Monday 26 December 2011

ವೀರಯೋಧ ಗುಡ್ಡಮನೆ ಅಪ್ಪಯ್ಯಗೌಡ


1887ಕ್ಕೆ ಸಿಪಾಯಿ ದಂಗೆ ನಡ್ದದೆ. ಇದ್ನ ಮೊದಲ ಸ್ವಾತಂತ್ರ್ಯ ಸಂಗ್ರಾಮತೇಳಿ ಗುರುತಿಸಿವೆ. ಆದ್ರೆ ಅದಕ್ಕೂ ಮೊದ್ಲೇ ಕೊಡಗು ದಕ್ಷಿಣ ಕನ್ನಡ ಭಾಗಲಿ ಬ್ರಿಟಿಷರ ವಿರುದ್ಧ ಭಾರೀ ಹೋರಾಟ ನಡ್ದಿತ್ತ್. ಗೌಡುಗ ಇದ್ರ ನೇತೃತ್ವ ವಹಿಸಿದ್ದೊತೇಳ್ದು, ನಮ್ಗೆ ಹೆಮ್ಮೆಯ ವಿಷಯ. ಅಂದ್ ಹೋರಾಟ ಮಾಡ್ದ ಆ ತಂಡಲ್ಲಿದ್ದ ಪ್ರಮುಖರಲ್ಲಿ ಗುಡ್ಡೆಮನೆ ಅಪ್ಪಯ್ಯಗೌಡ ಕೂಡ ಒಬ್ಬ ಆಗಿದ್ದೋ. ಗುಡ್ಡೆಮನೆ ಅಪ್ಪಯ್ಯಗೌಡರ ಹೋರಾಟ ಬ್ರಿಟಿಷರನ್ನ ಎಷ್ಟು ಹೆದ್ರಿಸಿತ್ತ್ ತಾ ಹೇಳಿರೆ, ಮಡಿಕೇರಿ ಕೋಟೆ ಮುಂಭಾಗಲಿ ಅವ್ರನ್ನ ಎಲ್ಲರ ಎದ್ರು ಗಲ್ಲಿಗೆ ಏರಿಸಿದ್ದೊ. ಇಲ್ಲಿನ ಸ್ವಾತಂತ್ರ್ಯ ಹೋರಾಟದ ಹಿಂದೆನೂ ದೊಡ್ಡ ಕಥೆ ಉಟ್ಟು.
ಅದು ಸುಮಾರ್ 1700ನೇ ಇಸವಿ. ಇಕ್ಕೇರಿ ರಾಜ ಸೋಮಶೇಖರ ಸುಳ್ಯ ಭಾಗನ ಕೊಡಗಿನ ದೊಡ್ಡವೀರ ರಾಜೇಂದ್ರಂಗೆ ಬಹುಮಾನವಾಗಿ ಕೊಟ್ಟದೆ. ಇಂವ ಕೊಡಗಿನ ಹಾಲೇರಿ ವಂಶದ ರಾಜ. ದೊಡ್ಡವೀರ ರಾಜೇಂದ್ರ ಆದ್ಮೇಲೆ ಚಿಕ್ಕವೀರ ರಾಜೇಂದ್ರಂಗೆ ಅಧಿಕಾರ ಸಿಕ್ಕಿದೆ. 1834 ಏಪ್ರಿಲ್ 10ಕ್ಕೆ ಬ್ರಿಟಿಷರು ಚಿಕ್ಕವೀರ ರಾಜೇಂದ್ರಂಗೆ ಮೋಸ ಮಾಡಿ ಕೊಡಗ್ನ ತಮ್ಮ ವಶಕ್ಕೆ ತಕ್ಕಂಡವೆ. ಆಡಳಿತಕ್ಕೆ ಅನುಕೂಲ ಆಗಲಿತೇಳಿ ಸುಳ್ಯ ಮತ್ತೆ ಪುತ್ತೂರ್ನ ಮಂಗಳೂರು ವಿಭಾಗಕ್ಕೆ ಸೇರಿಸಿಕೊಂಡವೆ. ಆಗ ಬ್ರಿಟಿಷರ ವಿರುದ್ಧ ತುಂಬಾ ಹೋರಾಟಗ ನಡ್ದದೆ. ಆದ್ರಲ್ಲಿ ಮುಖ್ಯವಾಗಿರ್ದು ಕೊಡಗು, ಕೆನರಾ ಬಂಡಾಯ ಅಥವಾ ಅಮರಸುಳ್ಯ ದಂಗೆ
ಪೆರಾಜೆ, ಚೆಂಬು, ಚೊಕ್ಕಾಡಿ, ಬಳಪದ ಗೌಡ ಮುಖಂಡರುಗ, ಕೊಡಗುನ ಜನರನ್ನೆಲ್ಲಾ ಕೆದಂಬಾಡಿ ರಾಮಯ್ಯ ಗೌಡ ಒಂದು ಕಡೆ ಸೇರಿಸುವ ಪ್ರಯತ್ನ ಮಾಡಿವೆ. ಮಲೆಕುಡಿಯರು, ಹೆಗ್ಡೆಗ, ಪೆರಾಜೆಯ ವೀರಣ್ಣ ಬಂಟ, ಸುಬ್ರಾಯ ಹೆಗ್ಡೆ, ಮತ್ತೆ ಕೊಡಗುನ ಗುಡ್ಡೇಮನೆ ಅಪ್ಪಯ್ಯಗೌಡರ ನೇತೃತ್ವಲಿ ಯೋಧರ ತಂಡಗ ರಚನೆ ಆದೆ. ಕೂಜುಗೋಡ್ನ ಕಟ್ಟೇಮನೆ ಮುಖ್ಯಸ್ಥರು ಇದಕ್ಕೆಲ್ಲಾ ಸಹಾಯ ಕೊಟ್ಟವೆ. ಪುತ್ತೂರು ಮತ್ತೆ ಮಂಗಳೂರ್ನ ವಶಪಡಿಸಿಕೊಂಬದು, ಸುಳ್ಯ ಮತ್ತೆ ಕೊಡುಗುಲಿ ಒಂದೇ ಸಮಯಕ್ಕೆ ಹೋರಾಟ ಮಾಡ್ದು ಇವರೆಲ್ಲರ ಉದ್ದೇಶ ಆಗಿತ್. ಎಲ್ಲವೂ ತುಂಬಾ ತುಂಬಾ ರಹಸ್ಯವಾಗಿ ನಡ್ದಿತ್ತ್.
ಕೊಡಗ್ನ ಗುಡ್ಡೇಮನೆ ಅಪ್ಪಯ್ಯ ಗೌಡ ನೇತೃತ್ವದಲ್ಲಿ ಇದ್ದ ಯೋಧರ ಪಡೆ ತೊಡಿಕಾನ ಮೂಲಕ ದಕ್ಷಿಣ ಕನ್ನಡಕ್ಕೆ ಪ್ರವೇಶ ಮಾಡ್ತ್. ಹಂಗೆ ಶುರುವಾದ ದಾಳಿಲಿ 1837ರ ಏಪ್ರಿಲ್ 3ಕ್ಕೆ ಪುತ್ತೂರು, 4ಕ್ಕೆ ಪಾಣೆಮಂಗಳೂರುನ ಈ ಹೋರಾಟಗಾರರ ತಂಡ ಬ್ರಿಟಿಷರಿಂದ ವಶಪಡಿಸಿಕೊಂಡೊ. ಏಪ್ರಿಲ್ 6ಕ್ಕೆ ಮಂಗಳೂರ್ನ ಕೂಡ ಗೆದ್ದಾಗಿತ್ ! ಅಲ್ಲಿನ ಬಾವುಟ ಗುಡ್ಡಲಿ ಕೊಡಗಿನ ಕಲ್ಯಾಣಪ್ಪನ ಧ್ವಜ ಏರಿಸಿ ಖುಷಿಪಟ್ಟಿದ್ದೊ. ಈ ಹೋರಾಟಲಿ ಗೌಡುಗ ಉತ್ಸಾಹಲಿ ಪಾಲ್ಗೊಂಡಿದ್ದೊ. ಮತ್ತೆ ಅದ್ ನಮ್ಮವರ ಶೌರ್ಯಕ್ಕೆ ಸಿಕ್ಕ ಗೆಲುವಾಗಿತ್ತ್.
ಸೋತಾದ್ಮೇಲೆ ಬ್ರಿಟಿಷರು ಸುಮ್ನೆ ಕುದ್ದಿತ್ಲೆ. ಏಪ್ರಿಲ್ 16ಕ್ಕೆ ಕೇರಳದ ಕಣ್ಣನೂರಿಂದ ಮತ್ತೆ ತಮ್ಮ ಸೈನಿಕರನ್ನ ಕರೆಸಿಕೊಂಡೊ. ಆಗ ನಡ್ದ ಯುದ್ಧ ನಮ್ಮ ವೀರರ್ ಇದ್ದ ತಂಡಕ್ಕೆ ದೊಡ್ಡ ಹಿನ್ನಡೆ ತಂದಿಟ್ಟತ್. ತುಂಬಾ ಜನ ಗೌಡ ಯೋಧರು ತೀರ್ಕೊಂಡೊ. ಅಂದೇ ಮೋಸಂದ ಬ್ರಿಟಿಷರು ಗುಡ್ಡೇಮನೆ ಅಪ್ಪಯ್ಯ ಗೌಡರನ್ನ ಬಂಧಿಸಿದೊ.
1837 ಅಕ್ಟೋಬರ್ 31. ಗೌಡುಗಳ ಪಾಲಿಗೆ ದು:ಖದ ದಿನ. ಅಂದ್ ಬೆಳಗ್ಗೆ 10 ಗಂಟೆಗೆ ಗುಡ್ಡೇಮನೆ ಅಪ್ಪಯ್ಯ ಗೌಡರನ್ನ ಬ್ರಿಟಿಷರು ಮಡಿಕೇರಿ ಕೋಟೆ ಮುಂಭಾಗಲಿ ಸಾರ್ವಜನಿಕವಾಗಿ ಗಲ್ಲಿಗೆ ಏರಿಸಿದೊ. ಬ್ರಿಟಿಷರ್ ಅಂದ್ ಎಷ್ಟು ಕ್ರೂರವಾಗಿ ವತರ್ಿಸಿದ್ದೋತೇಳಿರೆ, ಈ ಗಲ್ಲಿಗೆ ಏರಿಸುದನ್ನ ನೋಡಿಕೆ ಕೊಡಗ್ನ ಎಲ್ಲಾ ಪಟೇಲರ್, ರೈತರ್ ಬರೋಕೂತೇಳಿ ಬ್ರಿಟಷ್ ಅಧಿಕಾರಿ ಲಿಹಾಡರ್ಿ ಆಜ್ಞೆ ಮಾಡಿತ್. ಮುಂದೆ ಯಾರಾರ್ ದಂಗೆ ಏಳುವೋತೇಳೋ ಭಯನೂ ಇದ್ರ ಹಿಂದೆ ಬ್ರಿಟಿಷರಿಗೆ ಇತ್ತ್.
ಇಂಥ ವೀರ ಕೊಡಗಿನ ಗುಡ್ಡೇಮನೆ ಅಪ್ಪಯ್ಯ ಗೌಡ ಅವ್ರ ಸಾಹಸ, ಮುಂದಿನ ಪೀಳಿಗೆಗೂ ಗೊತ್ತಾಕು. ಇದನ್ನ ದೃಷ್ಟಿಲಿ ಇಟ್ಕಂಡ್ ಮಡಿಕೇರಿಯ ಸುದರ್ಶನ ವೃತ್ತಲಿ ಗುಡ್ಡೇಮನೆ ಅಪ್ಪಯ್ಯ ಗೌಡರ ಪುತ್ಥಳಿ ನಿಲ್ಲಿಸಿಯೊಳೊ. ಮುಖ್ಯಮಂತ್ರಿ ದೇವರಗುಂಡ ಸದಾನಂದ ಗೌಡ ಈ ಪುತ್ಥಳಿನ ಜನವರಿ 2ಕ್ಕೆ ಅನಾವರಣ ಮಾಡಿವೆ. (ಸದಾನಂದ ಗೌಡ, ಗುಡ್ಡೆಮನೆಯ ಅಳಿಯ. ಅವ್ರ ಹೆಣ್ಣ್ ದಾಟಿ ಗುಡ್ಡಮನೆಯವು)
ಗೌಡರ ಹೆಮ್ಮೆಯ ಈ ಸಮಾರಂಭಕ್ಕೆ ಭಾರಿ ಸಿದ್ಧತೆ ನಡ್ದುಟ್ಟು. ಹೆಚ್ಚು ಹೆಚ್ಚು ಜನ ಇಲ್ಲಿಗೆ ಬರೋಕುತೇಳಿ ನಮ್ಮ ಸಮಾಜದ ಮುಖಂಡರ್ ಕೇಳ್ಕೊಂಡೊಳೊ. ಇದ್ರ ಜೊತೆಗೆ ಕೊಡಗು-ದಕ್ಷಿಣ ಗೌಡ ಯೂಥ್ ವಿಂಗ್ನವು ಬೆಂಗಳೂರ್ಂದ ಮಡಿಕೇರಿಗೆ ರ್ಯಾಲಿ ಕೂಡ ಮಾಡ್ತೊಳೊ....
ಜನವರಿ 2ಕ್ಕೆ ಬನ್ನಿ ಮಡಿಕೇರಿಗೆ...

(ಪೂರಕ ಮಾಹಿತಿ: ಪುದಿಯನೆರವನ ರಿಶಿತ್ ಮಾದಯ್ಯ ಮತ್ತು 10 ಕುಟುಂಬ 18 ಗೋತ್ರ ಅರೆಭಾಷಾ ಸಾಕ್ಷ್ಯಚಿತ್ರ ಟೀಂ )
arebhase@gmail.com

No comments:

Post a Comment