Monday 12 December 2011

ಏಣಿ ಮರೆತವು...


ಹೊಳೆ ದಾಟಿದ ಮೇಲೆ 
ಅಂಬಿಗನ ಹಂಗಿಲ್ಲೆ
ತೂಗು ಸೇತುವೆ ಬಂದುಟ್ಟು
ಇನ್ಯಾಕೆ ನಮಗೆ ದೋಣಿ ?
ರೆಕ್ಕೆಲಿ ಶಕ್ತಿ ತುಂಬ್ಯಟ್ಟು
ಆಕಾಶದ ವಿಸ್ತಾರ ಗೊತ್ತಾಗುಟ್ಟು
ಯಾವ ಮರಲಿ ಯಾವ ಹಣ್ಣ್
ಯಾವುದು ಸಿಹಿ ಯಾವುದು ಕಹಿ
ಎಲ್ಲಾ ಈಗ ತಿಳಿದುಟ್ಟು
ಇನ್ನೂ ಬೇಕಾ ಅಮ್ಮಾ ?
ಸಣ್ಣ ಜಲಲಿ ಹುಟ್ಟು
ತೋಡುಲಿ ಜೀವನ
ಹೊಳೇಲಿ ಆಟ
ಸಮುದ್ರಲ್ಲೇ ಸಂಸಾರ
ಮತ್ಯಾಕೆ ಹಿಂದಕ್ಕೆ ಈಜೋಕು ?
ಬೀಜಕ್ಕೆ ಗಿಡದ ನೆರಳು
ಗಿಡಕ್ಕೆ ಮರದ ಆಶ್ರಯ
ಮರಕ್ಕೆ ಗಗನವೇ ಶ್ರೀರಕ್ಷೆ
ಇನ್ನೆಂಥಕ್ಕೆ ಚಪ್ಪರ ?
ಎಲ್ಲನೂ ಅಷ್ಟೇ....
ಮೇಲೆ ಹತ್ತಿಕೆ ಏಣಿಯ ಸಹಾಯ
ಅಲ್ಲಿ ಕೂತ ಮೇಲೆ 
ಕಣ್ಣಿನ ನೇರಕಷ್ಟೇ ದೃಷ್ಟಿ...
ಇದ್ ಸ್ವಾರ್ಥಿಗಳ ಪ್ರಪಂಚ ತಾನೇ ?

- `ಸುಮಾ'

ನೀವೂ ಬರೆಯನಿ.
arebhase@gmail.com

No comments:

Post a Comment