ದೇವರಗುಂಡ ಸದಾನಂದ ಗೌಡ ಮುಖ್ಯಮಂತ್ರಿ ಆದ್ಮೇಲೆ, ಇದೇ ಮೊದ್ಲ ಸಲ ಮಾವನ ಮನೆಗೆ ಬಂದೊಳೊ. ಹೌದು, ಇಂದ್ ಮಡಿಕೇರಿ ಮತ್ತೆ ಕುಶಾಲನಗರಲಿ ನಡೆಯುವ ತುಂಬಾ ಕಾರ್ಯಕ್ರಮಗಳಲ್ಲಿ ಅವು ಪಾಲ್ಗೊಂಡವೆ. ಈಗಾಗ್ಲೇ ಅವು ಮಡಿಕೇರಿಗೆ ಬಂದ್ ಇಳ್ದೊಳೊ. ಪಾಪ, ಎಲ್ಲಿ ಹೋದ್ರೂ ಅವ್ರನ್ನ ರಾಜಕೀಯ ಬಿಡ್ತಿಲ್ಲೆ. ಮಾವನ ಮನೆಗೆ ಬಂದಿರ್ವ ಖುಷಿ ಮಧ್ಯೆನೂ ಅವ್ರನ್ನ ರಾಜಕೀಯ ಕಾಡ್ತುಟ್ಟು. ಬಿಜೇಪೀಲಿರ್ವ ಗೊಂದಲಗಳ್ನ ಸದಾನಂದ ಗೌಡ ಒಪ್ಪಿಕೊಂಡೊಳೊ. ಎಲ್ಲಾ ಗೊಂದಲಗ ಸದ್ಯದಲ್ಲೇ ಪರಿಹಾರ ಕಂಡದೆ. ನಂತರ ಮಂತ್ರಿ ಮಂಡಲನ ವಿಸ್ತರಣೆ ಮಾಡ್ನೆತಾ ಅವು ಮಡಿಕೇರಿಲಿ ಹೇಳ್ದೊ. ದೇವರಗುಂಡ ಸದಾನಂದ ಗೌಡ ಮದುವೆ ಆಗಿರ್ದು ಕುಶಾಲನಗರ ಹತ್ರದ ಗುಡ್ಡೆಹೊಸೂರಿನ ಗುಡ್ಡೆಮನೇಂದ. ಹಂಗಾಗಿ ಸದಾನಂದ ಗೌಡ ಅವ್ಕೆ ಕುಶಾಲನಗರಲಿ ದೊಡ್ಡಮಟ್ಟದ ಸ್ವಾಗತ ಕೊಡಿಕೆ ಸಿದ್ಧತೆ ನಡ್ದುಟ್ಟು.. arebhase@gmail.com
No comments:
Post a Comment