Tuesday 29 May 2012

ಮಾತಿನ ಜಾಣ ಡೀವಿ !


ನಮ್ಮ ಮುಖ್ಯಮಂತ್ರಿ ದೇವರಗುಂಡ ಸದಾನಂದ ಗೌಡ ಒಳೊ ಅಲಾ....ಮಾತ್ಲಿ ತುಂಬಾ ಹುಷಾರ್. ಹೇಳಿಕೇಳಿ ರಾಜಕಾರಣಿ. ಮಾತೇ ಅವ್ಕೆ ಬಂಡವಾಳ. ನಗಾಡಿಕಂಡ್ ನಗಾಡಿಕಂಡೇ ಬಾಂಬ್ ಹಾಕಿಬಿಟ್ಟವೆ. ಸಿಎಂ ಕುರ್ಚಿ ಕೊಟ್ಟ ಯಡಿಯೂರಪ್ಪನೇ ಯಾವಾಗ  ಕುರ್ಚಿ ಅಲ್ಲಾಡಿಸಿಕೆ ಶುರುಮಾಡ್ತೋ, ಸದಾನಂದ ಗೌಡ ಕೂಡ ಹುಷಾರಾಗಿಬಿಟ್ಟೊ. ಯಡಿಯೂರಪ್ಪ ನೇರವಾಗಿ ಸದಾನಂದ ಗೌಡರ ಬಗ್ಗೆ ಮಾತಾಡಿರೆ, ಈ ಸದಾನಂದ ಗೌಡರದ್ದ್ ರೇಷ್ಮೆ ಬಟ್ಟೆಲಿ ಚಪ್ಪಲಿ ಸುತ್ತಿ ಹೊಡೆದಂಗೆ ಮಾತ್. ಯಾವುದೋ ಜೋಶ್ಲಿ ಏನೇನೋ ಮಾತಾಡಿ ಯಡಿಯೂರಪ್ಪಂಗೆ ಟಾಂಗ್ ಕೊಟ್ಟುಬಿಟ್ಟವೆ. ಆ ಯಡಿಯೂರಪ್ಪನೋ ದೂರ್ವಾಸ ಮುನಿಯ ಇನ್ನೊಂದು ಅವತಾರ. ಮುಖ ಎಲ್ಲಾ ಕೆಂಪು ಮಾಡ್ಕಂಡ್ ಇರ್ವ ಕಡ್ಡಿಮೀಸೆ ಮೇಲೆ ಕೈ ಆಡಿಸಿ, ನೇರಾನೇರಾ ಯುದ್ಧಕ್ಕೆ ಇಳ್ದುಬಿಟ್ಟದೆ. ಏನೋ ಹೇಳಿವೆಯಲ್ಲಾ `ಸುಮ್ಮನೆ ಇರಲಾರದೆ....'ತಾ. ಹಂಗೆ ಈ ಸದಾನಂದ ಗೌಡ ಕೂಡ.
ಇಂದ್ ಏನಾತ್ ಗೊತ್ತಾ? ಫಿಲಂ ಆ್ಯಕ್ಟರ್ ಅಂಬರೀಷ್ ಬರ್ತ್ ಡೇಗಾಗಿ  ಬೆಂಗಳೂರ್ಲಿ ಒಂದು ಫೋಟೋ ಪ್ರದರ್ಶನ ಇಟ್ಕೊಂಡಿದ್ದೊ. ಇದರ ಉದ್ಘಾಟನೆ ಮಾಡ್ದ್ ದೇವರಗುಂಡ ಸದಾನಂದ ಗೌಡ. ಉದ್ಘಾಟನೆ ಮಾಡಿಯಾದ ಮೇಲೆ ಮಾತಾಡೋಕಲಾ...ನಮ್ಮ ಗೌಡ್ರು ಇಂದ್ ಯಾಕೋ ಏನೋ ತುಂಬಾ ಖುಷಿ ಮೂಡ್ಲಿ ಇದ್ದೊ. ಅಂಬರೀಷ್ನ ಹೊಗಳ್ತಾ.. ಹೊಗಳ್ತಾ...ಮೆಲ್ಲೆ ಯಡಿಯೂರಪ್ಪನ ಕಾಲು ಎಳ್ದುಬಿಟ್ಟೊ...`ನಾಯಕರಾಗಿದ್ದು ಖಳನಾಯಕರಾದವರನ್ನ ನಮ್ಮಲ್ಲಿ ನಾವು ನೋಡಿದ್ದೇವೆ. ಆದ್ರೆ ಅಂಬರೀಷ್ ಖಳನಾಯಕನಾಗಿದ್ದು, ನಾಯಕರಾದವರು.' ಇದ್ ಸದಾನಂದ ಗೌಡ ಹೇಳ್ದ ಮಾತ್. ನೋಡೊಕು, ಇದ್ಕೆ ನಾಳೆ ಯಡಿಯೂರಪ್ಪ ಎಂಥ ಕಮೆಂಟ್ ಕೊಟ್ಟದೆತಾ...
ಸದಾನಂದ ಗೌಡ ತಿಂಗಳ ಹಿಂದೆನೂ ಮಂಗಳೂರ್ಲಿ ಇದೇ ಇದೇ ಥರ ಮಾತಾಡಿದ್ದೊ. `ಮೊದ್ಲೆಲ್ಲಾ ತಪ್ಪು ಮಾಡುವಾಗ ದೇವರ ಬಗ್ಗೆ ಹೆದರಿಕೆ ಇತ್ತು. ಆದ್ರೆ ಈಗ ಹಾಗಲ್ಲ, ತಪ್ಪು ಮಾಡಿ ದೇವರಿಗೆ ದೊಡ್ಡ ಮೊತ್ತದ ಕಾಣಿಕೆ ನೀಡಿದ್ರೆ ಆತ ಕ್ಷಮಿಸಿಬಿಡ್ತಾನೆ ಅಂತ ಕೆಲವ್ರು ನಂಬಿಬಿಟ್ಟಿದ್ದಾರೆ...' ತಾ ಹೇಳಿ ಯಡಿಯೂರಪ್ಪನ ಇಂಡೈರೆಕ್ಟಾಗಿ ಉರಿಸಿಬಿಟ್ಟಿದ್ದೊ. ಹಿಂಗೆ ಸದಾನಂದ ಗೌಡ ಹೇಳ್ದ ಮಾರನೇ ದಿನ ಯಡಿಯೂರಪ್ಪನ ಮುಖ ನೋಡಕಾಗಿತ್ತ್... ಟಿವಿಯವರ ಮುಂದೆ ಮಾತಾಡಿಕಾಕನ ಮುಖದ ಮೇಲೆ ನಗು ತಂದ್ಕೊಂಡ್ರೂ ಒಳಗೊಳಗೆ ಉರ್ದುಹೋಗಿತ್. ಈ ಬಗ್ಗೆ ಮತ್ತೆ ಸದಾನಂದ ಗೌಡರ ಹತ್ರ ಮಾಧ್ಯಮದವು ಪ್ರತಿಕ್ರಿಯೆ ಕೇಳಿರೆ ನಗಾಡಿಕಂಡ್ ಅವ್ರ ಉತ್ತರ `ನೋ ಕಮೆಂಟ್...'
ಸದಾನಂದ ಗೌಡ ಯಾವಾಗ್ಲೂ ಹೆಂಗೆ ಕೋಲ್ಗೆಟ್ ನಗು ತೋರಿಸ್ತಿದ್ದವೆನೂ, ಹಂಗೆ ಮಾತಿನ ಜಾಣ ಕೂಡ ಹೌದು. ಇಂದ್ ಯಡಿಯೂರಪ್ಪನ ಬಗ್ಗೆ ಮಾತಾಡಿಯೊಳಲಾ, ಈ ಬಗ್ಗೆ ನಾಳೆ ಅವ್ರನ್ನ ಕೇಳಿ ನೋಡಿ, ಅವು ಹೇಳ್ದು...`ನೋ ಕಮೆಂಟ್...'ತಾ. ಹಂಗೆತೇಳಿ ನಾನೇನೂ ಸದಾನಂದ ಗೌಡರ ಬಗ್ಗೆ ಕಮೆಂಟ್ ಮಾಡ್ತಿಲ್ಲೆ... ಅವ್ರ ಮಾತಿನ ಶಕ್ತಿ ಬಗ್ಗೆ ಹೇಳ್ದ್ ಅಷ್ಟೇ...

- `ಸುಮ'
arebahse@gmail.com

No comments:

Post a Comment