Saturday 21 January 2012

ಮರದ ಪೆಟ್ಟಿಗೆ ಒಳಗೆ ಬಣ್ಣದ ಜಾದೂ !


          ಅದಿನ್ನೂ ವೈಟ್ ಆ್ಯಂಡ್ ಬ್ಲ್ಯಾಕ್ ಟಿವಿ ಕಾಲ. ಭಾಗಮಂಡಲಲಿ, ರೇಡಿಯೋ ರಿಪೇರಿ ಮಾಡುವ ರಮೇಶನ ಅಂಗಡಿಗೆ ಮೊದ್ಲು ಟಿವಿ ಬಾತ್. ಅಂದಿನವ್ಕೆ ರೇಡಿಯೋಲಿ ಬರೀ ಧ್ವನಿ ಮಾತ್ರ ಕೇಳಿ ಗೊತ್ತಿತ್ತ್. ರೇಡಿಯೋದಂಗೆನೇ ಕಾಣ್ವ ಡಬ್ಬಿಲಿ ಧ್ವನಿ ಜೊತೆ ಪಿಕ್ಚರ್ ಕೂಡ ಬಂದದೆತೇಳಿರೇ, ಅದು ಆಗಿನವ್ಕೇ `ಹೀಗೂ ಉಂಟೇ'ತಾ ಕೇಳಿಕೊಳ್ಳವಂಗೆ ಆಗಿತ್ತ್.                                                             ಭಾಗಮಂಡಲಲಿ ಆಗ ಇದ್ದದ್ ಐವತ್ತೋ, ಅರವತ್ತೋ ಮನೆಗ. ಬಡವರೇ ಜಾಸ್ತಿ. ಆ ಟೈಂಲಿ ವೈಟ್ ಆ್ಯಂಡ್ ಬ್ಲ್ಯಾಕ್ ಟಿವಿಗೆನೇ 6-7 ಸಾವಿರ ರೂಪಾಯಿ ಇತ್ತ್. ಆವತ್ತಿಗೆ ಅದ್ ದೊಡ್ಡ ಮೊತ್ತ. ಅಷ್ಟು ದುಡ್ಡ್ಲಿ ನಾಲ್ಕ್ ಜನರ ಒಂದ್ ಸಂಸಾರದ ವರ್ಷದ 
ಖರ್ಚ್  ಕಲ್ದಬಿಡ್ತಿತ್ತ್. ಹಂಗಾಗಿ ಸ್ವಲ್ಪ ದುಡ್ಡಿದ್ದವು ಮಾತ್ರ ಟಿವಿ ತಕ್ಕಂಬಕೆ ಧೈರ್ಯ ಮಾಡ್ದೊ. ಅಂಥವರನ್ನೇ ನೋಡಿ ಈ ರೇಡಿಯೋ ರಿಪೇರಿ ಮಾಡುವ ರಮೇಶ, ಗಾಳ ಹಾಕ್ತಿತ್ತ್.


ಆಗ ಬರ್ತಿದ್ದ ಟಿವಿ, ಒಂದು ದೊಡ್ಡ ಮರದ ಡಬ್ಬ ! ಅದ್ಕೆ ಈ ಅಂಗಡಿಗಳಿಗೆ ಇದ್ದಂಗೆ ಷಟರ್ಸ್ ಬಾಗಿಲು ಬೇರೆ. ಅದಕ್ಕೊಂದು ಆ್ಯಂಟೆನಾ.. ಇದ್ದದ್ದೇ ಒಂದ್ ಚಾನೆಲ್ ದೂರದರ್ಶನ. ಅದೂ ಲಾಯ್ಕ ಸಿಕ್ಕೋಕು ತೇಳಿರೆ, ದಿನಾ ಮರದ ಮೇಲೆ ಹತ್ತಿ ಅಲ್ಲಿ ಕಟ್ಟಿರ್ವ ಆ್ಯಂಟೆನಾ ಜೊತೆ ಸರ್ಕಸ್ ಮಾಡೊಕು. ಮನೆಯೊಳಗೆ ಒಬ್ಬ ಇದ್ಕಂಡ್, ಟಿವಿ ನೋಡ್ಕಂಡ್, `ಬಲಕ್ಕೆ ತಿರುಗ್ಸು, ಎಡಕ್ಕೆ ತಿರುಗ್ಸು'ತಾ ಹೇಳೊಕು. ಎಲ್ಲಾ ಸರಿಯಾಗಿ ಮರದ ಮೇಲಿದ್ದಂವ ಇಳ್ದ್ ಬಾಕಾಕ, ಅದೆಲ್ಲಿಂದೋ ಗಾಳಿ ಬಂದ್ ಆ್ಯಂಟೆನನಾ ತಿರುಗಿಸಿ ಬಿಟ್ಟಿರ್ತಿತ್ ! ಮತ್ತೆ ಅದೇ ಕತೆ, ಮರ ಹತ್ತುದು, ಆ್ಯಂಟೆನಾ ಜೊತೆ ಸರ್ಕಸ್.
ಅದ್ ರಾಮಾಯಾಣ ಧಾರಾವಾಹಿ ಕಾಲ. ಭಾನುವಾರ ಬೆಳಗ್ಗೆ ಟಿವಿಲಿ ಬರ್ತಿತ್. ಶುಕ್ರವಾರದ ಪ್ರಜಾವಾಣಿ ಪೇಪರ್ಲಿ, ಮುಂದಿನ ಭಾನುವಾರ ಬರ್ವ ಕಥೆನ ಡೈಲಾಗ್ ಸಮೇತ ಕೊಡ್ತಿದ್ದೊ. ಹಂಗಾಗಿ ಆ ಕಥೆನ ಟಿವಿಲಿ ಹೇಂಗೆ ತೋರ್ಸಿವೆತೇಳುವ ಇಂಟ್ರೆಸ್ಟ್ ಪೇಪರ್ ಓದಿದವ್ಕೆ ಇತರ್ಿತ್ತ್. ಟಿವಿ ಇರ್ವ ಮನೆ ಹುಡ್ಕಂಡ್ ಹೋಗಿ ರಾಮಾಯಾಣ ನೋಡ್ತಿದ್ದೊ. ಭಾನುವಾರ ರೇಡಿಯೋ ರಿಪೇರಿ ಮಾಡುವ ರಮೇಶನ ಅಂಗಡೀಲಿ `ಹೌಸ್ಫುಲ್' ಪ್ರದರ್ಶನ. ಇನ್ ಅವನ ಮನೇಲೂ ಒಂದು ಟಿವಿ ಇಟ್ಟಿತ್ತ್. ಅಲ್ಲೂ ಜನ ! ಅದ್ ಬಿಟ್ರೆ, ಪೂರ್ಣಿಮಾ  ಟೀಚರ್, ಹೆಡ್ಮಾಸ್ಟರ್ ಮನೇಲೂ ಟಿವಿಗ ಇದ್ದೊ. ಮಕ್ಕ ಎಲ್ಲಾ ಹೆಡ್ಮಾಸ್ಟರ್ ಮನೆಗೇ ಟಿವಿ ನೋಡಿಕೆ ಹೋಗ್ತಿದ್ದೊ. ಅಲ್ಲಿ ಇದ್ದದ್ ಕಲರ್ ಟಿವಿ !
ಭಾಗಮಂಡಲಕ್ಕೆ ಮೊದ್ಲು ಕಲರ್ ಟಿವಿ ಬಂದದ್ದ್ ಹೆಡ್ಮಾಸ್ಟರ್ ಮನೆಗೆ. ವೈಟ್ ಆ್ಯಂಡ್ ಬ್ಲ್ಯಾಕ್ ಟಿವಿ ನೋಡಿ ಆಶ್ಚರ್ಯ ಪಡ್ತಿದ್ದವ್ಕೆ, ಟಿವಿ ಒಳಗೆ ಕಲರ್ ಕಲರ್ ಪಿಕ್ಚರ್ ಬಂದದೆತಾ ಹೇಳ್ದು `ಪ್ರಪಂಚದ ಎಂಟನೇ ಅದ್ಭುತ'! ಹಂಗಾಗಿ, `ಒಮ್ಮೆ ನೋಡಿಯೇ ಬಿಡ್ನೋತೇಳಿ' ಹೆಡ್ಮಾಸ್ಟರ್ ಮನೆಗೆ ಬಂದ್ ಕಲರ್ ಟಿವಿಲಿ `ರಾಮಾಯಣ' ನೋಡ್ತಿದ್ದೊ. ಈ ಊರ್ಲಿ `ಡಿಶ್' ಮೊದ್ಲಿಗೆ ಬಂದದ್ದ್ ಕೂಡ ಹೆಡ್ಮಾಸ್ಟರ್ ಮನೆಗೆನೇ... ಅಷ್ಟು ಹೊತ್ತಿಗೆ `ರಾಮಾಯಣ' ಮುಗ್ದ್, `ಮಹಾಭಾರತ' ಶುರು ಆಗಿತ್ತ್. `ಡಿಡಿ ಚಂದನ' ಮೆಲ್ಲೆ ಕಣ್ಣ್ ಬಿಡ್ತಿತ್. ಆಗ ಸದ್ ಬರೀ, `ಬೆಂಗಳೂರು ದೂರದರ್ಶನ' ಭಾನುವಾರ ಒಂದು ಕನ್ನಡ ಫಿಲಂ, ಶುಕ್ರವಾರ ಚಿತ್ರಮಂಜರಿ ಆಗ ಫೇಮಸ್. ಟಿವಿ ಅಲ್ಲಿವರೆಗೆ ಬುದ್ಧಿವಂತರ ಆಯ್ಕೆ ಆಗಿತ್ತ್. ಯಾವಾಗ ಚಾನೆಲ್ಗಳ ಸಂಖ್ಯೆ ಜಾಸ್ತಿ ಆತೋ ಟಿವಿ `ಮೂರ್ಖರ ಪೆಟ್ಟಿ' ಆಗಿಬಿಟ್ಟತ್. 
arebhase@gmail.com  

1 comment: