿ ತಣ್ಣೀರುಹಳ್ಳಕ್ಕೆ ಬಂದದ್ ಒಂದು ಗುರುವಾರ. ಊರೊಳಗೆ ಕಾಲಿಡ್ಕಾಕನ ರಾತ್ರಿ ಹತ್ತೂವರೆ ಗಂಟೆ. ಮಡಿಕೇರಿಗೆ ಬಸ್ಲಿ ಬಂದಿದ್ದ ನಂಬೂದರಿ ಮತ್ತೆ ಟೀಂನ ಪಳಂಗಪ್ಪ ಹೋಗಿ ಅವ್ನ ಜೀಪ್ಲಿ ಕರ್ಕಂಡ್ ಬಂದಿತ್ತ್. ನಂಬೂದರಿ ಜೊತೆ ಅವ್ರ ಇಬ್ಬರು ಶಿಷ್ಯರೂ ಇದ್ದೊ. ನಂಬೂದರಿ ಮತ್ತೆ ಟೀಂ ಇದ್ದ ಪಳಂಗಪ್ಪನ ಜೀಪು ತಣ್ಣೀರುಹಳ್ಳ ಊರೊಳಗೆ ಬರ್ತಿದ್ದಂಗೆ ಜೀಪ್ನ ಮುಂದುಗಡೆ ಬಲ ಭಾಗದ ಟೈರ್ ಪಂಕ್ಚರ್ ಆತ್ !
ನಂಬೂದರಿ ಮತ್ತೆ ಟೀಂಗೆ ಭಗವತಿ ದೇವಸ್ಥಾನದ ಭಟ್ಟನ ಮನೆಲಿ ಊಟ ಮತ್ತೆ ನಿದ್ದೆಗೆ ವ್ಯವಸ್ಥೆ ಆಗಿತ್ತ್. ಊರುನ ಎಲ್ಲಾ ಕಥೆನ ಭಟ್ಟ ನಂಬೂದರಿಗೆ ತಿಳಿಸಿತ್. ಎಲ್ಲಕ್ಕೂ ನೀವೇ ಪರಿಹಾರ ಹುಡುಕಿ ಕೊಡೋಕುತನೂ ಕೇಳಿಕಂಡಿತ್ತ್ !
ಹಂಗೆ ಆ ಶುಕ್ರವಾರ ಬೆಳಗ್ಗೆ ಭಗವತಿ ದೇವಸ್ಥಾನದ ಬಾಡೆಲಿ ಅಷ್ಟಮಂಗಲ ಪ್ರಶ್ನೆ ಶುರುವಾತ್. ಮರದ ಮಣೆ ಮೇಲೆ ನಂಬೂದರಿ ಕವಡೆ ಉರುಳಿಸಿದಂಗೆಲ್ಲಾ, ಬರೀ ಅವಲಕ್ಷಣಗಳೇ ಕಂಡ್ಬರ್ತಿತ್. ಅದ್ಕೆನೇ ನಂಬೂದರಿ ಮುಖದ ಮೇಲೆ ಬೆವ್ರು ಕಾಣಿಸಿಕಂಡದ್. ಕುದ್ದ ಜಾಗನೇ ಯಾಕೋ ಸರಿಯಿಲ್ಲೆತಾ ಅವ್ಕೆ ಅನ್ನಿಸಿಕೆ ಶುರುವಾತ್. ಭಟ್ಟನ ಮುಖನೇ ಒಮ್ಮೆ ನೋಡ್ದೊ. ಅವನ ಮುಖಲೂ ಎಂಥದ್ದೊ ಹೆದ್ರಿಕೆ ! ಕುದ್ದಲ್ಲಿಂದ ಎದ್ದ ನಂಬೂದರಿ ಸೀದಾ ದೇವರ ಗರ್ಭಗುಡಿ ಒಳಗೆ ನುಗ್ಗಿದೊ... ಅಲ್ಲಿ ನೋಡಿರೆ, ಪಂಚಲೋಹದ ಭಗವತಿ ವಿಗ್ರಹ ಇರಕ್ಕಾದಲ್ಲಿ ಅದೇ ಥರದ ಮರದ ವಿಗ್ರಹ !
ಭಟ್ಟ ಊರವ್ರ ಮುಂದೆ ಬೆತ್ತಲಾಗಿತ್ತ್ ! ಅವ್ನ ಇಸ್ಪೀಟ್ ಆಟದ ಆಸೆಗೆ ಪಂಚಲೋಹದ ವಿಗ್ರಹ ಮೈಸೂರು ಸೇಟ್ದ್ ಅಂಗಡಿ ಸೇರಿಕಂಡಿತ್ತ್ !!!
- `ಸುಮಾ'

No comments:

Post a Comment