Wednesday 23 May 2012

ಕರೀತ್ತುಟ್ಟು ಕನ್ನಿಕಾ ..


ಬ್ರಹ್ಮಗಿರಿಯ ಹಿಂದೆ ಹುಟ್ಟಿ
ತಣ್ಣಿಮಾನೀಲಿ ತಣ್ಣನೆ ಹರ್ದು
ತ್ರಿವೇಣಿ ಸಂಗಮಲಿ ಮುಗಿಯುವ
ನಿನ್ನ ಜೀವನ ಅದೆಷ್ಟು ಸಣ್ಣದ್
ಅಕ್ಕ ಕಾವೇರಿ... ತಂಗಿ ಸುಜ್ಯೋತಿ 
ಜೊತೆ ಸೇರಿ ಹರಿವ ನೀನೇ ಪುಣ್ಯವಂತೆ ! 
ಅನಂತಭಟ್ಟರ ಮನೆ ಹತ್ರ
ಸಣ್ಣ ತೋಡುನಂಗೆ ಕಂಡಿಯಾ
ನಮಗಾಗ ಅದೇ ದೊಡ್ಡ ಹೊಳೆ !
ಅಪ್ಪ, ಅಮ್ಮನ ಕಣ್ಣು ತಪ್ಪಿಸಿ
ಓಡಿ ಬಂದ್.. 
ಅಲ್ಲಿ ಈಜು ಹೊಡೀವ ಮಜಾ 
ಇನ್ನೆಲ್ಲಿ ಸಿಕ್ಕಿದೆ ?
ನಮ್ಮದೊಂದು ಕಪಿಸೈನ್ಯ
ನೀರೊಳಗೆ ಮರಿ `ಗೊಮ್ಮಟೇಶ್ವರ'ಗ !
ಆ ಸುಖ... 
ಚಡ್ಡಿ ಹಾಕ್ಕಂಡ್ರೆ ಕಾಂಬಲೆ !
ಹೊಳೆಬದಿಯ ಮಾವಿನ ಮರ
ಮರ ಮೇಲಿಂದ ಹೊಡೀವ ಡೈ
ನಮ್ಮ ಬೊಬ್ಬೆಗೆ ನಿದ್ರೆಲೇ ಕಿಟಾರನೇ
ಕಿರುಚುವ ಅಣ್ಣಯ್ಯ ಭಟ್ಟ ಮಂಙ
ದೊಡ್ಡ ಕೋಲು ಹಿಡ್ಕಂಡ್ ಬರ್ವ 
ಗುರುನ ಅಮ್ಮ... 
ಚಡ್ಡಿಬಿಟ್ಟು ಗದ್ದೇಲಿ ಓಡ್ವ ನಾವು...!
ಒಂದಕ್ಕಿಂತ ಒಂದು ಸಿಹಿ ಸಿಹಿ ಬಾಲ್ಯ
ಹಳೇ ನೆನಪುಗಳ್ನ ಗಂಟುಕಟ್ಟಿಕಂಡ್
ಮೊನ್ನೆ ಮೊನ್ನೆ ಕನ್ನಿಕೆಯ ಹತ್ರ ನನ್ನ ಪಯಣ
ಹಂಗೆ ಸುಮ್ಮನೆ 
ಹೊಳೆ ದಂಡೆ ಮೇಲೊಂದು ವಾಕಿಂಗ್ 
ಅನಂತ ಭಟ್ಟರಿಗೆ ವಯಸ್ಸಾಗ್ಯುಟ್ಟು
ಹೊಳೆಬದಿಯ 
ಆ ಮಾವಿನ ಮರಕ್ಕೂ ವೃದ್ಧಾಪ್ಯ
ಕನ್ನಿಕೇಲಿ ನೀರು ಕಮ್ಮಿ ಆದಂಗೆ
ಕಾಣ್ತುಟ್ಟು.. 
ಅಲ್ಲಿ ಈಜಾಡುವ ಮಕ್ಕಳೂ ಇಲ್ಲೆ !


- `ಸುಮಾ'
arebhase@gmail.com

No comments:

Post a Comment