Monday 7 May 2012

`ಸತ್ಯಮೇವ ಜಯತೇ...


ತುಂಬಾ ಸಮಯದ ನಂತರ ಕೊನೆಗೂ ಟಿವಿಲಿ ಒಂದು ಒಳ್ಳೆ ಕಾರ್ಯಕ್ರಮ ಶುರುವಾಗ್ಯುಟ್ಟು. ಅದೇ `ಸತ್ಯಮೇವ ಜಯತೇ...' ಪ್ರತೀ ಭಾನುವಾರ ಬೆಳಗ್ಗೆ 11 ಗಂಟೆಗೆ ಕನ್ನಡ ಬಿಟ್ಟ್ ದೇಶದ 8 ಭಾಷೆಗಳಲ್ಲಿ ಈ ಕಾರ್ಯಕ್ರಮ ನೋಡಕ್. ದೂರದರ್ಶನ ಮತ್ತೆ ಸ್ಟಾರ್ ಪ್ಲಸ್ಲಿ ಹಿಂದಿ ಭಾಷೆಲಿ ಬಂದದೆ. ಎಲ್ಲಾ ಸರಿಯಾಗಿ ಇದ್ದಿದ್ದರೆ ಕನ್ನಡದಲ್ಲಿ ಸುವರ್ಣ ಟಿವಿಲಿ ಈ ಕಾರ್ಯಕ್ರಮ ಬರಕಾಗಿತ್ತ್. (ಕನ್ನಡದಲಿ ಪ್ರೋಗ್ರಾಂ ಕೂಡ ರೆಡಿಯಾಗಿತ್. ಅದ್ರ ಲಿಂಕ್ ಈ ಲೇಖನದ ಕೊನೆಲಿ ಕೊಟ್ಟನೆ...ಒಮ್ಮೆ ನೋಡಿ. ನಿಜಕ್ಕೂ ನಿಮಿಗೆ ಇಷ್ಟ ಆದೆ.) ಆದ್ರೆ ನಮ್ಮಲ್ಲಿ ಡಬ್ಬಿಂಗ್ ವಿರೋಧಿಗ ಅದ್ ಪ್ರಸಾರ ಆಗದಂಗೆ ತಡ್ದೊಳೊ.
`ಸತ್ಯಮೇವ ಜಯತೇ...' ಅಮೀರ್ ಖಾನ್ ನಡೆಸಿಕೊಡ್ವ ಕಾರ್ಯಕ್ರಮ. ಅವನ ಸಿನಿಮಾಗಳಂಗೆ ಇದೂ ಕೂಡ ತುಂಬಾ ವಿಭಿನ್ನವಾಗಿ ಉಟ್ಟು. ಮೊನ್ನೆ ಭಾನುವಾರ ಪ್ರಸಾರ ಆದ ಮೊದಲ ಕಾರ್ಯಕ್ರಮನೇ ಇದಕ್ಕೆ ಸಾಕ್ಷಿ. ಅಂದಿನ ವಿಷಯ ಹೆಣ್ಣು ಬ್ರೂಣ ಹತ್ಯೆ.... ಅದರ ಪರಿಣಾಮ, ಹೆಣ್ಣುಮಕ್ಕ ಅನುಭವಿಸ್ವ ನೋವು-ಕಷ್ಟ. ಇದನ್ನೆಲ್ಲಾ ಅಮೀರ್ ಖಾನ್ ತುಂಬಾ ಲಾಯ್ಕ ಜನರ ಮುಂದೆ ಇಟ್ಟತ್. ನೋವು ಅನುಭವಿಸಿದ ಹೆಣ್ಣುಮಕ್ಕ ಅವ್ರ ಕಥೆ ಹೇಳಿಕಣಿಕಾಕನ ಅಮೀರ್ ಖಾನ್ ಕಣ್ಣಲ್ಲೂ ನೀರ್ ಬಾತ್. ಅಂವ ದೊಡ್ಡ ಆ್ಯಕ್ಟರ್ ಆಗಿರ್ದು, ಆದ್ರೆ ಅವ್ನ ಕಣ್ಣೀರು ನಟನೆತಾ ಅನ್ನಿಸ್ತಿತ್ಲೆ. ಅದ್ ನೋವು ಹೃದಯಕ್ಕೆ ಮುಟ್ಟಿದಾಗ ಬರ್ವ ಕಣ್ಣೀರು. ಇದ್ನೆಲ್ಲಾ ನೋಡ್ತಿರ್ಕಾಕನ ನೋಡುವವರ ಕಣ್ಣು ತೇವ ಆದ್ರೂ ಆಶ್ಚರ್ಯ ಇಲ್ಲೆ.
ತುಂಬಾ ಹಿಂದೆ ರಾಮಾಯಣ ಮತ್ತೆ ಮಹಾಭಾರತ ಧಾರಾವಾಹಿ ಪ್ರಸಾರ ಆಗ್ತಿದ್ದ ಸ್ಲಾಟ್ಲೇ ಈಗ `ಸತ್ಯಮೇವ ಜಯತೇ' ಬರ್ತುಟ್ಟು. ಮೊದಲ ಕಾರ್ಯಕ್ರಮನ ಲಕ್ಷಾಂತರ ಜನ ನೋಡ್ಯೊಳೊ. ವಾರಂದ ವಾರಕ್ಕೆ ಇದ್ರ ಜನಪ್ರಿಯತೆ ಹೆಚ್ಚಾಗುವ ಸುಳಿವು ಸಿಕ್ಕುಟ್ಟು. ಸೆಲೆಬ್ರಿಟಿಗ ಅಂತೂ ಅಮೀರ್ಖಾನ್ನ ಹಾಡಿ ಹೊಗಳ್ಯೊಳೊ... ಈ ಭಾನುವಾರ ನೀವೂ ನೋಡಿ, ಬೆಳಿಗ್ಗೆ 11 ಗಂಟೆಗೆ. ಒಂದೊಳ್ಳೆ ಕಾರ್ಯಕ್ರಮನ ಮಿಸ್ ಮಾಡ್ಕಣ್ಬೇಡಿ...


- `ಸುಮಾ'

ಸತ್ಯಮೇವ ಜಯತೇ... ಕನ್ನಡದಲ್ಲಿ... ಇಲ್ಲಿ ಕ್ಲಿಕ್ ಮಾಡಿ. 
arebhase@gmail.com

No comments:

Post a Comment