Wednesday 16 May 2012

ಅಟ್ಟದ ಮೇಲೆ `ಸುಟ್ಟ ದೆವ್ವ' !


`ಡಬ...ಡಬ...ಡಬ...' ಯಾರೋ ಅಟ್ಟದ ಮೇಲೆ ಜೋರಾಗಿ ಓಡ್ದಂಗೆ ಶಬ್ದ ! ಮಲಗಿದ್ದ ಚಿನ್ನು ಹೆದರಿಕೆಲಿ ಎದ್ದು ಕೂತ್ಕಣ್ತ್. ಹೊರಗೆ ಮಳೆ... ಮಡಿಕೇರಿಯ ಮೈ ಕೊರಿಯುವ ಚಳಿ ಬೇರೆ... ಆದ್ರೂ ಮುಖದ ತುಂಬಾ ಬೆವ್ರು. ನಿನ್ನೆಯಷ್ಟೇ ಅವ್ಳು ಬೆಂಗಳೂರಿಂದ ಊರಿಗೆ ಬಂದಿತ್. ಮಾವನ ಮಂಙನ ಮದುವೆಗೆ. ಇಂದ್ ಚಪ್ಪರ. ನಾಳೆ ಮುಹೂರ್ತ. ಅಪ್ಪ, ಅಮ್ಮ ಇವಳೊಬ್ಬಳನ್ನೇ ಮನೇಲಿ ಬಿಟ್ಟು ಚಪ್ಪರಕ್ಕೆ ಹೋಗಿದ್ದೊ. ಮಗಳಿಗೆ ಭಾರೀ ಧೈರ್ಯತೇಳುವ ನಂಬಿಕೆ, ಆ ಅಪ್ಪ ಅಮ್ಮಂಗೆ ! ಆದ್ರೆ ಅವಳ ಧೈರ್ಯ ಅವಳಿಗೆ ಮಾತ್ರ ಗೊತ್ತಿತ್.... ಹೆದರಿಕಂಡೇ ಹೋಗಿ ಫ್ರಿಡ್ಜ್ ಬಾಗಿಲು ತೆಗ್ದ್ ತಣ್ಣನೆ ನೀರು ಕುಡ್ದ ಬಂದ್ ಮತ್ತೆ ಮಲಗಿತ್, ಚಿನ್ನು.
ಮಿಲಿಟರಿ ಮಾವ ತಂದುಕೊಟ್ಟಿದ್ದ ದಪ್ಪ ಕಂಬಳಿ ಒಳಗೆ ಮೈ ಸೇರಿಸಿಕಂಡಿತ್ ಚಿನ್ನು. ನಿದ್ರೆ ಬಂದ್ ಕಣ್ಣ್ ಮುಚ್ಚಿ ಮುಚ್ಚಿ ಹೋಗ್ತಿತ್. ಆದ್ರೆ ಕಣ್ಣು ಮುಚ್ಚಿಕೆ ಹೆದ್ರಿಕೆ. ಹಂಗೇ ಒಂಥರ ಮಂಕ್... ಅಷ್ಟೊತ್ತಿಗೆ ಅಟ್ಟದ ಮತ್ತೆ ಮತ್ತೆ ಶಬ್ದ... `ಡಬ...ಡಬ...ಡಬ...' ! ಮಾವನ ಮನೆ ಅವ್ವ ಹೇಳ್ತಿದ್ದ ದೆವ್ವದ ಕಥೆಗ ಚಿನ್ನುಗೆ ನೆನಪಿಗೆ ಬಾತ್. ತುಂಬಾ ಹಿಂದೆ ಚಿನ್ನುನ ಅಮ್ಮ ಚಿಕ್ಕವಳಿರ್ಕಾಕನ, ಅವ್ರ ದೊಡ್ಡ ಅಣ್ಣ ಕಾವೇರಿ ಹೊಳೇಲಿ ಈಜಿಕೆ ಹೋಗಿ ಸತ್ತುಹೋಗಿದ್ದೊಗಡ. ಅವು ದೆವ್ವ ಆಗಿ ಆಗಾಗ್ಗ ಮನೆಯವ್ಕೆ ತುಂಬಾ ತೊಂದರೆ ಕೊಡ್ದು ಮಾಡ್ತಿದ್ದೊ ಗಡ. ರಾತ್ರಿ ಹೊತ್ತು ಅಟ್ಟದ ಮೇಲೆಲ್ಲಾ ಓಡಾಡಿ ಯಾರಿಗೂ ನಿದ್ದೆ ಮಾಡಿಕೆ ಬಿಡ್ತಿತ್ಲೆ ಗಡ. ಮತ್ತೆ ಯಾರೋ ಹೇಳ್ದೋತೇಳಿ ಕೇರಳಕ್ಕೆ ಹೋಗಿ ಮಂತ್ರವಾದಿ ಹತ್ರ ಪೂಜೆ ಮಾಡಿಸಿಕಂಡ್ ಬಂದ ಮೇಲೆ ಎಲ್ಲಾ ಸರಿಯಾತ್ ಗಡ. ಅವ್ವ ಹೇಳ್ದ ಈ ಕಥೆ ಯೋಚನೆ ಆಗ್ತಿದ್ದಂಗೆ ಚಿನ್ನುಗೆ ಇನ್ನಷ್ಟು ಹೆದ್ರಿಕೆ ಆಕೆ ಶುರುವಾತ್. ಹೋದ ವರ್ಷ ಮಳೆಗಾಲಿ ಗದ್ದೆಲಿ ನೀರುಕಟ್ಟಿಕೆ ಹೋಗಿ ಚರಂಡಿಲಿ ಮುಳುಗಿ ಸತ್ತ ಚಿಕ್ಕಪ್ಪನ ಗ್ಯಾನ ಆತ್. ಅವೇ ಎಲ್ಲಾರು ಬಂದ್ ಹಿಂಗೆ ಉಪದ್ರವ ಕೊಡ್ತೊಳನತಾ ಕೈಕಾಲೆಲ್ಲಾ ನಡಿಗಿಕೆ ಶುರುವಾತ್. ಲೈಟ್ ಹಾಕಿಕಂಡ್ ಮಲಗಿನೆತೇಳಿರೆ ಮಳೆ ಬಂದ್ ಕರೆಂಟ್ ಬೇರೆ ನಾಪತ್ತೆ. ಅಪ್ಪ, ಅಮ್ಮಂಗೆ ಫೋನ್ ಮಾಡ್ನೊತೇಳಿರೇ, ಲ್ಯಾಂಡ್ ಲೈನ್ ಡೆಡ್. ಮೊಬೈಲ್ ಬ್ಯಾಟರಿ ಚಾರ್ಜ್ ಖಾಲಿ.
ಸ್ವಲ್ಪ ಹೊತ್ತು ನಿಶ್ಯಬ್ದ... ಎಲ್ಲಾ ಕಡೆ ಮೌನ... ಹಣೆ ಮೇಲೆ ಬರ್ತಿದ್ದ ಬೆವ್ರು ಒರೆಸಿಕಂಡ್ ಚಿನ್ನು, ಹಾಸಿಗೆ ಮೇಲೆ ಕುದ್ದುಕಂಡಿತ್ತ್. ಮತ್ತೆ ಅಟ್ಟಲಿ ಶಬ್ದ ! ಒಂದರ ಮೇಲೆ ಒಂದು ಜೋಡಿಸಿಟ್ಟಿದ್ದ ಪಾತ್ರೆಗಳೆಲ್ಲಾ ಉರುಳಿ ಬಿದ್ದಂಗೆ... `ಡಣ.. ಡಣ... ಡಣ... ತಾ. ಚಿನ್ನುಗೆ ಸ್ವಲ್ಪ ಸ್ವಲ್ಪ ಉಳ್ಕೊಂಡಿದ್ದ ಧೈರ್ಯನೂ ಈಗ ಮಾಯ ಆಗಿತ್ತ್. `ಡಣ.. ಡಣ... ಡಣ...' ಶಬ್ದ ಕಡಿಮೆ ಆಗ್ತಿದ್ದಂಗೆ, ಯಾರೋ ಗೋಡೆನ ಮಾಂದಿದಂಗೆ `ಪರ... ಪರ... ಪರ..' ತಾ ಶಬ್ದ. ಪುನಃ ಯಾರೋ ಓಡಾಡಿದಂಗೆ `ಡಬ...ಡಬ...ಡಬ...' ಇದ್ನೆಲ್ಲಾ ಕೇಳ್ತಾ ಕೇಳ್ತಾ ಚಿನ್ನುಗೆ ಎಷ್ಟೊತ್ತಿಗೆ ನಿದ್ದೆ ಹತ್ತಿತೋ ಗೊತ್ತಾತ್ಲೆ...
ಮುಹೂರ್ತ ಮಡಿಕೇರಿಲಿ. ಹಂಗಾಗಿ ಚಿನ್ನುನ ಅಪ್ಪ, ಅಮ್ಮ ಬೆಳಿಗ್ಗೆನೆ ಮನೆಗೆ ಬಂದೊ...ಮಗ್ಳು ಇನ್ನೂ ಎದ್ದಿತ್ಲೆ... ಮಲಗಿದ್ದಲ್ಲೇ ಏನೋ ಗೊಣಗೊಣತಾ ಹೇಳ್ತಿತ್ತ್. ಮುಟ್ಟಿ ನೋಡಿರೆ, ಸುಡು ಸುಡು ಜ್ವರ ! ಇವ್ಕೆ ಹೆದರಿಕೆ ಶುರುವಾತ್. ತುಂಬಾ ದಿನ ಕಳ್ದ್ ಮಗ್ಳು ಮನೆಗೆ ಬಂದುಟ್ಟು...ಹಿಂಗೆ ಬಂದ್ ಜ್ವರಲಿ ಮಲಗುವಂಗೆ ಆತಲ್ಲತಾ ಬೇಸರನೂ ಆತ್. ಚಿನ್ನುನಾ ಎದ್ದೇಳಿಸಿಕೆ ನೋಡಿರೆ, ಅವ್ಳ ಬಾಯಿಲಿ ಬರ್ವ ಮಾತು `ದೆವ್ವ...ದೆವ್ವ..' ಕೊನೆಗೆ ಅಮ್ಮ, ಚಿನ್ನುನ ತೊಡೆ ಮೇಲೆ ಮಲಗಿಸಿಕಂಡ್ ಸಮಧಾನ ಹೇಳಿಕಾಕನ ರಾತ್ರಿ ನಡ್ದದ್ದನ್ನೆಲ್ಲಾ ಒಂದೂ ಬಿಡದಂಗೆ ಹೇಳಿಕಂಡ್ ಜೋರಾಗಿ ಮರಡಿಕೆ ಶುರುಮಾಡ್ತ. 
ಅಮ್ಮಂಗೆ ಎಲ್ಲಿತ್ತೋ ಸಿಟ್ಟು, ಅಪ್ಪನ ಮುಖ ನೋಡಿಕಂಡ್, `ನಾ ನಿಮಿಗೆ ಅಂದೇ ಹೇಳ್ದೆ... ಭತ್ತ ತಂದ್ ಅಟ್ಟಲಿ ಹಾಕ್ಬೇಡಿತಾ, ನೀವೆಲ್ಲಿ ಕೇಳಿಯರಿ ನನ್ನ ಮಾತು. ಯಾಗ ನೀವು ಭತ್ತ ತಂದು ಅಟ್ಟಕೆ ಹಾಕಿದ್ರೋ ಅಂದ್ಂದ ಈ ರೋಗ ಶುರುವಾತ್. ಒಂದು ದಿನನೂ ನಿದ್ದೆ ಇಲ್ಲೆ... ಮದ್ದ್ ತಂದ್ ಇಡಿ, ತಿಂದಾದ್ರೂ ಸಾಯ್ಲಿತೇಳಿರೆ ನಿಮ್ಮ ಕೈಲಿ ಆದೂ ಆತ್ಲೆ... ಪಾಪ ಕೂಸು, ನೋಡಿ ಎಷ್ಟು ಹೆದ್ರಿಕಂಡುಟ್ಟು. ಇಂದೇ ತೀಮರ್ಾನ ಆಗ್ಲಿ... ಒಂದೋ ಈ ಮನೇಲಿ ನಾ ಇರೋಕು, ಇಲ್ಲದಿದ್ದ್ರೆ, ಆ ಹಂದಿ ಮರಿಗಳಂಗೆ ಒಳೋ ಅಲಾ ಆ ಅಟ್ಟದ ಮೇಲಿನ ಹೆಗ್ಗಣಗ... ಅವು ಇರೋಕು... ಗೊತ್ತಾತಾ ? ಬಾ ಮಗ್ಳು ನೀ... ಬಿಸಿ ಬಿಸಿ ಕಾಫಿ ಕೊಟ್ಟನೆ ' ಅಲ್ಲಿಗೆ ದೆವ್ವದ ರಹಸ್ಯ ಏನುತಾ ಗೊತ್ತಾಗಿ ಚಿನ್ನು ಮುಖಲಿ ಸಣ್ಣದೊಂದು ನಗು ಕಾಣಿಸಿಕಂಡತ್ !

`ಸುಮಾ'
arebhase@gmail.com

No comments:

Post a Comment