Tuesday 20 December 2011

`ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ '


ನಮ್ಮವರ ತುಂಬಾ ದಿನದ ಒಂದು ಬೇಡಿಕೆ ಈಡೇರಿಟ್ಟು. ಹೌದು `ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ' ಶುರು ಮಾಡಿಕೆ ರಾಜ್ಯ ಸರ್ಕಾರ ಒಪ್ಪಿಟ್ಟು. ಈ ಬಗ್ಗೆ ಇದೇ ತಿಂಗಳ 15ಕ್ಕೆ ಸರ್ಕಾರದ ಆದೇಶ ಹೊರಬಿದ್ದುಟ್ಟು. ಈ ಅಕಾಡೆಮಿಯ ಕೇಂದ್ರ ಕಚೇರಿ ಮಡಿಕೇರಿಲೇ ಇದ್ದದೆ.
ಅರೆಭಾಷೆ ಮಾತಾಡುವ 18 ಗೋತ್ರಗಳ ಜನ ಕೊಡಗು ಮತ್ತೆ ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಒಳೊ. ಇದಲ್ಲದೆ ಕೇರಳ, ಮೈಸೂರು, ಬೆಂಗಳೂರು, ಮುಂಬೈ, ದುಬೈ, ಅಮೆರಿಕಾಲಿ ಕೂಡ ನಮ್ಮವು ಹರಡಿ ಹೋಗ್ಯೊಳೊ. ಈ ಜನಗಳ ಸಾಹಿತ್ಯ ಮತ್ತೆ ಸಾಂಸ್ಕೃತಿಕ ಆಶೋತ್ತರಗ ಬೆಳೆಯುವಂಗೆ ಪ್ರೋತ್ಸಾಹ ಕೊಡುದೇ ಈ ಅಕಾಡೆಮಿ ಸ್ಥಾಪನೆಯ ಉದ್ದೇಶ.
ಅರೆಭಾಷೆಗೆ ಸುಮಾರು 500ಕ್ಕೂ ಜಾಸ್ತಿ ವರ್ಷಗಳ ಇತಿಹಾಸ ಉಟ್ಟು. ಈ ಭಾಷೆನ ಉಪಯೋಗಿಸುವವರದ್ದ್ ಶ್ರೀಮಂತ ಸಂಸ್ಕೃತಿ. ಅಕಾಡೆಮಿ ಶುರು ಮಾಡಿಕೆ ಸರ್ಕಾರ ಈ ಎಲ್ಲಾ ಅಂಶಗಳನ್ನ ಪರಿಗಣನೆಗೆ ತೆಗೆದುಕೊಂಡುಟ್ಟು.
`ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ' ಶುರುಮಾಡಿಕೆ ಮುಖ್ಯಮಂತ್ರಿ ದೇವರಗುಂಡ ಸದಾನಂದ ಗೌಡ ಅಂಗೀಕಾರ ಕೊಟ್ಟೊಳೊ. ಇದಕ್ಕೂ ಮೊದ್ಲು ಕನ್ನಡ ಮತ್ತೆ ಸಂಸ್ಕೃತಿ ಮಂತ್ರಿ ಗೋವಿಂದ ಕಾರಜೋಳ ಈ ಅಕಾಡೆಮಿ ಬಗ್ಗೆ ಒಪ್ಪಿಗೆ ಕೊಟ್ಟಿದ್ದೊ. ಇದೆಲ್ಲಾ ಆದ್ಮೆಲೆ ಕನ್ನಡ ಮತ್ತೆ ಸಂಸ್ಕೃತಿ, ವಾರ್ತಾ ಇಲಾಖೆ ಅಧೀನ ಕಾರ್ಯದರ್ಶಿ   ಹೆಚ್ವಿ ರಾಮಚಂದ್ರ ಅಧಿಕೃತ ಆದೇಶ ಹೊರಡಿಸಿಯೊಳೊ.
ಹೊಸದಾಗಿ ಶುರುವಾಗ್ತಿರ್ವ ಅರೆಭಾಷೆ ಅಕಾಡೆಮಿಯ ರೂಪುರೇಷೆ, ಅಂಗರಚನೆ ಮತ್ತೆ ಹುದ್ದೆಗಳ ನೇಮಕಾತಿಗೆ ಸಂಬಂಧ ಪಟ್ಟಹಂಗೆ ಸರ್ಕಾರ ಇನ್ನು ಸ್ವಲ್ಪ ದಿನಲೇ ಮತ್ತೊಂದು ಆದೇಶ ಹೊರಡಿಸಿದೆ. ಈ ಅಕಾಡೆಮಿಗೆ ಒಬ್ಬ ಅಧ್ಯಕ್ಷ ಇದ್ದವೆ. ಅವ್ರ ಜೊತೆ 13 ಸದಸ್ಯಗ ಕೆಲ್ಸ ಮಾಡಿವೆ. ಕೊಡಗು ಮತ್ತೆ ದಕ್ಷಿಣಕನ್ನಡದ ಅರೆಭಾಷಿಕರನ್ನ ಸರ್ಕಾರ ಇದಕ್ಕೆಲ್ಲಾ ನೇಮಕ ಮಾಡ್ದೆ.
ಮುಖ್ಯಮಂತ್ರಿ ದೇವರಗುಂಡ ಸದಾನಂದ ಗೌಡ ನಮ್ಮವೇ ಆಗಿರ್ದು, ಈ ಅಕಾಡೆಮಿ ಶುರುವಾಗ್ತಿರುದಕ್ಕೆ ಪ್ರಮುಖ ಕಾರಣತ ಹೇಳಕ್. ಇನ್ನ್ ಸ್ಪೀಕರ್ ಕೊಂಬಾರನ ಬೋಪಯ್ಯ ಮತ್ತೆ ಇಂಧನ ಮಂತ್ರಿ ಶೋಭಾ ಕರಂದ್ಲಾಜೆ ಕೂಡ ಇಲ್ಲಿ ತುಂಬಾ ಕೆಲ್ಸ ಮಾಡ್ಯೊಳೊ. ಇದ್ರ ಜೊತೆಗೆ ನಮ್ಮ ಜನಾಂಗದ ತುಂಬಾ ಜನ ಪ್ರತ್ಯಕ್ಷವಾಗಿ ಮತ್ತೆ ಪರೋಕ್ಷವಾಗಿ ಅರೆಭಾಷೆ ಅಕಾಡೆಮಿ ಶುರು ಮಾಡುದ್ರ ಹಿಂದೆ ಪರಿಶ್ರಮ ಪಟ್ಟೊಳೊ. ಈ ಎಲ್ಲಾ ಮಹನೀಯರಿಗೂ ತುಂಬಾ ತುಂಬಾ ಧನ್ಯವಾದಗ. 
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ' ಸರಿಯಾದ ದಿಕ್ಕ್ಲಿ ಕೆಲ್ಸ ಮಾಡ್ಲಿ, ಸ್ಥಾಪನೆಯ ಉದ್ದೇಶ ಸಾರ್ಥಕ ಆಗ್ಲಿತೇಳುದೇ ಎಲ್ಲರ ಹಾರೈಕೆ.

- `ಅರೆಭಾಷೆ ವಾರ್ತೆ ' 
arebhase@gmail.com

No comments:

Post a Comment