Wednesday 14 December 2011

ಅರೆಭಾಷೆಗೊಂದು ಅಕಾಡೆಮಿ ಬೇಕು


          ದಕ್ಷಿಣಕನ್ನಡ ಮತ್ತೆ ಕೊಡಗುಲಿ ಇರ್ವ ಗೌಡುಗಳದ್ದ್ ದೊಡ್ಡಸಮುದಾಯ. ನಮ್ಗೆ ನಮ್ಮದೇ ಆದ `ಅರೆಭಾಷೆ' ಉಟ್ಟು. ನಮ್ಮ ಸಂಸ್ಕೃತಿ ಆಚಾರ-ವಿಚಾರ ಕೂಡ ಬೇರೆಯವ್ಕಿಂತ ತುಂಬಾ ಬೇರೆನೇ. ಹುಟ್ಟುನಿಂದ ಸಾವಿನ ತನಕ ನಾವು ನಮ್ಮದೇ ವಿಶಿಷ್ಟ ಸಂಪ್ರದಾಯನ ಪಾಲಿಸಿವೆ. ಆದ್ರೆ ಆಧುನಿಕತೆ ಬೆಳೆದಂಗೆ ಸಂಪ್ರದಾಯ ಎಲ್ಲೋ ಒಂದು ಕಡೆ ಮರ್ತು ಹೋಗ್ತುಟ್ಟು. ಇದನ್ನೆಲ್ಲಾ ಉಳ್ಸಿ ಬೆಳ್ಸಿಕೆ ಒಂದ್ ಸಂಸ್ಥೆ ಬೇಕಾದೆ. ಅದ್ ಸಕರ್ಾದ ಸಹಾಯಲೇ ಇದ್ದರೆ ಒಳ್ಳೆದ್ತೇಳಿ ಯೋಚನೆ ಮಾಡುದಾದರೆ `ಅರೆಭಾಷೆ ಅಕಾಡೆಮಿ' ಶುರು ಮಾಡ್ದು ಹೆಚ್ಚು ಸೂಕ್ತತ ಕಂಡದೆ. 
ನಮ್ಮ ರಾಜ್ಯಲಿ ಈಗ ಕೊಡವ ಅಕಾಡೆಮಿ, ತುಳು ಅಕಾಡೆಮಿ, ಕೊಂಕಣಿ ಅಕಾಡೆಮಿ, ಬ್ಯಾರಿ ಅಕಾಡೆಮಿಗ ಒಳೊ. ಆಯಾಯ ಭಾಷೆಲಿ ಇರ್ವು ಅಕಾಡೆಮಿಗ ಆಯಾಯ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದಂಗೆ ಒಳ್ಳೇ ಕೆಲ್ಸಗಳನ್ನೇ ಮಾಡ್ತುಟ್ಟು. ಉದಾಹರಣೆಗೆ ಕೊಡವ ಅಕಾಡೆಮಿ ನೋಡುದಾದ್ರೆ, ವರ್ಷಪೂತರ್ಿ ಒಂದಲ್ಲ ಒಂದು ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿದ್ದದೆ. ಕೊಡವ ಭಾಷೆಯ ಹಾಡು, ನೃತ್ಯಗಳ್ನ ಕಲ್ಸಿಕೊಡ್ವ `ಆಟ್ಪಾಟ್ ಪಡಿಪು' ಅಂತೂ ತುಂಬಾ ಒಳ್ಳೆ ಕಾರ್ಯಕ್ರಮ ಆಗ್ಯುಟ್ಟು. ಅದ್ರ ಮೂಲಕ ಇಂದಿನ ಜನಾಂಗಕ್ಕೆ ಕೊಡವರ ಸಾಂಸ್ಕೃತಿಕ ಪ್ರಪಂಚನ ಪರಿಚಯ ಮಾಡಿಕೊಡ್ತೊಳೊ. ವರ್ಷಕ್ಕೆ ಒಂದ್ಸಲ ನಡಿವ ಕೊಡವ ಸಾಂಸ್ಕೃತಿಕ ಮೇಳ ಕೂಡ ಕೊಡವ ಅಕಾಡೆಮಿ ಮೂಲಕನೇ ವ್ಯವಸ್ಥೆ ಮಾಡಿವೆ. ಹಂಗಾಗಿ ಎಲ್ಲೋ ಒಂದು ಕಡೆ ಕೊಡವರು ತಮ್ಮ ಸಂಸ್ಕೃತಿನ ಮರೀತಿದ್ದ್ರೂ, ಕೊಡವ ಅಕಾಡೆಮಿ ಮತ್ತೆ ಆ ಸಂಸ್ಕೃತಿಗೆ ಜೀವ ಕೊಡುವ ಕೆಲ್ಸ ಮಾಡ್ತುಟ್ಟು.
ಅರೆಭಾಷೆ ಅಕಾಡೆಮಿ ಶುರುವಾದ್ರೆ ನಮ್ಮ ಸಮುದಾಯಕ್ಕೂ ಇಂಥ ತುಂಬಾ ಪ್ರಯೋಜನ ಆದೆ. ಇದ್ಕಾಗಿ ಈಗಾಗ್ಲೇ ನಮ್ಮವು ಪ್ರಯತ್ನ ನಡೆಸ್ತೊಳೊ. ಮುಖ್ಯಮಂತ್ರಿ ದೇವರಗುಂಡ ಸದಾನಂದ ಗೌಡ ಅವ್ಕೆ ಮನವಿ ಕೊಟ್ಟೊಳೊ. ಸದಾನಂದ ಗೌಡರ ಕಡೆಯಿಂದಲೂ ಒಳ್ಳೇ ಪ್ರತಿಕ್ರಿಯೆ ಸಿಕ್ಕುಟ್ಟು. ರಾಜಕೀಯ ದೃಷ್ಟಿಯಿಂದ ನೋಡುದಾದ್ರೆ `ಅರೆಭಾಷೆ ಅಕಾಡೆಮಿ' ಬಗ್ಗೆ ಸಕರ್ಾರದ ಮೇಲೆ ಒತ್ತಡ ಹಾಕಿಕೆ ಇದೊಳ್ಳೆ ಸಮಯ. ಯಾಕಂದ್ರೆ, ಮುಖ್ಯಮಂತ್ರಿ ಕುಚರ್ೀಲಿ ನಮ್ಮವೇ ಒಳೋ. ಶೋಭಾ ಕರಂದ್ಲಾಜೆ ಅವು ತುಂಬಾ ಪ್ರಭಾವಿ ಮಂತ್ರಿಯಾಗಿ ಗುರುತಿಸಿಕೊಂಡೊಳೊ. ಜೊತೇಲಿ ಸ್ಪೀಕರ್ ಆಗಿರುವವು ನಮ್ಮವೇ ಆಗಿರ್ವ ಕೊಂಬಾರನ ಬೋಪಯ್ಯ. ಹಂಗಾಗಿ ಈಗ ಸರಿಯಾದ ದಿಕ್ಕ್ಲಿ ಒತ್ತಡ ಹಾಕಿರೆ `ಅರೆಭಾಷೆ ಅಕಾಡೆಮಿ' ಶುರುವಾದು ಕಷ್ಟವೇನೂ ಅಲ್ಲ... ಆ ದಿನ ಬೇಗ ಬರ್ಲಿ....

- `ಸುಮಾ'
arebhase@gmail.com

No comments:

Post a Comment